ಆ್ಯಪ್ನಗರ

ಬಿಸಿಲಿಗೆ ಕಪ್ಪಾದ ದರ್ಶನ್ ಮುಖ, ಕೈ ನೋವಿನ ಕಾರಣ 'ರಾಬರ್ಟ್' ಶೂಟಿಂಗ್ ಮುಂದೂಡಿಕೆ

ಚುನಾವಣೆ ಸಮಯದಲ್ಲಿ ಅಭಿಮಾನಿಗಳಿಗೆ ಹಸ್ತಲಾಘ ಮಾಡಿದ್ದರಿಂದ ಕೈ ನೋವು ಕಾಣಿಸಿಕೊಂಡಿದೆ. ಜತೆಗೆ ಬಿಸಿಲಿನಲ್ಲಿ ಸತತ ಚುನಾವಣಾ ಪ್ರಚಾರ ಮಾಡಿದ್ದರಿಂದ ಮುಖ ಬಿಸಿಲಿಗೆ ಕಪ್ಪಾಗಿದೆ. ಈ ಎಲ್ಲ ಕಾರಣದಿಂದಾಗಿ ವಾರದ ಮಟ್ಟಿಗೆ ಶೂಟಿಂಗ್‌ ಮುಂದೂಡಲಾಗಿದೆ ಎನ್ನುತ್ತದೆ ಚಿತ್ರತಂಡ.

Vijaya Karnataka 22 Apr 2019, 7:42 pm
ಚುನಾವಣೆ ಪ್ರಚಾರದ ನಂತರ ವಿಶ್ರಾಂತಿ ಪಡೆಯುತ್ತಿರುವ ದರ್ಶನ್‌, ಅಂದುಕೊಂಡಂತೆ ರಾಬರ್ಟ್‌ ಸಿನಿಮಾದ ಶೂಟಿಂಗ್‌ನಲ್ಲಿ ಭಾಗಿ ಆಗಬೇಕಿತ್ತು. ಆದರೆ, ಅವರಿಗೆ ಮತ್ತೆ ಕೈ ನೋವು ಕಾಣಿಸಿಕೊಂಡಿದೆ. ಅದಕ್ಕೆ ಚಿಕಿತ್ಸೆಯನ್ನೂ ಪಡೆಯುತ್ತಿದ್ದಾರೆ. ಹಾಗಾಗಿ ರಾಬರ್ಟ್‌ ಶೂಟಿಂಗ್‌ ಅಂದುಕೊಂಡಂತೆ ನಡೆಯುತ್ತಿಲ್ಲ. ಒಂದೆರಡು ವಾರಗಳ ಕಾಲ ಅವರಿಗೆ ವಿಶ್ರಾಂತಿ ಬೇಕಾಗಿದ್ದರಿಂದ ಮೇ ಮೊದಲ ಅಥವಾ ಎರಡನೇ ವಾರದಿಂದ ಶೂಟಿಂಗ್‌ ಶುರುವಾಗಲಿದೆಯಂತೆ.
Vijaya Karnataka Web robert


ಚುನಾವಣೆ ಸಮಯದಲ್ಲಿ ಅಭಿಮಾನಿಗಳಿಗೆ ಹಸ್ತಲಾಘ ಮಾಡಿದ್ದರಿಂದ ಕೈ ನೋವು ಕಾಣಿಸಿಕೊಂಡಿದೆ. ಜತೆಗೆ ಬಿಸಿಲಿನಲ್ಲಿ ಸತತ ಚುನಾವಣಾ ಪ್ರಚಾರ ಮಾಡಿದ್ದರಿಂದ ಮುಖ ಬಿಸಿಲಿಗೆ ಕಪ್ಪಾಗಿದೆ. ಈ ಎಲ್ಲ ಕಾರಣದಿಂದಾಗಿ ವಾರದ ಮಟ್ಟಿಗೆ ಶೂಟಿಂಗ್‌ ಮುಂದೂಡಲಾಗಿದೆ ಎನ್ನುತ್ತದೆ ಚಿತ್ರತಂಡ. ತರುಣ್‌ ಸುಧೀರ್‌ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿ ಬರಲಿದ್ದು, ಈಗಾಗಲೇ ವಿಭಿನ್ನ ರೀತಿಯ ಪೋಸ್ಟರ್‌ ಬಿಡುಗಡೆಯಾಗಿದೆ.

ಉಮಾಪತಿ ಚಿತ್ರ ನಿರ್ಮಾಣ ಮಾಡಲಿದ್ದಾರೆ. ದರ್ಶನ್‌ ಮತ್ತು ತರುಣ್‌ ಕಿಶೋರ್‌ಕಾಂಬಿನೇಶನ್‌ನ 53ನೇ ಚಿತ್ರಕ್ಕೆ ರಾಬರ್ಟ್‌. ಈ ಟೈಟಲ್‌ನ್ನು ಕ್ರಿಸ್‌ಮಸ್‌ ಹಬ್ಬದ ದಿನ ಬಿಡುಗಡೆ ಮಾಡಿರುವ ಚಿತ್ರತಂಡ ಅಭಿಮಾನಿಗಳಲ್ಲಿ ಕುತೂಹಲ ಸೃಷ್ಟಿ ಮಾಡಿದೆ.

ರಾಬರ್ಟ್‌ ಒಂದು ಸಾಮಾಜಿಕ ಚಿತ್ರ, ಈ ಸಿನಿಮಾದಲ್ಲಿ ದರ್ಶನ್‌ ಅವರ ಗೆಟಪ್‌ಗಳು ಬಹಳ ವಿಶೇಷವಾಗಿರುತ್ತವೆ ಎನ್ನುತ್ತಾರೆ ನಿರ್ದೇಶಕ ತರುಣ್ ಸುಧೀರ್. ರಾಬರ್ಟ್‌ ಎಮೋಷನಲ್‌ ಆ್ಯಕ್ಷನ್‌ ಸಿನಿಮಾ, ಈ ಚಿತ್ರದಲ್ಲಿ ದರ್ಶನ್‌ ಬೇರೆ ಬೇರೆ ಗೆಟಪ್‌ಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅದರಲ್ಲಿ ಒಂದು ಗೆಟಪ್‌ ಈಗ ಪೋಸ್ಟರ್‌ಗಳ ರೂಪದಲ್ಲಿ ಅಭಿಮಾನಿಗಳ ಮುಂದಿದೆ. ರಾಮ ಮತ್ತು ಹನುಮ ಇದ್ದ ಕಾರಣಕ್ಕೆ ಇದು ಪೌರಾಣಿಕ ಚಿತ್ರವಲ್ಲ. ಈ ಪೋಸ್ಟರ್‌ ಸಿನಿಮಾದ ಒಂದು ಸನ್ನಿವೇಶದಲ್ಲಿ ಬರುತ್ತದೆ. ಹಾಗಾಗಿ ಇದನ್ನೇ ಮೊದಲು ರಿಲೀಸ್‌ ಮಾಡಿದ್ದೇವೆ,'ಎನ್ನುತ್ತಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌