ಆ್ಯಪ್ನಗರ

'ರಾಬರ್ಟ್' ಅಡ್ಡಾದಿಂದ ಹೊರಬಿತ್ತು 'ಸ್ವಿಡ್ಜರ್‌ಲ್ಯಾಂಡ್' ಸುದ್ದಿ

ಕೆಲ ದಿನಗಳ ಹಿಂದೆ 'ರಾಬರ್ಟ್' ಸಿನೆಮಾದ ನಾಯಕಿ ಆಶಾ ಭಟ್ ಎಂದು ಹೇಳಿದ್ದರು. ತದನಂತರದಲ್ಲಿ ರಾಬರ್ಟ್ ಸಿನಿಮಾದ ಬಗ್ಗೆ ಹೆಚ್ಚೇನೂ ಮಾಹಿತಿ ಹೊರಬಿದ್ದಿರಲಿಲ್ಲ. ಈಗ ಇಂಟರೆಸ್ಟಿಂಗ್ ವಿಷಯವೊಂದು ಹೊರಬಿದ್ದಿದೆ.

THE TIMES OF INDIA NEWS SERVICE 12 Sep 2019, 10:58 am
ದರ್ಶನ್ ಅಭಿನಯದ ಬಹುನಿರೀಕ್ಷಿತ ಸಿನಿಮಾಗಳಲ್ಲಿ 'ರಾಬರ್ಟ್' ಸಿನಿಮಾ ಕೂಡ ಒಂದು. ಈ ಸಿನಿಮಾ ಬಗ್ಗೆ ಹೆಚ್ಚಿನ ಮಾಹಿತಿಗಳನ್ನು ಬಿಟ್ಟುಕೊಟ್ಟಿಲ್ಲ ಎಂದು ದರ್ಶನ್ ಅಭಿಮಾನಿಗಳು ಬೇಸರ ಮಾಡಿಕೊಂಡಿದ್ದರು. " ಇತ್ತೀಚೆಗಷ್ಟೇ 'ಕುರುಕ್ಷೇತ್ರ' ರಿಲೀಸ್ ಆಗಿದೆ. ಹೀಗಾಗಿ ಸ್ವಲ್ಪಕಾಲ 'ರಾಬರ್ಟ್' ಸುದ್ದಿಗಳನ್ನು ಸೈಲೆಂಟ್ ಆಗಿ ಇಟ್ಟಿದ್ಧೇವೆ, ಖಂಡಿತ ಹೊಸ ಸುದ್ದಿಯೊಂದಿಗೆ ಬರುತ್ತೇವೆ" ಎಂದಿದ್ದರು ತರುಣ್'. ಮಾತು ನೀಡಿದಂತೆ 'ರಾಬರ್ಟ್' ಸಿನಿಮಾದ ಹೀರೋಯಿನ್ ಯಾರು ಎಂಬುದನ್ನು ಬಹಿರಂಗ ಮಾಡಿದ್ದರು. ಈಗ ಮತ್ತೊಂದು ಸುದ್ದಿ ಹೊರಬಂದಿದೆ.
Vijaya Karnataka Web DARSHAN


ದರ್ಶನ್ ಅವರ ಪಾತ್ರದ ಡಬ್ಬಿಂಗ್‌ನ್ನು ಮಾಡಿ ಮುಗಿಸಿದ್ದಾರಂತೆ. ಅಕ್ಟೋಬರ್ ತಿಂಗಳಲ್ಲಿ ಸ್ವಿಡ್ಜರ್‌ಲ್ಯಾಂಡ್‌ನ ಮೌಂಟೇನ್‌ಗಳಲ್ಲಿ ಹಾಡುಗಳನ್ನು ಚಿತ್ರೀಕರಿಸಲು ಚಿತ್ರತಂಡ ಈಗಾಗಲೇ ಪ್ಲ್ಯಾನ್ ಮಾಡಿದೆ. ರಾಬರ್ಟ್ ಚಿತ್ರದ ನಾಯಕಿ ಆಶಾ ಭಟ್ ಸಿನಿಮಾಕ್ಕಾಗಿ ಹೆಚ್ಚಿನ ತಯಾರಿ ಕೂಡ ಮಾಡಿಕೊಳ್ಳುತ್ತಿದ್ದಾರೆ. ಅವರು ಜಿಮ್‌ನಲ್ಲಿ ವರ್ಕೌಟ್ ಮಾಡುವ ಫೋಟೋಗಳು, ವಿಡಿಯೋಗಳು ಸಾಕಷ್ಟು ವೈರಲ್ ಆಗಿತ್ತು. ಚಿತ್ರದ ನಿರ್ದೇಶಕರು ಕೂಡ ರಾಬರ್ಟ್ ಸಿನಿಮಾದ ಅಪ್‌ಡೇಟ್ಸ್‌ಗಳನ್ನು ಸ್ವಲ್ಪ ಗೌಪ್ಯವಾಗಿಡುತ್ತಿರುವುದು ಸತ್ಯ.

ದರ್ಶನ್ 'ರಾಬರ್ಟ್‌'ಗೆ ಸಿಕ್ಕಳು ಶಿವಮೊಗ್ಗದ ಚೆಲುವೆ'


ಟೈಟಲ್ ಮತ್ತು ಪೋಸ್ಟರ್‌ಗಳಿಂದ ರಾಬರ್ಟ್ ಸಿನಿಮಾ ನಿರೀಕ್ಷೆ ಹೆಚ್ಚಿಸಿತ್ತು. " ದರ್ಶನ್ ಬಗ್ಗೆ ಗೊತ್ತಿರದ ಎಲಿಮೆಂಟ್ಸ್‌ಗಳನ್ನು ರಾಬರ್ಟ್‌ನಲ್ಲಿ ಕೊಡ್ತೀನಿ, ದರ್ಶನ್ ಅಭಿಮಾನಿಗಳಿಗೆ ನಮ್ಮ ಬಾಸ್ ಹಾಗೆ ಕಾಣಬೇಕು, ಹೀಗೆ ಕಾಣಬೇಕು ಎಂಬ ಆಸೆ ಇರತ್ತೆ. ಅವುಗಳನ್ನು ಹಂಡ್ರೆಡ್ ಪರ್ಸೆಂಟ್ ಈಡೇರಿಸುತ್ತೇವೆ" ಎಂದಷ್ಟೇ ನಿರ್ದೇಶಕ ತರುಣ್ ಸುಧೀರ್ ಹೇಳಿದ್ದರು.

ದರ್ಶನ್‌ 'ರಾಬರ್ಟ್' ಸೆಟ್‌ನಲ್ಲಿ ಒಟ್ಟಿಗೆ ಕಾಣಿಸಿಕೊಂಡ ನಾಲ್ಕು ಮಂದಿ ನಿರ್ದೇಶಕರು

ವಿವಿಧ ಬಗೆಯ ಪ್ರಾಣಿಗಳ ಚಿತ್ರ ಸೆರೆಹಿಡಿಯಲು ಆಫ್ರಿಕಾ ಖಂಡದ ಕೀನ್ಯಾ ಕಾಡುಗಳಿಗೆ ದರ್ಶನ್ ಸೆಪ್ಟೆಂಬರ್ 20ರಂದು, ಪುತ್ರ ವಿನೀಶ್ ಜೊತೆ ತೆರಳಲಿದ್ದಾರೆ ಎನ್ನಲಾಗಿತ್ತು. ಕೀನ್ಯಾ ಕಾಡಲ್ಲಿ ಫೋಟೋಗ್ರಫಿ ಮಾಡುವುದು ಸುಲಭವಲ್ಲ. ಆದರೆ ದರ್ಶನ್‌ಗೆ ದಟ್ಟ ಕಾಡಿಗೆ ನುಗ್ಗಿ ಛಾಯಾಚಿತ್ರ ತೆಗೆಯುವ ಅಭ್ಯಾಸವಿದೆ. ಈಗಾಗಲೇ ಅಚ್ಚರಿ ಎನಿಸುವಂಥಹ ವನ್ಯಜೀವಿಗಳ ಫೋಟೋವನ್ನು ದರ್ಶನ್ ಕಬಿನಿ ಕಾಡಿನಲ್ಲಿ ಸೆರೆಹಿಡಿದಿದ್ದು, ಅವುಗಳ ಪ್ರದರ್ಶನ ಮತ್ತು ಮಾರಾಟ ಕೂಡ ಆಗಿತ್ತು. ಜೊತೆಗೆ ಸುಮಾರು 50 ಲಕ್ಷ ಬೆಲೆ ಬಾಳುವಂಥಹ ಕ್ಯಾಮೆರಾ, ಲೆನ್ಸ್‌ಗಳನ್ನು ಫೋಟೋಗ್ರಫಿಗಾಗಿ ದಚ್ಚು ಈಗಾಗಲೇ ಖರೀದಿ ಮಾಡಿದ್ದಾರಂತೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌