ಕೊರಿಯರ್ ಬಾಯ್ ಕೈಗೆ ಸಿಕ್ಕಿಬಿದ್ದ ಬಡವ ರಾಸ್ಕಲ್
ಟಗರು ಡಾಲಿ ಧನಂಜಯ ಇದೀಗ ಚಿತ್ರ ನಿರ್ಮಾಣಕ್ಕೆ ಮುಂದಾಗಿದ್ದು, ತಮ್ಮ ಬ್ಯಾನರ್ಗೆ ಡಾಲಿ ಪಿಕ್ಚರ್ಸ್ ಎಂದು ಹೆಸರಿಟ್ಟಿದ್ದಾರೆ. ಜತೆಗೆ ತಮ್ಮ ಬ್ಯಾನರ್ನಿಂದ ನಿರ್ಮಾಣವಾಗಲಿರುವ ಮೊದಲ ಚಿತ್ರಕ್ಕೆ 'ಬಡವ ರಾಸ್ಕಲ್' ಎಂದು ಟೈಟಲ್ ಇಟ್ಟಿದ್ದಾರೆ.
Vijaya Karnataka 21 Aug 2019, 10:36 am
-ಹರೀಶ್ ಬಸವರಾಜ್
ಟಗರು ಡಾಲಿ ಧನಂಜಯ ಇದೀಗ ಚಿತ್ರ ನಿರ್ಮಾಣಕ್ಕೆ ಮುಂದಾಗಿದ್ದು, ತಮ್ಮ ಬ್ಯಾನರ್ಗೆ ಡಾಲಿ ಪಿಕ್ಚರ್ಸ್ ಎಂದು ಹೆಸರಿಟ್ಟಿದ್ದಾರೆ. ಜತೆಗೆ ತಮ್ಮ ಬ್ಯಾನರ್ನಿಂದ ನಿರ್ಮಾಣವಾಗಲಿರುವ ಮೊದಲ ಚಿತ್ರಕ್ಕೆ 'ಬಡವ ರಾಸ್ಕಲ್' ಎಂದು ಟೈಟಲ್ ಇಟ್ಟಿದ್ದಾರೆ.
ವೃತ್ತಿಯಲ್ಲಿಕೊರಿಯರ್ ಬಾಯ್ ಆಗಿ ಕೆಲಸ ಮಾಡಿರುವ, ತದನಂತರ ಚಿತ್ರರಂಗದಲ್ಲಿಗುರುತಿಸಿಕೊಂಡಿದ್ದ ಶಂಕರ್ಗುರು ಎಂಬ ಹೊಸ ಪ್ರತಿಭೆ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಇದರ ಬಗ್ಗೆ ಸ್ವತಃ ಧನಂಜಯ, ನಿರ್ದೇಶಕ ಶಂಕರ್ ಮತ್ತು ನಿರ್ಮಾಣದಲ್ಲಿಕೈಜೋಡಿಸಿರುವ ಗುಜ್ಜಾಲ್ ಪುರುಷೋತ್ತಮ್ ವಿಶೇಷವಾಗಿ ಲವಲವಿಕೆ ಜತೆ ಮಾತನಾಡಿದ್ದಾರೆ.
'ಸಾಮಾನ್ಯ ಶಿಕ್ಷಕರ ಮಗನಾಗಿದ್ದ ನಾನು ಎಂಜಿನಿಯರಿಂಗ್ ಓದಿ, ಈಗ ನಟನಾಗಿದ್ದೇನೆ. ಇಷ್ಟು ದಿನ ನಟನಾಗಿದ್ದ ನಾನು ಈಗ ನಿರ್ಮಾಪಕನಾಗಿದ್ದೇನೆ. ಬಹಳಷ್ಟು ಜನ ಇಷ್ಟು ಬೇಗ ನಿರ್ಮಾಪಕನಾಗುವುದು ಬೇಕಿತ್ತಾ ಎಂದು ಪ್ರಶ್ನಿಸುತ್ತಿದ್ದಾರೆ. ಆದರೆ ಇಲ್ಲಿಗೆ ಎಲ್ಲರೂ ಕನಸುಗಳನ್ನು ಮಾರಾಟ ಮಾಡಲು ಬರುತ್ತಾರೆ. ನಾನು ಇಷ್ಟು ದಿನ ಬೇರೆಯವರ ಕನಸಿಗಾಗಿ ಕೆಲಸ ಮಾಡುತ್ತಿದ್ದೆ. ಈಗ ನನ್ನ ಕನಸಿಗಾಗಿಯೇ ಕೆಲಸ ಮಾಡಲು ಆರಂಭಿಸಿದ್ದೇನೆ. ಈ ನನ್ನ ಕನಸಿಗೆ ಜೀವ ಕೊಡಲು ನನ್ನ ಜತೆ ಗುಜ್ಜಾಲ್ ಟಾಕೀಸ್ನ ಗುಜ್ಜಾಲ್ ಪುರುಷೋತ್ತಮ್ ಇದ್ದಾರೆ. ನನ್ನ ಜತೆ ಕಳೆದ 10 ವರ್ಷಗಳಿಂದ ಜರ್ನಿ ಮಾಡುತ್ತಿರುವ ಶಂಕರ್ಗುರು ಮೊದಲ ಬಾರಿಗೆ ನಿರ್ದೇಶಕರಾಗುತ್ತಿದ್ದಾರೆ. ಇವರು ಮೊದಲ ಕೊರಿಯರ್ ಬಾಯ್, ಪೇಪರ್ ಹಾಕಿಕೊಂಡು ನಂತರ ಚಿತ್ರರಂಗದಲ್ಲಿತೊಡಗಿಸಿಕೊಂಡಿದ್ದಾರೆ. ಈ ಕಥೆಯನ್ನು ಹೇಳಿದಾಗ ನನಗೆ ತುಂಬಾ ಖುಷಿಯಾಯಿತು. ಇದಕ್ಕೆ 'ಬಡವ ರಾಸ್ಕಲ್' ಎಂಬ ಟೈಟಲ್ ಸೂಕ್ತ ಎಂದುಕೊಂಡೆವು. ಆದರೆ ಅದು ಯೋಗರಾಜ್ಭಟ್ಟರ ಬ್ಯಾನರ್ನಲ್ಲಿತ್ತು. ಅವರೇ ನಮಗೆ ಇದನ್ನು ನೀಡಿದ್ದಾರೆ' ಎನ್ನುತ್ತಾರೆ ಧನಂಜಯ.
'ಬಡವ ರಾರಯಸ್ಕಲ್ ಅಂದ್ರೆ, ಒಂದು ಬಯ್ಗುಳ. ನಮ್ಮ ಸಿನಿಮಾದ ನಾಯಕ ಯಾವಾಗಲೂ ಎಲ್ಲರಿಂದಲೂ ಇದನ್ನು ಬೈಸಿಕೊಳ್ಳುತ್ತಿರುತ್ತಾರೆ. ಪ್ರತಿಯೊಬ್ಬ ಯುವಕನಿಗೂ ಒಂದು ಪೀರಿಯಡ್ನಲ್ಲಿಬ್ಯಾಡ್ಟೈಮ್ ಇರುತ್ತದೆ. ಆ ಸಮಯದಲ್ಲಿಆತ ಮನೆಯರನ್ನು ಎದುರು ಹಾಕಿಕೊಂಡು, ಪೊರ್ಕಿಗಳ ಜತೆ ಸೇರಿ ಒಂದಷ್ಟು ತರಲೆ ಮಾಡಿರುತ್ತಾರೆ. ಅಂತಹ ಎಳೆ ಈ ಸಿನಿಮಾದಲ್ಲಿದೆ. ಈ ಸಿನಿಮಾ ನೋಡಿದ ಪ್ರತಿಯೊಬ್ಬರಿಗೂ, ಇಂತಹ ಹುಡುಗನೊಬ್ಬ ನಮ್ಮ ಮನೆಯ ಪಕ್ಕದಲ್ಲೋ, ನಮ್ಮ ಬೀದಿಯಲ್ಲೋ, ಬದಲು ನಮ್ಮ ಮನೆಯಲ್ಲೋ ಇದ್ದಾನೆ ಎನಿಸುತ್ತದೆ' ಎಂದು ನಿರ್ದೇಶಕ ಶಂಕರ್ಗುರು ಹೇಳುತ್ತಾರೆ.
ಇನ್ನು ನಾನು ಮೂಲತಃ ಬಡ ಮಧ್ಯಮ ವರ್ಗದ ಹುಡುಗ. ಸಿನಿಮಾ ರಂಗಕ್ಕೆ ಬರುವುದಕ್ಕೂ ಮುನ್ನ ಪೇಪರ್ ಹಾಕಿದ್ದೇನೆ, ಕೊರಿಯರ್ ಬಾಯ್ ಆಗಿ ಇತ್ತೀಚಿನವರೆಗೂ ಕೆಲಸ ಮಾಡಿದ್ದೇನೆ. ನಾನು ಈ ಕಥೆಯನ್ನು ಧನಂಜಯ ಅವರಿಗೆ ಹೇಳಲಿಲ್ಲ, ಫುಲ್ ಬೌಂಡ್ ಸ್ಕಿ್ರಪ್ಟ್ ತಯಾರಿಸಿ ಅವರಿಗೆ ಕೊಟ್ಟೆ. ಅವರು ಓದಿದ ತಕ್ಷಣ ಇದನ್ನು ನಾವೇ ಮಾಡೋಣ ಎಂದರು. ಜತೆಗೆ ಪುರುಷೋತ್ತಮ್ ಅವರಿಗೆ ಕಥೆ ಹೇಳಿದ ತಕ್ಷಣ ನಾನು ನಿಮ್ಮ ಜತೆಗಿರುತ್ತೇನೆ ಎಂದು ಹೇಳಿದರು' ಎನ್ನುತ್ತಾರೆ ಶಂಕರ್.
ಈ ಸಿನಿಮಾದಲ್ಲಿನಾಯಕಿಯಾಗಿ ಅಮೃತಾ ಇದ್ದಾರೆ. ಕೆಇಬಿ ಮೂಲಕ ಆನ್ಲೈನ್ನಲ್ಲಿಫೇಮಸ್ ಆಗಿದ್ದ ನಾಗಭೂಷಣ್, ಕೆಲ ಸಿನಿಮಾಗಳಲ್ಲಿನಟಿಸಿರುವ ಪೂರ್ಣಚಂದ್ರ, ನಿರಂಜನ್, ಚಂದ್ರುಸೇರಿ ಸಾಕಷ್ಟು ಜನ ನಟಿಸುತ್ತಿದ್ದಾರೆ. ಅಕ್ಟೋಬರ್ನಿಂದ ಈ ಸಿನಿಮಾದ ಚಿತ್ರೀಕರಣ ಆರಂಭವಾಗಲಿದೆ.
---
ವಿಶೇಷ ಕಥೆ ಮತ್ತು ವಿಶೇಷ ಪ್ರಯತ್ನದೊಂದಿಗೆ ಬಡವರಾರಯಸ್ಕಲ್ ಆಗಿ ಬರುತ್ತಿದ್ದೇವೆ. ಜನರಿಗೆ ಎಂಟರ್ಟೇನ್ಮೆಂಟ್ ಮತ್ತು ಕಂಟೆಂಟ್ ಎರಡೂ ಈ ಚಿತ್ರದಲ್ಲಿಸಿಗುತ್ತದೆ. ಇಂತಹ ಒಳ್ಳೆ ಟೈಟಲ್ ಕೊಟ್ಟ ಯೋಗರಾಜ್ ಭಟ್ ಮತ್ತು ಹರಿಪ್ರಾದ್ ಜಯಣ್ಣ ಅವರಿಗೆ ವಿಶೇಷ ಧನ್ಯವಾದಗಳನ್ನು ಹೇಳುತ್ತೇನೆ.
-ಧನಂಜಯ, ನಟ
ಟಗರು ಡಾಲಿ ಧನಂಜಯ ಇದೀಗ ಚಿತ್ರ ನಿರ್ಮಾಣಕ್ಕೆ ಮುಂದಾಗಿದ್ದು, ತಮ್ಮ ಬ್ಯಾನರ್ಗೆ ಡಾಲಿ ಪಿಕ್ಚರ್ಸ್ ಎಂದು ಹೆಸರಿಟ್ಟಿದ್ದಾರೆ. ಜತೆಗೆ ತಮ್ಮ ಬ್ಯಾನರ್ನಿಂದ ನಿರ್ಮಾಣವಾಗಲಿರುವ ಮೊದಲ ಚಿತ್ರಕ್ಕೆ 'ಬಡವ ರಾಸ್ಕಲ್' ಎಂದು ಟೈಟಲ್ ಇಟ್ಟಿದ್ದಾರೆ.
ವೃತ್ತಿಯಲ್ಲಿಕೊರಿಯರ್ ಬಾಯ್ ಆಗಿ ಕೆಲಸ ಮಾಡಿರುವ, ತದನಂತರ ಚಿತ್ರರಂಗದಲ್ಲಿಗುರುತಿಸಿಕೊಂಡಿದ್ದ ಶಂಕರ್ಗುರು ಎಂಬ ಹೊಸ ಪ್ರತಿಭೆ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಇದರ ಬಗ್ಗೆ ಸ್ವತಃ ಧನಂಜಯ, ನಿರ್ದೇಶಕ ಶಂಕರ್ ಮತ್ತು ನಿರ್ಮಾಣದಲ್ಲಿಕೈಜೋಡಿಸಿರುವ ಗುಜ್ಜಾಲ್ ಪುರುಷೋತ್ತಮ್ ವಿಶೇಷವಾಗಿ ಲವಲವಿಕೆ ಜತೆ ಮಾತನಾಡಿದ್ದಾರೆ.
'ಸಾಮಾನ್ಯ ಶಿಕ್ಷಕರ ಮಗನಾಗಿದ್ದ ನಾನು ಎಂಜಿನಿಯರಿಂಗ್ ಓದಿ, ಈಗ ನಟನಾಗಿದ್ದೇನೆ. ಇಷ್ಟು ದಿನ ನಟನಾಗಿದ್ದ ನಾನು ಈಗ ನಿರ್ಮಾಪಕನಾಗಿದ್ದೇನೆ. ಬಹಳಷ್ಟು ಜನ ಇಷ್ಟು ಬೇಗ ನಿರ್ಮಾಪಕನಾಗುವುದು ಬೇಕಿತ್ತಾ ಎಂದು ಪ್ರಶ್ನಿಸುತ್ತಿದ್ದಾರೆ. ಆದರೆ ಇಲ್ಲಿಗೆ ಎಲ್ಲರೂ ಕನಸುಗಳನ್ನು ಮಾರಾಟ ಮಾಡಲು ಬರುತ್ತಾರೆ. ನಾನು ಇಷ್ಟು ದಿನ ಬೇರೆಯವರ ಕನಸಿಗಾಗಿ ಕೆಲಸ ಮಾಡುತ್ತಿದ್ದೆ. ಈಗ ನನ್ನ ಕನಸಿಗಾಗಿಯೇ ಕೆಲಸ ಮಾಡಲು ಆರಂಭಿಸಿದ್ದೇನೆ. ಈ ನನ್ನ ಕನಸಿಗೆ ಜೀವ ಕೊಡಲು ನನ್ನ ಜತೆ ಗುಜ್ಜಾಲ್ ಟಾಕೀಸ್ನ ಗುಜ್ಜಾಲ್ ಪುರುಷೋತ್ತಮ್ ಇದ್ದಾರೆ. ನನ್ನ ಜತೆ ಕಳೆದ 10 ವರ್ಷಗಳಿಂದ ಜರ್ನಿ ಮಾಡುತ್ತಿರುವ ಶಂಕರ್ಗುರು ಮೊದಲ ಬಾರಿಗೆ ನಿರ್ದೇಶಕರಾಗುತ್ತಿದ್ದಾರೆ. ಇವರು ಮೊದಲ ಕೊರಿಯರ್ ಬಾಯ್, ಪೇಪರ್ ಹಾಕಿಕೊಂಡು ನಂತರ ಚಿತ್ರರಂಗದಲ್ಲಿತೊಡಗಿಸಿಕೊಂಡಿದ್ದಾರೆ. ಈ ಕಥೆಯನ್ನು ಹೇಳಿದಾಗ ನನಗೆ ತುಂಬಾ ಖುಷಿಯಾಯಿತು. ಇದಕ್ಕೆ 'ಬಡವ ರಾಸ್ಕಲ್' ಎಂಬ ಟೈಟಲ್ ಸೂಕ್ತ ಎಂದುಕೊಂಡೆವು. ಆದರೆ ಅದು ಯೋಗರಾಜ್ಭಟ್ಟರ ಬ್ಯಾನರ್ನಲ್ಲಿತ್ತು. ಅವರೇ ನಮಗೆ ಇದನ್ನು ನೀಡಿದ್ದಾರೆ' ಎನ್ನುತ್ತಾರೆ ಧನಂಜಯ.
'ಬಡವ ರಾರಯಸ್ಕಲ್ ಅಂದ್ರೆ, ಒಂದು ಬಯ್ಗುಳ. ನಮ್ಮ ಸಿನಿಮಾದ ನಾಯಕ ಯಾವಾಗಲೂ ಎಲ್ಲರಿಂದಲೂ ಇದನ್ನು ಬೈಸಿಕೊಳ್ಳುತ್ತಿರುತ್ತಾರೆ. ಪ್ರತಿಯೊಬ್ಬ ಯುವಕನಿಗೂ ಒಂದು ಪೀರಿಯಡ್ನಲ್ಲಿಬ್ಯಾಡ್ಟೈಮ್ ಇರುತ್ತದೆ. ಆ ಸಮಯದಲ್ಲಿಆತ ಮನೆಯರನ್ನು ಎದುರು ಹಾಕಿಕೊಂಡು, ಪೊರ್ಕಿಗಳ ಜತೆ ಸೇರಿ ಒಂದಷ್ಟು ತರಲೆ ಮಾಡಿರುತ್ತಾರೆ. ಅಂತಹ ಎಳೆ ಈ ಸಿನಿಮಾದಲ್ಲಿದೆ. ಈ ಸಿನಿಮಾ ನೋಡಿದ ಪ್ರತಿಯೊಬ್ಬರಿಗೂ, ಇಂತಹ ಹುಡುಗನೊಬ್ಬ ನಮ್ಮ ಮನೆಯ ಪಕ್ಕದಲ್ಲೋ, ನಮ್ಮ ಬೀದಿಯಲ್ಲೋ, ಬದಲು ನಮ್ಮ ಮನೆಯಲ್ಲೋ ಇದ್ದಾನೆ ಎನಿಸುತ್ತದೆ' ಎಂದು ನಿರ್ದೇಶಕ ಶಂಕರ್ಗುರು ಹೇಳುತ್ತಾರೆ.
ಇನ್ನು ನಾನು ಮೂಲತಃ ಬಡ ಮಧ್ಯಮ ವರ್ಗದ ಹುಡುಗ. ಸಿನಿಮಾ ರಂಗಕ್ಕೆ ಬರುವುದಕ್ಕೂ ಮುನ್ನ ಪೇಪರ್ ಹಾಕಿದ್ದೇನೆ, ಕೊರಿಯರ್ ಬಾಯ್ ಆಗಿ ಇತ್ತೀಚಿನವರೆಗೂ ಕೆಲಸ ಮಾಡಿದ್ದೇನೆ. ನಾನು ಈ ಕಥೆಯನ್ನು ಧನಂಜಯ ಅವರಿಗೆ ಹೇಳಲಿಲ್ಲ, ಫುಲ್ ಬೌಂಡ್ ಸ್ಕಿ್ರಪ್ಟ್ ತಯಾರಿಸಿ ಅವರಿಗೆ ಕೊಟ್ಟೆ. ಅವರು ಓದಿದ ತಕ್ಷಣ ಇದನ್ನು ನಾವೇ ಮಾಡೋಣ ಎಂದರು. ಜತೆಗೆ ಪುರುಷೋತ್ತಮ್ ಅವರಿಗೆ ಕಥೆ ಹೇಳಿದ ತಕ್ಷಣ ನಾನು ನಿಮ್ಮ ಜತೆಗಿರುತ್ತೇನೆ ಎಂದು ಹೇಳಿದರು' ಎನ್ನುತ್ತಾರೆ ಶಂಕರ್.
ಈ ಸಿನಿಮಾದಲ್ಲಿನಾಯಕಿಯಾಗಿ ಅಮೃತಾ ಇದ್ದಾರೆ. ಕೆಇಬಿ ಮೂಲಕ ಆನ್ಲೈನ್ನಲ್ಲಿಫೇಮಸ್ ಆಗಿದ್ದ ನಾಗಭೂಷಣ್, ಕೆಲ ಸಿನಿಮಾಗಳಲ್ಲಿನಟಿಸಿರುವ ಪೂರ್ಣಚಂದ್ರ, ನಿರಂಜನ್, ಚಂದ್ರುಸೇರಿ ಸಾಕಷ್ಟು ಜನ ನಟಿಸುತ್ತಿದ್ದಾರೆ. ಅಕ್ಟೋಬರ್ನಿಂದ ಈ ಸಿನಿಮಾದ ಚಿತ್ರೀಕರಣ ಆರಂಭವಾಗಲಿದೆ.
---
ವಿಶೇಷ ಕಥೆ ಮತ್ತು ವಿಶೇಷ ಪ್ರಯತ್ನದೊಂದಿಗೆ ಬಡವರಾರಯಸ್ಕಲ್ ಆಗಿ ಬರುತ್ತಿದ್ದೇವೆ. ಜನರಿಗೆ ಎಂಟರ್ಟೇನ್ಮೆಂಟ್ ಮತ್ತು ಕಂಟೆಂಟ್ ಎರಡೂ ಈ ಚಿತ್ರದಲ್ಲಿಸಿಗುತ್ತದೆ. ಇಂತಹ ಒಳ್ಳೆ ಟೈಟಲ್ ಕೊಟ್ಟ ಯೋಗರಾಜ್ ಭಟ್ ಮತ್ತು ಹರಿಪ್ರಾದ್ ಜಯಣ್ಣ ಅವರಿಗೆ ವಿಶೇಷ ಧನ್ಯವಾದಗಳನ್ನು ಹೇಳುತ್ತೇನೆ.
-ಧನಂಜಯ, ನಟ