ಪದ್ಮಾ ಶಿವಮೊಗ್ಗ
ವಿಕೆ ಯೂತ್ ಕನೆಕ್ಟ್ ಕಾರ್ಯಕ್ರಮದಡಿ ವಿಜಯ ಕರ್ನಾಟಕ- ಲವಲವಿಕೆ ಓದುಗರಿಗಾಗಿ ಬುಧವಾರ ಬೆಂಗಳೂರಿನಲ್ಲಿ ಪ್ರಸಿದ್ಧ್ ನಿರ್ದೇಶನದ 'ರತ್ನಮಂಜರಿ' ಚಿತ್ರದ ವಿಶೇಷ ಪ್ರದರ್ಶನ ಏರ್ಪಡಿಸಲಾಗಿತ್ತು. ಕೆಲ ಉತ್ಸಾಹಿ ಅನಿವಾಸಿ ಭಾರತೀಯರು ಮಾಡಿರುವ ಈ ಚಿತ್ರ ಪ್ರಾರಂಭದಿಂದ ಕೊನೆಯವರೆಗೆ ಕುತೂಹಲ ಉಳಿಸಿಕೊಂಡು ಹೋಗುತ್ತದೆ ಎಂದು ಓದುಗರು ಅಭಿಪ್ರಾಯಪಟ್ಟಿದ್ದಾರೆ.
ರಾಜ್ ಚರಣ್, ಅಖಿಲಾ ಪ್ರಕಾಶ್, ಶ್ರದ್ಧಾ ಸಾಲಿಯಾನ್ ನಟಿಸಿರುವ ಚಿತ್ರ ಇದು. 'ಚಿತ್ರದಲ್ಲಿ ಸಸ್ಪೆನ್ಸ್ ಬಹಳ ಥ್ರಿಲ್ ನೀಡಿತು. ಹಾರರ್ ಫೀಲ್ ಕೊಟ್ಟಿತು. ಕಥೆಯೂ ವಿಭಿನ್ನವಾಗಿದೆ. ಚಿತ್ರದಲ್ಲಿ ನಟಿಸಿರುವವರೆಲ್ಲಾ ಹೊಸಬರೇ ಆದರೂ ಬಹಳ ಚೆನ್ನಾಗಿ ನಟಿಸಿದ್ದಾರೆ. ಹೀರೋ ರಾಜ್ ಚರಣ್ ಹ್ಯಾಂಡ್ಸಮ್ ಆಗಿ ಕಾಣುತ್ತಾರೆ. ನಟನೆಯನ್ನೂ ಚೆನ್ನಾಗಿ ಮಾಡಿದ್ದಾರೆ. ಅನಿವಾಸಿ ಭಾರತೀಯರಾಗಿದ್ದುಕೊಂಡು ಕನ್ನಡ ಸಿನಿಮಾ ಮಾಡಿದ್ದನ್ನು ಮೆಚ್ಚಲೇಬೇಕು' ಎಂಬುದು ಓದುಗರೊಬ್ಬರ ಅಭಿಪ್ರಾಯವಾಗಿತ್ತು.
ಹೌಸ್ಫುಲ್ ಆಗಿದ್ದ ಚಿತ್ರಮಂದಿರದಲ್ಲಿ ಮಹಿಳೆಯರೇ ಅಧಿಕ ಸಂಖ್ಯೆಯಲ್ಲಿದ್ದುದು ವಿಶೇಷವಾಗಿತ್ತು. 'ಕೊಡಗನ್ನು ತುಂಬಾ ಚೆನ್ನಾಗಿ ತೋರಿಸಿದ್ದೀರಾ. ಹಸಿರು ತುಂಬಿದ ಕೊಡಗಿನ ಈ ದೃಶ್ಯಗಳು ಈಗ ನಮಗೆ ನೋಡಲು ಸಿಗುವುದಿಲ್ಲ. ನಮ್ಮ ಕೊಡಗನ್ನು ಚಿತ್ರದಲ್ಲಿ ಸೆರೆಹಿಡಿದಿರುವುದಕ್ಕೆ ಧನ್ಯವಾದಗಳು' ಎಂದರು.
ಹಿನ್ನೆಲೆ ಸಂಗೀತ ನೀಡಿದ ಹರ್ಷವರ್ಧನ್ ಅಪಾರ ಮೆಚ್ಚುಗೆಗೆ ಪಾತ್ರರಾದರು. 'ಹೊಸ ಫೀಲ್ ಕೊಡುವ ಸಂಗೀತ ನೀಡಿದ್ದಾರೆ. ಸಿನಿಮಾದುದ್ದಕ್ಕೂ ಥ್ರಿಲ್ ನೀಡಿತು. ಮರ್ಡರ್ ಮಿಸ್ಟ್ರಿ ಸಿನಿಮಾ ಆದರೂ ಹಾರರ್ ಫೀಲ್ ಕೊಟ್ಟಿತು' ಎಂದವರು ಇನ್ನೊಬ್ಬರು.
ಹೀಗೆ ವ್ಯಕ್ತವಾದ ಅಪಾರ ಮೆಚ್ಚುಗೆಗೆ ಚಿತ್ರತಂಡ ಧನ್ಯವಾದ ತಿಳಿಸಿತು. 'ಒಬ್ಬೊಬ್ಬೊಬ್ಬರು ಒಂದೊಂದು ದೇಶದಲ್ಲಿದ್ದುಕೊಂಡೇ ಈ ಚಿತ್ರ ಮಾಡಿದ್ದೇವೆ. ಬಹಳ ಶ್ರಮಪಟ್ಟಿದ್ದೇವೆ.ಇದಕ್ಕೆ ಕಾರಣ ನಮಗೆಲ್ಲಾ ಇರುವ ಕನ್ನಡ ಪ್ರೇಮ. ಕನ್ನಡಿಗರು ಚಿತ್ರವನ್ನು ನೋಡಿದರೆ ನಮ್ಮ ಶ್ರಮ ಸಾರ್ಥಕ. ಇನ್ನು ಮುಂದೆಯೂ ಸಿನಿಮಾ ಮಾಡಬೇಕು ಎಂದಿದ್ದೇವೆ. ಈ ಸಿನಿಮಾ ಗೆಲ್ಲಿಸಿ. ಪ್ರೋತ್ಸಾಹ ನೀಡಿ' ಎಂದು ನಿರ್ದೇಶಕ ಪ್ರಸಿದ್ಧ್ ಹೇಳಿದರು.
'ಚಿತ್ರದಲ್ಲಿ ಎಲ್ಲಾ ನಟರು ಉತ್ತಮವಾಗಿ ನಟಿಸಿದ್ದಾರೆ. ಕಥೆ, ಕೊಡಗಿನ ಕಲ್ಚರ್, ಮಂಜು ಮುಸುಕಿದ ಊರು ಎಲ್ಲವೂ ಚೆನ್ನಾಗಿದೆ. ಸದಭಿರುಚಿಯ ಚಿತ್ರದಲ್ಲಿ ಯಾವುದೇ ರೀತಿಯ ಅಶ್ಲೀಲ ದೃಶ್ಯಗಳಿಲ್ಲ. ಕುಟುಂಬ ಸಮೇತ ನೋಡಬಹುದಾಗಿದೆ' ಎಂಬ ಅಭಿಪ್ರಾಯ ಪ್ರೇಕ್ಷಕರಿಂದ ಮೂಡಿಬಂದಿತು. ಹಾಡುಗಳನ್ನು ಎಂಜಾಯ್ ಮಾಡಿದರು.
----
ಪೂರ್ಣ ಮನರಂಜನೆ ನೀಡುವ ಸಿನಿಮಾ ಮಾಡಬೇಕು ಅನ್ನೋದೇ ನಮ್ಮ ಉದ್ದೇಶ. ಈ ಸಿನಿಮಾಗೆ ಹೊಸ ನಟರನ್ನೇ ಆಯ್ಕೆ ಮಾಡಿದೆವು. ನಟರು, ತಂತ್ರಜ್ಞರೆಲ್ಲರ ಶ್ರಮದಿಂದ ಸಿನಿಮಾ ಉತ್ತಮವಾಗಿ ಮೂಡಿಬಂದಿದೆ. 4 ಗಂಟೆಗಳ ಪುಟೇಜ್ ಅನ್ನು 2 ಗಂಟೆಗಳಿಗೆ ಇಳಿಸಿದ್ದೇವೆ. ಪ್ರಪಂಚದ ಹಲವು ದಿಕ್ಕುಗಳಲ್ಲಿ ಕೆಲಸ ಮಾಡಿಕೊಂಡಿದ್ದ ಕನ್ನಡಿಗರೆಲ್ಲಾ ಸೇರಿ ಚಿತ್ರ ನಿರ್ಮಾಣ ಮಾಡಿದ್ದಾರೆ. ಅವರ ಕನ್ನಡಾಭಿಮಾನವನ್ನು ಅಭಿನಂದಿಸಲೇಬೇಕು. ಕನ್ನಡಕ್ಕೊಂದು ಉತ್ತಮ ಚಿತ್ರ ನೀಡಬೇಕೆನ್ನುವುದು ನಮ್ಮ ಉದ್ದೇಶ. ಅದು ಈಡೇರಿದೆ. ಈಗ ರತ್ನಮಂಜರಿ ಅಮೆರಿಕದಲ್ಲೂ ರಿಲೀಸ್ ಆಗಿದ್ದು, ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ.
-ಪ್ರಸಿದ್ಧ್, ನಿರ್ದೇಶಕ
ವಿಕೆ ಯೂತ್ ಕನೆಕ್ಟ್ ಕಾರ್ಯಕ್ರಮದಡಿ ವಿಜಯ ಕರ್ನಾಟಕ- ಲವಲವಿಕೆ ಓದುಗರಿಗಾಗಿ ಬುಧವಾರ ಬೆಂಗಳೂರಿನಲ್ಲಿ ಪ್ರಸಿದ್ಧ್ ನಿರ್ದೇಶನದ 'ರತ್ನಮಂಜರಿ' ಚಿತ್ರದ ವಿಶೇಷ ಪ್ರದರ್ಶನ ಏರ್ಪಡಿಸಲಾಗಿತ್ತು. ಕೆಲ ಉತ್ಸಾಹಿ ಅನಿವಾಸಿ ಭಾರತೀಯರು ಮಾಡಿರುವ ಈ ಚಿತ್ರ ಪ್ರಾರಂಭದಿಂದ ಕೊನೆಯವರೆಗೆ ಕುತೂಹಲ ಉಳಿಸಿಕೊಂಡು ಹೋಗುತ್ತದೆ ಎಂದು ಓದುಗರು ಅಭಿಪ್ರಾಯಪಟ್ಟಿದ್ದಾರೆ.
ರಾಜ್ ಚರಣ್, ಅಖಿಲಾ ಪ್ರಕಾಶ್, ಶ್ರದ್ಧಾ ಸಾಲಿಯಾನ್ ನಟಿಸಿರುವ ಚಿತ್ರ ಇದು. 'ಚಿತ್ರದಲ್ಲಿ ಸಸ್ಪೆನ್ಸ್ ಬಹಳ ಥ್ರಿಲ್ ನೀಡಿತು. ಹಾರರ್ ಫೀಲ್ ಕೊಟ್ಟಿತು. ಕಥೆಯೂ ವಿಭಿನ್ನವಾಗಿದೆ. ಚಿತ್ರದಲ್ಲಿ ನಟಿಸಿರುವವರೆಲ್ಲಾ ಹೊಸಬರೇ ಆದರೂ ಬಹಳ ಚೆನ್ನಾಗಿ ನಟಿಸಿದ್ದಾರೆ. ಹೀರೋ ರಾಜ್ ಚರಣ್ ಹ್ಯಾಂಡ್ಸಮ್ ಆಗಿ ಕಾಣುತ್ತಾರೆ. ನಟನೆಯನ್ನೂ ಚೆನ್ನಾಗಿ ಮಾಡಿದ್ದಾರೆ. ಅನಿವಾಸಿ ಭಾರತೀಯರಾಗಿದ್ದುಕೊಂಡು ಕನ್ನಡ ಸಿನಿಮಾ ಮಾಡಿದ್ದನ್ನು ಮೆಚ್ಚಲೇಬೇಕು' ಎಂಬುದು ಓದುಗರೊಬ್ಬರ ಅಭಿಪ್ರಾಯವಾಗಿತ್ತು.
ಹೌಸ್ಫುಲ್ ಆಗಿದ್ದ ಚಿತ್ರಮಂದಿರದಲ್ಲಿ ಮಹಿಳೆಯರೇ ಅಧಿಕ ಸಂಖ್ಯೆಯಲ್ಲಿದ್ದುದು ವಿಶೇಷವಾಗಿತ್ತು. 'ಕೊಡಗನ್ನು ತುಂಬಾ ಚೆನ್ನಾಗಿ ತೋರಿಸಿದ್ದೀರಾ. ಹಸಿರು ತುಂಬಿದ ಕೊಡಗಿನ ಈ ದೃಶ್ಯಗಳು ಈಗ ನಮಗೆ ನೋಡಲು ಸಿಗುವುದಿಲ್ಲ. ನಮ್ಮ ಕೊಡಗನ್ನು ಚಿತ್ರದಲ್ಲಿ ಸೆರೆಹಿಡಿದಿರುವುದಕ್ಕೆ ಧನ್ಯವಾದಗಳು' ಎಂದರು.
ಹಿನ್ನೆಲೆ ಸಂಗೀತ ನೀಡಿದ ಹರ್ಷವರ್ಧನ್ ಅಪಾರ ಮೆಚ್ಚುಗೆಗೆ ಪಾತ್ರರಾದರು. 'ಹೊಸ ಫೀಲ್ ಕೊಡುವ ಸಂಗೀತ ನೀಡಿದ್ದಾರೆ. ಸಿನಿಮಾದುದ್ದಕ್ಕೂ ಥ್ರಿಲ್ ನೀಡಿತು. ಮರ್ಡರ್ ಮಿಸ್ಟ್ರಿ ಸಿನಿಮಾ ಆದರೂ ಹಾರರ್ ಫೀಲ್ ಕೊಟ್ಟಿತು' ಎಂದವರು ಇನ್ನೊಬ್ಬರು.
ಹೀಗೆ ವ್ಯಕ್ತವಾದ ಅಪಾರ ಮೆಚ್ಚುಗೆಗೆ ಚಿತ್ರತಂಡ ಧನ್ಯವಾದ ತಿಳಿಸಿತು. 'ಒಬ್ಬೊಬ್ಬೊಬ್ಬರು ಒಂದೊಂದು ದೇಶದಲ್ಲಿದ್ದುಕೊಂಡೇ ಈ ಚಿತ್ರ ಮಾಡಿದ್ದೇವೆ. ಬಹಳ ಶ್ರಮಪಟ್ಟಿದ್ದೇವೆ.ಇದಕ್ಕೆ ಕಾರಣ ನಮಗೆಲ್ಲಾ ಇರುವ ಕನ್ನಡ ಪ್ರೇಮ. ಕನ್ನಡಿಗರು ಚಿತ್ರವನ್ನು ನೋಡಿದರೆ ನಮ್ಮ ಶ್ರಮ ಸಾರ್ಥಕ. ಇನ್ನು ಮುಂದೆಯೂ ಸಿನಿಮಾ ಮಾಡಬೇಕು ಎಂದಿದ್ದೇವೆ. ಈ ಸಿನಿಮಾ ಗೆಲ್ಲಿಸಿ. ಪ್ರೋತ್ಸಾಹ ನೀಡಿ' ಎಂದು ನಿರ್ದೇಶಕ ಪ್ರಸಿದ್ಧ್ ಹೇಳಿದರು.
'ಚಿತ್ರದಲ್ಲಿ ಎಲ್ಲಾ ನಟರು ಉತ್ತಮವಾಗಿ ನಟಿಸಿದ್ದಾರೆ. ಕಥೆ, ಕೊಡಗಿನ ಕಲ್ಚರ್, ಮಂಜು ಮುಸುಕಿದ ಊರು ಎಲ್ಲವೂ ಚೆನ್ನಾಗಿದೆ. ಸದಭಿರುಚಿಯ ಚಿತ್ರದಲ್ಲಿ ಯಾವುದೇ ರೀತಿಯ ಅಶ್ಲೀಲ ದೃಶ್ಯಗಳಿಲ್ಲ. ಕುಟುಂಬ ಸಮೇತ ನೋಡಬಹುದಾಗಿದೆ' ಎಂಬ ಅಭಿಪ್ರಾಯ ಪ್ರೇಕ್ಷಕರಿಂದ ಮೂಡಿಬಂದಿತು. ಹಾಡುಗಳನ್ನು ಎಂಜಾಯ್ ಮಾಡಿದರು.
----
ಪೂರ್ಣ ಮನರಂಜನೆ ನೀಡುವ ಸಿನಿಮಾ ಮಾಡಬೇಕು ಅನ್ನೋದೇ ನಮ್ಮ ಉದ್ದೇಶ. ಈ ಸಿನಿಮಾಗೆ ಹೊಸ ನಟರನ್ನೇ ಆಯ್ಕೆ ಮಾಡಿದೆವು. ನಟರು, ತಂತ್ರಜ್ಞರೆಲ್ಲರ ಶ್ರಮದಿಂದ ಸಿನಿಮಾ ಉತ್ತಮವಾಗಿ ಮೂಡಿಬಂದಿದೆ. 4 ಗಂಟೆಗಳ ಪುಟೇಜ್ ಅನ್ನು 2 ಗಂಟೆಗಳಿಗೆ ಇಳಿಸಿದ್ದೇವೆ. ಪ್ರಪಂಚದ ಹಲವು ದಿಕ್ಕುಗಳಲ್ಲಿ ಕೆಲಸ ಮಾಡಿಕೊಂಡಿದ್ದ ಕನ್ನಡಿಗರೆಲ್ಲಾ ಸೇರಿ ಚಿತ್ರ ನಿರ್ಮಾಣ ಮಾಡಿದ್ದಾರೆ. ಅವರ ಕನ್ನಡಾಭಿಮಾನವನ್ನು ಅಭಿನಂದಿಸಲೇಬೇಕು. ಕನ್ನಡಕ್ಕೊಂದು ಉತ್ತಮ ಚಿತ್ರ ನೀಡಬೇಕೆನ್ನುವುದು ನಮ್ಮ ಉದ್ದೇಶ. ಅದು ಈಡೇರಿದೆ. ಈಗ ರತ್ನಮಂಜರಿ ಅಮೆರಿಕದಲ್ಲೂ ರಿಲೀಸ್ ಆಗಿದ್ದು, ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ.
-ಪ್ರಸಿದ್ಧ್, ನಿರ್ದೇಶಕ