ಆ್ಯಪ್ನಗರ

ಮಗಳ ಮದುವೆಗೆ ಕ್ರೇಜಿಸ್ಟಾರ್ ರವಿಚಂದ್ರನ್ ಬೊಂಬಾಟ್ ಉಡುಗೊರೆ

ಸ್ವತಃ ತಾವೇ ಭಾವನಾತ್ಮಕ ಸಾಲುಗಳಿಂದ ತುಂಬಿರುವ ಹಾಡೊಂದನ್ನು ತಯಾರಿಸಿದ್ದು, ಅದನ್ನೇ ಮದುವೆಗೆ ಗಿಫ್ಟ್‌ ಆಗಿ ನೀಡಲಿದ್ದಾರೆ. ರವಿಚಂದ್ರನ್‌ ಸಾಹಿತ್ಯ ಬರೆದಿರುವುದು ಮಾತ್ರವಲ್ಲ, ಸ್ವತಃ ಅವರೇ ಈ ಗೀತೆಯನ್ನು ಹಾಡಿದ್ದಾರೆ.

Vijaya Karnataka 16 Apr 2019, 5:00 am
ರವಿಚಂದ್ರನ್‌ ಪುತ್ರಿ ಗೀತಾಂಜಲಿ ಮದುವೆ ಮೇ 28 ಮತ್ತು 29ರಂದು ಬೆಂಗಳೂರಿನಲ್ಲಿ ನಡೆಯಲಿದೆ. ಮಮತೆಯ ಮಗಳ ಮದುವೆಗಾಗಿ ಕ್ರೇಜಿಸ್ಟಾರ್‌ ವಿಶೇಷ ಉಡುಗೊರೆಯೊಂದನ್ನು ರೆಡಿ ಮಾಡಿದ್ದಾರೆ. ಸ್ವತಃ ತಾವೇ ಭಾವನಾತ್ಮಕ ಸಾಲುಗಳಿಂದ ತುಂಬಿರುವ ಹಾಡೊಂದನ್ನು ತಯಾರಿಸಿದ್ದು, ಅದನ್ನೇ ಮದುವೆಗೆ ಗಿಫ್ಟ್‌ ಆಗಿ ನೀಡಲಿದ್ದಾರೆ. ರವಿಚಂದ್ರನ್‌ ಸಾಹಿತ್ಯ ಬರೆದಿರುವುದು ಮಾತ್ರವಲ್ಲ, ಸ್ವತಃ ಅವರೇ ಈ ಗೀತೆಯನ್ನು ಹಾಡಿದ್ದಾರೆ.
Vijaya Karnataka Web ravichandran1


'ಓ ನನ್ನ ಮಗಳೆ, ಬೆಳದ ಮೇಲೆ ನೀನು ನಾನು ಮಗುವಾದೆ..' ಹೀಗೆ ಭಾವನಾತ್ಮಕ ಸಾಲುಗಳಿಂದ ತುಂಬಿರುವ ಗೀತೆ ಇದಾಗಿದ್ದು, ಖಾಸಗಿ ವಾಹಿನಿಯ ಶೋನಲ್ಲಿ ಪ್ರಸಾರ ಕೂಡ ಆಗಿದೆ.

ಕಳೆದ ತಿಂಗಳಷ್ಟೇ ಉದ್ಯಮಿ ಅಜಯ್‌ ಅವರ ಜತೆ ಗೀತಾಂಜಲಿ ಅವರ ನಿಶ್ಚಿತಾರ್ಥ ನೆರವೇರಿದೆ. ನಿಶ್ಚಿತಾರ್ಥ ಕಾರ್ಯಕ್ರಮಕ್ಕೆ ಕೇವಲ ಕುಟುಂಬಕ್ಕಷ್ಟೇ ಆಹ್ವಾನ ನೀಡಲಾಗಿತ್ತು. ಹಾಗಾಗಿ ಮದುವೆಯನ್ನು ಎರಡು ದಿನಗಳ ಕಾಲ ಅದ್ಧೂರಿಯಾಗಿ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ದಕ್ಷಿಣ ಭಾರತದ ಬಹುತೇಕ ತಾರೆಯರು ಮತ್ತು ಬಾಲಿವುಡ್‌ನ ನಟ ನಟಿಯರು ಈ ಮದ್ವೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌