ಆ್ಯಪ್ನಗರ

ದರ್ಶನ್ ಮತ್ತು ಸುದೀಪ್ ಅಭಿಮಾನಿಗಳ ಜಗಳಕ್ಕೆ ಕಾರಣವಾಗಿದ್ದು ಮೂರನೇಯವರು ; ಅಭಿಮಾನಿಗಳು ಹೇಳಿದ್ದೇನು?

ಪೈರಸಿ ಕಾಟ ಯಾವ ಸಿನಿಮಾವನ್ನೂ ಬಿಡುತ್ತಿಲ್ಲ. ಕೋಟಿ ಕೋಟಿ ರೂ. ಖರ್ಚು ಮಾಡಿ ಸಿನಿಮಾ ಮಾಡಿರುತ್ತಾರೆ ನಿರ್ಮಾಪಕರು. ಆದರೆ ಕೇವಲ 500MB, 1GBಯಲ್ಲಿ ಸಿನಿಮಾ ತೆರೆ ಕಂಡ 2 ದಿನಕ್ಕೆ ಎಲ್ಲರ ಕೈ ಸೇರಿರುತ್ತದೆ, ನಟಸಾರ್ವಭೌಮ, ಯಜಮಾನ ಸಿನಿಮಾಗಳು ಪೈರಸಿ ಸಂಕಷ್ಟ ಎದುರಿಸಿದ್ದವು. ಈಗ 'ಪೈಲ್ವಾನ್' ಸರದಿ.

Vijaya Karnataka Web 15 Sep 2019, 7:35 pm
ಪೈರಸಿ ಆಗಿ ಹೋಗಿದೆ. ಪೈರಸಿಗೆ ಕಾರಣ ಹುಡುಕಿ, ಪೈರಸಿ ಮಾಡುವವರನ್ನು ಹೆಡೆಮುರಿಕಟ್ಟುವುದನ್ನು ಬಿಟ್ಟು ಪರಸ್ಪರ ಆರೋಪ ಮಾಡಿಕೊಳ್ಳುವುದರ ಮೇಲೆಯೇ ಇಂದಿನ ಅಭಿಮಾನಿಗಳು ನಿರತರಾಗಿದ್ದಾರೆ ಎನ್ನೋದು ದುರಂತ. 'ಪೈಲ್ವಾನ್' ಸಿನಿಮಾದ ಬಗ್ಗೆ ಉದ್ದೇಶಪೂರ್ವಕವಾಗಿಯೇ ಅಪಪ್ರಚಾರ ಮಾಡುತ್ತಿದ್ದಾರೆ ಎಂಬ ಸುದ್ದಿ ಕೇಳಿ ಬರುತ್ತಿತ್ತು. ಈ ಹಿನ್ನೆಲೆಯಲ್ಲಿ ನಟ ಕಿಚ್ಚ ಸುದೀಪ್ ಮತ್ತು ನಿರ್ಮಾಪಕಿ ಸ್ವಪ್ನಾ ಕೃಷ್ಣ ಈ ಬಗ್ಗೆ ಟ್ವಿಟ್ಟರ್‌ನಲ್ಲಿ ಪ್ರತಿಕ್ರಿಯೆ ನೀಡಿದ್ದರು.
Vijaya Karnataka Web pairacy


ಪೈರಸಿ ಮಾಡುತ್ತಿರುವುದು ದರ್ಶನ್ ಅಭಿಮಾನಿಗಳು ಎಂದು ಸುದೀಪ್ ಅಭಿಮಾನಿಗಳು ಆರೋಪ ಮಾಡುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಇಬ್ಬರು ನಟರ ಅಭಿಮಾನಿಗಳ ಪರಸ್ಪರ ಜಗಳವಾಡುತ್ತಿದ್ದಾರೆ. ದರ್ಶನ್ ಮತ್ತು ಸುದೀಪ್ ಸ್ಯಾಂಡಲ್‌ವುಡ್‌ನ ಸ್ಟಾರ್ ನಟರು. ಇವರಿಗೆ ತುಂಬ ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿಗಳಿದ್ದಾರೆ. ಆದರೆ ದರ್ಶನ್ ಅಭಿಮಾನಿಗಳ ಬಗ್ಗೆ ಸುದೀಪ್ ಅಭಿಮಾನಿಗಳು ಆರೋಪ ಮಾಡುತ್ತಿದ್ದಾರೆ.

'ಪೈಲ್ವಾನ್' ಸಿನಿಮಾವನ್ನೂ ಬಿಡಲಿಲ್ಲ ಕಿರಾತಕರು; ಪರಿಹಾರವೇನು?

"ಒಬ್ಬರನ್ನು ಕಂಡರೆ ಇನ್ನೊಬ್ಬರಿಗೆ ಆಗಲ್ಲ ಅಂತಲ್ಲ, ಅಥವಾ ಅವರಿಗೆ ಸಂಬಂಧಪಟ್ಟವರು ಮಾಡಿದ್ದು ಅಂತಲ್ಲ, ನಿಜವಾದ ಕಳ್ಳರನ್ನು ಹಿಡಿಯಿರಿ, ಆಮೇಲೆ ಇನ್ನೊಬ್ಬರ ಕಡೆ ಬೆರಳು ಮಾಡಿ ತೋರಿಸಿ" ಎಂದು ತಿರುಗೇಟು ನೀಡುತ್ತಿದ್ದಾರೆ ದಚ್ಚು ಅಭಿಮಾನಿಗಳು. ಇದು ನಿಜಕ್ಕೂ ಬೇಸರದ ಸಂಗತಿ. ಸೆಲೆಬ್ರಿಟಿಗಳು ಸೇರಿದಂತೆ ಹಲವರು ಪೈರಸಿ ಬಗ್ಗೆ ಸಿಡಿದೆದ್ದಿದ್ದಾರೆ. ಆದರೆ ಈ ಬಗ್ಗೆ ದೊಡ್ಡಮಟ್ಟದ ಹೋರಾಟ ಆಗಬೇಕಿದೆ. ಸುಮ್ಮನೆ ಪರಸ್ಪರರ ಮೇಲೆ ಆರೋಪ ಮಾಡಿಕೊಳ್ಳುತ್ತ ಕೂರುವುದರಲ್ಲಿ ಅರ್ಥವಿಲ್ಲ ಎನ್ನುತ್ತಾರೆ ಬಲ್ಲವರು.

ಯಾರು ಯಾರದ್ದೇ ಅಭಿಮಾನಿಗಳೇ ಆಗಿರಲಿ, ಪೈರಸಿ ಮಾಡುತ್ತಿರುವುದು ತಪ್ಪು. ಪೈರಸಿಯಿಂದಾಗಿ ಒಬ್ಬ ನಿರ್ಮಾಪಕ ಅದಕ್ಕೂ ಮಿಗಿಲಾಗಿ ಕನ್ನಡ ಚಿತ್ರಕ್ಕೆ ತೊಂದರೆಯಾಗುತ್ತವೆ. ಇತ್ತೀಚೆಗೆ ಕನ್ನಡ ಸಿನಿಮಾಗಳು ಬೇರೆ ಭಾಷೆಯ ಸಿನಿಮಾಗಳ ಜೊತೆ ಸ್ಪರ್ಧೆಗಿಳಿಯುತ್ತಿವೆ. ಬಹುಮುಖ್ಯವಾಗಿ ತಮಿಳ್‌ರಾಕರ್ಸ್ ಚಿತ್ರಗಳನ್ನು ಹೆಚ್ಚಾಗಿ ಪೈರಸಿ ಮಾಡಲಾಗುತ್ತಿದೆ ಎಂಬ ಸುದ್ದಿಗಳು ಕೇಳಿಬರುತ್ತಿವೆ. ಹೀಗಾಗಿ ಎಲ್ಲರೂ ಪೈರಸಿ ವಿರುದ್ಧ ಸಿಡಿದು ನಿಂತರೆ ಪೈರಸಿ ಸಮಸ್ಯೆ ನಿರ್ಮೂಲನವಾಗುತ್ತದೆ, ಕನ್ನಡ ಸಿನಿಮಾಗಳು ಗೆಲ್ಲುತ್ತವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌