ಆ್ಯಪ್ನಗರ

ತಾತನ ಪಾತ್ರಕ್ಕೂ ಆಫರ್ ಬಂದಿದೆ : ಕ್ರೇಜಿಸ್ಟಾರ್ ರವಿಚಂದ್ರನ್

ಪ್ರತಿಯೊಬ್ಬರ ಜೀವನದಲ್ಲೂ ಶಿಕ್ಷಣ ಅತ್ಯಗತ್ಯ. ನನಗೆ ಬರವಣಿಗೆಯಲ್ಲಿ ಆಸಕ್ತಿ ಇದೆಯಾದರೂ, ಓದುವ ಸಮಯದಲ್ಲಿ ಸರಿಯಾಗಿ ಗಮನ ನೀಡದ ಕಾರಣ ಈಗ ಕಾಗುಣಿತ ಲೋಪವಾಗುತ್ತದೆ. ಗಿಟಾರ್ ಕಲಿಕೆಯನ್ನೂ ಅರ್ಧಕ್ಕೇ ನಿಲ್ಲಿಸಿದ್ದರಿಂದ ಬಹುದೊಡ್ಡ ನಷ್ಟವಾಯಿತು ಅಂತ ಈಗ ನನಗೆ ಗೊತ್ತಾಗುತ್ತಿದೆ.

Vijaya Karnataka Web 17 Apr 2019, 10:04 pm
ಸದ್ಯವೇ ರಿಲೀಸ್ ಆಗಲಿರುವ 'ಪಡ್ಡೆಹುಲಿ' ಚಿತ್ರದಲ್ಲಿ ನಟ ಕ್ರೇಜಿಸ್ಟಾರ್ ರವಿಚಂದ್ರನ್ ನಾಯಕ ಶ್ರೇಯಸ್ ತಂದೆಯಾಗಿ ನಟಿಸಿದ್ದಾರೆ. ಈ ಚಿತ್ರದ ಸುದ್ದಿಗೋಷ್ಠಿಯ ಸಂದರ್ಭದಲ್ಲಿ ಲೋಕಾಭಿರಾಮವಾಗಿ ಮಾತನಾಡಿದ್ದಾರೆ ನಟ ರವಿಚಂದ್ರನ್.
Vijaya Karnataka Web ravi1704


'ನನ್ನನ್ನು ಎಲ್ಲರೂ ಲವ್ವರ್ ಬಾಯ್ ಅಂತ ಕರೆದು ಪ್ರೇಮಿಯ ಪಾತ್ರಕ್ಕಷ್ಟೆ ಸರಿ ಎಂಬಂತೆ ಬಿಂಬಿಸಿದ್ದಾರೆ. ಆದರೆ ನಾನು ದ್ರಾಕ್ಷಿ ಉರುಳಿಸಿದ್ದು ಒಂದೇ ಸಲ' ಎಂದು ಕ್ರೇಜಿಸ್ಟಾರ್ ರವಿಚಂದ್ರನ್ ಹೇಳಿದ್ದಾರೆ. 'ಪಡ್ಡೆಹುಲಿ' ಬಿಡುಗಡೆಯ ಸಮಯದಲ್ಲಿ ಸೇರಿದ್ದವರ ಜೊತೆಗೆ ಮಾತನಾಡಿದ ರವಿಚಂದ್ರನ್ ಅವರು ತಮ್ಮ ಬಣ್ಣದ ಬದುಕು, ಶಿಕ್ಷಣ ಮೊದಲಾದ ವಿಷಯಗಳ ಬಗ್ಗೆ ಮಾತನಾಡಿದ್ದಾರೆ.

"ನಾನು ಹೀರೋಯಿನ್ ಹೊಕ್ಕಳಿಗೆ ದ್ರಾಕ್ಷಿ ಉರುಳಿಸಿದ್ದು ಕೇವಲ ಒಂದೇ ಒಂದು ಚಿತ್ರದಲ್ಲಿ ಮಾತ್ರ. ಆದರೆ ಆ ದೃಶ್ಯ ಜನರ ಮನದಲ್ಲಿ ಎಷ್ಟರಮಟ್ಟಿಗೆ ಅಚ್ಚಾಗಿದೆ ಎಂದರೆ, ಇಂತಹ ಚಿತ್ರಗಳಿಗೇ ರವಿಚಂದ್ರನ್ ಲಾಯಕ್ಕು ಎಂದು ಭಾವಿಸಿಬಿಟ್ಟಿದ್ದಾರೆ. ಆದರೆ ನಾನು ಎಲ್ಲ ಬಗೆಯ ಪಾತ್ರಗಳನ್ನು ಮಾಡಲು ಸಿದ್ಧ. ಪಡ್ಡೆಹುಲಿಯಲ್ಲಿ ತಂದೆಯಾಗಿದ್ದೇನೆ, ಕೆಲವು ಚಿತ್ರಗಳಲ್ಲಿ ತಾತನ ಪಾತ್ರಕ್ಕೂ ಆಫರ್ ಬಂದಿದೆ' ಎಂದಿದ್ದಾರೆ ನಟ ರವಿಚಂದ್ರನ್.

"ಪ್ರತಿಯೊಬ್ಬರ ಜೀವನದಲ್ಲೂ ಶಿಕ್ಷಣ ಅತ್ಯಗತ್ಯ. ನನಗೆ ಬರವಣಿಗೆಯಲ್ಲಿ ಆಸಕ್ತಿ ಇದೆಯಾದರೂ, ಓದುವ ಸಮಯದಲ್ಲಿ ಸರಿಯಾಗಿ ಗಮನ ನೀಡದ ಕಾರಣ ಈಗ ಕಾಗುಣಿತ ಲೋಪವಾಗುತ್ತದೆ. ಗಿಟಾರ್ ಕಲಿಕೆಯನ್ನೂ ಅರ್ಧಕ್ಕೇ ನಿಲ್ಲಿಸಿದ್ದರಿಂದ ಬಹುದೊಡ್ಡ ನಷ್ಟವಾಯಿತು ಅಂತ ಈಗ ನನಗೆ ಗೊತ್ತಾಗುತ್ತಿದೆ. ಹೀಗಾಗಿ ಎಲ್ಲ ಮುಗಿದ ಮೇಲೆ ಪಶ್ಚಾತ್ತಾಪ ಪಡುವ ಬದಲು ತಕ್ಕ ಸಮಯದಲ್ಲಿ ಸರಿಯಾಗಿ ಓದಬೇಕು' ಎಂದು ರವಿಚಂದ್ರನ್ ಹೇಳಿದ್ದಾರೆ.

"ಪಡ್ಡೆಹುಲಿ' ಚಿತ್ರದಲ್ಲಿ ನಾನು ತಂದೆಯ ಪಾತ್ರದಲ್ಲಿ ನಟಿಸಿದ್ದೇನೆ. ಇದಕ್ಕೂ ಮೊದಲು ಮಾಣಿಕ್ಯದಲ್ಲೂ ಸುದೀಪ್ ತಂದೆಯಾಗಿ ಕಾಣಿಸಿಕೊಂಡಿದ್ದೇನೆ. ಆದರೆ ಇನ್ನು ಮುಂದೆ ನಿರ್ಮಾಪಕರು ನನಗೆ ಹೀರೋ ಪಾತ್ರವನ್ನೇ ಕೊಡುತ್ತಾರೆ' ಎಂದು ರವಿಚಂದ್ರನ್ ಹೇಳಿದ್ದಾರೆ. ಮಾತಿನ ನಡುವೆ ತೂರಿಬಂದ 'ರಾಜಕೀಯ ಪ್ರವೇಶಿಸಲು ಬಯಸುತ್ತೀರಾ' ಎಂಬ ಪ್ರಶ್ನೆಗೆ ರವಚಂದ್ರನ್ "ಖಂಡಿತ ಇಲ್ಲ. ನನಗೂ ರಾಜಕಾರಣಕ್ಕೂ ಆಗಿಬರೋದಿಲ್ಲ' ಎಂದು ಸ್ಪಷ್ಟಪಡಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌