ಆ್ಯಪ್ನಗರ

ಹೊಸ ವರ್ಷದ ಮೊದಲ ದಿನವೇ ಶೂಟಿಂಗ್‌ನಲ್ಲಿ ಪಾಲ್ಗೊಂಡ ದರ್ಶನ್‌

ಹೊಸ ವರ್ಷದ ಮೊದಲ ದಿನವನ್ನು ಸ್ಯಾಂಡಲ್‌ವುಡ್‌ ಸಿಲೆಬ್ರಿಟಿಗಳು ತಮಗಿಷ್ಟದ ಕೆಲಸಗಳ ಮೂಲಕ ಆರಂಭಿಸಿದ್ದಾರೆ. ಅವರ ಮೊದಲ ದಿನದ ಆರಂಭ ಹೇಗಿತ್ತು ಎನ್ನುವುದರ ಕಂಪ್ಲೀಟ್‌ ರಿಪೋರ್ಟ್‌. ಯಜಮಾನ ಶೂಟಿಂಗ್‌ನಲ್ಲಿ ದರ್ಶನ್, ಪೈಲ್ವಾನ್‍ಗೆ ಸಿದ್ಧವಾಗುತ್ತಿರುವ ಕಿಚ್ಚ, ತೆಲಂಗಾಣ ಆಂಧ್ರದಲ್ಲಿ ಯಶ್, ಚುನಾವಣೆಗೆ ಸ್ಪರ್ಧಿಸುವೆ ಎಂದ ಪ್ರಕಾಶ್ ರೈ.

Vijaya Karnataka 2 Jan 2019, 11:03 am
* ಶರಣು ಹುಲ್ಲೂರು
Vijaya Karnataka Web darshan


ಸಡಗರದಿಂದಲೇ 2019ರ ಹೊಸ ವರ್ಷವನ್ನು ಬರಮಾಡಿಕೊಂಡಿದ್ದಾರೆ ಸ್ಯಾಂಡಲ್‌ವುಡ್‌ ಸಿಲೆಬ್ರಿಟಿಗಳು. ಸಿನಿಮಾ ತಂಡ, ಫ್ಯಾಮಿಲಿ ಮತ್ತು ಸ್ನೇಹಿತರ ಜತೆ ಹೊಸ ವರ್ಷದ ಸಂಭ್ರಮವನ್ನು ಹಂಚಿಕೊಂಡಿರುವ ಇವರು, ವರ್ಷದ ಮೊದಲ ದಿನವನ್ನು ಅರ್ಥಪೂರ್ಣವಾಗಿ ಶುರು ಮಾಡಿದ್ದಾರೆ.

ಸದ್ಯ ದರ್ಶನ್‌ ನಟನೆಯ ಯಜಮಾನ ಸಿನಿಮಾದ ಶೂಟಿಂಗ್‌ ಬೆಂಗಳೂರಿನ ಮಿನರ್ವ ಮಿಲ್‌ನಲ್ಲಿ ನಡೆಯುತ್ತಿದೆ. ಕಲರ್‌ಫುಲ್‌ ಹಾಡಿನ ಚಿತ್ರೀಕರಣಕ್ಕಾಗಿ ಅದ್ಧೂರಿ ಸೆಟ್‌ ಕೂಡ ಹಾಕಲಾಗಿದೆ. ಆ ಸೆಟ್‌ನಲ್ಲಿ ನಡೆಯುತ್ತಿರುವ ಶೂಟಿಂಗ್‌ನಲ್ಲಿ ಪಾಲ್ಗೊಳ್ಳುವ ಮೂಲಕ ವರ್ಷದ ಮೊದಲ ದಿನವನ್ನು ಶುರು ಮಾಡಿದ್ದಾರೆ ದರ್ಶನ್‌.

ಪೈಲ್ವಾನ್‌ ಸಿನಿಮಾದ ಟೀಮ್‌ ಜತೆ ಹೊಸ ವರ್ಷ ಆಚರಿಸಿರುವ ಕಿಚ್ಚ ಸುದೀಪ್‌, ಇಂದಿನಿಂದ ಪೈಲ್ವಾನ್‌ ಸಿನಿಮಾದ ಅಂತಿಮ ಹಂತದ ಶೂಟಿಂಗ್‌ನಲ್ಲಿ ಪಾಲ್ಗೊಳ್ಳಲಿದ್ದಾರೆ. ವರ್ಷದ ಮೊದಲ ದಿನ ಈ ಚಿತ್ರೀಕರಣದ ತಯಾರಿ ಮಾಡಿಕೊಂಡಿದ್ದಾರೆ.

ಕುಟುಂಬ ಮತ್ತು ಕೆಜಿಎಫ್‌ ಸಿನಿಮಾ ಟೀಮ್‌ ಜತೆ ನ್ಯೂ ಯಿಯರ್‌ ಆಚರಿಸಿರುವ ಯಶ್‌, ತೆಲಂಗಾಣ ಮತ್ತು ಆಂಧ್ರ ಪ್ರದೇಶದಲ್ಲಿ ತಮ್ಮ ಸಿನಿಮಾದ ಪ್ರಚಾರ ಕಾರ್ಯದಲ್ಲಿ ತೊಡಗಿಕೊಳ್ಳುವ ಮೂಲಕ ಹೊಸ ವರ್ಷದ ಮೊದಲ ದಿನ ಆರಂಭಿಸಿದ್ದಾರೆ.

ವರ್ಷದ ಮೊದಲ ದಿನದಂದು ತಮ್ಮ ಅಭಿಮಾನಿಗಳಿಗೆ ಅಚ್ಚರಿಯ ಸುದ್ದಿ ಕೊಟ್ಟಿದ್ದಾರೆ ಪ್ರಕಾಶ್‌ ರೈ. ಮುಂಬರುವ ಲೋಕಸಭೆಯ ಚುನಾವಣೆಯಲ್ಲಿ ತಾವು ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ. ವರ್ಷದ ಮೊದಲ ದಿನವೇ ಚುನಾವಣೆ ಕುರಿತಾಗಿ ಮಾತನಾಡಲು ಗಣ್ಯರನ್ನು ಅವರು ಭೇಟಿ ಮಾಡುತ್ತಿದ್ದಾರೆ.

ಶ್ರೀಮುರಳಿ ಕೂಡ ಶೂಟಿಂಗ್‌ನಲ್ಲಿ ಪಾಲ್ಗೊಳ್ಳುವ ಮೂಲಕ ಹೊಸ ವರ್ಷದ ಮೊದಲ ದಿನವನ್ನು ಪ್ರಾರಂಭಿಸಿದ್ದಾರೆ. ಈ ಸಿನಿಮಾದ ಚಿತ್ರೀಕರಣ ಕೂಡ ಬೆಂಗಳೂರಿನಲ್ಲಿ ನಡೆಯುತ್ತಿದೆ. ಇದೇ ಸೆಟ್‌ನಲ್ಲೇ ಶ್ರೀಮುರಳಿ ಕೇಕ್‌ ಕತ್ತರಿಸಿ, ನಂತರ ಮಕ್ಕಳೊಂದಿಗೆ ಮನೆಯಲ್ಲಿ ಹೊಸ ವರ್ಷ ಆಚರಿಸಿದ್ದಾರೆ.

ಈವರೆಗೂ ನಟನಾಗಿ ಗುರುತಿಸಿಕೊಂಡಿರುವ ಸತೀಶ್‌ ನೀನಾಸಂ ವರ್ಷದ ಮೊದಲ ದಿನವೇ ಅಭಿಮಾನಿಗಳಿಗೆ ಖುಷಿ ಸುದ್ದಿ ಕೊಟ್ಟಿದ್ದಾರೆ. ವರ್ಷದ ಮೊದಲ ದಿನವೇ ತಾವು ನಿರ್ದೇಶನ ಮಾಡುವುದಾಗಿ ಹೇಳಿದ್ದಾರೆ. ಇವರ ಚೊಚ್ಚಲ ನಿರ್ದೇಶನದ ಚಿತ್ರದ ಫಸ್ಟ್‌ಲುಕ್‌ ಮಂಗಳವಾರ ರಿಲೀಸ್‌ ಆಗಿದೆ.

ಮೈಸೂರಿನ ಜಿಮ್‌ನಲ್ಲಿ ವರ್ಷದ ಮೊದಲ ದಿನವನ್ನು ಬರಮಾಡಿಕೊಂಡಿದ್ದಾರೆ ನಟ ಧನಂಜಯ್‌. ಸದ್ಯ ಅವರು ತೋತಾಪುರಿ ಸಿನಿಮಾದ ಶೂಟಿಂಗ್‌ನಲ್ಲಿ ಬಿಝಿ ಆಗಿದ್ದಾರೆ. ಈ ಸಿನಿಮಾಗಾಗಿಯೇ ಅವರು ಫಿಟ್‌ನೆಸ್‌ ಕಾಪಾಡಿಕೊಳ್ಳುತ್ತಿದ್ದಾರೆ.

ಇನ್ನಷ್ಟೇ ರಿಲೀಸ್‌ ಆಗಬೇಕಿರುವ ದಿಗಂತ್‌ ಅವರ ಹೊಸ ಸಿನಿಮಾದ ಪ್ರಚಾರವನ್ನು ವರ್ಷದ ಮೊದಲ ದಿನದಿಂದಲೇ ಶುರು ಮಾಡಿದ್ದಾರೆ. ಸಿನಿಮಾದ ಪ್ರಚಾರ ಕಾರ್ಯದಲ್ಲಿ ಅವರು ಪಾಲ್ಗೊಂಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌