ಆ್ಯಪ್ನಗರ

ದರ್ಶನ್ 'ಗಂಡುಗಲಿ ಮದಕರಿ ನಾಯಕ' ತಡವಾಗಲು ಕಾರಣವೇನು ಗೊತ್ತೇ?

ಲೋಕಸಭೆ ಚುನಾವಣೆ ಬಂತು. ಸುಮಲತಾ ಅಂಬರೀಶ್ ಚುನಾವಣೆಗೆ ಸ್ಪರ್ಧಿಸಿದರು. ಸಹಜವಾಗಿ ಅಂಬರೀಷ್ ಆಪ್ತರಾಗಿರುವ ರಾಕ್‌ಲೈನ್ ವೆಂಕಟೇಶ್ ಅವರ ಬೆಂಬಲಕ್ಕೆ ನಿಂತಿದ್ದಾರೆ. ಇನ್ನೊಂದು ಕಡೆ ಚಿತ್ರದ ನಾಯಕ ದರ್ಶನ್ ಕೂಡ ಸುಮಲತಾ ಪರವಾಗಿ ಚುನಾವಣೆಯ ಪ್ರಚಾರಕ್ಕೆ ಇಳಿದಿದ್ದಾರೆ.

Vijaya Karnataka Web 6 Apr 2019, 3:03 pm
ಕನ್ನಡದ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಾಯಕತ್ವದ 'ಗಂಡುಗಲಿ ಮದಕರಿ ನಾಯಕ' ಚಿತ್ರಕ್ಕೆ ಎರಡು ಸೆಟ್‌ಗಳು ರೆಡಿಯಾಗಿವೆ. ಈಗಾಗಲೇ ಇರುವ, ತೆಲುಗಿನಲ್ಲಿ ಬಂದ 'ಬಾಹುಬಲಿ' ಚಿತ್ರದ ಸೆಟ್ ಹಾಗೂ ಬಾಲಿವುಡ್‌ 'ಬಾಜಿರಾವ್ ಮಸ್ತಾನಿ' ಚಿತ್ರದ ಸೆಟ್‌ನಲ್ಲಿ ಮುಂಬರುವ ಈ ಚಿತ್ರವನ್ನು ಶೂಟ್ ಮಾಡಲು ಚಿತ್ರತಂಡ ನಿರ್ಧರಿಸಿದೆ. ಈ ಸೆಟ್‌ಗಳು ಸಿಕ್ಕಾಪಟ್ಟೆ ಅದ್ದೂರಿಯಾಗಿವೆ. ಈಗಾಗಲೇ ಮುಂಬಾಯಿನಲ್ಲಿ ನಿರ್ಮಿಸಿರುವ 'ಬಾಜಿರಾವ್ ಮಸ್ತಾನಿ' ಹಾಗೂ ಹೈದರಾಬಾದ್‌ನ ರಾಮೋಜಿ ಫಿಲಮ್ ಸಿಟಿಯಲ್ಲಿ ಹಾಕಿರುವ 'ಬಾಹುಬಲಿ' ಸೆಟ್‌ಗಳಿಗೆ ಚಿತ್ರತಂಡ ಭೇಟಿ ಕೊಟ್ಟಿದೆ.
Vijaya Karnataka Web darshan0604


ಮೂರು ಅದ್ದೂರಿ ಸೆಟ್‌ಗಳನ್ನು ನಿರ್ಮಿಸುವ ಯೋಚನೆಯಲ್ಲಿದ್ದ ಚಿತ್ರತಂಡಕ್ಕೆ ಈಗ ಚಿತ್ರದ ಕತೆಗೆ ಸಂಬಂಧಿ ಸಿದ್ದಂತೆ ಒಂದಿಷ್ಟು ಬದಲಾವಣೆಗಳನ್ನು ಮಾಡಿಕೊಂಡು ಅದೇ ಸೆಟ್‌ನಲ್ಲಿ ಚಿತ್ರೀಕರಣ ಮಾಡುವುದಕ್ಕೆ ಚಿತ್ರತಂಡ ಯೋಜನೆ ರೂಪಿಸಿದೆ. ಇನ್ನೂ ಇದರ ಜತೆಗೆ ರಾಜಸ್ಥಾನದಲ್ಲೂ ಒಂದು ಸೆಟ್ ನಿರ್ಮಿಸುವ ಯೋಚನೆ ನಿರ್ಮಾಪಕರಿಗೆ ಇದೆ ಎನ್ನಲಾಗಿದೆ.

ಇಷ್ಟೊತ್ತಿಗೆ 'ಗಂಡುಗಲಿ ಮದಕರಿ ನಾಯಕ' ಚಿತ್ರದ ಶೂಟಿಂಗ್ ಶುರುವಾಗಬೇಕಿತ್ತು. ಬರವಣಿಗೆ ಕೆಲಸ ಮುಗಿದು ತುಂಬಾ ಕಾಲವಾಗಿದೆ. ಈ ಚಿತ್ರಕ್ಕೆ ರಾಕ್‌ಲೈನ್ ವೆಂಕಟೇಶ್ ನಿರ್ಮಾಪಕರಾಗಿರುವ ಕಾರಣ ಅವರಿಗೆ ಕನ್ನಡದ ಜತೆಗೆ ತೆಲುಗು, ತಮಿಳು ಹಾಗೂ ಹಿಂದಿ ಭಾಷೆಯ ತಂತ್ರಜ್ಞರು ಹಾಗೂ ಕಲಾವಿದರ ಪರಿಚಯ ಇದೆ. ಬಹು ಬೇಗನೇ ತಂಡ ಕಟ್ಟಿ ಸಿನಿಮಾ ಶೂಟಿಂಗ್ ಆರಂಭಿಸುವ ಶಕ್ತಿ ಇತ್ತು. ಆದರೆ ಆಗಿದ್ದೇ ಬೇರೆ ಕಥೆ.

ಲೋಕಸಭೆ ಚುನಾವಣೆ ಬಂತು. ಸುಮಲತಾ ಅಂಬರೀಶ್ ಚುನಾವಣೆಗೆ ಸ್ಪರ್ಧಿಸಿದರು. ಸಹಜವಾಗಿ ಅಂಬರೀಷ್ ಆಪ್ತರಾಗಿರುವ ರಾಕ್‌ಲೈನ್ ವೆಂಕಟೇಶ್ ಅವರ ಬೆಂಬಲಕ್ಕೆ ನಿಂತಿದ್ದಾರೆ. ಇನ್ನೊಂದು ಕಡೆ ಚಿತ್ರದ ನಾಯಕ ದರ್ಶನ್ ಕೂಡ ಸುಮಲತಾ ಪರವಾಗಿ ಚುನಾವಣೆಯ ಪ್ರಚಾರಕ್ಕೆ ಇಳಿದಿದ್ದಾರೆ. ಅಲ್ಲದೆ 'ರಾಬರ್ಟ್' ಚಿತ್ರಕ್ಕಾಗಿ ದರ್ಶನ್ ಗಡ್ಡ ಬೇರೆ ಬಿಟ್ಟಿದ್ದಾರೆ. ಈ ಗಡ್ಡ ಮತ್ತು ಚುನಾವಣೆ ಕಾರಣಗಳಿಂದಾಗಿ ಸದ್ಯಕ್ಕೆ 'ಗಂಡುಗಲಿ ಮದಕರಿ ನಾಯಕ'ನಿಗೆ ಶೂಟಿಂಗ್ ಭಾಗ್ಯ ಸಿಗುತ್ತಿಲ್ಲ.

ಒಂದು ವೇಳೆ ಅಂದುಕೊಂಡಂತೆ ದರ್ಶನ್ ನಾಯಕತ್ವದ 'ರಾಬರ್ಟ್' ಚಿತ್ರಕ್ಕೆ ಅಂದುಕೊಂಡಂತೆ ಇದೇ ತಿಂಗಳು ಮುಹೂರ್ತ ನಡೆದರೆ ಈ ಸಿನಿಮಾ ಮುಗಿದ ಮೇಲೆಯೇ 'ಗಂಡುಗಲಿ ಮದಕರಿ ನಾಯಕ' ಚಿತ್ರ ಸೆಟ್ಟೇರುವ ಸಾಧ್ಯಗಳಿವೆ. ಯಾಕೆಂದರೆ ಇಲ್ಲಿ ನಾಯಕ ದರ್ಶನ್ ಗೆಟಪ್ ಸಂಪೂರ್ಣವಾಗಿ ಭಿನ್ನವಾಗಿರುತ್ತದೆ. ಗಡ್ಡಕ್ಕೆ ಬದಲಾಗಿ ಮೀಸೆ ಬೆಳೆಸಬೇಕಿದೆ. ಹತ್ತುಹಲವು ಬದಲಾವಣೆ ಆಗಬೇಕಿದೆ. ಅಷ್ಟೇ ಅಲ್ಲ, ಚುನಾವಣೆ ಮುಗಿದ ಮೇಲೆ ಫಲಿತಾಂಶ ಬರಬೇಕಿದೆ. ಈ ಎಲ್ಲ ಕಾರಣಗಳಿಗಾಗಿ ಮದಕರಿ ನಾಯಕ ಚಿತ್ರದ ಶೂಟಿಂಗ್ ತಡವಾಗಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌