ಆ್ಯಪ್ನಗರ

'ಮೆಗಾ ಸ್ಟಾರ್' ಚಿರಂಜೀವಿಗೆ ಅಭಿಮಾನಿಗಳ ಬಗ್ಗೆ ಇರುವ ಕಾಳಜಿ ಎಂಥದ್ದು ನೋಡಿ?

ಸಿನಿಮಾ ತಾರೆಯರಿಗಾಗಿ ಅವರ ಅಭಿಮಾನಿಗಳು ಏನೇನೋ ಕೆಲಸ ಮಾಡುತ್ತಾರೆ. ತಮ್ಮ ನೆಚ್ಚಿನ ತಾರೆಯೊಂದಿಗೆ ಒಂದೇ ಒಂದು ಫೋಟೋ ಸಿಕ್ಕರೂ ಸಾಕು ಎಂದುಕೊಳ್ಳುವವರು ಇದ್ದಾರೆ. ಆದರೆ, ಆ ಸೆಲೆಬ್ರಿಟಿಗಳು ಅಭಿಮಾನಿಗಳಿಗಾಗಿ ಏನು ಮಾಡಿದ್ದಾರೆ?

Vijaya Karnataka Web 31 Dec 2019, 4:11 pm
ಅಭಿಮಾನಿಗಳು ತಮ್ಮ ನೆಚ್ಚಿನ ಕಲಾವಿದರಿಗಾಗಿ ಏನು ಬೇಕಾದರು ಮಾಡಲು ಸಜ್ಜಾಗಿರುತ್ತಾರೆ. ಅವರ ಸಿನಿಮಾಗಳು ರಿಲೀಸ್ ಆದಾಗ ಹಬ್ಬ ಮಾಡುತ್ತಾರೆ. ಹಾಲಿನ ಅಭಿಷೇಕ ಮಾಡುತ್ತಾರೆ. ಮೈಮೇಲೆ ಹಚ್ಚೆ ಹಾಕಿಸಿಕೊಳ್ಳುತ್ತಾರೆ. ಹೀಗೆ ನಾನಾ ರೀತಿಯಲ್ಲಿ ತಮ್ಮ ಅಭಿಮಾನವನ್ನು ಹೊರಹಾಕುವ ಪ್ರಯತ್ನ ಮಾಡುತ್ತಾರೆ. ಅದೇ ಥರ ಕಷ್ಟ ಎಂದು ಬಂದ ಅಭಿಮಾನಿಗಳಿಗೆ ಸಹಾಯ ಮಾಡಿದ ಕಲಾವಿದರು ಇದ್ಧಾರೆ. ಆದರೆ, 'ಮೆಗಾ ಸ್ಟಾರ್' ಚಿರಂಜೀವಿ ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ.
Vijaya Karnataka Web ಚಿರಂಜೀವಿ


ಹೌದು, ತಮ್ಮ ಅಭಿಮಾನಿಗಳಿಗ ಹೆಲ್ತ್ ಇನ್ಶೂರೆನ್ಸ್ ಮತ್ತು ಲೈಫ್‌ ಇನ್ಶೂರೆನ್ಸ್ ಮಾಡಿಸಲು ಮುಂದಾಗಿದ್ದಾರಂತೆ! ಹಾಗಾಗಿ, ಈಗಾಗಲೇ ಅಭಿಮಾನಿಗಳ ಮತ್ತು ಅವರ ಕುಟುಂಬದವರ ಮಾಹಿತಿ ಪಡೆದುಕೊಳ್ಳುವ ಕೆಲಸ ಮಾಡಿಕೊಳ್ಳುವ ಸಾಗಿದೆಯಂತೆ.

ಅಭಿಮಾನಿಗಳಿಗಾಗಿ ಚಿರು ಕೈಗೊಂಡಿರುವ ಈ ಕಾರ್ಯದ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲವಾದರೂ, ಇಂಥದ್ದೊಂದು ಕೆಲಸ ಆಗುತ್ತಿರುವ ಬಗ್ಗೆ ಕೇಳಿದ ಅಭಿಮಾನಿಗಳು ಥ್ರಿಲ್‌ ಆಗಿದ್ದಾರೆ. ತಮ್ಮನ್ನು ಆರಾಧಿಸುವ ಫ್ಯಾನ್ಸ್‌ಗಳ ಬಗ್ಗೆ ಚಿರು ಕುಟುಂಬ ತೆಗೆದುಕೊಂಡಿರುವ ಕಾಳಜಿ ಕುರಿತು ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.

'ಡಾಲಿ' ಧನಂಜಯಗೆ 10 ರೂಪಾಯಿ ಉಡುಗೊರೆ ಕೊಟ್ಟ ಹುಬ್ಬಳ್ಳಿ ಬಾಲಕ!

ಅಂದಹಾಗೆ, 'ಮೆಗಾ ಫ್ಯಾಮಿಲಿ'ಯಲ್ಲಿ ಬರೀ ಚಿರುಗೆ ಮಾತ್ರ ಅಭಿಮಾನಿಗಳಿಲ್ಲ. ಪವನ್‌ ಕಲ್ಯಾಣ್‌, ರಾಮ್‌ ಚರಣ್‌ ತೇಜ, ಅಲ್ಲು ಅರ್ಜುನ್‌, ಸಾಯಿ ಧರಮ್‌ ತೇಜ, ವರುಣ್ ತೇಜ, ಅಲ್ಲು ಸಿರೀಶ್‌ ಮುಂತಾದವರು ಇದ್ದಾರೆ. ಇವರೆಲ್ಲರೂ ಸಿನಿಮಾರಂಗದಲ್ಲಿ ತಮ್ಮದೇ ಅಭಿಮಾನಿ ವರ್ಗವನ್ನು ಹೊಂದಿದ್ದಾರೆ.

'ಬಿಗ್ ಬಾಸ್‌' ಶಶಿ ಸಿನಿಮಾಕ್ಕಾಗಿ ಗಡ್ಡ ಬೋಳಿಸಿದ ಬಹುಭಾಷಾ ನಟ!!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌