ಸ್ಯಾಂಡಲ್ವುಡ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಾಯಕತ್ವದ 'ಯಜಮಾನ' ಚಿತ್ರವು ಬಿಡಗಡೆಗೆ ಸಿದ್ಧವಾಗಿದೆ. ಈ ಹಂತದಲ್ಲಿ ಮತ್ತೆ ಚಿತ್ರದ ಟೈಟಲ್ ಬಗ್ಗೆ ಅಪಸ್ವರ ಎದ್ದಿದೆ. ವಿ ಹರಿಕೃಷ್ಣ ಮತ್ತು ಪಿ ಕುಮಾರ್ ನಿರ್ದೇಶನ, ಶೈಲಜಾ ನಾಗ್ ಮತ್ತು ಬಿ ಸುರೇಶ್ ನಿರ್ಮಾಣದಲ್ಲಿ ಮೂಡಿಬರುತ್ತಿರುವ 'ಯಜಮಾನ' ಚಿತ್ರಕ್ಕೆ ಈ ಟೈಟಲ್ ಇಟ್ಟ ಕಾಲದಿಂದಲೂ ಟೈಟಲ್ ಬಗ್ಗೆ ಸಾಹಸಸಿಂಹ ವಿಷ್ಣುವರ್ಧನ್ ಅಭಿಮಾನಿಗಳಲ್ಲಿ ಅಸಹನೆ ಮನೆ ಮಾಡಿತ್ತು. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಯೂ ನಡೆದಿತ್ತು. ಆದರೆ, ಚಿತ್ರತಂಡವನ್ನು ನೇರವಾಗಿ ಯಾರೂ ಪ್ರಶ್ನೆ ಮಾಡಿಲ್ಲವಾದ್ದರಿಂದ ಸಿನಿಮಾ ಅದೇ ಹೆಸರಿನಲ್ಲಿ ಮುಂದುವರಿದಿದೆ.
ಆದರೆ, ಇತ್ತೀಚಿಗೆ 'ಪಡ್ಡೆ ಹುಲಿ' ಚಿತ್ರದ ಸುದ್ದಿಗೋಷ್ಟಿಯಲ್ಲಿ ನಿರ್ದೇಶಕ ರವಿ ಶ್ರೀವತ್ಸ ವಿಷ್ಣುವರ್ಧನ್ ಚಿತ್ರಗಳ ಟೈಟಲ್ ನೊಂದಿಗೆ ಹೊಸದಾಗಿ ಬರುತ್ತಿರುವ ಚಿತ್ರಗಳ ಬಗ್ಗೆ ತಮ್ಮ ಅಸಮಾಧಾನ ಹೊರಹಾಕಿದ್ದಾರೆ. "ಹಳೆಯ ಕನ್ನಡ ಚಿತ್ರಗಳ ಟೈಟಲ್ಗಳು ದುರ್ಬಳಕೆ ಆಗುತ್ತಿವೆ. ಕನ್ನಡ ಚಿತ್ರರಂಗದ 'ಯಜಮಾನ್ರು' ವಿಷ್ಣುವರ್ಧನ್ ಅವರ ಚಿತ್ರಗಳ ಹೆಸರುಗಳನ್ನೂ ಕೂಡ ಇನ್ಮುಂದೆ ಹೊಸ ಚಿತ್ರಳಿಗೆ ಕೊಡಬೇಡಿ" ಅಂತ ಮನವಿ ಮಾಡಿಕೊಂಡಿದ್ದಾರೆ. ಸ್ವತಃ ವಿಷ್ಣು ಅಭಿಮಾನಿಯಾಗಿರುವ ರವಿ ಶ್ರೀವತ್ಸ ಅವರ ಮಾತು ನೇರವಾಗಿ ದರ್ಶನ್ 'ಯಜಮಾನ' ಚಿತ್ರವನ್ನು ಬೆಟ್ಟು ಮಾಡಿ ತೋರಿಸದಿದ್ದರೂ ಈ ವೇಳೆಯಲ್ಲಿ ಪರೋಕ್ಷವಾಗಿ ಅದು ಈ ಚಿತ್ರಕ್ಕೇ ಅನ್ವಯಿಸುತ್ತದೆ ಎಂಬುದು ಹಲವರ ಅನಿಸಿಕೆ.
ಕನ್ನಡ ಚಿತ್ರರಂಗದಲ್ಲಿ'ಯಜಮಾನ' ಎಂದರೆ ಅದು ವಿಷ್ಣುವರ್ಧನ್ ಮಾತ್ರ. ಆ ಟೈಟಲ್ ಅವರಿಗೇ ಉಳಿಯಬೇಕು. ವಿಷ್ಣು ಅವರು ಕನ್ನಡ ಸಿನಿಮಾರಂಗದಲ್ಲಿ 'ಯಜಮಾನ'ನಂತೆ ಬಾಳಿ ಬದುಕಿದವರು. ಅವರ ಚಿತ್ರಗಳ ಹೆಸರುಗಳು ಅವರಿಗೇ ಉಳಿಯಬೇಕಿದ್ದು ಅವುಗಳ ದುರ್ಬಳಕೆ ತಪ್ಪಿಸಬೇಕು ಎಂಬುದು ವಿಷ್ಣುವರ್ಧನ್ ಅಭಿಮಾನಗಳ ವಾದವಾಗಿದೆ. ಈಗ ನಿರ್ದೇಶಕ ರವಿ ಶ್ರೀವತ್ಸ ಕೂಡ ಅದೇ ವಾದವನ್ನು ಪುಷ್ಟೀಕರಿಸುವಂತೆ ಮಾತನಾಡಿದ್ದಾರೆ. ಈಗ ದರ್ಶನ್ 'ಯಜಮಾನ' ಚಿತ್ರದ ನಿರ್ಮಾಪಕರಾದ ಶೈಲಜಾ ನಾಗ್ ಮತ್ತು ಬಿ ಸುರೇಶ್ ಈ ಹೇಳಿಕೆಗೆ ಹೇಗೆ ಪ್ರತಿಕ್ರಿಯೆ ನೀಡುತ್ತಾರೆ ಎಂಬುದು ಸದ್ಯಕ್ಕಿರುವ ಕುತೂಹಲ.
ಅಂದಹಾಗೆ, ಈ ಮೊದಲೊಮ್ಮೆ "ಯಜಮಾನ' ಎಂದರೆ ಅದು ವಿಷ್ಣುವರ್ಧನ್ ಅವರೊಬ್ಬರೇ. ಆದರೆ, ತಮ್ಮ ನಿರ್ಮಾಣ, ದರ್ಶನ್ ನಾಯಕತ್ವದ ಈ ಚಿತ್ರದ ಕಥೆಗೆ 'ಯಜಮಾನ' ಟೈಟಲ್ ಸೂಕ್ತವೆನಿಸುತ್ತದೆ. ಹೀಗಾಗಿ ಆ ಹೆಸರನ್ನು ಇಟ್ಟಿದ್ದೇವೆ. ಅದರಲ್ಲಿ ಬೇರೆ ಯಾವುದೇ ಬೇರೆ ಉದ್ದೇಶಕ್ಕೆ ಆಸ್ಪದವಿಲ್ಲ" ಎಂದು ನಿರ್ಮಾಪಕಿ ಶೈಲಜಾ ನಾಗ್ ಈಗಾಗಲೇ ಸ್ಪಷ್ಟನೆ ಕೊಟ್ಟಿದ್ದಾರೆ. ಹೀಗಾಗಿ ದರ್ಶನ್ ವೃತ್ತಿ ಜೀವನದ '50'ನೇ ಚಿತ್ರವಾಗಿರುವ 'ಯಜಮಾನ' ಯಾವುದೇ ಅಡೆತಡೆಗೆ ಒಳಗಾಗದೇ ಬುಡುಗಡೆಯಾಗಲಿದೆ ಎಂದು ಸ್ಯಾಂಡಲ್ವುಡ್ ಆಶಿಸುತ್ತಿದೆ.
ಆದರೆ, ಇತ್ತೀಚಿಗೆ 'ಪಡ್ಡೆ ಹುಲಿ' ಚಿತ್ರದ ಸುದ್ದಿಗೋಷ್ಟಿಯಲ್ಲಿ ನಿರ್ದೇಶಕ ರವಿ ಶ್ರೀವತ್ಸ ವಿಷ್ಣುವರ್ಧನ್ ಚಿತ್ರಗಳ ಟೈಟಲ್ ನೊಂದಿಗೆ ಹೊಸದಾಗಿ ಬರುತ್ತಿರುವ ಚಿತ್ರಗಳ ಬಗ್ಗೆ ತಮ್ಮ ಅಸಮಾಧಾನ ಹೊರಹಾಕಿದ್ದಾರೆ. "ಹಳೆಯ ಕನ್ನಡ ಚಿತ್ರಗಳ ಟೈಟಲ್ಗಳು ದುರ್ಬಳಕೆ ಆಗುತ್ತಿವೆ. ಕನ್ನಡ ಚಿತ್ರರಂಗದ 'ಯಜಮಾನ್ರು' ವಿಷ್ಣುವರ್ಧನ್ ಅವರ ಚಿತ್ರಗಳ ಹೆಸರುಗಳನ್ನೂ ಕೂಡ ಇನ್ಮುಂದೆ ಹೊಸ ಚಿತ್ರಳಿಗೆ ಕೊಡಬೇಡಿ" ಅಂತ ಮನವಿ ಮಾಡಿಕೊಂಡಿದ್ದಾರೆ. ಸ್ವತಃ ವಿಷ್ಣು ಅಭಿಮಾನಿಯಾಗಿರುವ ರವಿ ಶ್ರೀವತ್ಸ ಅವರ ಮಾತು ನೇರವಾಗಿ ದರ್ಶನ್ 'ಯಜಮಾನ' ಚಿತ್ರವನ್ನು ಬೆಟ್ಟು ಮಾಡಿ ತೋರಿಸದಿದ್ದರೂ ಈ ವೇಳೆಯಲ್ಲಿ ಪರೋಕ್ಷವಾಗಿ ಅದು ಈ ಚಿತ್ರಕ್ಕೇ ಅನ್ವಯಿಸುತ್ತದೆ ಎಂಬುದು ಹಲವರ ಅನಿಸಿಕೆ.
ಕನ್ನಡ ಚಿತ್ರರಂಗದಲ್ಲಿ'ಯಜಮಾನ' ಎಂದರೆ ಅದು ವಿಷ್ಣುವರ್ಧನ್ ಮಾತ್ರ. ಆ ಟೈಟಲ್ ಅವರಿಗೇ ಉಳಿಯಬೇಕು. ವಿಷ್ಣು ಅವರು ಕನ್ನಡ ಸಿನಿಮಾರಂಗದಲ್ಲಿ 'ಯಜಮಾನ'ನಂತೆ ಬಾಳಿ ಬದುಕಿದವರು. ಅವರ ಚಿತ್ರಗಳ ಹೆಸರುಗಳು ಅವರಿಗೇ ಉಳಿಯಬೇಕಿದ್ದು ಅವುಗಳ ದುರ್ಬಳಕೆ ತಪ್ಪಿಸಬೇಕು ಎಂಬುದು ವಿಷ್ಣುವರ್ಧನ್ ಅಭಿಮಾನಗಳ ವಾದವಾಗಿದೆ. ಈಗ ನಿರ್ದೇಶಕ ರವಿ ಶ್ರೀವತ್ಸ ಕೂಡ ಅದೇ ವಾದವನ್ನು ಪುಷ್ಟೀಕರಿಸುವಂತೆ ಮಾತನಾಡಿದ್ದಾರೆ. ಈಗ ದರ್ಶನ್ 'ಯಜಮಾನ' ಚಿತ್ರದ ನಿರ್ಮಾಪಕರಾದ ಶೈಲಜಾ ನಾಗ್ ಮತ್ತು ಬಿ ಸುರೇಶ್ ಈ ಹೇಳಿಕೆಗೆ ಹೇಗೆ ಪ್ರತಿಕ್ರಿಯೆ ನೀಡುತ್ತಾರೆ ಎಂಬುದು ಸದ್ಯಕ್ಕಿರುವ ಕುತೂಹಲ.
ಅಂದಹಾಗೆ, ಈ ಮೊದಲೊಮ್ಮೆ "ಯಜಮಾನ' ಎಂದರೆ ಅದು ವಿಷ್ಣುವರ್ಧನ್ ಅವರೊಬ್ಬರೇ. ಆದರೆ, ತಮ್ಮ ನಿರ್ಮಾಣ, ದರ್ಶನ್ ನಾಯಕತ್ವದ ಈ ಚಿತ್ರದ ಕಥೆಗೆ 'ಯಜಮಾನ' ಟೈಟಲ್ ಸೂಕ್ತವೆನಿಸುತ್ತದೆ. ಹೀಗಾಗಿ ಆ ಹೆಸರನ್ನು ಇಟ್ಟಿದ್ದೇವೆ. ಅದರಲ್ಲಿ ಬೇರೆ ಯಾವುದೇ ಬೇರೆ ಉದ್ದೇಶಕ್ಕೆ ಆಸ್ಪದವಿಲ್ಲ" ಎಂದು ನಿರ್ಮಾಪಕಿ ಶೈಲಜಾ ನಾಗ್ ಈಗಾಗಲೇ ಸ್ಪಷ್ಟನೆ ಕೊಟ್ಟಿದ್ದಾರೆ. ಹೀಗಾಗಿ ದರ್ಶನ್ ವೃತ್ತಿ ಜೀವನದ '50'ನೇ ಚಿತ್ರವಾಗಿರುವ 'ಯಜಮಾನ' ಯಾವುದೇ ಅಡೆತಡೆಗೆ ಒಳಗಾಗದೇ ಬುಡುಗಡೆಯಾಗಲಿದೆ ಎಂದು ಸ್ಯಾಂಡಲ್ವುಡ್ ಆಶಿಸುತ್ತಿದೆ.