ಆ್ಯಪ್ನಗರ

ಕುರುಕ್ಷೇತ್ರ ಚಿತ್ರದ ಕಟೌಟ್‌ಗಳಲ್ಲಿ ದರ್ಶನ್-ಅಂಬರೀಷ್ ಮೋಡಿ!

ದರ್ಶನ್ ಅಭಿಮಾನಿಗಳು ಸೇರಿದಂತೆ, ಐತಿಹಾಸಿಕ ಚಿತ್ರಗಳ ಅಭಿಮಾನಿಗಳು ವರ್ಷಗಳಿಂದ ಈ 'ಕುರುಕ್ಷೇತ್ರ' ಚಿತ್ರಕ್ಕಾಗಿ ಕಾಯುತ್ತಿದ್ದಾರೆ. ಇದೇ ಶುಕ್ರವಾರ, ಆಗಸ್ಟ್ 9, 2019 ರಂದು ಈ ಚಿತ್ರವು ಬರೋಬ್ಬರಿ 5 ಭಾಷೆಗಳಲ್ಲಿ ಬಿಡುಗಡೆ ಆಗಲಿದೆ. ಹಿಂಧೂ ಧರ್ಮದ ಪವಿತ್ರ ಗ್ರಂಥವಾದ 'ಮಹಾಭಾರತ'ದ 18 ಅಧ್ಯಾಯಗಳ ಪೈಕಿ 'ಕುರುಕ್ಷೇತ್ರ' ಯುದ್ಧದ ಅಧ್ಯಾಯವೂ ಸಹ ಒಂದು. ಈ ಚಿತ್ರವನ್ನು ಖ್ಯಾತ ನಿರ್ದೇಶಕ ನಾಗಣ್ಣ, ವಿ ನಾಗೇಂದ್ರ ಪ್ರಸಾದ್ ಮತ್ತು ಇನ್ನೂ ಇಬ್ಬರು ನಿರ್ದೇಶಕರು ಸೇರಿ ನಿರ್ದೇಶಿಸಿದ್ದಾರೆ.

Vijaya Karnataka Web 4 Aug 2019, 1:18 pm
ಸ್ಯಾಂಡಲ್‌ವುಡ್ 'ಕುರುಕ್ಷೇತ್ರ' ಮಹಾಯುದ್ಧಕ್ಕೆ ದಿನಗಣನೆ ಶುರುವಾಗಿದೆ. ಬಿಡುಗಡೆಗೆ ಆರು ದಿನಗಳಷ್ಟೇ ಬಾಕಿ ಇರುವ ದರ್ಶನ್ ನಾಯಕತ್ವದ 'ಕುರುಕ್ಷೇತ್ರ' ಚಿತ್ರವು ಸಿನಿಪ್ರೇಕ್ಷಕರಲ್ಲಿ ಭಾರೀ ಕುತೂಹಲ ಕೆರಳಿಸಿದೆ. ದರ್ಶನ್ ಅಭಿಮಾನಿಗಳು ಸೇರಿದಂತೆ, ಐತಿಹಾಸಿಕ ಚಿತ್ರಗಳ ಅಭಿಮಾನಿಗಳು ವರ್ಷಗಳಿಂದ ಈ ಕುರುಕ್ಷೇತ್ರ ಚಿತ್ರಕ್ಕಾಗಿ ಕಾಯುತ್ತಿದ್ದಾರೆ. ಇದೇ ಶುಕ್ರವಾರ, ಆಗಸ್ಟ್ 9, 2019 ರಂದು ಈ ಚಿತ್ರವು ಬರೋಬ್ಬರಿ 5 ಭಾಷೆಗಳಲ್ಲಿ ಬಿಡುಗಡೆ ಆಗಲಿದೆ.
Vijaya Karnataka Web kurukshetra0408


ಬೆಂಗಳೂರಿನ ನರ್ತಕಿ ಚಿತ್ರಮಂದಿರವು 'ಕುರುಕ್ಷೇತ್ರ' ಚಿತ್ರದ ಮುಖ್ಯ ಚಿತ್ರಮಂದಿರವಾಗಿದೆ. ನರ್ತಕಿ ಸೇರಿದಂತೆ, ಪ್ರಸನ್ನ ಹಾಗೂ ಹಲವು ಚಿತ್ರಮಂದಿರಗಳಲ್ಲಿ ಕುರುಕ್ಷೇತ್ರ ಚಿತ್ರದ ಭಾರೀ ಕಟೌಟ್‌ಗಳು ತಲೆ ಎತ್ತಿವೆ. ಈ ಕಟೌಟ್‌ಗಳಲ್ಲಿ ನಾಯಕ ದರ್ಶನ್ ಜತೆ ದಿವಂಗತ ನಟ, ರೆಬಲ್ ಸ್ಟಾರ್ ಅಂಬರೀಷ್ ಅವರ ಚಿತ್ರವನ್ನು ಸಹ ಹಾಕಲಾಗಿದೆ. ಅಂಬರೀಷ್ ಅವರು ಈ ಚಿತ್ರದಲ್ಲಿ 'ಭೀಷ್ಮ'ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.ಈ ಮೂಲಕ ಕುರುಕ್ಷೇತ್ರ ಚಿತ್ರತಂಡವು ದಿವಂಗತರಾಗಿರುವ ನಟ ಅಂಬರೀಷ್ ಅವರಿಗೆ ವಿಶೇಷ ಗೌರವ ಸೂಚಿಸಿದೆ.

ಹಿಂಧೂ ಧರ್ಮದ ಪವಿತ್ರ ಗ್ರಂಥವಾದ 'ಮಹಾಭಾರತ'ದ 18 ಅಧ್ಯಾಯಗಳ ಪೈಕಿ 'ಕುರುಕ್ಷೇತ್ರ' ಯುದ್ಧದ ಅಧ್ಯಾಯವೂ ಸಹ ಒಂದು. ಈ ಚಿತ್ರವನ್ನು ಖ್ಯಾತ ನಿರ್ದೇಶಕ ನಾಗಣ್ಣ, ವಿ ನಾಗೇಂದ್ರ ಪ್ರಸಾದ್ ಮತ್ತು ಇನ್ನೂ ಇಬ್ಬರು ನಿರ್ದೇಶಕರು ಸೇರಿ ನಿರ್ದೇಶಿಸಿದ್ದು, ಚಿತ್ರವು ಭಾರೀ ಬಜೆಟ್, ಬಹುತಾರಾಗಣ ಮತ್ತು ಅದ್ದೂರಿ ಮೇಕಿಂಗ್ ಮೂಲಕ ರಿಚ್ ಆಗಿದೆ ಎನ್ನಲಾಗಿದೆ. ಕುರುಕ್ಷೇತ್ರ ಚಿತ್ರವನ್ನು ಮುನಿರತ್ನ ನಿರ್ಮಿಸಿದ್ದು, ಅವರು ಈ ಮೊದಲು 'ಕಠಾರಿವೀರ ಸುರಸುಂದರಾಂಗಿ' ಚಿತ್ರವನ್ನು ನಿರ್ಮಿಸಿದ್ದರು.

ದರ್ಶನ್ ನಾಯಕತ್ವದ ಬಹುನಿರೀಕ್ಷಿತ 'ಕುರುಕ್ಷೇತ್ರ' ಚಿತ್ರವು ಹಲವು ವಿದೇಶಗಳಲ್ಲಿ ಒಂದು ದಿನ ಮುಂಚಿತವಾಗಿ ಬಿಡುಗಡೆಯಾಗಲಿದೆ. ಈ ಚಿತ್ರದಲ್ಲಿ ದರ್ಶನ್, ಅಂಬರೀಷ್, ಭಾರತಿ ವಿಷ್ಣುವರ್ಧನ್, ರವಿಚಂದ್ರನ್, ಅರ್ಜುನ್ ಸರ್ಜಾ, ನಿಖಿಲ್ ಕುಮಾರಸ್ವಾಮಿ, ಯಶಸ್ ಸೂರ್ಯ, ರವಿಶಂಕರ್, ಹರಿಪ್ರಿಯಾ, ಮೇಘನಾ ರಾಜ್, ಸ್ನೇಹ ಸೇರಿದಂತೆ ಅನೇಕ ಕಲಾವಿದರು ನಟಿಸಿದ್ದಾರೆ. ದರ್ಶನ್ ನಾಯಕತ್ವದ 'ಸಂಗೊಳ್ಳಿ ರಾಯಣ್ಣ' ಬಳಿಕ ಮತ್ತೊಂದು ಪೌರಾಣಿಕ ಸಿನಿಮಾ ಕನ್ನಡದಲ್ಲಿ ಬರುತ್ತಿದೆ. ಸ್ಯಾಂಡಲ್‌ವುಡ್ ಸಿನಿಪ್ರಿಯರು ಭಾರೀ ನಿರೀಕ್ಷೆಯಿಂದ ಕುರುಕ್ಷೇತ್ರ ಚಿತ್ರವನ್ನು ತೆರೆಯ ಮೇಲೆ ನೋಡಲು ಕಾಯುತ್ತಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌