ಆ್ಯಪ್ನಗರ

ಚೇತನ್‌ ಈಗ ಆರ್ಟ್‌ ಡೈರೆಕ್ಟರ್‌

ಚೇತನ್‌ ಈಗ ಆರ್ಟ್‌ ಡೈರೆಕ್ಟರ್‌ ಈವರೆಗೂ ನಟನೆ ಮತ್ತು ಗಾಯಕನಾಗಿ ಗುರುತಿಸಿಕೊಂಡಿರುವ ಚೇತನ್‌ ಗಂಧರ್ವ ಈಗ ಕಲಾ ನಿರ್ದೇಶಕರಾಗಿದ್ದಾರೆ...

Vijaya Karnataka Web 17 Jun 2016, 4:00 am

ಈವರೆಗೂ ನಟನೆ ಮತ್ತು ಗಾಯಕನಾಗಿ ಗುರುತಿಸಿಕೊಂಡಿರುವ ಚೇತನ್‌ ಗಂಧರ್ವ ಈಗ ಕಲಾ ನಿರ್ದೇಶಕರಾಗಿದ್ದಾರೆ. ನಾಯಕನಾಗಿ ಹಲವು ಚಿತ್ರಗಳಲ್ಲಿ ನಟಿಸುತ್ತಿರುವ ಇವರು, ಆರ್ಟ್‌ ಡೈರೆಕ್ಟನ್‌ನತ್ತ ಯಾಕೆ ಮುಖ ಮಾಡಿದರು ಅಂತೀರಾ? ಅವರು ಕಲಾ ನಿರ್ದೇಶಕರಾಗಿದ್ದು, ನಿಜ ಜೀವನದಲ್ಲಿ ಅಲ್ಲ. ಅಂಥದ್ದೊಂದು ಪಾತ್ರವನ್ನು ಅವರು ವಿಜಯ್‌ ಪಾಳೆಗಾರ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಹೊಸ ಚಿತ್ರದಲ್ಲಿ ನಿರ್ವಹಿಸುತ್ತಿದ್ದಾರೆ. ಈ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದಕ್ಕೆ ಅವರು ಹೆಮ್ಮೆ ಪಡುತ್ತಾರೆ.

'ಕಲಾ ನಿರ್ದೇಶಕನ ಬದುಕಿನ ಸುತ್ತ ಹೆಣೆದ ಕತೆ ಇಲ್ಲಿದೆ. ಅದು ವಿಭಿನ್ನವಾದ ಪಾತ್ರ ಆಗಿದ್ದರಿಂದ ಒಪ್ಪಿಕೊಂಡೆ. ಶೂಟಿಂಗ್‌ ನಡೆಯುವಾಗ ಸಾಮಾನ್ಯವಾಗಿ ಕಲಾ ನಿರ್ದೇಶಕರು ನಮ್ಮೊಟ್ಟಿಗೆ ಇರುತ್ತಾರೆ. ಆದರೆ, ಅವರು ಜೀವನ ಹೇಗೆಲ್ಲ ಇರುತ್ತದೆ ಅಂತ ಗೊತ್ತಾಗುವುದೇ ಇಲ್ಲ. ನಿರ್ದೇಶಕರು ಈ ಕತೆ ಹೇಳಿದ ಮೇಲೆ ಥ್ರಿಲ್‌ ಆದೆ' ಅನ್ನುವುದು ಚೇತನ್‌ ಮಾತು.

ವೃತ್ತಿಯಲ್ಲಿ ಕುಂಚಕಲಾವಿದ ಆಗಿರುವ ನಿರ್ದೇಶಕರು, ಮೊದಲ ಬಾರಿ ಸ್ವತಂತ್ರ ನಿರ್ದೇಶನಕ್ಕೆ ಮುಂದಾಗಿದ್ದಾರೆ. ಕಲಾ ನಿರ್ದೇಶಕ ಸಿನಿಮಾದ ಕೆಲಸಕ್ಕೆಂದು ಕಾಡಿಗೆ ಹೋದಾಗ ಅಭಯಾರಣ್ಯದಲ್ಲಿ ಸಿಲುಕಿಕೊಳ್ಳುತ್ತಾನೆ. ಅದು ಹುಲಿ ಇರುವ ಕಾಡು. ಅಂತಹ ಕಾಡಿನಲ್ಲಿ ಆತ ಏನೆಲ್ಲ ಕಷ್ಟ ಅನುಭವಿಸುತ್ತಾನೆ ಅನ್ನುವುದೇ ಸಿನಿಮಾದ ಕತೆಯಂತೆ. ಅಂದಹಾಗೆ ಈಗಾಗಲೇ ಎರಡು ಸಿನಿಮಾಗಳಲ್ಲಿ ನಟಿಸಿರುವ ಜೀವಿಕಾ ಈ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌