ಆ್ಯಪ್ನಗರ

ಎರಡು ತಿಂಗಳು ಕಾಲ ಶೂಟಿಂಗ್‌ಗೆ ರವಿಚಂದ್ರನ್ ಬ್ರೇಕಪ್

ಕ್ರೇಜಿಸ್ಟಾರ್‌ ರವಿಚಂದ್ರನ್‌ ಏಕೈಕ ಪುತ್ರಿ ಗೀತಾಂಜಲಿ ಅವರ ಮದುವೆ ಮೇ.29ರಂದು ಬೆಂಗಳೂರಿನಲ್ಲಿ ಅದ್ಧೂರಿಯಾಗಿ ನಡೆಯಲಿದೆ. ಸದ್ಯ ರವಿಚಂದ್ರನ್‌ ಆಮಂತ್ರಣ ಪತ್ರಿಕೆ ಕೊಡುವುದರಲ್ಲಿ ಬಿಝಿ ಆಗಿದ್ದಾರೆ.

Vijaya Karnataka 30 Apr 2019, 5:00 am
ಎರಡು ತಿಂಗಳು ಕಾಲ ಶೂಟಿಂಗ್‌ಗೆ ಬ್ರೇಕ್‌ ಆಗಿ ಪುತ್ರಿ ಗೀತಾಂಜಲಿ ಅವರ ಮದುವೆ ಕಾರ‍್ಯದಲ್ಲಿ ಬಿಝಿ ಆಗಿದ್ದಾರೆ ಕ್ರೇಜಿಸ್ಟಾರ್‌ ರವಿಚಂದ್ರನ್‌. ಮೇ.29ರಂದು ಗೀತಾಂಜಲಿ ಅವರ ಮದುವೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿದ್ದು, ಈ ವಿವಾಹ ಮುಹೋತ್ಸವಕ್ಕೆ ದಕ್ಷಿಣ ಭಾರತದ ಬಹುತೇಕ ತಾರೆಯರು ಮತ್ತು ಬಾಲಿವುಡ್‌ನ ಕೆಲ ತಾರೆಯರು ಆಗಮಿಸುತ್ತಿದ್ದಾರೆ. ಸದ್ಯ ಕ್ರೇಜಿಸ್ಟಾರ್‌ ದಂಪತಿ ಸಿಲಿಬ್ರೆಟಿಗಳಿಗೆ ಮದುವೆ ಆಮಂತ್ರಣ ಹಂಚುವುದರಲ್ಲಿ ಬಿಝಿ ಆಗಿದ್ದಾರೆ.
Vijaya Karnataka Web ravichandran1


ಶಿವರಾಜ್‌ಕುಮಾರ್‌, ದರ್ಶನ್‌, ಸುದೀಪ್‌, ಪುನೀತ್‌ ರಾಜ್‌ಕುಮಾರ್‌, ಜಗ್ಗೇಶ್‌, ಗಣೇಶ್‌, ಅಮೂಲ್ಯ ಸೇರಿದಂತೆ ಸ್ಯಾಂಡಲ್‌ವುಡ್‌ನ ಬಹುತೇಕ ಕಲಾವಿದರಿಗೆ ಮತ್ತು ತಂತ್ರಜ್ಞರಿಗೆ ರವಿಚಂದ್ರನ್‌ ಪುತ್ರಿಯ ಮದುವೆಗೆ ಆಹ್ವಾನ ನೀಡಿದ್ದಾರೆ.

ತಮ್ಮ ಮಗಳ ಮದುವೆಗಾಗಿಯೇ ವಿಶೇಷ ಕಾರ್ಯಕ್ರಮವನ್ನೂ ಆಯೋಜನೆ ಮಾಡಿದ್ದಾರಂತೆ ರವಿಚಂದ್ರನ್‌. ಕ್ರೇಜಿ ಲೋಕವನ್ನೇ ಅರಮನೆ ಮೈದಾನದಲ್ಲಿ ಸೃಷ್ಟಿಸುವ ಪ್ಲ್ಯಾನ್‌ ಸಿದ್ಧವಾಗಿದ್ದು, ಹಂಸಲೇಖ ಅಂದು ಸಂಗೀತ ರಸದೌತಣ ನೀಡಲಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌