ಅರಣ್ಯರಕ್ಷಕರ ಬೆನ್ನಿಗೆ ನಿಂತ ದರ್ಶನ್
ಪರಿಸರ ಬಗ್ಗೆ ಅಪಾರ ಕಾಳಜಿ ವ್ಯಕ್ತ ಪಡಿಸುತ್ತಿರುವ ದರ್ಶನ್, ಈಗ ಹೊಸ ಸಾಹಸಕ್ಕೆ ಮುಂದಾಗಿದ್ದಾರೆ. ಈಗಾಗಲೇ ಮೈಸೂರು ಮೃಗಾಲಯದಲ್ಲಿ ಪ್ರಾಣಿಗಳ ದತ್ತು ಪಡೆದಿರುವ ಇವರು, ಇದೀಗ ಮಹದೇಶ್ವರ ಅರಣ್ಯ ಪ್ರದೇಶದಲ್ಲಿರುವ ಎರಡು ಆ್ಯಂಟಿ ಪೌಚ್ ಕ್ಯಾಂಪ್ (ಕಳ್ಳ ಬೇಟೆ ತಡೆ ಶಿಬಿರ)ಅನ್ನು ದತ್ತು ಪಡೆಯಲು ನಿರ್ಧಾರ ಮಾಡಿದ್ದಾರೆ. ಈ ಕುರಿತು ಈಗಾಗಲೇ ಅವರು ಅರಣ್ಯ ಇಲಾಖೆಯ ಅಧಿಕಾರಿಗಳ ಜತೆಯೂ ಒಂದು ಸುತ್ತಿನ ಮಾತುಕತೆ ಮಾಡಿದ್ದಾರೆ. ಅರಣ್ಯ ದತ್ತು ಪಡೆಯಲು ಕೈ ಜೋಡಿಸಬೇಕು ಎಂದು ಇಲಾಖೆಗೆ ಪತ್ರವನ್ನೂ ಅವರು ಬರೆದಿದ್ದಾರೆ.
Vijaya Karnataka 19 Dec 2018, 9:16 am
ಹೈಲೈಟ್ಸ್:
- ಅರಣ್ಯ ಸಂರಕ್ಷಣೆಗೆ ಪಣ ತೊಟ್ಟಿರುವ ನಟ ದರ್ಶನ್
- ಕಳ್ಳ ಬೇಟೆ ತಡೆ ಶಿಬಿರ ದತ್ತು ಪಡೆಯಲು ಮುಂದಾದ ದರ್ಶನ್
- ದತ್ತು ಕೊಡಲು ಇಲಾಖೆಯಲ್ಲಿ ಅವಕಾಶ ಇದೆಯಾ ಎಂಬ ಪರಿಶೀಲನೆ
ಅರಣ್ಯ ಸಂರಕ್ಷಣೆಗೆ ಪಣ ತೊಟ್ಟಿರುವ ನಟ ದರ್ಶನ್, ಮೊನ್ನೆಯಷ್ಟೇ ಪ್ರಾಣಿ ಪಕ್ಷಿಗಳ ಉಳಿವಿನ ಬಗ್ಗೆ ಮಾತನಾಡಿದ್ದರು. ಈಗ ಅರಣ್ಯ ಇಲಾಖೆಯ ಆ್ಯಂಟಿ ಪೌಚ್ ಕ್ಯಾಂಪ್ ಅನ್ನು ದತ್ತು ಪಡೆಯಲು ಹೊರಟಿದ್ದಾರೆ. ಪರಿಸರ ಬಗ್ಗೆ ಅಪಾರ ಕಾಳಜಿ ವ್ಯಕ್ತ ಪಡಿಸುತ್ತಿರುವ ದರ್ಶನ್, ಈಗ ಹೊಸ ಸಾಹಸಕ್ಕೆ ಮುಂದಾಗಿದ್ದಾರೆ. ಈಗಾಗಲೇ ಮೈಸೂರು ಮೃಗಾಲಯದಲ್ಲಿ ಪ್ರಾಣಿಗಳ ದತ್ತು ಪಡೆದಿರುವ ಇವರು, ಇದೀಗ ಮಹದೇಶ್ವರ ಅರಣ್ಯ ಪ್ರದೇಶದಲ್ಲಿರುವ ಎರಡು ಆ್ಯಂಟಿ ಪೌಚ್ ಕ್ಯಾಂಪ್ (ಕಳ್ಳ ಬೇಟೆ ತಡೆ ಶಿಬಿರ)ಅನ್ನು ದತ್ತು ಪಡೆಯಲು ನಿರ್ಧಾರ ಮಾಡಿದ್ದಾರೆ. ಈ ಕುರಿತು ಈಗಾಗಲೇ ಅವರು ಅರಣ್ಯ ಇಲಾಖೆಯ ಅಧಿಕಾರಿಗಳ ಜತೆಯೂ ಒಂದು ಸುತ್ತಿನ ಮಾತುಕತೆ ಮಾಡಿದ್ದಾರೆ. ಅರಣ್ಯ ದತ್ತು ಪಡೆಯಲು ಕೈ ಜೋಡಿಸಬೇಕು ಎಂದು ಇಲಾಖೆಗೆ ಪತ್ರವನ್ನೂ ಅವರು ಬರೆದಿದ್ದಾರೆ.
ದರ್ಶನ್ ಅರಣ್ಯ ಇಲಾಖೆಗೆ ಪತ್ರ ಬರೆಯುತ್ತಿದ್ದಂತೆಯೇ ಕಳ್ಳ ಬೇಟೆ ತಡೆ ಶಿಬಿರವನ್ನು ದತ್ತು ಕೊಡಲು ಇಲಾಖೆಯಲ್ಲಿ ಅವಕಾಶ ಇದೆಯಾ ಎಂಬ ಪರಿಶೀಲನೆ ಕೂಡ ನಡೆಯುತ್ತಿದೆ.
'ದರ್ಶನ್ ಅವರು ಮನವಿ ಪತ್ರ ಬರೆದಿದ್ದಾರೆ. ಅರಣ್ಯ ಇಲಾಖೆಯ ಕಾಯಿದೆಯಲ್ಲಿ ಹಾಗೆ ದತ್ತು ಕೊಡಲು ಬರುತ್ತಾ ಎಂದು ಪರಿಶೀಲಿಸುತ್ತಿದ್ದೇವೆ. ಈ ಕುರಿತು ಮೇಲಾಧಿಕಾರಿಗಳ ಗಮನಕ್ಕೂ ತಂದಿದ್ದೇವೆ. ದರ್ಶನ್ ಅವರ ಅರಣ್ಯ ಕಾಳಜಿಗೆ ನಮ್ಮ ಇಲಾಖೆ ಯಾವತ್ತಿಗೂ ಅಭಿನಂದನೆ ಸಲ್ಲಿಸುತ್ತದೆ' ಎಂದರು ಅರಣ್ಯಾಧಿಕಾರಿ
ದರ್ಶನ್ ರಾಜ್ಯ ಅರಣ್ಯ ಇಲಾಖೆಯ ರಾಯಭಾರಿ ಆಗಿಯೂ ಕೆಲಸ ಮಾಡುತ್ತಿದ್ದಾರೆ. ಮೊನ್ನೆಯಷ್ಟೇ ಅವರು ಅರಣ್ಯ ರಕ್ಷ ಣೆಯಲ್ಲಿ ವಾಚರ್ಸ್ಗಳಾಗಿ ಕೆಲಸ ಮಾಡುವವರ ಕ್ಷೇಮಾಭಿವೃದ್ಧಿ ಸಂಘಕ್ಕೆ 11ಲಕ್ಷ ರೂಪಾಯಿ ನೀಡಿದ್ದರು.
ಶೂಟಿಂಗ್ ಮಧ್ಯೆ ಬಿಡುವು ತಗೆದುಕೊಂಡು ಕಾಡು ಮೇಡು ಸುತ್ತುತ್ತಲೇ ಇರುತ್ತಾರೆ ದರ್ಶನ್. ಕೆಲ ದಿನಗಳ ಹಿಂದೆಯಷ್ಟೇ ಸ್ನೇಹಿತರೊಂದಿಗೆ ನಾಗರಹೊಳೆಗೆ ಭೇಟಿ ನೀಡಿ ಫೋಟೋಗ್ರಫಿ ಮಾಡಿದ್ದರು. ಮೊದಲ ಭೇಟಿಯಲ್ಲೇ ಅವರಿಗೆ ಹುಲಿ ಕಂಡಿತ್ತು. ಅಲ್ಲದೇ, ಅಂತರಸಂತೆ ಬಳ್ಳೆ ವಲಯದಲ್ಲೂ ಅವರು ಸಫಾರಿ ಮಾಡಿದ್ದರು. ಜತೆಗೆ ಮಗ ವಿನೀತ್ನನ್ನು ಕರೆದುಕೊಂಡು ಹೋಗಿದ್ದರು.
ಇವೆಲ್ಲವುಗಳ ಜತೆಗೆ ಅರಣ್ಯ ಸಂರಕ್ಷ ಣೆ ಮತ್ತು ಪ್ಲಾಸ್ಟಿಕ್ ಬಳಕೆ ಮಾಡಿದಿರಿ ಎಂದು ತಮ್ಮ ಸ್ನೇಹಿತರ ಬಳಗಕ್ಕೆ ವಾಟ್ಸಪ್ ಸಂದೇಶ ಕಳುಹಿಸುತ್ತಲೇ ಇರುತ್ತಾರೆ. ನಾಗರಹೊಳೆ ಎಂಬ ಲೋಗೋ ಇದ್ದ ಬಟ್ಟೆ ಬ್ಯಾಗ್ ಅನ್ನು ಬಿಡುಗಡೆ ಮಾಡಿ ಪರಿಸರ ಜಾಗೃತಿಯನ್ನೂ ಈಗಾಗಲೇ ಮೂಡಿಸಿದ್ದಾರೆ.
ಮಹದೇಶ್ವರ ಅರಣ್ಯ ವ್ಯಾಪ್ತಿಯಲ್ಲಿ ಒಟ್ಟು 37 ಆ್ಯಂಟಿ ಪೌಚ್ ಕ್ಯಾಂಫ್ಸ್ ಇವೆ. ಒಂದೊಂದು ಕ್ಯಾಂಪ್ನಲ್ಲಿ ಐದು ಜನ ಸಿಬ್ಬಂದಿ ಇರುತ್ತಾರೆ. ನಿರ್ವಹಣೆಗೆ ವರ್ಷಕ್ಕೆ 5.5 ಲಕ್ಷ ರೂಪಾಯಿ ಬೇಕು. ದರ್ಶನ್ ಅವರು ಎರಡು ಕ್ಯಾಂಪ್ ದತ್ತು ತೆಗೆದುಕೊಳ್ಳಲು ಮುಂದೆ ಬಂದಿದ್ದಾರೆ- ಏಡುಕೊಂಡಲು, ಉಪ ಅರಣ್ಯ ಸಂರಕ್ಷಣಾಧಿಕಾರಿ, ಮಹದೇಶ್ವರ ವನ್ಯಜೀವಿ ವಲಯ
ದರ್ಶನ್ ಅರಣ್ಯ ಇಲಾಖೆಗೆ ಪತ್ರ ಬರೆಯುತ್ತಿದ್ದಂತೆಯೇ ಕಳ್ಳ ಬೇಟೆ ತಡೆ ಶಿಬಿರವನ್ನು ದತ್ತು ಕೊಡಲು ಇಲಾಖೆಯಲ್ಲಿ ಅವಕಾಶ ಇದೆಯಾ ಎಂಬ ಪರಿಶೀಲನೆ ಕೂಡ ನಡೆಯುತ್ತಿದೆ.
'ದರ್ಶನ್ ಅವರು ಮನವಿ ಪತ್ರ ಬರೆದಿದ್ದಾರೆ. ಅರಣ್ಯ ಇಲಾಖೆಯ ಕಾಯಿದೆಯಲ್ಲಿ ಹಾಗೆ ದತ್ತು ಕೊಡಲು ಬರುತ್ತಾ ಎಂದು ಪರಿಶೀಲಿಸುತ್ತಿದ್ದೇವೆ. ಈ ಕುರಿತು ಮೇಲಾಧಿಕಾರಿಗಳ ಗಮನಕ್ಕೂ ತಂದಿದ್ದೇವೆ. ದರ್ಶನ್ ಅವರ ಅರಣ್ಯ ಕಾಳಜಿಗೆ ನಮ್ಮ ಇಲಾಖೆ ಯಾವತ್ತಿಗೂ ಅಭಿನಂದನೆ ಸಲ್ಲಿಸುತ್ತದೆ' ಎಂದರು ಅರಣ್ಯಾಧಿಕಾರಿ
ದರ್ಶನ್ ರಾಜ್ಯ ಅರಣ್ಯ ಇಲಾಖೆಯ ರಾಯಭಾರಿ ಆಗಿಯೂ ಕೆಲಸ ಮಾಡುತ್ತಿದ್ದಾರೆ. ಮೊನ್ನೆಯಷ್ಟೇ ಅವರು ಅರಣ್ಯ ರಕ್ಷ ಣೆಯಲ್ಲಿ ವಾಚರ್ಸ್ಗಳಾಗಿ ಕೆಲಸ ಮಾಡುವವರ ಕ್ಷೇಮಾಭಿವೃದ್ಧಿ ಸಂಘಕ್ಕೆ 11ಲಕ್ಷ ರೂಪಾಯಿ ನೀಡಿದ್ದರು.
ಶೂಟಿಂಗ್ ಮಧ್ಯೆ ಬಿಡುವು ತಗೆದುಕೊಂಡು ಕಾಡು ಮೇಡು ಸುತ್ತುತ್ತಲೇ ಇರುತ್ತಾರೆ ದರ್ಶನ್. ಕೆಲ ದಿನಗಳ ಹಿಂದೆಯಷ್ಟೇ ಸ್ನೇಹಿತರೊಂದಿಗೆ ನಾಗರಹೊಳೆಗೆ ಭೇಟಿ ನೀಡಿ ಫೋಟೋಗ್ರಫಿ ಮಾಡಿದ್ದರು. ಮೊದಲ ಭೇಟಿಯಲ್ಲೇ ಅವರಿಗೆ ಹುಲಿ ಕಂಡಿತ್ತು. ಅಲ್ಲದೇ, ಅಂತರಸಂತೆ ಬಳ್ಳೆ ವಲಯದಲ್ಲೂ ಅವರು ಸಫಾರಿ ಮಾಡಿದ್ದರು. ಜತೆಗೆ ಮಗ ವಿನೀತ್ನನ್ನು ಕರೆದುಕೊಂಡು ಹೋಗಿದ್ದರು.
ಇವೆಲ್ಲವುಗಳ ಜತೆಗೆ ಅರಣ್ಯ ಸಂರಕ್ಷ ಣೆ ಮತ್ತು ಪ್ಲಾಸ್ಟಿಕ್ ಬಳಕೆ ಮಾಡಿದಿರಿ ಎಂದು ತಮ್ಮ ಸ್ನೇಹಿತರ ಬಳಗಕ್ಕೆ ವಾಟ್ಸಪ್ ಸಂದೇಶ ಕಳುಹಿಸುತ್ತಲೇ ಇರುತ್ತಾರೆ. ನಾಗರಹೊಳೆ ಎಂಬ ಲೋಗೋ ಇದ್ದ ಬಟ್ಟೆ ಬ್ಯಾಗ್ ಅನ್ನು ಬಿಡುಗಡೆ ಮಾಡಿ ಪರಿಸರ ಜಾಗೃತಿಯನ್ನೂ ಈಗಾಗಲೇ ಮೂಡಿಸಿದ್ದಾರೆ.
ಮಹದೇಶ್ವರ ಅರಣ್ಯ ವ್ಯಾಪ್ತಿಯಲ್ಲಿ ಒಟ್ಟು 37 ಆ್ಯಂಟಿ ಪೌಚ್ ಕ್ಯಾಂಫ್ಸ್ ಇವೆ. ಒಂದೊಂದು ಕ್ಯಾಂಪ್ನಲ್ಲಿ ಐದು ಜನ ಸಿಬ್ಬಂದಿ ಇರುತ್ತಾರೆ. ನಿರ್ವಹಣೆಗೆ ವರ್ಷಕ್ಕೆ 5.5 ಲಕ್ಷ ರೂಪಾಯಿ ಬೇಕು. ದರ್ಶನ್ ಅವರು ಎರಡು ಕ್ಯಾಂಪ್ ದತ್ತು ತೆಗೆದುಕೊಳ್ಳಲು ಮುಂದೆ ಬಂದಿದ್ದಾರೆ- ಏಡುಕೊಂಡಲು, ಉಪ ಅರಣ್ಯ ಸಂರಕ್ಷಣಾಧಿಕಾರಿ, ಮಹದೇಶ್ವರ ವನ್ಯಜೀವಿ ವಲಯ