ಆ್ಯಪ್ನಗರ

ದಳಪತಿ ಅತ್ಯುತ್ತಮ ಲವ್‌ ಚಿತ್ರ ಎಂದ ಚಿತ್ರತಂಡ

ಮೊದಲ ಬಾರಿಗೆ ದಳಪತಿ ಸಿನಿಮಾದ ಮೂಲಕ ಒಂದಾಗಿದ್ದಾರೆ ನೆನಪಿರಲಿ ಪ್ರೇಮ್‌ ಮತ್ತು ಕೃತಿ ಕರಬಂಧ. ಈ ಕ್ಯೂಟ್‌ ಜೋಡಿಯ ಚಿತ್ರಕ್ಕೆ ಆ್ಯಕ್ಷನ್‌ ಕಟ್‌ ಹೇಳಿದ್ದು ಲವ್‌ಗುರು ಖ್ಯಾತಿಯ ಪ್ರಶಾಂತ್‌ ರಾಜ್‌. ಹಲವು ವಿಶೇಷಗಳನ್ನು ಹೊತ್ತು ಬರುತ್ತಿರುವ ಈ ಚಿತ್ರದ ಕುರಿತು ಮಾತನಾಡಿದೆ ಚಿತ್ರತಂಡ.

Vijaya Karnataka 7 Apr 2018, 5:00 am
*ಶರಣು ಹುಲ್ಲೂರು
Vijaya Karnataka Web dalapati


ಲವ್‌ಸ್ಟೋರಿ ಸಿನಿಮಾಗಳಿಗೆ ದಳಪತಿ ಚಿತ್ರ ಒಂದು ಬೆಸ್ಟ್‌ ಉದಾಹರಣೆ ಆಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದೆ ಚಿತ್ರತಂಡ. ಲವಲವಿಕೆ ಕಚೇರಿಗೆ ಆಗಮಿಸಿದ್ದ ಈ ಚಿತ್ರದ ನಾಯಕ ಲವ್ಲಿಸ್ಟಾರ್‌ ಪ್ರೇಮ್‌, ನಾಯಕಿ ಕೃತಿ ಕರಬಂಧ ಮತ್ತು ನಿರ್ದೇಶಕ ಪ್ರಶಾಂತ್‌ ರಾಜ್‌ ತಮ್ಮ ಚಿತ್ರದ ಹಲವು ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ.

'ಎಕ್ಸ್‌ಕ್ಲೂಸಿವ್‌ ಪ್ರೇಮಕಥೆಯನ್ನು ಈ ಚಿತ್ರದಲ್ಲಿ ಹೇಳಲು ಹೊರಟಿದ್ದೇನೆ. ನನ್ನ ಮೊದಲ ಸಿನಿಮಾ ಲವ್‌ಗುರುನಿಂದ ಶುರುವಾದ ಸಿನಿ ಜರ್ನಿಯಲ್ಲಿ ನಾನು ಎಲ್ಲರ ಮೆಚ್ಚುವಂಥ ಕಥೆಗಳನ್ನೇ ಆಯ್ಕೆ ಮಾಡಿಕೊಂಡಿದ್ದೇನೆ. ದಳಪತಿಯಲ್ಲೂ ಅಂತಹ ವಿಭಿನ್ನ ಪ್ರೇಮ್‌ ಕಹಾನಿಯಿದೆ. ಅದನ್ನು ಕಲರ್‌ಫುಲ್‌ ಆಗಿ ಹೇಳುವ ಪ್ರಯತ್ನ ಮಾಡಿದ್ದೇನೆ' ಎಂದಿದ್ದಾರೆ ಪ್ರಶಾಂತ್‌ ರಾಜ್‌.

ಚಿತ್ರದ ಶೀರ್ಷಿಕೆಯೇ ಗಮನಸೆಳೆಯುವಂತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸುತ್ತಾರೆ ಪ್ರೇಮ್‌. 'ನಿರ್ದೇಶಕರು ಚಿತ್ರದ ಕಥೆ ಹೇಳುತ್ತಿದ್ದಂತೆಯೇ ನಿರಾಕರಿಸಲು ಸಾಧ್ಯವಾಗಲೇ ಇಲ್ಲ. ಹಾಗೇ ಕಥೆಯನ್ನು ಬರೆದಿದ್ದಾರೆ. ಅಲ್ಲದೇ, ಪ್ರತಿ ಪಾತ್ರಕ್ಕೂ ಅವರು ಮಹತ್ವ ನೀಡಿದ್ದಾರೆ. ಡಬಲ್‌ ಶೇಡ್‌ ಇರುವಂಥ ಪಾತ್ರ ನನ್ನದು. ನಾಲ್ಕು ಆ್ಯಕ್ಷನ್‌ ದೃಶ್ಯಗಳಿವೆ. ಮೊದಲ ಬಾರಿಗೆ ಇಂಥ ಪಾತ್ರವನ್ನು ನಾನು ಮಾಡಿದ್ದೇನೆ' ಅನ್ನುವುದು ಪ್ರೇಮ್‌ ಮಾತು.

ಪಕ್ಕದ್ಮನೆ ಹುಡುಗಿ ಥರದ ಪಾತ್ರಗಳಲ್ಲಿ ನಟಿಸುತ್ತಾ ಏಕತಾನತೆ ಪಾತ್ರಗಳಿಂದ ಬೇಸತ್ತಿದ್ದ ನನಗೆ ದಳಪತಿಯಲ್ಲಿ ವಿಭಿನ್ನ ಗೆಟಪ್‌ ಕೊಡಲಾಗಿದೆಯಂತೆ. ಅಲ್ಲದೇ ಅದೊಂದು ರೌಡಿ ರೀತಿಯ ಪಾತ್ರ. ಜೋರಾಗಿ ಡೈಲಾಗ್‌ ಹೊಡೆಯುವುದು, ನಾಯಕನಿಗೆ ಕ್ವಾಟ್ಲೆ ಕೊಡೋದು ಹೀಗೆ ಪಾತ್ರ ವಿಭಿನ್ನತೆಯಿಂದ ಕೂಡಿದೆ' ಎನ್ನುವುದು ಕೃತಿ ಮಾತು.

ದಳಪತಿ ಸಿನಿಮಾದ ಹಾಡು ಮತ್ತು ಟೀಸರ್‌ ಈಗಾಗಲೇ ವೈರಲ್‌ ಆಗಿವೆ. ಕಲರ್‌ಫುಲ್‌ ಹಾಡು, ಹೊಸ ರೀತಿಯ ಮೇಕಿಂಗ್‌, ಈವರೆಗೂ ಯಾರೂ ನೋಡದೇ ಇರುವಂಥ ಲೋಕೇಶನ್‌, ಹೀಗೆ ಮನರಂಜನೆಗೆ ಬೇಕಿರುವಂತಹ ಎಲ್ಲ ಅಂಶಗಳೊಂದಿಗೆ ದಳಪತಿ ತಯಾರಾಗಿದೆ.

ಏ.13ಕ್ಕೆ ರಾಜ್ಯಾದ್ಯಂತ ರಿಲೀಸ್‌ ಆಗುತ್ತಿರುವ ಈ ಸಿನಿಮಾದಲ್ಲಿ ಇನ್ನೂ ಅನೇಕ ವಿಶೇಷಗಳಿದ್ದು, ಅವುಗಳನ್ನು ಥಿಯೇಟರ್‌ನಲ್ಲಿಯೇ ನೋಡಿ ಎನ್ನುವುದು ಚಿತ್ರತಂಡದ ಮಾತು.
ಗೂಗ್ಲಿ ಸಿನಿಮಾ ನಂತರ ನನ್ನ ವೃತ್ತಿ ಬದುಕಿನಲ್ಲಿ ಮತ್ತೊಂದು ಹೊಸ ರೀತಿಯ ಸಿನಿಮಾವಿದು. ಈವರೆಗೂ ಮಾಡದೇ ಇರುವ ಪಾತ್ರದಲ್ಲಿ ನಾನು ಕಾಣಿಸಿಕೊಂಡಿದ್ದೇನೆ. ನನಗೇ ಸಿನಿಮಾದ ಬಗ್ಗೆ ಕುತೂಹಲ ಮೂಡಿದೆ.
ಕೃತಿ ಕರಬಂಧ, ನಟಿ
ಒಂದು ಸುಂದರ ಕಥೆಯನ್ನು ಮತ್ತಷ್ಟು ಸುಂದರವಾಗಿ ತೋರಿಸುವ ಪ್ರಯತ್ನ ದಳಪತಿಯಲ್ಲಿ ನಡೆದಿದೆ. ಹಾಗಾಗಿ ಇದೊಂದು ಪೈಸಾ ವಸೂಲ್‌ ಸಿನಿಮಾ ಎಂದು ಧೈರ್ಯದಿಂದ ಹೇಳುತ್ತೇನೆ.
ಪ್ರಶಾಂತ್‌ ರಾಜ್‌, ನಿರ್ದೇಶಕ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌