ಆ್ಯಪ್ನಗರ

ರಚಿತಾ ರಾಮ್ 'ಏಪ್ರಿಲ್'ಗೆ ಬೆಂಬಲ ಕೊಟ್ಟ ಚಿರಂಜೀವಿ ಸರ್ಜಾ

ರಚಿತಾ ರಾಮ್ ಅವರು 'ಏಪ್ರಿಲ್' ಸಿನಿಮಾ ಮಾಡುತ್ತಿದ್ದಾರೆ ಎಂದು ಸುದ್ದಿಯಾಗಿತ್ತು. ಅದು ಮಹಿಳಾ ಪ್ರಧಾನ ಚಿತ್ರವಂತೆ. ಈಗ ಈ ಸಿನಿಮಾದ ಬಗ್ಗೆ ದೊಡ್ಡ ಸುದ್ದಿಯೊಂದು ಹೊರಬಂದಿದೆ. 'ವಾಯುಪುತ್ರ'ನ ಆಗಮನವಾಗಿದೆಯಂತೆ ಇಲ್ಲಿ. ಕನ್ಫ್ಯೂಸ್ ಆಗಬೇಡಿ, ಸುದ್ದಿ ಓದಿ

Vijaya Karnataka Web 3 Oct 2019, 10:41 am
'ಏಪ್ರಿಲ್' ಸಿನಿಮಾವನ್ನು ರಚಿತಾ ರಾಮ್ ಮಾಡುತ್ತಿದ್ದಾರೆ ಎನ್ನೋದು ಹಳೆಯ ವಿಚಾರ. ಈ ಚಿತ್ರಕ್ಕೆ ಸತ್ಯ ರಾಯಲ ನಿರ್ದೇಶನ ಮಾಡುತ್ತಿದ್ದಾರೆ. ಆದರೆ ಈಗ ಈ ಚಿತ್ರದಲ್ಲಿ ದೊಡ್ಡ ಬೆಳವಣಿಗೆಯೊಂದು ನಡೆದಿದೆ. ಈ ಚಿತ್ರಕ್ಕೆ ಹೀರೋ ಎಂಟ್ರಿಯಾಗಿದೆ. ಅದರಲ್ಲೇನು ಅಂತೀರಾ?
Vijaya Karnataka Web April


'ಏಪ್ರಿಲ್' ಮಹಿಳಾ ಪ್ರಧಾನವಾದ ಚಿತ್ರವಾಗಿತ್ತು. ಚಿರಂಜೀವಿ ಸರ್ಜಾ ಈ ಚಿತ್ರಕ್ಕೆ ಕಾಲಿಟ್ಟ ನಂತರ ಇದು ಕಮರ್ಷಿಯಲ್ ಥ್ರಿಲ್ಲರ್ ಟಚ್ ಪಡೆದಿದೆ. '8ಎಂಎಂ' ಸಿನಿಮಾದ ನಿರ್ಮಾಪಕ ನಾರಾಯಣ್ ಬಾಬು ಈ ಸಿನಿಮಾಕ್ಕೆ ನಿರ್ಮಾಣ ಮಾಡುತ್ತಿದ್ದಾರೆ. 'ಏಪ್ರಿಲ್'ಗೆ ಚಿರಂಜೀವಿ ಸರ್ಜಾ ಪ್ರವೇಶ ಮಾಡಿರೋದರಿಂದ ಹಳೆಯ ಕಥೆಯನ್ನು ಇಟ್ಟುಕೊಂಡು, ಅದರಲ್ಲಿ ಸ್ವಲ್ಪ ಬದಲಾವಣೆ ಮಾಡಿಕೊಳ್ಳಲಿದ್ದಾರಂತೆ ನಿರ್ದೇಶಕರು. ಬದಲಾದ ಈ ಹೊಸ ಕಥೆಯನ್ನು ಚಿರಂಜೀವಿ ಮತ್ತು ರಚಿತಾ ಇಬ್ಬರೂ ಇಷ್ಟಪಟ್ಟಿದ್ದಾರಂತೆ.

'ಆಯುಷ್ಮಾನ್‌ಭವ' ಸೆಟ್‌ನಲ್ಲಿ ತುಂಬ ಸಲ ಶಿವಣ್ಣಂಗೆ ಬೈಯ್ದುಕೊಂಡಿದ್ದೆ: ರಚಿತಾ ರಾಮ್‌

ಅರ್ಜುನ್ ಶೆಟ್ಟಿ ಮತ್ತು ಪ್ರತೀಕ್ ಶೆಟ್ಟಿ ಈ ಸಿನಿಮಾದ ಛಾಯಾಗ್ರಾಹಕರು. ಸಂಗೀತ ಸಂಯೋಜನೆ ಜವಾಬ್ದಾರಿ ಹೊತ್ತಿರುವ ಸಚಿನ್ ಬಸ್ರೂರ್‌ರಿಗೆ ಈ ಸಿನಿಮಾ ಚೊಚ್ಚಲ ಸಿನಿಮಾ. ಉಳಿದ ತಾರಾಗಣದ ಆಯ್ಕೆಯಾದ ನಂತರದಲ್ಲಿ ಡಿಸೆಂಬರ್‌ನಲ್ಲಿ ಈ ಸಿನಿಮಾದ ಶೂಟಿಂಗ್ ಮಾಡುವ ಯೋಚನೆ ನಿರ್ದೇಶಕರದ್ದು. ಚಿರಂಜೀವಿ ಕೈಯಲ್ಲಿ ಈಗಾಗಲೇ 'ಆದ್ಯ, ಜುಗಾರಿ ಕ್ರಾಸ್, ರಾಜಮಾರ್ತಾಂಡ, ಖಾಕಿ, ರಣಂ, ಕ್ಷತ್ರೀಯ' ಸಿನಿಮಾಗಳಲ್ಲಿ ಅವರು ಬಿಜಿಯಿದ್ದಾರೆ.

ಸೆಟ್‌ನಲ್ಲಿ ಪಿ.ವಾಸು ಅವರಿಂದ ಬೈಸಿಕೊಂಡ ರಚಿತಾ ರಾಮ್

ರಚಿತಾ ರಾಮ್ ' ರಮೇಶ್ ಅರವಿಂದ್ ಅವರ 100, ಏಕ್ ಲವ್ ಯಾ, ಡಾಲಿ' ಸಿನಿಮಾ ಕೆಲಸಗಳಲ್ಲಿ ಬಿಜಿಯಿದ್ದಾರೆ. ಇನ್ನೇನು 'ಏಪ್ರಿಲ್' ಸಿನಿಮಾದ ಅಧಿಕೃತ ಘೋಷಣೆಯೊಂದೇ ಬಾಕಿಯಿದೆ. 'ಸೆಂಚುರಿ ಸ್ಟಾರ್‌' ಶಿವರಾಜ್ ಕುಮಾರ್ ಜತೆ ಡಿಂಪಲ್ ಕ್ವೀನ್ ಈ ಹಿಂದೆ 'ರುಸ್ತುಂ' ಸಿನಿಮಾದಲ್ಲಿ ನಟಿಸಿದ್ದರು. ಆದರೆ, ಜೋಡಿಯಾಗಿರಲಿಲ್ಲ. ಈಗ ದ್ವಾರಕೀಶ್‌ ಬ್ಯಾನರ್‌ನ 52ನೇ ಚಿತ್ರ 'ಆಯುಷ್ಮಾನ್‌ಭವ'ದಲ್ಲಿ ಅವರಿಗೆ ನಾಯಕಿಯಾಗಿ ಬುಲ್ ಬುಲ್ ಬೆಡಗಿ ಕಾಣಿಸಿಕೊಂಡಿದ್ದಾರೆ. ಪಿ. ವಾಸು ಇದರ ನಿರ್ದೇಶಕರು. ಈಗಾಗಲೇ ಶೂಟಿಂಗ್ ಮುಗಿಸಿರುವ ಚಿತ್ರತಂಡ, ನವೆಂಬರ್ 1ಕ್ಕೆ ಚಿತ್ರ ತೆರೆಗೆ ತರುವುದಕ್ಕೆ ಸಕಲ ರೀತಿಯಲ್ಲಿ ಸಜ್ಜಾಗಿದೆ.
ಆ್ಯಂಕರಿಂಗ್ ಕೆಲಸ ಶುರು ಮಾಡಿದ ರಚಿತಾ ಸಿನಿಮಾ ಬಿಟ್ಟುಬಿಟ್ರಾ? ; ರಚಿತಾ ಹೇಳಿದ್ದೇನು?

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌