ಆ್ಯಪ್ನಗರ

ಅಂಬಿ ಮಗ 'ಅಮರ್' ಅಭಿಷೇಕ್‌ಗೆ ದರ್ಶನ್ ತೂಗುದೀಪ ಸಾಥ್

'ಅಮರ್' ಚಿತ್ರದ ಹೀರೋ, ರೆಬಲ್ ಸ್ಟಾರ್ ಅಂಬರೀಷ್ ಮಗ ಅಭಿಷೇಕ್ ಅವರಿಗೆ ಟ್ವೀಟರ್ ಮೂಲಕ ದರ್ಶನ್ "ಪ್ರೀತಿಯ ತಮ್ಮ ಅಭಿಷೇಕ್ ಅಂಬರೀಷ್ ಗೆ ಕನ್ನಡ ಚಿತ್ರರಂಗಕ್ಕೆ ಹಾರ್ಟ್ ಲೀ ವೆಲ್ ಕಮ್.. ನಾಳೆ ಆತನ ಹೊಸ ಸಿನಿಮಾ ‘ಅಮರ್’ ಟೀಸರ್ ಬಿಡುಗಡೆಯಾಗುತ್ತಿದೆ. ಎಲ್ಲರೂ ನೋಡಿ ಆಶೀರ್ವದಿಸಿ ಹರಸಿ ಬೆಳೆಸಿ.." ಎಂದು ಟ್ವೀಟ್ ಮಾಡಿದ್ದಾರೆ.

Vijaya Karnataka Web 13 Feb 2019, 5:31 pm
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ತಮ್ಮ ಅಭಿಮಾನಿಗಳಿಗೆ ಮಾತ್ರವಲ್ಲ, ಇಂಡಸ್ಟ್ರಿಗೆ ಬರುತ್ತಿರುವ ಹೊಸಬರಿಗೂ ಕೂಡ ಅಚ್ಚುಮೆಚ್ಚಿನ ನಟ ಆಗತೊಡಗಿದ್ದಾರೆ. ಮೊದಲೆಲ್ಲ ತಾವಾಯಿತು ಯಮ್ಮ ಅಭಿಮಾನಿ ಬಳಗವಾಯ್ತು ಎಂಬಂತಿದ್ದ ದರ್ಶನ್ ಈಗ ಹೊಸಬರಿಗೆ ಕೂಡ ಸಾಮಾಜಿಕ ಜಾಲತಾಣಗಳ ಮುಲಕ ಶೂಭ ಕೋರುವ ಮೂಲಕ ಹೆಚ್ಚಿನ ಗೌರವ, ಪ್ರೀತಿಗೆ ಪಾತ್ರರಾಗುತ್ತಿದ್ದಾರೆ. ಕೆಲವು ಸಾಮಾಜಿಕ ಕಳಕಳಿಯ ಕಾರ್ಯಗಳಿಗೂ ಸ್ಪಂದಿಸುವ ಮೂಲಕ ದರ್ಶನ್ ಚಿತ್ರ ಪ್ರೇಮಿಗಳನ್ನೂ ಮೀರಿ ಕರ್ನಾಟಕದ ಜನತೆಯ ಪ್ರೀತಿ, ಆಶೀರ್ವಾದಕ್ಕೆ ಪಾತ್ರರಾಗುತ್ತಿದ್ದಾರೆ.
Vijaya Karnataka Web abhishek13


ನಾಳೆ, 14 ಫೆಬ್ರವರಿ 2019ರಂದು 'ಅಮರ್' ಚಿತ್ರದ ಟೀಸರ್ ಬಿಡುಗಡೆ ಕುರಿತು ದರ್ಶನ್ ಟ್ವೀಟ್ ಮಾಡಿದ್ದಾರೆ. 'ಅಮರ್' ಚಿತ್ರದ ಹೀರೋ, ರೆಬಲ್ ಸ್ಟಾರ್ ಅಂಬರೀಷ್ ಮಗ ಅಭಿಷೇಕ್ ಅವರಿಗೆ ಟ್ವೀಟರ್ ಮೂಲಕ ದರ್ಶನ್ "ಪ್ರೀತಿಯ ತಮ್ಮ ಅಭಿಷೇಕ್ ಅಂಬರೀಷ್ ಗೆ ಕನ್ನಡ ಚಿತ್ರರಂಗಕ್ಕೆ ಹಾರ್ಟ್ ಲೀ ವೆಲ್ ಕಮ್.. ನಾಳೆ ಆತನ ಹೊಸ ಸಿನಿಮಾ ‘ಅಮರ್’ ಟೀಸರ್ ಬಿಡುಗಡೆಯಾಗುತ್ತಿದೆ. ಎಲ್ಲರೂ ನೋಡಿ ಆಶೀರ್ವದಿಸಿ ಹರಸಿ ಬೆಳೆಸಿ.." ಎಂದು ಟ್ವೀಟ್ ಮಾಡಿದ್ದಾರೆ.
ಅವರ ಹೃದಯ ಪೂರ್ವಕ ವಿಶ್ ನೋಡಿ 'ದಾಸ'ನ ಅಭಿಮಾನಿಗಳು ಮಾತ್ರವಲ್ಲ, ಸ್ಯಾಂಡಲ್‌ವುಡ್ ಬಳಗವೂ ಸೇರಿದಂತೆ ಇಡೀ ಕರ್ನಾಟಕವೇ ಮೆಚ್ಚುಗೆ ವ್ಯಕ್ತಪಡಿಸಿದೆ.

ಅಷ್ಟೇ ಅಲ್ಲ, ಅಭಿಮಾನಿಗಳ ಕೋರಿಕೆ ಮೇರೆಗೆ ಕರ್ನಾಟಕದ ಕೆಲವು ಅನಾಥಾಶ್ರಮಗಳಿಗೆ ಮತ್ತು ಸಿದ್ದಗಂಗಾ ಮಠಕ್ಕೆ ಅಭಿಮಾನಿಗಳ ದಾನವನ್ನುತಲುಪಿಸುವ ಜವಾಬ್ದಾರಿಗಳನ್ನು ಕೂಡ ದರ್ಶನ್ ತೆಗೆದುಕೊಂಡಿದ್ದಾರೆ. ಅಭಿಮಾನಿಗಳ ಆಸೆಯ ಜತೆ ಜನಸಾಮಾನ್ಯರ ಜೀವನ ಹಾಗೂ ಅನಾಥರಿಗೆ ಆಸರೆಯಾಗುವ ಕೆಲಸಕಾರ್ಯಗಳಿಗೆ ಸಾಥ್ ಕೊಡುವ ಮೂಲಕ ದರ್ಶನ್ ನಿಜವಾಗಿಯೂ 'ಯಜಮಾನ' ಎಂಬ ಗೌರವಕ್ಕೆ ಪಾತ್ರರಾಗುವಂತೆ ನಡೆದುಕೊಳ್ಳುತ್ತಿದ್ದಾರೆ ಎನ್ನಬಹುದು.

ಅಭಿಮಾನಿಗಳು ಹಾಗೂ ಸಿನಿ ಪ್ರೇಮಿಗಳು ಇತ್ತೀಚಿಗೆ ಬಿಡುಗಡೆಯಾದ ತಮ್ಮ ಮುಂಬರುವ 'ಯಜಮಾನ' ಚಿತ್ರ ಟ್ರೇಲರ್ ನೋಡಿ ಕೊಟ್ಟಿರುವ ಅಭೂತಪೂರ್ವ ಸ್ವಾಗತಕ್ಕೆ ದಾಸ ದರ್ಶನ್ ಸಖತ್ ಖುಷಿಯಾಗಿದ್ದಾರೆ. ಈ ಬಗ್ಗೆ ಅವರು ಈಗಾಗಲೇ ಟ್ವೀಟ್ ಮಾಡಿ ಧನ್ಯವಾದ ಸಲ್ಲಿಸಿದ್ದಾರೆ. ಈಗ, ತಮ್ಮ ಅಭಿಮಾನಿಗಳ ಮನದ ಮಹದಾಸೆಯನ್ನು ನೆರವೇರಿಸಲು ಪಣ ತೊಟ್ಟು ದರ್ಶನ್ ಅವರ ಆಸಗೆ ಬೆಂಬಲವಾಗಿ ನಿಂತಿದ್ದಾರೆ.

ಈ ಎಲ್ಲ ಬೆಳವಣಿಗೆಗಳನ್ನು ನೋಡುತ್ತಿದ್ದರೆ ಸದ್ಯದಲ್ಲೇ ದರ್ಶನ್ ಎಲ್ಲ ರೀತಿಯಲ್ಲು 'ಸ್ಯಾಂಡಲ್‌ವುಡ್ ಯಜಮಾನ'ರಾಗಿ ಎದ್ದು ನಿಂತರೂ ಆಶ್ಚರ್ಯವಿಲ್ಲ ಎನ್ನುತ್ತಿದೆ ಗಾಂಧಿ ನಗರ. ಟ್ರೇಲರ್ ಮೂಲಕ ಭಾರೀ ರೆಸ್ಪಾನ್ಸ್ ಪಡೆದಿರುವ 'ಯಜಮಾನ' ಥಿಯೇಟರ್‌ಗೆ ಬಂದಮೇಲೆ ಯಾವ ರೀತಿಯಲ್ಲಿ ಪ್ರೇಕ್ಷಕರ ಪ್ರತಿಕ್ರಿಯೆ ಪಡೆಯಲಿದೆ ಎಂಬ ಕುತೂಹಲ ಈಗ ಎಲ್ಲೆಲ್ಲೂ ಮನೆಮಾಡಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌