ಆ್ಯಪ್ನಗರ

ನಗಿಸುವ ಕರಿಯಪ್ಪನಿಂದ ಜನ ಖುಷ್‌

ತಬಲಾ ನಾಣಿ , ಚಂದನ್‌ ಆಚಾರ್‌ ನಟನೆಯ ಕೆಮಿಸ್ಟ್ರಿ ಆಫ್‌ ಕರಿಯಪ್ಪ ಸಿನಿಮಾಗೆ ಪ್ರೇಕ್ಷಕರಿಂದ ಒಳ್ಳೆ ಪ್ರತಿಕ್ರಿಯೆ ಬರುತ್ತಿದೆ.

Vijaya Karnataka 17 Feb 2019, 5:00 am
ನಗಿಸುವ ಕರಿಯಪ್ಪನಿಂದ ಜನ ಖುಷ್‌
Vijaya Karnataka Web KARIYAPPA



ತಬಲಾ ನಾಣಿ , ಚಂದನ್‌ ಆಚಾರ್‌ ನಟನೆಯ ಕೆಮಿಸ್ಟ್ರಿ ಆಫ್‌ ಕರಿಯಪ್ಪ ಸಿನಿಮಾಗೆ ಪ್ರೇಕ್ಷಕರಿಂದ ಒಳ್ಳೆ ಪ್ರತಿಕ್ರಿಯೆ ಬರುತ್ತಿದೆ.

ಲವಲವಿಕೆ ಸುದ್ದಿಲೋಕ

ನಗಿಸುತ್ತಲೇ ಭಾವನಾತ್ಮಕ ಲೋಕಕ್ಕೆ ಕರೆದುಕೊಂಡು ಹೋಗುವ ಕೆಮಿಸ್ಟ್ರಿ ಆಫ್‌ ಕರಿಯಪ್ಪ ಸಿನಿಮಾದ ಬಗ್ಗೆ ಪ್ರೇಕ್ಷರಿಂದ ಒಳ್ಳೆ ಪ್ರತಿಕ್ರಿಯೆ ಬರುತ್ತಿರುವುದಕ್ಕೆ ನಿರ್ಮಾಪಕ ಡಿ ಎಸ್‌ ಮಂಜುನಾಥ್‌ ಸಂತಸ ವ್ಯಕ್ತಪಡಿಸಿದ್ದಾರೆ.

'ಬಿಡುಗಡೆಯಾಗುವುದಕ್ಕೆ ಮುನ್ನವೇ ಜನ ಚಿತ್ರವನ್ನು ಮೆಚ್ಚಿಕೊಳ್ಳುತ್ತಾರೆ ಎಂಬ ಭರವಸೆ ನನಗೆ ಇತ್ತು. ಅದು ಮೊದಲ ಪ್ರದರ್ಶನದಲ್ಲಿಯೇ ಸಾಬೀತಾಯಿತು. ನಮ್ಮ ಸಿನಿಮಾದ ಕಂಟೆಂಟ್‌ ಬಗ್ಗೆ ಸಾಕಷ್ಟು ಮಂದಿ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ. ಮಂಡ್ಯ, ಮೈಸೂರು ಭಾಗಗಳಲ್ಲಿ ಸಾಕಷ್ಟು ಜನ ಕುಟುಂಬ ಸಮೇತ ಸಿನಿಮಾ ನೋಡಿ ನನಗೆ ಕರೆ ಮಾಡಿ ಅಭಿನಂದಿಸಿದ್ದಾರೆ. ತಬಲಾ ನಾಣಿ ಅವರ ಹಾಸ್ಯ, ಚಂದನ್‌ ಮತ್ತು ಸಂಜನಾ ಅವರ ನೈಜ ಅಭಿನಯಕ್ಕೆ ಜನ ಮನಸೋತಿದ್ದು , ಇಡೀ ಸಿನಿಮಾ ಮುಗಿಯುವವರೆಗೂ ನಕ್ಕು ನಕ್ಕು ಎಂಜಾಯ್‌ ಮಾಡುತ್ತಿದ್ದಾರೆ. ಶನಿವಾರ ಬೆಳಗಿನ ಶೋಗಳು ಹೌಸ್‌ಫುಲ್‌ ಆಗಿವೆ. ಶುಕ್ರವಾರಕ್ಕಿಂತ ಶನಿವಾರ ಕಲೆಕ್ಷನ್‌ ಹೆಚ್ಚಾಗಿದ್ದು, ನಿರ್ಮಾಪಕನಾಗಿ ನನಗೆ ಸಂತೋಷವಾಗಿದೆ' ಎನ್ನುತ್ತಾರವರು.

'ಮಾಧ್ಯಮಗಳ ವಿಮರ್ಶೆ ಕೂಡಾ ಚೆನ್ನಾಗಿದ್ದು, ಇದು ಸಹ ಪ್ರೇಕ್ಷಕರ ಸಂಖ್ಯೆ ದುಪ್ಪಟ್ಟಾಗಲು ಕಾರಣವಾಗಿದೆ. ಸೋಮವಾರದಿಂದ ಕೆಲವು ಕಡೆ ಚಿತ್ರಮಂದಿರಗಳ ಸಂಖ್ಯೆಯನ್ನು ಹೆಚ್ಚು ಮಾಡುವ ಬಗ್ಗೆ ಯೋಚಿಸುತ್ತಿದ್ದೇವೆ' ಎಂದು ಹೇಳುತ್ತಾರೆ ಮಂಜುನಾಥ್‌.

ಎಂ ಸಿರಿ ಪ್ರೊಡಕ್ಷನ್ಸ್‌ ಬ್ಯಾನರ್‌ನಡಿ ಡಾ. ಮಂಜುನಾಥ್‌ ಡಿ ಎಸ್‌ ಸಿನಿಮಾಗೆ ಬಂಡವಾಳ ಹೂಡಿದ್ದಾರೆ. ಚಂದನ್‌ ಆಚಾರ್‌, ಸಂಜನಾ ಆನಂದ್‌, ಅಪೂರ್ವ, ತಬಲಾ ನಾಣಿ ಮುಖ್ಯ ಭೂಮಿಕೆಯಲ್ಲಿರುವ ಈ ಸಿನಿಮಾವನ್ನು ಕುಮಾರ್‌ ನಿರ್ದೇಶನ ಮಾಡಿದ್ದಾರೆ.



ಸಿನಿಮಾದಲ್ಲಿರುವ ಮೆಸೇಜ್‌ ಪ್ರೇಕ್ಷಕರಿಗೆ ಇಷ್ಟವಾಗಿದೆ. ಈ ಸಿನಿಮಾದಲ್ಲಿ ಕಾಮಿಡಿ ಜತೆಗೆ ಫ್ಯಾಮಿಲಿ ಸೆಂಟಿಮೆಂಟ್‌ ಇರುವುದು ವರ್ಕೌಟ್‌ ಆಗಿದೆ.

-ಮಂಜುನಾಥ್‌, ನಿರ್ಮಾಪಕ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌