ಆ್ಯಪ್ನಗರ

ವರ್ಮ ಭೈರವ ಗೀತಗಾಗಿ ಟಾಲಿವುಡ್‌ಗೆ ಹಾರಿದ ಡಾಲಿ

ಟಗರು ಡಾಲಿ ಫೇಮ್‌ ಧನಂಜಯ ಈಗ ಟಾಲಿವುಡ್‌ಗೆ ಹಾರಿದ್ದಾರೆ...

Vijaya Karnataka 14 Jun 2018, 5:00 am
ಹರೀಶ್‌ ಬಸವರಾಜ್‌
Vijaya Karnataka Web DHANANJAYA

ಶಿವರಾಜ್‌ ಕುಮಾರ್‌ ನಟನೆಯ ಟಗರು ಚಿತ್ರದಲ್ಲಿ ಮಾಡಿದ ಡಾಲಿ ಪಾತ್ರದಿಂದ ದಿನ ಬೆಳಗಾಗುವುದರೊಳಗಾಗಿ ಇಡೀ ದಕ್ಷಿಣ ಭಾರತದ ಸ್ಟಾರ್‌ ಆಗಿಬಿಟ್ಟ ನಟ ಧನಂಜಯ ಇದೀಗ ರಾಮಗೋಪಾಲ್‌ ವರ್ಮ ಕಣ್ಣಿಗೆ ಬಿದ್ದು, ಅವರ ಚಿತ್ರಕ್ಕೆ ಆಯ್ಕೆಯಾಗಿದ್ದಾರೆ.
ಕನ್ನಡ ಮತ್ತು ತೆಲುಗಿನಲ್ಲಿ ಏಕಕಾಲಕ್ಕೆ ನಿರ್ಮಾಣವಾಗಲಿರುವ ಈ ಚಿತ್ರಕ್ಕೆ ಕನ್ನಡದಲ್ಲಿ ಭೈರವ ಗೀತೆ ಹಾಗೂ ತೆಲುಗಿನಲ್ಲಿ ಭೈರವ ಗೀತ ಎಂದು ಹೆಸರಿಡಲಾಗಿದೆ. ವಿಶೇಷವೆಂದರೆ ಟಗರು ಚಿತ್ರಕ್ಕೆ ಡೈಲಾಗ್‌ ಬರೆದಿದ್ದ ಮಾಸ್ತಿ ಈ ಚಿತ್ರಕ್ಕೂ ಸಂಭಾಷಣೆ ಬರೆಯುತ್ತಿದ್ದಾರೆ. ಈಗಾಗಲೇ ಇವರಿಬ್ಬರು ವರ್ಮ ಜತೆ ಹೈದರಾಬಾದ್‌ನಲ್ಲಿ ಎರಡು ಸುತ್ತಿನ ಮಾತುಕತೆ ಮುಗಿಸಿದ್ದು, ಚಿತ್ರದ ಕೆಲಸಗಳು ಆರಂಭವಾಗಿವೆ.
ಈ ಚಿತ್ರಕ್ಕೆ ವರ್ಮ ಕ್ರಿಯೇಟಿವ್‌ ಹೆಡ್‌ ಆಗಿ ಕೆಲಸ ಮಾಡಲಿದ್ದು, ಅವರ ಸಹಾಯಕ ಸಿದ್ದು ಎಂಬ 25ರ ಯುವಕ ನಿರ್ದೇಶನ ಮಾಡಲಿದ್ದಾರೆ. ಸಿದ್ದು ಮೂಲತಃ ಸಂಕಲನಕಾರನಾಗಿದ್ದು, ಚಿತ್ರದ ಫ್ರೇಮಿಂಗ್‌ ಬಗ್ಗೆ ಇಡೀ ಟಾಲಿವುಡ್‌ನಲ್ಲಿ ಅವರಿಗೆ ಉತ್ಯುತ್ತಮ ಹೆಸರಿದೆ. ಈ ಚಿತ್ರದ ಮೂಲಕ ನಿರ್ದೇಶಕರಾಗಿ ಕನ್ನಡ ಮತ್ತು ತೆಲುಗು ಇಂಡಸ್ಟ್ರಿಗೆ ಅವರು ಪರಿಚಯವಾಗಲಿದ್ದಾರೆ.
ಇನ್ನು ಭೈರವ ಗೀತೆ ಚಿತ್ರ ಪಕ್ಕಾ ರಗಡ್‌ ಚಿತ್ರವಾಗಲಿದ್ದು, ಧನಂಜಯ ಅವರಿಗೆ ತೆಲುಗಿನಲ್ಲಿ ಒಳ್ಳೆ ಓಪನಿಂಗ್‌ ಸಿಗುವ ಎಲ್ಲ ಲಕ್ಷಣಗಳು ಇವೆ. ತೆಲುಗಿನಲ್ಲಿ ಈ ಚಿತ್ರದ ಸಂಭಾಷಣೆಯನ್ನು ವಂಶಿ ಎಂಬುವವರು ಬರೆದರೆ, ಕನ್ನಡದಲ್ಲಿ ಟಗರು ಖ್ಯಾತಿಯ ಮಾಸ್ತಿ ಬರೆಯಲಿದ್ದಾರೆಂದು ನಿರ್ದೇಶಕ ಸಿದ್ದು ತಿಳಿಸಿದ್ದಾರೆ.
ಕೆಲ ದಿನಗಳ ಹಿಂದೆ ಟಗರು ಚಿತ್ರ ನೋಡಿದ್ದ ಆರ್‌ಜಿವಿ ಧನಂಜಯ ಅಭಿನಯದ ಜತೆಗೆ ಮಾಸ್ತಿ ಬರೆದಿದ್ದ ಡೈಲಾಗ್‌ಗಳಿಗೆ ಫಿದಾ ಆಗಿದ್ದರು. ಹಾಗಾಗಿ ಈ ಸಿನಿಮಾದ ಕನ್ನಡ ವರ್ಷನ್‌ಗೆ ಮಾಸ್ತಿಯಿಂದ ಸಂಭಾಷಣೆ ಬರೆಸುತ್ತಿದ್ದಾರೆ. ಭೈರವ ಗೀತೆ ಶೂಟಿಂಗ್‌ ಮುಂದಿನ ವಾರದಿಂದಲೇ ಶೂಟಿಂಗ್‌ ಆರಂಭವಾಗಲಿದೆ.
---
ಈಗಾಗಲೇ ವರ್ಮ ಜತೆ ಎರಡು ಮೀಟಿಂಗ್‌ಗಳು ನಡೆದಿವೆ. ಸದ್ಯದಲ್ಲೇ ಫಸ್ಟ್‌ ಲುಕ್‌ ಮೂಲಕ ಎಲ್ಲವನ್ನು ರಿವೀಲ್‌ ಮಾಡುತ್ತೇವೆ. ವರ್ಮ ಜತೆ ಕೆಲಸ ಮಾಡುವುದಕ್ಕೆ ನಾನು ತುಂಬಾ ಎಕ್ಸೈಟ್‌ ಆಗಿದ್ದೇನೆ.
-ಧನಂಜಯ, ನಟ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌