ಆ್ಯಪ್ನಗರ

ಮಾಲ್ಗುಡಿ ಕತೆಯಲ್ಲಿ ಚಿರಂಜೀವಿ

ನಟ ಚಿರಂಜೀವಿ ಸರ್ಜಾ ಮುಂದಿನ ಸಿನಿಮಾದಲ್ಲಿ ಆರ್‌ ಕೆ ನಾರಾಯಣ್‌ ಅವರ ಕಾದಂಬರಿಯೊಂದನ್ನು ಚಿತ್ರಕತೆಯನ್ನಾಗಿ ಅಳವಡಿಸಿಕೊಳ್ಳಲಿದ್ದಾರೆ.

Vijaya Karnataka Web 7 Apr 2017, 10:36 am

ನಟ ಚಿರಂಜೀವಿ ಸರ್ಜಾ ಮುಂದಿನ ಸಿನಿಮಾದಲ್ಲಿ ಆರ್‌ ಕೆ ನಾರಾಯಣ್‌ ಅವರ ಕಾದಂಬರಿಯೊಂದನ್ನು ಚಿತ್ರಕತೆಯನ್ನಾಗಿ ಅಳವಡಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಜೋರಾಗಿ ಹಬ್ಬಿದೆ. ಈ ಸಿನಿಮಾಗೆ ಕೆ ಎಂ ಚೈತನ್ಯ ನಿರ್ದೇಶಕ ಎಂಬುದು ವಿಶೇಷ.

ಇತ್ತೀಚೆಗೆ ನಟ ಚಿರಂಜೀವಿ ಸರ್ಜಾ 'ಎ ಟೌನ್‌ ಕಾಲ್ಡ್‌ ಮಾಲ್ಗುಡಿ' ಎಂಬ ಪುಸ್ತಕವನ್ನು ಓದುತ್ತಿರುವ ಫೋಟೋವೊಂದನ್ನು ಟ್ವೀಟ್ ಮಾಡಿದ್ದರು. ಜತೆಗೆ ಮಾಲ್ಗುಡಿಯಲ್ಲಿ ಬಿಝಿಯಾಗಿಬಿಟ್ಟಿದ್ದೇನೆ ಎಂದು ಅವರು ಸ್ಟೇಟಸ್‌ ಹಾಕಿಕೊಂಡಿದ್ದರು. ಇದು ಅವರ ಮುಂದಿನ ಯೋಜನೆ ಇರಬಹುದು ಎಂದು ಸಾಕಷ್ಟು ಜನ ರೀಟ್ವಿಟ್‌ ಮಾಡಿದ್ದರು.

Vijaya Karnataka Web chiranjeevi in malgudi stoy
ಮಾಲ್ಗುಡಿ ಕತೆಯಲ್ಲಿ ಚಿರಂಜೀವಿ


ಇದೇ ಸಮಯದಲ್ಲಿ ನಿರ್ದೇಶಕ ಕೆ ಎಂ ಚೈತನ್ಯ ಬಳಗದಿಂದ ಒಂದು ಸುದ್ದಿ ಬಂದಿದೆ ಅವರು ನಿರ್ದೇಶನ ಮಾಡುತ್ತಿರುವ ಮುಂದಿನ ಸಿನಿಮಾಗೆ ಆರ್‌ಕೆ ನಾರಾಯಣ್‌ ಅವರ ಕಾದಂಬರಿಯೊಂದು ಪ್ರೇರಣೆ ಎಂಬುದು. ಹಾಗಾಗಿ ಈ ಎರಡು ಸುದ್ದಿಗಳಿಗೆ ಸಂಬಂಧ ಇದೆ ಎನ್ನುತ್ತಿದ್ದಾರೆ ಸ್ಯಾಂಡಲ್‌ವುಡ್‌ನ ಪಂಡಿತರು. ಈ ಬಗ್ಗೆ ನಿರ್ದೇಶಕರಾಗಲಿ , ಚಿರಂಜೀವಿ ಸರ್ಜಾ ಆಗಲೆ ಇಬ್ಬರೂ ಬಾಯಿ ಬಿಟ್ಟಿಲ್ಲ.

ಚೈತನ್ಯ ಈಗಾಗಲೇ ನಿರ್ಮಾಪಕರೊಂದಿಗೆ ಮಾಲ್ಗುಡಿಯ ಬಗ್ಗೆ ಮಾತುಕತೆ ನಡೆಸುತ್ತಿದ್ದಾರೆ ಎಂದು Ü ತಿಳಿದುಬಂದಿದೆ.

ಚೈತನ್ಯ ಮತ್ತು ಚಿರಂಜೀವಿ ಸರ್ಜಾ ಇಬ್ಬರೂ 'ಆಟಗಾರ' ಸಿನೆಮಾದಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು. ಅದಾದ ನಂತರ 'ಆಕೆ' ಸಿನೆಮಾದಲ್ಲಿಯೂ ಒಟ್ಟಾಗಿದ್ದರು. ನಾರಾಯಣ್‌ ಅವರ ಕಾದಂಬರಿಯಲ್ಲಿ ಮತ್ತೆ ಒಂದಾದರೂ ಅಚ್ಚರಿಯಿಲ್ಲಎನ್ನಲಾಗುತ್ತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌