ಆ್ಯಪ್ನಗರ

ಪಡ್ಡೆಹುಲಿಯಲ್ಲಿ ಕನ್ನಡ ಉಪನ್ಯಾಸಕರಾದ ಕ್ರೇಜಿಸ್ಟಾರ್‌

ಪಡ್ಡೆಹುಲಿ ಸಿನಿಮಾದಲ್ಲಿ ನಾಯಕನ ತಂದೆಯಾಗಿ ನಟಿಸಿದ್ದಾರೆ ಕ್ರೇಜಿಸ್ಟಾರ್‌ ರವಿಚಂದ್ರನ್‌. ಅನೇಕ ಮಕ್ಕಳಿಗೆ ಸ್ಫೂರ್ತಿ ತುಂಬುವಂಥ ಪಾತ್ರ ಅದಾಗಿದೆ ಎನ್ನುತ್ತಾರೆ ಚಿತ್ರದ ನಾಯಕ ಶ್ರೇಯಸ್‌.

Vijaya Karnataka 13 Apr 2019, 5:00 am
* ಶರಣು ಹುಲ್ಲೂರು
Vijaya Karnataka Web ravichandran


ಪಡ್ಡೆಹುಲಿ ಸಿನಿಮಾದಲ್ಲಿ ಅಪ್ಪ ಮತ್ತು ಮಗನ ಬಾಂಧವ್ಯ ಗಾಢವಾಗಿದೆ. ಸಿನಿಮಾ ನೋಡಿದ ನಂತರ ಅಪ್ಪನಿದ್ದರೆ ಹೀಗೆಯೇ ಇರಬೇಕು ಎನ್ನುವಷ್ಟು ಅದು ಆವರಿಸಿಕೊಳ್ಳುತ್ತದೆ. ಅಂತಹ ಪಾತ್ರದಲ್ಲಿ ನಟಿಸಿದ್ದಾರಂತೆ ಕ್ರೇಜಿಸ್ಟಾರ್‌ ರವಿಚಂದ್ರನ್‌. ಕನ್ನಡ ಉಪನ್ಯಾಸಕನಾಗಿ ರವಿಚಂದ್ರನ್‌ ನಟಿಸಿದ್ದರೂ, ಪ್ರತಿ ಮಕ್ಕಳಿಗೂ ಆದರ್ಶ ಆಗುವಂಥ ಪಾತ್ರ ಅದಾಗಿದೆ ಎನ್ನುತ್ತಾರೆ ನಿರ್ದೇಶಕ ಗುರು ದೇಶಪಾಂಡೆ.

'ಮಗನ ಬಗ್ಗೆ ಅಪಾರ ಕಾಳಜಿ ಹೊಂದಿರುವ ಅಪ್ಪ. ತಂದೆಯ ಕನಸು ನನಸು ಮಾಡಲು ಹೊರಡುವ ಮಗ. ಈ ಮಧ್ಯೆ ಹಲವು ಘಟನೆಗಳು ನಡೆಯುತ್ತವೆ. ಆ ಘಟನೆಗಳಿಗೆ ರವಿಚಂದ್ರನ್‌ ಮತ್ತು ಶ್ರೇಯಸ್‌ ಜೀವ ತುಂಬಿದ್ದಾರೆ. ಸಾಮಾನ್ಯವಾಗಿ ತಾಯಿ ಮತ್ತು ಮಗನ ಎಮೋಷನ್‌ ತೋರಿಸುತ್ತಾವೆ. ಅಷ್ಟೇ ಗಾಢವಾಗಿ ಪಡ್ಡೆಹುಲಿಯಲ್ಲಿ ತಂದೆ ಮತ್ತು ಮಗನ ಬಾಂಧವ್ಯ ಹೇಳಲು ಹೊರಟಿದ್ದೇವೆ. ಪ್ರತಿಯೊಬ್ಬ ತಂದೆ ಮಗನಿಗೂ ಈ ಸಿನಿಮಾ ಕನೆಕ್ಟ್ ಆಗುತ್ತದೆ' ಎನ್ನುವುದು ನಿರ್ದೇಶಕರ ಮಾತು.

ರವಿಚಂದ್ರನ್‌ ಜತೆ ಮಗನಾಗಿ ತೆರೆ ಹಂಚಿಕೊಂಡಿರುವ ಶ್ರೇಯಸ್‌ ಹೇಳುವುದು ಹೀಗೆ, 'ಅವರು ದೊಡ್ಡ ಕಲಾವಿದರು. ಅವರೊಂದಿಗೆ ಹೇಗೆ ನಟಿಸೋದು ಅಂತ ಮೊದ ಮೊದಲು ಆತಂಕವಾಗಿತ್ತು. ಶೂಟಿಂಗ್‌ ಮಾಡ್ತಾ ಮಾಡ್ತಾ ಅವರು ಹತ್ತಿರವಾದರು. ಅನೇಕ ದೃಶ್ಯಗಳಲ್ಲಿ ನಾನು ಭಾವುಕನಾಗುವಂತೆ ನಟಿಸುತ್ತಿದ್ದರು. ಅಪ್ಪನಿದ್ದರೆ ಹೀಗೆಯೇ ಇರಬೇಕು ಎನ್ನುವಷ್ಟು ನನ್ನನ್ನು ಆವರಿಸಿಕೊಂಡರು' ಎನ್ನುತ್ತಾರೆ ನಾಯಕ ಶ್ರೇಯಸ್‌.

'ಕಥಾ ನಾಯಕನಿಗೆ ರಾಕ್‌ಸ್ಟಾರ್‌ ಆಗುವ ಬಯಕೆ. ಮಗನ ಆಸೆಗೆ ಅಪ್ಪ ಹೇಗೆಲ್ಲ ಪೂರಕ ಆಗುತ್ತಾನೆ ಎನ್ನುವುದೇ ಸಿನಿಮಾದ ಒನ್‌ಲೈನ್‌ ಸ್ಟೋರಿ. ಈ ಕಥೆಗೆ ನಿಜ ಜೀವನದಲ್ಲಿ ನಡೆವ ಅನೇಕ ಘಟನೆಗಳನ್ನು ಹೆಣೆದಿದ್ದೇವೆ. ಹಾಗಾಗಿ ನಮ್ಮ ಜೀವನದಲ್ಲೇ ಆ ಕಥೆ ನಡೆಯಲಿದೆ ಎಂಬ ಅನುಭವ ಕೊಡುತ್ತದೆ' ಎನ್ನುವುದು ನಿರ್ದೇಶಕರ ಮಾತು.

ಈ ಚಿತ್ರಕ್ಕಾಗಿ ರವಿಚಂದ್ರನ್‌ ಗೆಟಪ್‌ ಬದಲಿಸಿಕೊಂಡಿದ್ದಾರೆ. ತುಂಬಾ ಪ್ರಬುದ್ಧರಾಗಿ ಕಾಣುತ್ತಾರೆ. ತುಂಬಾ ವರ್ಷಗಳ ನಂತರ ಅವರು ಇಂಥದ್ದೊಂದು ಪಾತ್ರ ಮಾಡಿದ್ದಾರೆ. ಇವೆಲ್ಲ ಕಾರಣಗಳಿಂದಾಗಿ ಸಿನಿಮಾ ಕ್ಯೂರಿಯಾಟಿಸಿ ಮೂಡಿಸಿದೆ.

ಪ್ರೇಮಲೋಕ ಹಾಡುಗಳ ಮೂಲಕವೇ ಸಿನಿಮಾ ಕಥೆಯನ್ನು ಹೇಳುವ ಪ್ರಯತ್ನ ನಡೆದಿತ್ತು. ಪಡ್ಡೆಹುಲಿಯಲ್ಲೂ ಹತ್ತಕ್ಕೂ ಹೆಚ್ಚು ಹಾಡುಗಳಿವೆ. ಹಾಗಾಗಿ ಹಾಡುಗಳಿಗೆ ಪ್ರಾಮುಖ್ಯತೆ ನೀಡಿದ್ದಾರಂತೆ ನಿರ್ದೇಶಕರು.

ನನ್ನ ತಂದೆಯಾಗಿ ರವಿಚಂದ್ರನ್‌ ಅವರು ನಟಿಸಿದ್ದಾರೆ. ಪ್ರತಿ ಮಕ್ಕಳೂ ಕೂಡ ಇಂತಹ ಅಪ್ಪನನ್ನೇ ಬಯಸುವಂಥ ಪಾತ್ರದಲ್ಲಿ ಅವರು ನಟಿಸಿದ್ದಾರೆ.
- ಶ್ರೇಯಸ್‌, ನಟ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌