ಆ್ಯಪ್ನಗರ

ರಾಷ್ಟ್ರಪಿತ ಗಾಂಧೀಜಿಯವರನ್ನು ನೆನೆದ ಚಿತ್ರರಂಗದ ಗಣ್ಯರು

ಭಾರತಕ್ಕೆ ಸ್ವಾತಂತ್ರ್ಯ ತಂದುಕೊಡುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ ಮಹಾತ್ಮ ಗಾಂಧೀಜಿಯವ್ರ ಜನ್ಮದಿನವನ್ನು ನಾಡಿನೆಲ್ಲೆಡೆ ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಸಿನಿಮಾ ತಾರೆಯರು ಕೂಡ ಮಹಾತ್ಮನಿಗೆ ನಮನವನ್ನು ಸಲ್ಲಿಸಿದ್ದಾರೆ. ಜೊತೆಗೆ ಅಪರೂಪದ ಗಾಂಧಿ ತತ್ವಗಳನ್ನು ಶೇರ್ ಮಾಡಿ, ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ.

Vijaya Karnataka Web 2 Oct 2019, 5:35 pm
ಸತ್ಯ, ಅಹಿಂಸೆ ಮತ್ತು ಶಾಂತಿ ಈ ಮೂರು ಮಂತ್ರಗಳಿಂದಲೇ ಬ್ರಿಟೀಷರ ನೀರಿಳಿಸಿದ ಕೀರ್ತಿ ಸಲ್ಲೋದು ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವ್ರಿಗೆ. ಹೀಗೆ ಸ್ವಾತಂತ್ರ್ಯಕ್ಕಾಗಿ ಕ್ರಾಂತಿ ಮಾರ್ಗವನ್ನು ಬದಿಗಿಟ್ಟು, ಶಾಂತಿ ಮಾರ್ಗದಿಂದಲೇ ವಿಜಯೀಶಾಲಿಯಾದ ಬಾಪೂಜಿಯವ್ರ 150ನೇ ಜನ್ಮದಿನವಿಂದು. ಇದರ ಪ್ರಯುಕ್ತ ಚಿತ್ರರಂಗದ ಅನೇಕ ಗಣ್ಯರು ರಾಷ್ಟ್ರಪಿತನನ್ನು ನೆನೆದು ಸಾಮಾಜಿಕ ಜಾಲತಾಣಗಳಲ್ಲಿ ಗಾಂಧಿ ತತ್ವಗಳನ್ನು ಪೋಸ್ಟ್ ಮಾಡುತ್ತಿದ್ದಾರೆ.
Vijaya Karnataka Web gandhi

ಮಹಾತ್ಮ ಗಾಂಧಿ 150 - ಗಣ್ಯರು ಬಾಪುವನ್ನು ಸ್ಮರಿಸಿದ್ದು ಹೀಗೆ

ಬಾಲಿವುಡ್‌ ನಟ ಅಜಯ್ ದೇವಗನ್ ಟ್ವಿಟ್ಟರ್‌ನಲ್ಲಿ ಗಾಂಧೀಜಿಯವರ ಫೋಟೋ ಶೇರ್ ಮಾಡಿ ಗೌರವ ಸೂಚಿಸಿದ್ದಾರೆ.

ರಿಯಲ್‌ಸ್ಟಾರ್ ಉಪೇಂದ್ರ, " ಸಕಲ ಜೀವಿಗಳೂ ನೆಮ್ಮದಿಯಿಂದ ಬಾಳಬೇಕು ಅನ್ನೋದೆ ಧರ್ಮ. ಈ ಧರ್ಮಕ್ಕೆ ಅಡ್ಡಿಯಾಗಿ ಬೇರೆ ಯಾವ ಧರ್ಮ ಬಂದರೂ ಅದನ್ನು ನಾನು ವಿರೋಧಿಸುತ್ತೇನೆ" ಅಂತಾ ಟ್ವೀಟ್ ಮಾಡುವ ಮೂಲಕ ವಿಭಿನ್ನವಾಗಿ ಗಾಂಧಿ ಜಯಂತಿಯ ಶುಭಾಶಯವನ್ನು ತಿಳಿಸಿದ್ದಾರೆ.

'ಸಿಂಪಲ್ಲಾಗ್ ಒಂದ್ ಲವ್‌ಸ್ಟೋರಿ' ಖ್ಯಾತಿಯ ಸುನಿ, ಮಹಾತ್ಮ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಅವರನ್ನು ನೆನೆದು ಟ್ವೀಟ್ ಮಾಡಿದ್ದಾರೆ.

ಶರಣ್ ಕೂಡ ಗಾಂಧೀಜಿ ಮತ್ತು ಶಾಸ್ತ್ರೀಜಿಯವರ ಫೋಟೋ ಶೇರ್ ಮಾಡಿದ್ದಾರೆ.

ಇನ್ನು ಡ್ಯಾನ್ಸಿಂಗ್ ಕ್ವೀನ್ ಮಾಧುರಿ ದೀಕ್ಷಿತ್ ಕೂಡ ಗಾಂಧಿ ಜಯಂತಿ ಬಗ್ಗೆ ಪೋಸ್ಟ್ ಮಾಡಿದ್ದಾರೆ.

ಸೋನಂ ಕಪೂರ್ ಮಹಾತ್ಮ ಗಾಂಧೀಜಿಯವರನ್ನು ನೆನೆದು ಗೌರವ ಸಮರ್ಪಿಸಿದ್ದಾರೆ.

ರಿತೇಶ್ ದೇಶ್‌ಮುಖ್ ಗಾಂಧಿ ತತ್ವ ಸಾರುವ ವಿಭಿನ್ನವಾದ ಫೋಟೋ ಶೇರ್ ಮಾಡಿದ್ದಾರೆ.

ಮಹಾತ್ಮ ಗಾಂಧಿ ನುಡಿಮುತ್ತುಗಳು: ಎಲ್ಲರ ಬದುಕಿನ ಬೆಳಕಿನ ಕಿರಣಗಳು

ದಿಯಾ ಮಿರ್ಜಾ ರಾಷ್ಟ್ರಪಿತನ ಸಂದೇಶವನ್ನು ಹಂಚಿಕೊಂಡಿದ್ದಾರೆ.


ಇನ್ನು ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಮಹಾತ್ಮನಿಗೆ ನಮನವನ್ನು ಸಲ್ಲಿಸಿದ್ದಾರೆ.

ತಮನ್ನಾ ಭಾಟಿಯಾ ಕೂಡ ಗಾಂಧಿ ಜಯಂತಿಯ ಬಗ್ಗೆ ಪೋಸ್ಟ್ ಮಾಡಿದ್ದಾರೆ.

ಹೀಗೆ ಚಿತ್ರರಂಗದ ಅನೇಕರು ರಾಷ್ಟ್ರಪಿತನನ್ನು ನೆನೆದು ಗೌರವವನ್ನು ಸಮರ್ಪಿಸಿದ್ದಾರೆ. ಈ ರೀತಿ ಗಾಂಧೀಜಿ ಮತ್ತು ಶಾಸ್ತ್ರೀಜಿ ನಮ್ಮನ್ನು ಅಗಲಿ ಸಾಕಷ್ಟು ವರ್ಷಗಳಾಗಿದ್ರೂ, ಇಂದಿಗೂ ಇವರ ಸಾಧನೆಗಳು ಎಲ್ಲರಿಗೂ ದಾರಿದೀಪವಾಗಿವೆ. ಸಾಮಾಜಿಕ ಜಾಲತಾಣಗಳಲ್ಲಿ ಇವರ ನೆನಪುಗಳು ರಾರಾಜಿಸುತ್ತಿವೆ.
ಶಾಂತಿ ಅಹಿಂಸೆಗಳ ಹರಿಕಾರ ಸತ್ಯದ ಸರದಾರ ಮಹಾತ್ಮ ಗಾಂಧಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌