ಆ್ಯಪ್ನಗರ

ಕ್ರಿಕೆಟ್ ಆಡಲು ಉತ್ತೇಜಿಸಿದ ನಟಿ ಹರಿಪ್ರಿಯಾ

"ನಾನು ಕ್ರಿಕೆಟ್ ವ್ಯಕ್ತಿಯಲ್ಲ. ಆದರೂ ನನಗೆ ಕ್ರಿಕೆಟ್ ಇಷ್ಟ. ನೀವೆಲ್ಲರೂ ಚೆನ್ನಾಗಿ ಆಟವಾಡಿ, ಗೆಲ್ಲಲು ಪ್ರಯತ್ನಿಸಿ. ಕೊನೆಗೆ, ಯಾರೇ ಗೆದ್ದರೂ ಖುಷಿ ಪಡಿ, ಮುಂದಿನ ಬಾರಿ ನೀವೂ ಗೆಲ್ಲಬಹುದು" ಎಂದಿದ್ದಾರೆ ನಟಿ ಹರಿಪ್ರಿಯಾ.

Vijaya Karnataka Web 3 Mar 2019, 6:38 pm
ಬೆಂಗಳೂರು ನಗರದ ಹೊರವಲಯದಲ್ಲಿರುವ 'ಮಾದವಾರ ನೈಸ್‍ ಮೈದಾನ'ದಲ್ಲಿ ಕ್ರಿಕೆಟ್ ಪ್ರೀಮಿಯರ್ ಲೀಗ್‌ಗೆ ನಟಿ ಹರಿಪ್ರಿಯಾ ಚಾಲನೆ ನೀಡಿದರು. ಕ್ರಿಕೆಟಿಗ ದೊಡ್ಡ ಗಣೇಶ್ ಮತ್ತು ನಟಿ ಹರಿಪ್ರಿಯಾ ಈ ಕ್ರಿಕೆಟ್ ಲೀಗ್‌ಗೆ ಚಾಲನೆ ಮಾಡಿ ಬಂದಿರುವ ತಂಡಕ್ಕೆ ಶುಭಾಶಯ ಕೋರಿದರು. ಗ್ರಾಮೀಣ ತಂಡಗಳು ಸ್ಪರ್ಧೆಯಲ್ಲಿ ಭಾಗವಹಿಸಲು ಬಹಳಷ್ಟು ಆಸಕ್ತಿ ತೋರಿರುವುದು ಕಂಡು ಬಂದಿದೆ.
Vijaya Karnataka Web hariprrya03


ನಟಿ ಹರಿಪ್ರಿಯಾ ಅವರು ಯುವ ಕ್ರಿಕೆಟ್ ಆಟಗಾರರನ್ನು ಪ್ರೋತ್ಸಾಹಿಸಿದರು. ನಂತರ ಮಾತನಾಡಿದ ಅವರು "ನಾನು ಕ್ರಿಕೆಟ್ ವ್ಯಕ್ತಿಯಲ್ಲ. ಆದರೂ ನನಗೆ ಕ್ರಿಕೆಟ್ ಇಷ್ಟ. ನೀವೆಲ್ಲರೂ ಚೆನ್ನಾಗಿ ಆಟವಾಡಿ, ಗೆಲ್ಲಲು ಪ್ರಯತ್ನಿಸಿ. ಕೊನೆಗೆ, ಯಾರೇ ಗೆದ್ದರೂ ಖುಷಿ ಪಡಿ, ಮುಂದಿನ ಬಾರಿ ನೀವೂ ಗೆಲ್ಲಬಹುದು" ಎಂದಿದ್ದಾರೆ. ನಟಿ ಹರಿಪ್ರಿಯಾ ಮಾತಿಗೆ ಬಹಳಷ್ಟು ಜನ ಚಪ್ಪಾಳೆ ತಟ್ಟಿ ಮೆಚ್ಚುಗೆ ಸೂಚಿಸಿದ್ದಾರೆ.

"ಪ್ರತಿಭೆ ಇದ್ದರೂ ಅವಕಾಶ ಸಿಗದೆ ಬಹಳಷ್ಟು ಗ್ರಾಮೀಣ ಪ್ರತಿಭೆಗಳು ಯಶಸ್ಸಿನಿಂದ ವಂಚಿತರಾಗಿರುತ್ತಾರೆ. ಇಂತಹ ಪ್ರತಿಭೆಗಳನ್ನು ಗುರುತಿಸಿ, ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಈ ಕ್ರಿಕೆಟ್ ಪ್ರೀಮಿಯರ್ ಲೀಗ್‍ ನಡೆಸಲಾಗ್ತಿದೆ. ಈ ಕಾರಣಕ್ಕಾಗಿ ಮೂರು ದಿನಗಳ ಕಾಲ ನಡೆಯಲಿರುವ ದಾಸನಪುರ ಕ್ರಿಕೆಟ್ ಪ್ರೀಮಿಯರ್ ಲೀಗ್‍ ತುಂಬಾ ಮಹತ್ವದ್ದು" ಎಂದಿದ್ದಾರೆ ಕ್ರಿಕೆಟಿಗ ದೊಡ್ಡಗಣೇಶ್‍.

ದಾಸನಪುರ ಕ್ರಿಕೆಟ್ ಪ್ರೀಮಿಯರ್ ಲೀಗ್ ಸ್ಪರ್ಧೆಗೆ ಸ್ಥಳೀಯ ಗ್ರಾಮೀಣ ಯುವಕರ ಎಂಟು ತಂಡಗಳು ಭಾಗವಹಿಸಿವೆ. ಐಪಿಎಲ್‍ ಮಾದರಿಯಂತೆ ಆಟಗಾರರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಈ ಲೀಗ್‍ನಲ್ಲಿ ಚಿಯರ್ ಗರ್ಲ್ಸ್ ಕೂಡಾ ಬಂದಿದ್ದು ನೆರೆದಿದ್ದ ಜನರನ್ನು ಆಕರ್ಷಿಸಿ ಪ್ರೋತ್ಸಾಹಿಸಲು ನೆರವಾಗಿದ್ದಾರೆ. ಒಟ್ಟಿನಲ್ಲಿ, ಗ್ರಾಮೀಣ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಜನಮೆಚ್ಚುಗೆಯ ಕೆಲಸ ನಡೆದಿದೆ.

ಅಂದಹಾಗೆ, ಈ ವರ್ಷ ನಟಿ ಹರಿಪ್ರಿಯಾ ನಟನೆಯ 6 ಸಿನಿಮಾಗಳು ಬಿಡುಗಡೆ ಆಗಲಿವೆ. ಈಗಾಗಲೇ ಬಿಡುಗಡೆ ಕಂಡಿರುವ ರಿಷಭ್ ಶೆಟ್ಟಿ-ಹರಿಪ್ರಿಯಾ ಜೋಡಿಯ 'ಬೆಲ್ ಬಾಟಂ' ಯಶಸ್ವಿ ಪ್ರದರ್ಶನ ಕಾಣುತ್ತಿದೆ. 'ಪಾರ್ವತಮ್ಮನ ಮಗಳು' ಚಿತ್ರ ಸೆನ್ಸಾರ್ ಮುಗಿಸಿಕೊಂಡು ತೆರೆಗೆ ಬರಲಿ ಸಜ್ಜಾಗಿದೆ. ಇನ್ನೂ ನಾಲ್ಕು ಚಿತ್ರಗಳು ಶೂಟಿಂಗ್ ಹಂತದಲ್ಲಿದ್ದು ಅವೆಲ್ಲವೂ ಈ ವರ್ಷವೇ ರಿಲೀಸ್ ಆಗಲಿರುವುದು ಪಕ್ಕಾ ಎನ್ನಲಾಗಿದೆ. ಇವುಗಳ ಜೊತೆಗೆ, 'ಬೆಲ್ ಬಾಟಂ' ಚಿತ್ರವು ತಮಿಳಿನಲ್ಲಿ ರೀಮೇಕ್ ಆಗಲಿದ್ದು ಅದರಲ್ಲಿ ಹರಿಪ್ರಿಯಾ ಅವರು ನಟ ಆರ್ಯಾ ಅವರಿಗೆ ನಾಯಕಿಯಾಗಿ ನಟಿಸಲಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌