ಆ್ಯಪ್ನಗರ

ದರ್ಶನ್ ಕುರಿತ ಕನ್ನಡ ರ‍್ಯಾಪರ್ ಚಂದನ್ ಶೆಟ್ಟಿ ಹಾಡು ವೈರಲ್

ತಮ್ಮದೇ ಆದ ಪದಗಳಿಂದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನು ಬಣ್ಣಿಸಿ ಗೀತೆಯೊಂದನ್ನು ಅವರಿಗೆ ಅರ್ಪಿಸಿದ್ದಾರೆ ಗೀತಸಾಹಿತಿ ವಿ ನಾಗೇಂದ್ರ ಪ್ರಸಾದ್. ಈ ಹಾಡನ್ನು ಕನ್ನಡ ರ‍್ಯಾಪರ್ ಚಂದನ್ ಶೆಟ್ಟಿ ಹಾಡಿದ್ದು ಯೂಟ್ಯೂಬ್‌ನಲ್ಲಿ ಸದ್ದು ಮಾಡಿದೆ.

Vijaya Karnataka Web 16 Feb 2019, 1:00 pm
ಚಾಲೆಂಜಿಂಗ್ ಸ್ಟಾರ್ ದರ್ಶನ್‌ ತಮ್ಮ ಹುಟ್ಟುಹಬ್ಬವನ್ನು ಸೆಲೆಬ್ರೇಟ್ ಮಾಡಿಕೊಳ್ಳದಿದ್ದರೂ ಸಾಮಾಜಿಕ ಮಾಧ್ಯಮಗಳಲ್ಲಿ ಅವರ ಹುಟ್ಟುಹಬ್ಬಕ್ಕೆ ಸಂದೇಶಗಳ ಮಹಾಪೂರವೇ ಹರಿದು ಬರುತ್ತಿದೆ. ಗೀತಸಾಹಿತಿ ವಿ ನಾಗೇಂದ್ರ ಪ್ರಸಾದ್ ಸಾಹಿತ್ಯ ರಚಿಸಿ, ಕನ್ನಡ ರ‍್ಯಾಪರ್ ಚಂದನ್ ಶೆಟ್ಟಿ ಹಾಡಿರುವ "ಶತಸೋದರಾಗ್ರಜ ಜೈಹೋ.." ಎಂಬ ಹಾಡು ಯೂಟ್ಯೂಬ್‌ನಲ್ಲಿ ವೈರಲ್ ಆಗಿದೆ.
Vijaya Karnataka Web darshan2


ವಿಶೇಷ ಎಂದರೆ ಈ ಹಾಡಿಗೆ ಸಂಗೀತ ಸಂಯೋಜಿಸಿರುವುದು ನಾಗೇಂದ್ರ ಪ್ರಸಾದ್ ಎಂಬುದು ಮುಖ್ಯ. ಈ ಹಾಡಿಗೆ ದರ್ಶನ್ ಅಭಿಮಾನಿಗಳಿಂದ ಪ್ರತಿಕ್ರಿಯೆಗಳ ಸುರಿಮಳೆಯಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ನಾಗೇಂದ್ರ ಪ್ರಸಾದ್, "ಎಲ್ಲರಿಗೂ ಧನ್ಯವಾದಗಳು. ನಿಮ್ಮ ರೆಸ್ಪಾನ್ಸ್‌ ನೋಡಿ ಇನ್ನಷ್ಟು ಉತ್ಸಾಹ ಬರ್ತಿದೆ. ಹಾಡು ಇಷ್ಟ ಆಗಿದ್ರೆ ಹೆಚ್ಚು ಹಂಚಿಕೊಳ್ಳಿ. ಸಬ್ಸ್ಕ್ರೈಬ್ ಆಗಿ (subscribe ) ಲೈಕ್ ಮಾಡಿ ಎಂದಿದ್ದಾರೆ.

ಒಂದೇ ದಿನಕ್ಕೆ ಯೂಟ್ಯೂಬ್‌ನಲ್ಲಿ 1.45 ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದ್ದು, 21 ಸಾವಿರಕ್ಕೂ ಹೆಚ್ಚು ಲೈಕ್ಸ್ ಪಡೆದುಕೊಂಡಿದೆ ಹಾಡಿನ ವೀಡಿಯೋ. ಹಾಡನ್ನು ನೋಡಿರುವ ಮೈಸೂರಿನ ಅಭಿಮಾನಿಯೊಬ್ಬರು, "ಒಂದ್ ಮಾತ್ ಹೇಳ್ತೇನೆ 43 ಜನ ಸೈನಿಕರು ಸತ್ತಿದ್ದಾರೆ, ದೇಶ ಮರಗುತ್ತಿದೆ. ಈ ಸಲ ನಿಮ್ಮ ಹುಟ್ದಬ್ಬ ಆಚರಿಸೋದು ಬೇಡ ಅಣ್ಣಯ್ಯ, ಕಷ್ಟ ನೋಡಿ ಬೆಳೆದು ಬಂದವರು ನೀವು, ಮಂಡ್ಯದಲ್ಲಿ ಜನ ಗುರುವಿನ ಅಂತ್ಯ ಸಂಸ್ಕಾರಕ್ಕೆ ಕಾಯುತ್ತಿದ್ದಾರೆ. ನೀವು ಅಂಬಿ ಅಪ್ಪಾಜಿಯ ದತ್ತು ಮಗ.

ಮಂಡ್ಯದ ದತ್ತುಮಗ ನೀವು, ಜನ ಕಂಬನಿ ಮಿಡಿಯುತ್ತಿರುವಾಗ ಆಚರಣೆ ಸರಿಯಲ್ಲ, ನೋವಿಗೆ ಮಿಡಿಯುವ ಅಂತರಂಗ ನೋವುಂಡವರಿಗಲ್ಲದೆ ಮತ್ಯಾರಿಗಿರುತ್ತದೆ ಅಣ್ಣಯ್ಯ, ಇದು ನನ್ನ ಅಭಿಪ್ರಾಯ ತಪ್ಪಿದ್ದರೆ ಕ್ಷಮೆಯಿರಲಿ. ಹ್ಯಾಪಿ ಬರ್ತಡೇ ಡಿ ಬಾಸ್ ಎಂಬ ಕಾಮೆಂಟ್ ಹಾಕಿದ್ದಾರೆ. ಬಹುಶಃ ಅವರಿಗೆ ಈ ಸಲ ದರ್ಶನ್ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ ಎಂಬ ಸಂಗತಿ ಗೊತ್ತಿಲ್ಲ ಎನ್ನಿಸುತ್ತದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌