ಆ್ಯಪ್ನಗರ

ಮನಬಿಚ್ಚಿ ಮಾತನಾಡಿ 'ಗುಟ್ಟೊಂದನ್ನು ರಟ್ಟು' ಮಾಡಿದ ದರ್ಶನ್

ಯಜಮಾನ ಚಿತ್ರದ ಪ್ರಮೋಶನ್‌ ಕಾರ್ಯದಲ್ಲಿ ನಿರತರಾಗಿರುವ ದರ್ಶನ್ ಅವರು ಮಾಧ್ಯಮಗಳಲ್ಲಿ ಮಾತನಾಡುತ್ತ ಕೇಳಲಾದ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತ "ನಾನು ಖಾಸಗಿ ವಾಹಿನಿಗಳು ನಡೆಸಿ ಕೊಡುವ ಮನರಂಜನೆ ಕಾರ್ಯಕ್ರಮಗಳಿಗೆ ಸಾಮಾನ್ಯವಾಗಿ ಹೋಗುವುದಿಲ್ಲ. ಅದಕ್ಕೆ ಸಾಕಷ್ಟುಕಾರಣಗಳಿವೆ" ಎಂದಿದ್ದಾರೆ.

Vijaya Karnataka Web 27 Feb 2019, 6:26 pm
ಚಾಲೆಂಜಿಂಗ್ ಸ್ಟಾರ್ ದರ್ಶನ್ ಮಾಧ್ಯಮಗಳಲ್ಲಿ ಮನಬಿಚ್ಚಿ ಮಾತನಾಡತೊಡಗಿದ್ದಾರೆ. ಇತ್ತೀಚಿಗೆ ಸಾಕಷ್ಟು ಸಾಮಾಜಿಕ ಕಳಕಳಿಯನ್ನೂ ಪ್ರದರ್ಶಿಸುತ್ತಿರುವ ನಟ ದರ್ಶನ್, ಬಂಡಿಪುರ ದುರಂತದ ಬಗ್ಗೆಯೂ ಬಹಳಷ್ಟು ಮರುಗಿದ್ದಾರೆ. ಪ್ರಾಣಿಗಳನ್ನು ದತ್ತು ತೆಗೆದುಕೊಂಡು ತಮ್ಮ ಪ್ರಾಣಿ ಪ್ರೀತಿಯನ್ನೂ ಮೆರೆಯುತ್ತಿರುವ ದರ್ಶನ್, ಈಗ ಕಾಡ್ಗಿಚ್ಚಿನಿಂದ ದುರಂತಕ್ಕೊಳಗಾಗಿರುವ ಬಂಡಿಪುರ ಪ್ರದೇಶದಲ್ಲಿ ಗಿಡಗಳನ್ನು ನೆಟ್ಟು ಬೆಳೆಸಬೇಕೆಂದು ಹೇಳುವ ಮೂಲಕ ಹೆಚ್ಚಿನ ಪರಿಸರ ಪ್ರಜ್ಞೆಯನ್ನೂ ಮೆರೆದಿದ್ದಾರೆ.
Vijaya Karnataka Web darshan15


ಇತ್ತೀಚಿಗೆ ಎಲ್ಲರೂ ಗಮನಿಸುತ್ತಿರುವಂತೆ, ಹೆಚ್ಚು ಪ್ರಬುದ್ಧತೆಯಿಂದ ಮಾತನಾಡುತ್ತಿರುವ ದರ್ಶನ್ ಅವರು ಮನಸ್ಸು ಬಿಚ್ಚಿ ಕೂಡ ಮಾಧ್ಯಮಗಳಲ್ಲಿ ಮಾತನಾಡತೊಗಿದ್ದಾರೆ. ಈ ಮೊದು ತಾವಾಯಿತು, ತಮ್ಮ ಅಭಿಮಾನಿಗಳ ಇಷ್ಟವಾಯಿತು ಎಂಬಂತಿದ್ದ ದರ್ಶನ್, ಇತ್ತೀಚಿಗೆ ತಮ್ಮ ವರಸೆ ಬದಲಾಯಿಸಿಕೊಂಡಿದ್ದಾರೆ. ತಾಳ್ಮೆ, ಸಮಯಪ್ರಜ್ಞೆ, ಸಮಾಕಿಜ ಬದ್ಧತೆ ಎಲ್ಲವನ್ನೂ ಮೈಗೂಡಿಸಿಕೊಂಡವರಂತೆ ಮಾತನಾಡುತ್ತಿರುವ ದರ್ಶನ್ ಅವರು ತಮ್ಮ ಮುಂಬರುವ ಸಿನಿಮಾ 'ಯಜಮಾನ' ಹೆಸರಿಗೆ ತಕ್ಕಂತ ನಡೆ ಪ್ರದರ್ಶಿಸುತ್ತಿದ್ದಾರೆ ಎನ್ನಬಹುದು. ಅದಕ್ಕೆ ಇತ್ತೀಚಿಗೆ ಆಡಿರುವ ದರ್ಶನ್ ಮಾತನ್ನು 'ತಾಜಾ ಉದಾಹರಣೆ' ಎನ್ನಬಹುದು.

ಯಜಮಾನ ಚಿತ್ರದ ಪ್ರಮೋಶನ್‌ ಕಾರ್ಯದಲ್ಲಿ ನಿರತರಾಗಿರುವ ದರ್ಶನ್ ಅವರು ಮಾಧ್ಯಮಗಳಲ್ಲಿ ಮಾತನಾಡುತ್ತ ಕೇಳಲಾದ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತ "ನಾನು ಖಾಸಗಿ ವಾಹಿನಿಗಳು ನಡೆಸಿ ಕೊಡುವ ಮನರಂಜನೆ ಕಾರ್ಯಕ್ರಮಗಳಿಗೆ ಸಾಮಾನ್ಯವಾಗಿ ಹೋಗುವುದಿಲ್ಲ. ಅದಕ್ಕೆ ಸಾಕಷ್ಟುಕಾರಣಗಳಿವೆ. ಮುಖ್ಯವಾಗಿ, ನಾನು ಅಲ್ಲಿಗೆ ಹೋದಾಗ, ಡ್ಯಾನ್ಸ್‌ ಮಾಡಲು ಒತ್ತಾಯಿಸುತ್ತಾರೆ. ಆದರೆ ನನಗೆ, ಡ್ಯಾನ್ಸ್‌ ಮಾಡಲು ಪೂರ್ವ ತಯಾರಿ ಮಾಡಿಕೊಳ್ಳಬೇಕು. ಯಾರೇ ಆಗಿರಲಿ, ಡಾನ್ಸ್ ಮಾಡುವ ಮೊದಲು ಪೂರ್ವ ತಯಾರಿ ಮಾಡಿಕೊಳ್ಳುವುದು ತುಂಬಾ ಮುಖ್ಯ. ಆ ತಾಳ್ಮೆ ನನಗಿಲ್ಲ.

ನನ್ನ ಸಿನಿಮಾಗಳಿಗೆ ನಾನು ಮೊದಲೇ ಡ್ಯಾನ್ಸ್‌ ಅಭ್ಯಾಸ ಮಾಡಿಕೊಂಡು ಹೋಗುವುದಿಲ್ಲ. ನಾನೇನೇ ಮಾಡಿದರೂ ಸೆಟ್‌ನಲ್ಲೇ ಕಲಿತು ಮಾಡುತ್ತೇನೆ. ಹೀಗಾಗಿ, ನಾನು ವಾಹಿನಿಗಳ ರಿಯಾಲಿಟಿ ಶೋಗಳಿಂದ ಸಾಕಷ್ಟು ದೂರ ಉಳಿಯುತ್ತೇನೆ" ಎಂದು ಸತ್ಯವನ್ನು ತಲೆ ಮೇಲೆ ಹೊಡೆದಂತೆ ಹೇಳಿ ಮೊದಲು ತಮ್ಮ ಮೇಲಿದ್ದ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ. ಒಟ್ಟಿನಲ್ಲಿ, ದರ್ಶನ್ ತುಂಬಾ ಬದಲಾಗಿದ್ದಾರೆ. ಅಚ್ಚರಿ ಎಂಬಂತೆ ಅವರಲ್ಲಿ ಒಳ್ಳೆಯ ರೀತಿಯಲ್ಲಿ ಬದಲಾವಣೆ ಆಗಿದೆ ಎಂಬುದು ಎಲ್ಲರೂ ಹೇಳುತ್ತಿರುವ ಮಾತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌