ಆ್ಯಪ್ನಗರ

ದರ್ಶನ್‌ ನಟನೆಯ ಮದಕರಿನಾಯಕ ಚಿತ್ರಕ್ಕೆ ಭರದ ಸಿದ್ಧತೆ

ಸದ್ಯಕ್ಕೆ ದರ್ಶನ್‌ ಅವರು ರಾಬರ್ಟ್‌ ಸಿನಿಮಾದ ಚಿತ್ರೀಕರಣದಲ್ಲಿದ್ದು, ಅದರ ನಡುವೆಯೇ ಮದಕರಿನಾಯಕನ ಚಿತ್ರೀಕರಣದಲ್ಲಿ ಪಾಲ್ಗೊಳ್ಳದ್ದಾರೆಂದು ಗೊತ್ತಾಗಿದೆ. ಎಸ್‌.ವಿ. ರಾಜೇಂದ್ರಸಿಂಗ್‌ ಬಾಬು ನಿರ್ದೇಶನ ಮಾಡುವ ಈ ಚಿತ್ರಕ್ಕೆ ಖ್ಯಾತ ಸಾಹಿತಿ ಬಿ.ಎಲ್‌. ವೇಣು ಕಥೆ ಮತ್ತು ಚಿತ್ರಕಥೆ ಬರೆಯುತ್ತಿದ್ದಾರೆ.

Vijaya Karnataka 13 Jun 2019, 7:00 am
Vijaya Karnataka Web darshan.
ದರ್ಶನ್‌ ನಟನೆಯ ಗಂಡುಗಲಿ ಮದಕರಿನಾಯಕ ಸಿನಿಮಾದ ಚಿತ್ರೀಕರಣ ಆಗಸ್ಟ್‌ನಿಂದ ಆರಂಭವಾಗಲಿದೆ. ಈಗಾಗಲೇ ಚಿತ್ರತಂಡ ಚಿತ್ರದುರ್ಗ ಸೇರಿ ಸುತ್ತಮುತ್ತಲ ಪ್ರದೇಶಗಳಲ್ಲಿ ಸಂಚರಿಸಿ ಸಿನಿಮಾಗಾಗಿ ಮಾಹಿತಿ ಸಂಗ್ರಹಿಸುತ್ತಿದೆ. ಜತೆಗೆ ಶೂಟಿಂಗ್‌ಗೆ ತೆರಳಲು ಭರ್ಜರಿ ಸಿದ್ಧತೆ ನಡೆಸುತ್ತಿದೆ.

ಸದ್ಯಕ್ಕೆ ದರ್ಶನ್‌ ಅವರು ರಾಬರ್ಟ್‌ ಸಿನಿಮಾದ ಚಿತ್ರೀಕರಣದಲ್ಲಿದ್ದು, ಅದರ ನಡುವೆಯೇ ಮದಕರಿನಾಯಕನ ಚಿತ್ರೀಕರಣದಲ್ಲಿ ಪಾಲ್ಗೊಳ್ಳದ್ದಾರೆಂದು ಗೊತ್ತಾಗಿದೆ. ಎಸ್‌.ವಿ. ರಾಜೇಂದ್ರಸಿಂಗ್‌ ಬಾಬು ನಿರ್ದೇಶನ ಮಾಡುವ ಈ ಚಿತ್ರಕ್ಕೆ ಖ್ಯಾತ ಸಾಹಿತಿ ಬಿ.ಎಲ್‌. ವೇಣು ಕಥೆ ಮತ್ತು ಚಿತ್ರಕಥೆ ಬರೆಯುತ್ತಿದ್ದಾರೆ.

ಕನ್ನಡದಲ್ಲಿ ಇದು ಬಹು ಕೋಟಿ ಬಜೆಟ್‌ನ ಚಿತ್ರವಾಗಲಿದ್ದು, ಇದಕ್ಕಾಗಿ ಚಿತ್ರತಂಡ ಚಿತ್ರದುರ್ಗದ ಹೊರ ವಲಯದಲ್ಲಿ ಒಂದು ಹಳ್ಳಿಯ ಕಂಪ್ಲೀಟ್‌ ಸೆಟ್‌ ಹಾಕುತ್ತಿದೆ. ಈ ಬಗ್ಗೆ ಚಿತ್ರತಂಡವನ್ನು ಕೇಳಿದರೆ, ಎಲ್ಲವನ್ನು ಸದ್ಯದಲ್ಲೇ ಅನೌನ್ಸ್‌ ಮಾಡುತ್ತೇವೆ. ಒಂದಷ್ಟು ಬರಹಗಾರರು ನಿರ್ದೇಶಕ ರಾಜೇಂದ್ರಸಿಂಗ್‌ ಬಾಬು, ಕಥೆಗಾರ ವೇಣು ಎಲ್ಲರೂ ಸಿನಿಮಾದ ಸ್ಕ್ರಿಪ್ಟ್‌ಗೆ ಅಂತಿಮ ರೂಪ ನೀಡುತ್ತಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌