ಆ್ಯಪ್ನಗರ

ಅಯ್ಯಪ್ಪ ದೇಗುಲದಲ್ಲಿ ದರ್ಶನ್‌ ಹೊಸ ಚಿತ್ರಕ್ಕೆ ಚಾಲನೆ

ಚೌಕ ಚಿತ್ರದ ನಿರ್ದೇಶಕ ತರುಣ್‌ ಸುಧೀರ್‌ ಮತ್ತು ದರ್ಶನ್‌ ನಟನೆಯ ಹೊಸ ಚಿತ್ರಕ್ಕೆ ವರಮಹಾಲಕ್ಷ್ಮಿ ಹಬ್ಬದ ದಿನವೇ ಚಾಲನೆ ನೀಡಲಾಗಿದೆ.

Vijaya Karnataka 25 Aug 2018, 12:13 pm
ಚೌಕ ಚಿತ್ರದ ನಿರ್ದೇಶಕ ತರುಣ್‌ ಸುಧೀರ್‌ ಮತ್ತು ದರ್ಶನ್‌ ನಟನೆಯ ಹೊಸ ಚಿತ್ರಕ್ಕೆ ವರಮಹಾಲಕ್ಷ್ಮಿ ಹಬ್ಬದ ದಿನವೇ ಚಾಲನೆ ನೀಡಲಾಗಿದೆ. ಸುದೀಪ್‌ ನಟನೆಯ ಹೆಬ್ಬುಲಿ ಚಿತ್ರ ನಿರ್ಮಿಸಿದ್ದ ಉಮಾಪತಿ ಶ್ರೀನಿವಾಸ್‌ ಗೌಡ ನಿರ್ಮಾಣದ ಈ ಚಿತ್ರದ ಸ್ಕ್ರಿಪ್ಟ್‌ಗೆ ಬೆಂಗಳೂರಿನ ಮಲ್ಲೆಶ್ವರದಲ್ಲಿರುವ ಅಯ್ಯಪ್ಪ ದೇವಸ್ಥಾನದಲ್ಲಿ ಪೂಜೆ ನಡೆದಿದೆ.
Vijaya Karnataka Web darshan


ಸದ್ಯಕ್ಕೆ ದರ್ಶನ್‌ ಅವರು ಸಂದೇಶ್‌ನಾಗರಾಜ್‌ ನಿರ್ಮಾಣದ ‘ಒಡೆಯ’ ಚಿತ್ರದಲ್ಲಿ ನಟಿಸುತ್ತಿದ್ದು, ಅದಾದ ಮೇಲೆ ಈ ಚಿತ್ರದ ಶೂಟಿಂಗ್‌ ಆರಂಭವಾಗಲಿದೆ. ಚೌಕ ಚಿತ್ರದ ಯಶಸ್ಸಿನ ನಂತರ ತರುಣ್‌ ಆ್ಯಕ್ಷನ್‌ ಕಟ್‌ ಹೇಳುತ್ತಿರುವ ಎರಡನೇ ಚಿತ್ರ ಇದಾಗಿದ್ದು, ಚೌಕ ಚಿತ್ರದಲ್ಲಿ ದರ್ಶನ್‌ ಅತಿಥಿ ಪಾತ್ರದಲ್ಲಿ ನಟಿಸಿದ್ದರು. ಈ ಚಿತ್ರಕ್ಕೆ ರಾಬರ್ಟ್‌ ಅಥವಾ ಕಾಟೇರ ಎಂಬ ಟೈಟಲ್‌ಗಳಲ್ಲಿ ಒಂದನ್ನು ಇಡಲಾಗುವುದು ಎಂಬ ಸುದ್ದಿ ಇದೆ.

ಚಿತ್ರದಲ್ಲಿ ಕುಸ್ತಿ ಕಥೆ ಇಲ್ಲ. ಟೈಟಲ್‌ ಗಳಲ್ಲಿ ಯಾವುದಾದರೂ ಒಂದನ್ನು ಫೈನಲ್‌ ಮಾಡುತ್ತೇವೆ ಎಂದು ನಿರ್ದೇಶಕ ತರುಣ್‌ ಹೇಳಿದ್ದರು. ಇದು ಸ್ವಮೇಕ್‌ ಚಿತ್ರ ಎಂದಷ್ಟೇ ಚಿತ್ರತಂಡ ಹೇಳಿದೆ.

ಇಂದು ದಿನ ಚೆನ್ನಾಗಿರುವ ಕಾರಣಕ್ಕೆ ಸ್ಕ್ರಿಪ್ಟ್‌ ಪೂಜೆ ಮಾಡಿ, ಅಕೃತವಾಗಿ ಕೆಲಸ ಆರಂಭ ಮಾಡಿದ್ದೇವೆ. ಒಡೆಯ ಚಿತ್ರದ ಶೂಟಿಂಗ್‌ ಮುಗಿದ ತಕ್ಷಣ ನನ್ನ ಸಿನಿಮಾ ಆರಂಭವಾಗಲಿದೆ ಎಂದಿದ್ದಾರೆ ನಿರ್ದೇಶಕ ತರುಣ್‌ ಸುಧೀರ್‌.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌