ಆ್ಯಪ್ನಗರ

ಡೈಲಾಗ್‌ ಮೂಲಕ ಕೌಂಟರ್ ಕೊಡಲ್ಲ ಎಂದ 'ಯಜಮಾನ' ದರ್ಶನ್

ಯಜಮಾನ ಟ್ರೇಲರ್‌ನಲ್ಲಿನ, "ಕ್ಯಾಡ್ಬರೀಜ್‌, ಇದು ಓರಿಜನಲ್‌ ಬ್ರ್ಯಾಂಡ್‌, ಬರ್ತಾ ಇದ್ದೀನಿ ಕಟ್ಟಾಕು" ಎನ್ನುವ ಸಂಭಾಷಣೆಗಳು ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಕಾರಣವಾಗಿವೆ. ಸ್ಟಾರ್‌ ನಟರೊಬ್ಬರಿಗೆ ಈ ಡೈಲಾಗ್‌ ಹೇಳಿದ್ದು ಎನ್ನಲಾಗಿತ್ತು. ಅದಕ್ಕೆ ಸ್ಪಷ್ಟನೆ ನೀಡಿದ್ದಾರೆ ದರ್ಶನ್‌.

Vijaya Karnataka Web 22 Feb 2019, 6:13 pm
ಸಿನಿಮಾದಲ್ಲಿ ಬರುವ ಡೈಲಾಗ್‍ಗಳು ಒಮ್ಮೆಮ್ಮೆ ಇನ್ಯಾರನ್ನೋ ಉದ್ದೇಶಿಸಿ ಹೇಳಿದಂತಿರುತ್ತವೆ. ಇದೇ ತಾರೆಗಳ ನಡುವಿನ ವಿವಾದಕ್ಕೂ ಕಾರಣವಾಗುತ್ತದೆ. ಈ ಹಿಂದೆಯೂ ಸ್ಯಾಂಡಲ್‍ವುಡ್‌ನಲ್ಲಿ ಈ ರೀತಿಯ ಡೈಲಾಗ್‌ಗಳು ಬಿರುಗಾಳಿ ಎಬ್ಬಿಸಿದ್ದವು. ಇದೀಗ ಯಜಮಾನ ಚಿತ್ರದ ಡೈಲಾಗ್ ಸಹ ಅದೇ ರೀತಿಯ ಚರ್ಚೆಗೆ ಕಾರಣವಾಗಿದ್ದು ಈ ಬಗ್ಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸ್ಪಷ್ಟೀಕರಣ ನೀಡಿದ್ದಾರೆ.
Vijaya Karnataka Web yajamana2


ಯಜಮಾನ ಟ್ರೇಲರ್‌ನಲ್ಲಿನ, "ಕ್ಯಾಡ್ಬರೀಜ್‌, ಇದು ಓರಿಜನಲ್‌ ಬ್ರ್ಯಾಂಡ್‌, ಬರ್ತಾ ಇದ್ದೀನಿ ಕಟ್ಟಾಕು" ಎನ್ನುವ ಸಂಭಾಷಣೆಗಳು ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಕಾರಣವಾಗಿವೆ. ಸ್ಟಾರ್‌ ನಟರೊಬ್ಬರಿಗೆ ಈ ಡೈಲಾಗ್‌ ಹೇಳಿದ್ದು ಎನ್ನಲಾಗಿತ್ತು. ಅದಕ್ಕೆ ಸ್ಪಷ್ಟನೆ ನೀಡಿದ್ದಾರೆ ದರ್ಶನ್‌.

'ನನ್ನ ಯಾವುದೇ ಸಿನಿಮಾದಲ್ಲಿ ನಾನು ಮತ್ತೊಬ್ಬ ಕಲಾವಿದನಿಗೆ ಟಕ್ಕರ್‌ ಕೊಡುವುದಕ್ಕೆ ಹೋಗುವುದಿಲ್ಲ. ನನ್ನ ಡೈಲಾಗ್‌ ರೈಟರ್‌ ಏನು ಬರೆದಿರುತ್ತಾರೋ, ಅದನ್ನು ಹೇಳುತ್ತೇನೆ. ಯಾರೋ ಹೇಳಿದಾಗಲೇ ನಮಗೂ ಗೊತ್ತಾಗುವುದು. ಯಾವುದೋ ಡೈಲಾಗ್‌ ಅನ್ನು, ಇನ್ಯಾರಿಗೋ ಹೋಲಿಸುವುದು ಅಥವಾ ಅನ್ವಯಿಸುವುದು ಕೂಡ ತಪ್ಪಾಗುತ್ತದೆ. ಯಜಮಾನ ಸಿನಿಮಾದಲ್ಲಿ ಯಾರಿಗೂ ಟಕ್ಕರ್‌ ಕೊಡುವುದಕ್ಕೆ ಹೋಗಿಲ್ಲ' ಎಂದಿದ್ದಾರೆ ಅವರು.

ಯಜಮಾನ ಸಿನಿಮಾದ ಸಂಭಾಷಣೆಯ ಬಗ್ಗೆ ಸ್ಯಾಂಡಲ್‌ವುಡ್‌ನಲ್ಲಿ ಜೋರಾದ ಚರ್ಚೆ ಶುರುವಾಗಿರುವ ಬೆನ್ನೆಲ್ಲೇ, ನಟ ದರ್ಶನ್‌ ಈ ರೀತಿ ಸ್ಪಷ್ಟನೆ ನೀಡಿದ್ದಾರೆ. ಹಾಗಾಗಿ ವಿವಾದ ಅಷ್ಟಾಗಿ ತಲೆದೋರಿಲ್ಲ.

ಮಾ.1ರಂದು ಈ ಸಿನಿಮಾ ರಾಜ್ಯಾದ್ಯಂತ ರಿಲೀಸ್‌ ಆಗುತ್ತಿದೆ. ಇದೇ ಮೊದಲ ಬಾರಿಗೆ ಈ ಚಿತ್ರವನ್ನು ತಮ್ಮದೇ ಸಂಸ್ಥೆಯ ಮೂಲಕ ನಿರ್ಮಾಣ ಮಾಡಿ, ವಿತರಣೆಯನ್ನೂ ಮಾಡುತ್ತಿದ್ದಾರೆ ನಿರ್ಮಾಪಕಿ ಶೈಲಜಾ ನಾಗ್‌.

ಒಂದೂವರೆ ವರ್ಷದ ನಂತರ ದರ್ಶನ್‌ ಸಿನಿಮಾ ರಿಲೀಸ್‌ ಆಗುತ್ತಿದೆ. ಈಗಾಗಲೇ ಬಿಡುಗಡೆ ಆಗಿರುವ ಹಾಡುಗಳು ಸೂಪರ್‌ ಹಿಟ್‌ ಆಗಿವೆ. ಅಲ್ಲದೇ, ಟ್ರೇಲರ್‌ ಕೂಡ ಟ್ರೆಂಡ್‌ ಸೆಟ್‌ ಮಾಡಿದೆ. ಈ ಎಲ್ಲ ಕಾರಣಗಳಿಂದಾಗಿ ಸಿನಿಮಾ ಭಾರೀ ಕುತೂಹಲ ಮೂಡಿಸಿದೆ.

ದರ್ಶನ್‌ ಜತೆ ಇದೇ ಮೊದಲ ಬಾರಿಗೆ ಈ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ತೆರೆ ಹಂಚಿಕೊಂಡಿದ್ದಾರೆ. ಧನಂಜಯ್‌ ಸೇರಿದಂತೆ ಹೆಸರಾಂತ ಕಲಾವಿದರೇ ತಾರಾ ಬಳಗದಲ್ಲಿ ಇದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌