ಆ್ಯಪ್ನಗರ

ಕಿರುತೆರೆಯಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಯಜಮಾನ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಯಜಮಾನ ಸಿನಿಮಾ ಆಗಸ್ಟ್ 11ಕ್ಕೆ ಕಿರುತೆರೆಯಲ್ಲಿ ಇದೇ ಮೊದಲ ಸಲ ಪ್ರಸಾರವಾಗುತ್ತಿದೆ. ಈ ಚಿತ್ರದಲ್ಲಿ ದರ್ಶನ್, ರಶ್ಮಿಕಾ ಮಂದಣ್ಣ ಹಾಗೂ ತಾನ್ಯಾ ಹೋಪ್ ಮುಖ್ಯಭೂಮಿಕೆಯಲ್ಲಿದ್ದಾರೆ.

Vijaya Karnataka Web 22 Jul 2019, 5:22 pm
ಸ್ಯಾಂಡಲ್‌ವುಡ್‌ ಹಿಟ್ ಸಿನಿಮಾ 'ಯಜಮಾನ' ಆಗಸ್ಟ್ 11ರಂದು ಕಿರುತೆರೆಯಲ್ಲಿ ಮೊಟ್ಟ ಮೊದಲ ಸಲ ಮೂಡಿಬರುತ್ತಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್, ರಶ್ಮಿಕಾ ಮಂದಣ್ಣ ಹಾಗೂ ತಾನ್ಯಾ ಹೋಪ್ ಮುಖ್ಯಭೂಮಿಕೆಯಲ್ಲಿರುವ ಈ ಚಿತ್ರಕ್ಕೆ ಸಂಗೀತ ನಿರ್ದೇಶಕ ವಿ ಹರಿಕೃಷ್ಣ ಆ್ಯಕ್ಷನ್ ಕಟ್ ಹೇಳಿದ್ದಾರೆ.
Vijaya Karnataka Web yajamana


ದರ್ಶನ್‌ ಕರಿಯರ್‌ನಲ್ಲಿ ಯಜಮಾನ ಸಿನಿಮಾದ ಕಥೆ ವಿಶೇಷವಾಗಿ ಕಾಣುತ್ತದೆ. ಅಡುಗೆ ಎಣ್ಣೆ ಮನುಷ್ಯನ ಜೀವನಕ್ಕೆ ಬಹಳ ಮುಖ್ಯ. ಈ ಎಣ್ಣೆಯನ್ನು ತೆಗೆಯುವರ ಕಷ್ಟ ಮತ್ತು ಹಳ್ಳಿಗಳಲ್ಲಿದ್ದ ಎಣ್ಣೆಗಾಣಗಳನ್ನು ದೊಡ್ಡ ದೊಡ್ಡ ರಿಫೈನರಿ ಆಯಿಲ್‌ ಮಾಫಿಯಾ ಹೇಗೆ ಮುಚ್ಚಿ ಹಾಕುತ್ತದೆ ಎಂಬುದುನ್ನು ಈ ಸಿನಿಮಾದಲ್ಲಿ ಹೇಳಲಾಗಿದೆ. [ಯಜಮಾನ ಚಿತ್ರವಿಮರ್ಶೆ]

ಚಿತ್ರದ ಪಾತ್ರವರ್ಗದಲ್ಲಿ ಧನಂಜಯ, ಪ್ರಜ್ವಲ್ ದೇವರಾಜ್, ಸಾಧು ಕೋಕಿಲ, ದತ್ತಣ್ಣ, ಮಂಡ್ಯ ರಮೇಶ್ ಮತ್ತು ರವಿಶಂಕರ್ ಪ್ರಮುಖ ಪಾತ್ರಗಳನ್ನು ಪೋಷಿಸಿದ್ದಾರೆ. ನಿರ್ದೇಶನದ ಜತೆಗೆ ಸಂಗೀತ ನಿರ್ದೇಶವನ್ನೂ ಮಾಡಿದ್ದಾರೆ.

ಈ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ಸಲ್ವಾರ್‌, ಲಂಗಾದಾವಣಿಯಂತಹ ಕಾಸ್ಟ್ಯೂಮ್‌ನಲ್ಲಿಯೇ ಎಷ್ಟು ಮುದ್ದಾಗಿ ಕಾಣುತ್ತಾರೋ, ಅಷ್ಟೇ ಮುದ್ದು ಮುದ್ದಾಗಿ ನಟಿಸಿದ್ದಾರೆ. ದರ್ಶನ್‌ ಮತ್ತು ರಶ್ಮಿಕಾ ಸ್ಯಾಂಡಲ್‌ವುಡ್‌ನ ಹಿಟ್‌ ಜೋಡಿಗಳ ಸಾಲಿಗೆ ಸೇರುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂಬುದನ್ನು ತೋರಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌