ಆ್ಯಪ್ನಗರ

ವಿವಾದದಲ್ಲಿ ತಮಿಳು ಬಿಗ್ ಬಾಸ್ 2; ಕಮಲ್ ವಿರುದ್ಧ ದೂರು ದಾಖಲು

ಕಮಲ್ ಹಾಸನ್ ನಿರೂಪಣೆಯಲ್ಲಿ ಮೂಡಿಬರುತ್ತಿರುವ ತಮಿಳು 'ಬಿಗ್ ಬಾಸ್ ಸೀಸನ್ 2' ಮತ್ತೆ ವಿವಾದಕ್ಕೆ ಸಿಲುಕಿದೆ. ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿವಂಗತ ಜಯಲಲಿತಾ ಅವರನ್ನು ಸರ್ವಾಧಿಕಾರಿಯಂತೆ ಶೋನಲ್ಲಿ ಬಿಂಬಿಸಿರುವ ಬಗ್ಗೆ ಕಮಲ್ ಹಾಸನ್ ಮತ್ತು ಶೋ ವಿರುದ್ಧ ಪ್ರಕರಣ ದಾಖಲಾಗಿದೆ.

Times Now 2 Aug 2018, 4:56 pm
ಕಮಲ್ ಹಾಸನ್ ನಿರೂಪಣೆಯಲ್ಲಿ ಮೂಡಿಬರುತ್ತಿರುವ ತಮಿಳು 'ಬಿಗ್ ಬಾಸ್ ಸೀಸನ್ 2' ಮತ್ತೆ ವಿವಾದಕ್ಕೆ ಸಿಲುಕಿದೆ. ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿವಂಗತ ಜಯಲಲಿತಾ ಅವರನ್ನು ಸರ್ವಾಧಿಕಾರಿಯಂತೆ ಶೋನಲ್ಲಿ ಬಿಂಬಿಸಿರುವ ಬಗ್ಗೆ ಕಮಲ್ ಹಾಸನ್ ಮತ್ತು ಶೋ ವಿರುದ್ಧ ಪ್ರಕರಣ ದಾಖಲಾಗಿದೆ.
Vijaya Karnataka Web kamal-haasan


ತಮಿಳು ಬಿಗ್ ಬಾಸ್ 2 ರಿಯಾಲಿಟಿ ಶೋವನ್ನು ಕಮಲ್ ಹಾಸನ್ ನಿರೂಪಿಸುತ್ತಿದ್ದು, ಆರಂಭದಿಂದಲೂ ಒಂದಲ್ಲ ಒಂದು ವಿವಾದಕ್ಕೆ ಗುರಿಯಾಗುತ್ತಲೇ ಇದೆ. ಟಾಸ್ಕ್ ಒಂದರಲ್ಲಿ ಜಯಲಲಿತಾ ಅವರನ್ನು ಸರ್ವಾಧಿಕಾರಿಯಂತೆ ಬಿಂಬಿಸಿದ್ದಾರೆ ಎಂದು ಆರೋಪಿಸಿ ಶೋ ನಿರೂಪಕ ಕಮಲ್ ಹಾಸನ್ ಮತ್ತು ವಿಜಯ್ ಟಿವಿ ವಿರುದ್ಧ ಚೆನ್ನೈ ಪೊಲೀಸ್ ಕಮೀಷನರ್‌ಗೆ ದೂರು ನೀಡಲಾಗಿದೆ.

ಬಿಗ್ ಬಾಸ್ 2 ಕಾರ್ಯಕ್ರಮದ ಮೂಲಕ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾರನ್ನು ಸರ್ವಾಧಿಕಾರಿಯಂತೆ ತೋರಿಸಲಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಶೋನ ಭಾಗವಾಗಿ ಟಾಸ್ಕ್ ಒಂದರಲ್ಲಿ ಸ್ಪರ್ಧಿಗಳು ಸರ್ವಾಧಿಕಾರಿಯಂತೆ ನಡೆದುಕೊಳ್ಳಬೇಕಾಗಿತ್ತು.

ಈ ಕಾರ್ಯಕ್ರಮದಲ್ಲಿ ಕಮಲ್ ಈ ರೀತಿ ಹೇಳಿಕೆ ನೀಡಿದ್ದಾರೆ ಎಂದು ದೂರಲಾಗಿದೆ. "ರಾಜ್ಯವೊಂದನ್ನು ಸರ್ವಾಧಿಕಾರಿಗಳು ಆಳ್ವಿಕೆ ನಡೆಸಿದರೆ ಏನಾಗುತ್ತದೆ ಗೊತ್ತಾ?" ಎಂದು ಪ್ರಶ್ನಿಸಿದ್ದಾರೆ. ಜಯಲಲಿತಾ ಅವರ ವರ್ಚಸ್ಸಿಗೆ ಧಕ್ಕೆ ಬರುವಂತೆ ಕಮಲ್ ಹಾಸನ್ ನಡೆದುಕೊಂಡಿದ್ದಾರೆ ಎಂಬ ಆರೋಪಗಳನ್ನು ಮಾಡಲಾಗಿದೆ.

ಈ ಹಿಂದೆ ಹಿಂದೂ ಮಕ್ಕಲ್ ಕಚ್ಚಿ ಸಂಘಟನೆ ತಮಿಳು ಸಂಸ್ಕೃತಿಯನ್ನು ಹಾಳು ಮಾಡಲಾಗುತ್ತಿದೆ ಎಂದು ತಮಿಳು ಬಿಗ್ ಬಾಸ್ ವಿರುದ್ಧ ಕಿಡಿಕಾರಿತ್ತು. ಈ ಶೋ ನಿಲ್ಲಿಸುವಂತೆ ಚಾನಲ್ ಮುಂದೆ ಪ್ರತಿಭಟಿಸಿತ್ತು. ಅಸಭ್ಯ ಮಾಹಿತಿ ಬಿತ್ತರಿಸುತ್ತಾ ತಮಿಳಿರ ಭಾವನೆಗಳಿಗೆ ನೋವುಂಟು ಮಾಡುತ್ತಿದೆ ಎಂದಿತ್ತು.

ಈ ಬಗ್ಗೆ ಪ್ರತಿಕ್ರಿಯಿಸಿದ್ದ ಕಮಲ್ ಹಾಸನ್, "ನನ್ನ ಬಗ್ಗೆ ಪ್ರಕರಣ ಸಲ್ಲಿಸಿರುವವರ ವಿರುದ್ಧ ನಾನೇನು ಪ್ರತಿಕ್ರಿಯಿಸಲ್ಲ. ಪ್ರಕರಣದ ಬಗ್ಗೆ ನನಗೇನು ಚಿಂತೆಯೂ ಇಲ್ಲ. ನಮ್ಮ ಕಾನೂನು ಮತ್ತು ಸರಕಾರದ ಬಗ್ಗೆ ನನಗೆ ನಂಬಿಕೆ ಇದೆ. ತಮಿಳು ಸಂಸ್ಕೃತಿಯನ್ನು ಬಿಗ್ ಬಾಸ್ ಹಾಳು ಮಾಡುತ್ತಿದೆ ಎಂಬ ವಾದವನ್ನು ನಾನು ಒಪ್ಪಲ್ಲ. ಈ ಹಿಂದೆ ನಾನು ಹಲವಾರು ಕಿಸ್ಸಿಂಗ್ ಸನ್ನಿವೇಶಗಳನ್ನು ಮಾಡಿದ್ದೇನೆ. ಬಹಶಃ ನನ್ನ ಬಂಧನಕ್ಕೆ ನಿಧಾನಕ್ಕೆ ಆಗ್ರಹಿಸಬಹುದು" ಎಂದಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌