ಆ್ಯಪ್ನಗರ

ಪತ್ರಿಕಾಗೋಷ್ಠಿಯಲ್ಲಿ ಕೆಂಗಣ್ಣು ಬಿಟ್ಟ 'ಯಜಮಾನ' ದರ್ಶನ್

ಯಜಮಾನ 'ಸಂತೋಷ ಕೂಟ'ದಲ್ಲಿ ಮಾತನಾಡಿದ ದರ್ಶನ್ "ಒಂದು ಕಡೆ ಬಹಳಷ್ಟು ವಿದ್ಯಾರ್ಥಿಗಳಿಗೆ ಪರೀಕ್ಷೆ ಇತ್ತು. ಮತ್ತೊಂದು ಕಡೆ ಕ್ರಿಕೆಟ್ ಪಂದ್ಯ ಇತ್ತು. ಆದರೂ ಕೂಡ ನಮ್ಮ 'ಯಜಮಾನ' ಚಿತ್ರವು ಸಿನಿಮಾ ಸಕ್ಸಸ್ ಆಗಿದೆ. ಇದಕ್ಕೆ‌ ಸಹಕರಿಸಿದ ಪ್ರತಿಯೊಬ್ಬರಿಗೂ ಥ್ಯಾಂಕ್ಸ್ ಹೇಳ್ತಿನಿ" ಎಂದಿದ್ದಾರೆ.

Vijaya Karnataka Web 17 Mar 2019, 4:29 pm
ಕನ್ನಡದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಸುದ್ದಿಗೋಷ್ಠಿಯಲ್ಲಿ ತುಸು ಕೋಪಗೊಂಡ ಘಟನೆ ನಡೆಯಿತು. ಇತ್ತೀಚಿಗೆ ಯಜಮಾನ 'ಸಂತಸ ಕೂಟ'ಕ್ಕೆ ಮೈಸೂರಿನ ಖಾಸಗಿ ಹೊಟೆಲ್‌ನಲ್ಲಿ ಏರ್ಪಡಿಸಲಾಗಿದ್ದ ಪ್ರೆಸ್‌ ಮೀಟ್‌ಗೆ ಆಗಮಿಸಿದ್ದ ನಟ ದರ್ಶನ್ ಅವರು ತಮ್ಮ ನಾಯತ್ವದ 'ಯಜಮಾನ' ಚಿತ್ರವು ಸಕ್ಸಸ್ ಆಯಿತೆಂಬ ಸಂತೋಷವನ್ನು ಮಾಧ್ಯಮ ಮಿತ್ರರೊಂದಿಗೆ ಹಂಚಿಕೊಂಡರು.
Vijaya Karnataka Web darshan1703


ಯಜಮಾನ 'ಸಂತೋಷ ಕೂಟ'ದಲ್ಲಿ ಮಾತನಾಡಿದ ದರ್ಶನ್ "ಒಂದು ಕಡೆ ಬಹಳಷ್ಟು ವಿದ್ಯಾರ್ಥಿಗಳಿಗೆ ಪರೀಕ್ಷೆ ಇತ್ತು. ಮತ್ತೊಂದು ಕಡೆ ಕ್ರಿಕೆಟ್ ಪಂದ್ಯ ಇತ್ತು. ಆದರೂ ಕೂಡ ನಮ್ಮ 'ಯಜಮಾನ' ಚಿತ್ರವು ಸಿನಿಮಾ ಸಕ್ಸಸ್ ಆಗಿದೆ. ಇದಕ್ಕೆ‌ ಸಹಕರಿಸಿದ ಪ್ರತಿಯೊಬ್ಬರಿಗೂ ಥ್ಯಾಂಕ್ಸ್ ಹೇಳ್ತಿನಿ" ಎಂದು ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್ ಹೇಳಿದ್ದಾರೆ.

ಯಜಮಾನ ಚಿತ್ರ ತಂಡದಿಂದ ಮೈಸೂರಿನ ಖಾಸಗಿ ಹೋಟೆಲ್ ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಟಿಯಲ್ಲಿ 'ಮಂಡ್ಯ ಚುನಾವಣೆ ಪ್ರಚಾರಕ್ಕೆ ಬರ್ತಿರಾ' ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ದರ್ಶನ್ " ಇದು ಕೇವಲ ಯಜಮಾನ ಚಿತ್ರದ ಸುದ್ದಿಗೋಷ್ಟಿ ಅಷ್ಟೇ. ಯಜಮಾನ ಸಿನಿಮಾ ಬಗ್ಗೆ ಏನಾದರೂ ಪ್ರಶ್ನೆ ಕೇಳಿ ಹೇಳ್ತಿನಿ. ನಾನು ಇಲ್ಲಿಗೆ ಬಂದಿರೋದು ಯಜಮಾನ ಚಿತ್ರದ ಬಗ್ಗೆ ಮಾತು ಮತನಾಡುವುದಕ್ಕೆ. ಬೇರೆ ವಿಚಾರಗಳನ್ನು ಬೇರೆ ಕಡೆ ನಾನು ಮಾತನಾಡುತ್ತೇನೆ" ಎಂದು ಹೇಳಿ ಅಚ್ಚರಿ ಮೂಡಿಸಿದರು.

ಇನ್ನು ಈ ಸಂದರ್ಭದಲ್ಲಿ ಕೇಳಲಾದ 'ಯಜಮಾನ ಗಳಿಕೆ' ಕುರಿತಾದ ಪ್ರಶ್ನೆಗೆ ಉತ್ತರಿಸಿದ ನಟ ದರ್ಶನ್ "ಅದನ್ನು ತೆಗೆದುಕೊಂಡು ಏನ್ ಮಾಡ್ತೀರಾ? ಏನೇ ಇದ್ದರೂ ಅದನ್ನು ದಾಖಲೆ ಸಮೇತ ಕೊಡ್ತೀವಿ. ಇದಕ್ಕೂ ಮೀರಿ ಬೇಕೆಂದರೆ ನೀವೆ 'ಎಷ್ಟು ಥಿಯೇಟರ್‌ಗಳಲ್ಲಿ ಯಜಮಾನ ಚಿತ್ರ ಇದೆ; ಒಂದು ಶೋಗೆ ಎಷ್ಟು ಕಲೇಕ್ಷನ್ ಆಗುತ್ತೆ.; ದಿನಕ್ಕೆ ಎಷ್ಟು ಕಲೆಕ್ಷನ್ ಆಗುತ್ತೆ ಅಂತ ಲೆಕ್ಕ ಹಾಕಬಹುದಲ್ಲ" ಎಂದು ಹೇಳುವ ಮೂಲಕ ತಾವು ಆ ಪ್ರಶ್ನೆಯಿಂದ ಗರಂ ಆಗಿದ್ದನ್ನು ತೋರಿಸಿಕೊಂಡರು.

ಅಂದಹಾಗೆ, ನಟ ದರ್ಶನ್ ನಾಯಕತ್ವದ 'ಯಜಮಾನ' ಚಿತ್ರವನ್ನು ಶೈಲಜಾ ನಾಗ್ ಮತ್ತು ಬಿ ಸುರೇಶ್ ಅವರು ನಿರ್ಮಿಸಿದ್ದಾರೆ. ವಿ ಹರಿಕೃಷ್ಣ ಅವರು ಸಂಗೀತ ನೀಡಿರುವುದರ ಜೊತೆ, ಮೊದಲ ಬಾರಿಗೆ ಪಿ ಕುಮಾರ್ ಜೊತೆ ಸೇರಿಕೊಂಡು ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಯಜಮಾನ ಚಿತ್ರದಲ್ಲಿ ಸೌತ್ ಇಂಡಿಯನ್ ಕ್ರಶ್ ನಟಿ ರಶ್ಮಿಕಾ ಮಂದಣ್ಣ ಅವರು ದರ್ಶನ್ ಅವರಿಗೆ ನಾಯಕಿಯಾಗಿ ನಟಿಸಿದ್ದಾರೆ. ನಟಿ ತಾನ್ಯಾ ಹೋಪ್ ಅವರು ಕೂಡ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಖ್ಯಾತ ನಟ ಠಾಗೂರ್ ಅನೂಪ್ ಸಿಂಗ್ ಈ ಚಿತ್ರದಲ್ಲಿ ದರ್ಶನ್ ಎದುರು ವಿಲನ್ ಆಗಿ ಅಬ್ಬರಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌