ಆ್ಯಪ್ನಗರ

ಬದಲಾಯ್ತು ದರ್ಶನ್ 'ಒಡೆಯರ್' ಚಿತ್ರದ ಶೀರ್ಷಿಕೆ

ಚಾಲೆಂಜಿಂಗ್ ಸ್ಟಾರ್ ದರ್ಶನ್ ನೂತನ ಚಿತ್ರ 'ಒಡೆಯರ್' ಶೀರ್ಷಿಕೆ ಬದಲಾಗಿದೆ. ಸಂದೇಶ್ ನಾಗರಾಜ್ ನಿರ್ಮಿಸುತ್ತಿರುವ ಈ ಸಿನಿಮಾ ಇದೇ ಆಗಸ್ಟ್ 16ಕ್ಕೆ ಮೈಸೂರಿನಲ್ಲಿ 'ಒಡೆಯ'ನಾಗಿ ಸೆಟ್ಟೇರುತ್ತಿದೆ. ಈ ಬಗ್ಗೆ ಸಂದೇಶ್ ನಾಗರಾಜ್ ವಿವರ ನೀಡಿದ್ದಾರೆ.

Vijaya Karnataka Web 6 Aug 2018, 12:56 pm
ಚಾಲೆಂಜಿಂಗ್ ಸ್ಟಾರ್ ದರ್ಶನ್ ನೂತನ ಚಿತ್ರ 'ಒಡೆಯರ್' ಶೀರ್ಷಿಕೆ ಬದಲಾಗಿದೆ. ಸಂದೇಶ್ ನಾಗರಾಜ್ ನಿರ್ಮಿಸುತ್ತಿರುವ ಈ ಸಿನಿಮಾ ಇದೇ ಆಗಸ್ಟ್ 16ಕ್ಕೆ ಮೈಸೂರಿನಲ್ಲಿ 'ಒಡೆಯ'ನಾಗಿ ಸೆಟ್ಟೇರುತ್ತಿದೆ. ಈ ಬಗ್ಗೆ ಸಂದೇಶ್ ನಾಗರಾಜ್ ವಿವರ ನೀಡಿದ್ದಾರೆ.
Vijaya Karnataka Web darshan


ಒಡೆಯರ್ ಶೀರ್ಷಿಕೆ ವಿರುದ್ಧ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ಹಲವು ಸಂಘಟನೆಗಳು ವಿರೋಧ ವ್ಯಕ್ತಪಡಿಸಿ ಪೊಲೀಸ್ ಠಾಣೆಯಲ್ಲೂ ದೂರು ನೀಡಿದ್ದವು. ಆದರೆ ರಾಜಮಾತೆ ಪ್ರಮೋದಾ ದೇವಿ ಅವರು ಒಡೆಯರ್ ಶೀರ್ಷಿಕೆಗೆ ತಮ್ಮದೇನು ಅಭ್ಯಂತರ ಇಲ್ಲ ಎಂದಿದ್ದರು.

ಒಟ್ಟಾರೆ ಈಗ ಶೀರ್ಷಿಕೆ ಬದಲಾಗಿದ್ದು ವಿವಾದವೂ ತಣ್ಣಗಾಗಿದೆ. ಈ ಹಿಂದೆ ದರ್ಶನ್‌ಗೆ ಪೊರ್ಕಿ, ಬುಲ್ ಬುಲ್ ಚಿತ್ರಗಳನ್ನು ನಿರ್ದೇಶನ ಮಾಡಿದ್ದ ಎಂ ಡಿ ಶ್ರೀಧರ್ ಆ್ಯಕ್ಷನ್ ಕಟ್‌ನಲ್ಲಿ ಮೂಡಿಬರುತ್ತಿರುವ ಸಿನಿಮಾ.


ಒಡೆಯ ಸಿನಿಮಾದ ನಾಯಕಿಗಾಗಿ ಹುಡುಕಾಟ ನಡೆದಿದೆ. ಶೀಘ್ರದಲ್ಲೇ ಇತರೆ ತಾರಾಬಳಗದ ವಿವರಗಳು ಹೊರಬೀಳಲಿವೆ. ಆಗಸ್ಟ್ 16ರಂದು ಮೈಸೂರಿನಲ್ಲಿ ಸಿನಿಮಾ ಸೆಟ್ಟೇರುತ್ತಿದ್ದು, ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹಾಗೂ ರೆಬಲ್ ಸ್ಟಾರ್ ಅಂಬರೀಶ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುತ್ತಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌