ಆ್ಯಪ್ನಗರ

ಶ್ರೀಮುರಳಿ ಹೀರೋಯಿನ್ ನೋಡಲು ಓಡೋಡಿ ಬಂದ ಧನಂಜಯ್ !!!

'ಭರಾಟೆ' ಸಿನಿಮಾದ ಆ್ಯಕ್ಷನ್ ಟೀಸರ್ ರಿಲೀಸ್ ಕಾರ್ಯಕ್ರಮಕ್ಕೆ ಆಗಮಿಸಿದ್ದ 'ಭರಾಟೆ' ಬಗ್ಗೆ ಮಾತನಾಡಿದ್ದಾರೆ. ಧನಂಜಯ್ ತಮ್ಮ ಹಾಸ್ಯಪ್ರಜ್ಞೆಯಿಂದ ಪ್ರೇಕ್ಷಕರ ಮುಖದಲ್ಲಿ ನಗು ತರಿಸಿದ್ದಾರೆ, ಭರಾಟೆ ಹೀರೋಯಿನ್ ಬಗ್ಗೆಯೂ ಮಾತನಾಡಿದ್ದಾರೆ ಡಾಲಿ. ಏನದು?

Vijaya Karnataka Web 1 Oct 2019, 2:16 pm
ಶ್ರೀಮುರಳಿ ಅಭಿನಯದ ಬಹುನಿರೀಕ್ಷಿತ ಚಿತ್ರ 'ಭರಾಟೆ'. ಭರಾಟೆ ಸಿನಿಮಾದ ಆ್ಯಕ್ಷನ್ ಟೀಸರ್ ರಿಲೀಸ್ ಕಾರ್ಯಕ್ರಮ ಅದ್ದೂರಿಯಾಗಿ ನಡೆದಿದೆ. ಡಾಲಿ ಧನಂಜಯ್, ದುನಿಯಾ ವಿಜಯ್, ನೀನಾಸಂ ಸತೀಶ್, ಧನ್ವೀರ್, ವಿಕ್ಕಿ ವರುಣ್, ಸಾಯಿಕುಮಾರ್, ಅಯ್ಯಪ್ಪ, ರವಿಶಂಕರ್, ಯುವರಾಜ್‌ಕುಮಾರ್ ಮುಂತಾದವರು ಆಗಮಿಸಿದ್ದರು. ಈ ಸಂದರ್ಭದಲ್ಲಿ ಡಾಲಿ ಧನಂಜಯ್, ದುನಿಯಾ ವಿಜಿ 'ಭರಾಟೆ' ಬಗ್ಗೆ ಮಾತನಾಡಿದ್ದಾರೆ.
Vijaya Karnataka Web bharaate


ನಿರ್ದೇಶಕರಾದ ಪವನ್ ಒಡೆಯರ್, ಸತ್ಯಪ್ರಕಾಶ್, ಸಿಂಪಲ್ ಸುನಿ, ನಿರ್ಮಾಪಕರಾದ ಉಮಾಪತಿ, ಕೆ.ಪಿ.ಶ್ರೀಕಾಂತ್ ಕೂಡ ಕಾರ್ಯಕ್ರಮಕ್ಕೆ ಆಗಮಿಸಿದ್ದರು. 'ಭರಾಟೆ' ಸಿನಿಮಾದ ಕಟೌಟ್, ಸ್ಟಿಲ್ಸ್‌ಗಳನ್ನು ಕೂಡ ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು.

ರಾಬರ್ಟ್ ನಿರ್ದೇಶಕನಿಗೆ ದೊಡ್ಡ ಸ್ಪರ್ಧೆ ಕೊಟ್ಟಿದ್ದ ಶ್ರೀಮುರಳಿ; ತರುಣ್ ಸುಧೀರ್ ಬಿಚ್ಚಿಟ್ಟ ಸತ್ಯವೇನು?

" ಚೇತನ್ ನಿರ್ದೇಶನ ಅಂದ್ರೆ ಭರ್ಜರಿಯಾಗಿರತ್ತೆ, ರೋರಿಂಗ್ ಸ್ಟಾರ್ ಇದ್ದರೆ ಘರ್ಜನೆ ಇದ್ದೇ ಇರತ್ತೆ. ತುಂಬ ಚೆನ್ನಾಗಿದೆ. ತಂಡಕ್ಕೆ ಒಳ್ಳೆಯದಾಗಲಿ. ಈ ಸಮಾರಂಭದಲ್ಲಿ ತುಂಬ ದೊಡ್ಡ ಅತಿಥಿಗಳ ಲಿಸ್ಟ್ ಇತ್ತು. ಎಲ್ಲರನ್ನು ಒಟ್ಟಿಗೆ ನೋಡೋದೆ ಖುಷಿ. ಹೀಗಾಗಿ ಮಕ್ಕಳು ಸಂಭ್ರಮದಲ್ಲಿ ರೆಡಿಯಾಗಿ ಬರೋ ತರ ರೆಡಿಯಾಗಿ ಬಂದೆ. ತೆರೆ ಮೇಲೆ ಒಬ್ಬರಿಗಿಂತ ಇನ್ನೊಬ್ಬರು ಚೆನ್ನಾಗಿ ನಟಿಸಬೇಕು ಎಂಬ ಆರೋಗ್ಯಕರ ಸ್ಪರ್ಧೆ ಮಾಡಬೇಕು, ತೆರೆ ಹಿಂದೆ ಎಲ್ಲರೂ ಒಟ್ಟಾಗಿ ಪಾರ್ಟಿ ಮಾಡಬೇಕು. ಇದೇ ನನ್ನ ಆಸೆ. ಸಾಯಿಕುಮಾರ್ ಅವರು ನನ್ನನ್ನು ತಮ್ಮನ ತರ ನೋಡ್ತಾರೆ. ನನ್ನ ಹುಟ್ಟುಹಬ್ಬಕ್ಕೆ ಒಳ್ಳೆಯ ಗಿಫ್ಟ್ ನೀಡಿದ್ದರು ಅವರು" ಎಂದು ಹೇಳಿದ್ದಾರೆ ಡಾಲಿ

ಸಿನಿಮಾ ರಿಲೀಸ್‌ಗೂ ಮುಂಚೆಯೇ ದೊಡ್ಡ ಸದ್ದು ಮಾಡಿದಳು ಕರ್ನಾಟಕದ 'ಕಿಸ್' ಸುಂದರಿ! ಯಾರು ಈಕೆ?

ಚೇತನ್ ಅವರು ಯಾವ ಕಾಲೇಜಿನಲ್ಲಿ ಓದಿದ್ದಾರೆ ಅಂತ ಗೊತ್ತಿಲ್ಲ. ಈ ಕಾರ್ಯಕ್ರಮದಲ್ಲಿ ಹೆಣ್ಣುಮಕ್ಕಳು ಕಡಿಮೆ. ಗಂಡುಮಕ್ಕಳ ಜೊತೆ ಹೆಣ್ಣುಮಕ್ಕಳನ್ನು ಇಂಥ ಕಾರ್ಯುಕ್ರಮಕ್ಕೆ ಕರೆಸಿದರೆ ಸಂಭ್ರಮ ಚೆನ್ನಾಗಿರತ್ತೆ, ನೋಡಿಕೊಂಡು ಹೋಗೋದಿಕ್ಕೂ ಚೆನ್ನಾಗಿರತ್ತೆ, ಭರಾಟೆ ಚಿತ್ರದ ಹೀರೋಯಿನ್ ತುಂಬ ಮುದ್ದಾಗಿದ್ದಾರೆ ಅಂತ ಕೇಳಿದ್ದೆ, ನೋಡೋಣ ಅಂದುಕೊಂಡ್ರೆ ಎಲ್ಲೂ ಕಾಣಿಸ್ತಾನೇ ಇಲ್ಲ" ಎಂದಿದ್ದಾರೆ ಡಾಲಿ ಧನಂಜಯ್

'ಕಿಸ್' ಕೊಡೋಕೆ ರೆಡಿಯಾದ ಸ್ಯಾಂಡಲ್‌ವುಡ್ ಹೀರೋಯಿನ್ ಶ್ರೀಲೀಲಾ

"ನಮ್ಮೆಲ್ಲರನ್ನು ಸೇರಿಸಿ ಭರಾಟೆ-2 ಮಾಡಿ ಚೇತನ್. ನಮಗೆ ಕಲಾವಿದರಿಗೆ ಯಾವ ರೀತಿಯಲ್ಲೂ ಬೇಧ-ಭಾವ ಇಲ್ಲ. ನಮಗ್ಯಾರಿಗೂ ಆ ಸಿನಿಮಾ ಮಾಡಬಾರದು, ಈ ಸಿನಿಮಾ ಮಾಡಬಾರದು, ಆ ಪಾತ್ರ ಮಾಡಬಾರದು, ಈ ಪಾತ್ರ ಮಾಡಬಾರದು ಅಂತಿಲ್ಲ. ಕಲಾವಿದನಿಗೆ ಯಾವುದೇ ಅಹಂಕಾರ ಇರೋದಿಲ್ಲ. ಇಂಥ ಮೇಕಿಂಗ್ ನೋಡಿದಮೇಲೆ ನಮಗೂ ಈ ರೀತಿಯ ಸಿನಿಮಾ ಮಾಡಬೇಕು ಅನಿಸುತ್ತೆ. ಮುರಳಿಯವರು ಈ ಸಿನಿಮಾದಲ್ಲಿ ಇರೋದರಿಂದ ನರಸಿಂಹ ನಿಜಕ್ಕೂ ಇಲ್ಲಿ ತಾಂಡವ ಆಡಿದ್ದಾನೆ, ಈ ಸಿನಿಮಾದಲ್ಲಿ ಲಕ್ಷ್ಮೀ ನರಸಿಂಹ ಒಟ್ಟಿಗೆ ಬರತ್ತೆ" ಎಂದಿದ್ದಾರೆ ದುನಿಯಾ ವಿಜಯ್.

'ಭರಾಟೆ' ಸಿನಿಮಾದ ಆ್ಯಕ್ಷನ್ ಟೀಸರ್ ರಿಲೀಸ್ ಕಾರ್ಯಕ್ರಮಕ್ಕೆ ಆಗಮಿಸಿದ್ದ 'ಭರಾಟೆ' ಬಗ್ಗೆ ಮಾತನಾಡಿದ್ದಾರೆ. ಧನಂಜಯ್ ತಮ್ಮ ಹಾಸ್ಯಪ್ರಜ್ಞೆಯಿಂದ ಪ್ರೇಕ್ಷಕರ ಮುಖದಲ್ಲಿ ನಗು ತರಿಸಿದ್ದಾರೆ, ಭರಾಟೆ ಹೀರೋಯಿನ್ ಬಗ್ಗೆಯೂ ಮಾತನಾಡಿದ್ದಾರೆ ಡಾಲಿ. ಏನದು?

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌