ಆ್ಯಪ್ನಗರ

6 ಕೋಟಿ ಸಂಭಾವನೆ ಸಿಕ್ಕ ನಂತರ ನಾನೇ ಘೋಷಿಸುವೆ: ಧ್ರುವಾ

ಭರ್ಜರಿ ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಿ ದಾಖಲೆ ಬರೆಯುತ್ತಿದ್ದಂತೆಯೇ ಧ್ರುವ ಸರ್ಜಾರ ಸಂಭಾವನೆ ಬಗ್ಗೆ ಮತ್ತೆ ಬಿಸಿ ಬಿಸಿ ಚರ್ಚೆ ಶುರುವಾಗಿದೆ. ಇವರು ಬರೋಬ್ಬರಿ ಆರು ಕೋಟಿ ರೂಪಾಯಿ ಸಂಭಾವನೆ ಕೇಳುತ್ತಾರೆಂಬ ಮಾತು ಹರಿದಾಡುತ್ತಿದೆ. ಈ ಕುರಿತು ಲವಲವಿಕೆಯ ಜತೆ ಧ್ರುವ ಮಾತನಾಡಿದ್ದಾರೆ.

Vijaya Karnataka 10 Nov 2017, 5:00 am

- ಹರೀಶ್‌ ಬಸವರಾಜ್‌

Vijaya Karnataka Web dhruva sarja interview
6 ಕೋಟಿ ಸಂಭಾವನೆ ಸಿಕ್ಕ ನಂತರ ನಾನೇ ಘೋಷಿಸುವೆ: ಧ್ರುವಾ


ಭರ್ಜರಿ ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಿ ದಾಖಲೆ ಬರೆಯುತ್ತಿದ್ದಂತೆಯೇ ಧ್ರುವ ಸರ್ಜಾರ ಸಂಭಾವನೆ ಬಗ್ಗೆ ಮತ್ತೆ ಬಿಸಿ ಬಿಸಿ ಚರ್ಚೆ ಶುರುವಾಗಿದೆ. ಇವರು ಬರೋಬ್ಬರಿ ಆರು ಕೋಟಿ ರೂಪಾಯಿ ಸಂಭಾವನೆ ಕೇಳುತ್ತಾರೆಂಬ ಮಾತು ಹರಿದಾಡುತ್ತಿದೆ. ಈ ಕುರಿತು ಲವಲವಿಕೆಯ ಜತೆ ಧ್ರುವ ಮಾತನಾಡಿದ್ದಾರೆ.

*ಧ್ರುವ ಸರ್ಜಾ ಅವರ ಸಂಭಾವನೆ ಆರು ಕೋಟಿ ಆಗಿದೆಯಂತೆ?

ಅಷ್ಟು ಸಂಭಾನೆ ನನಗೆ ಸಿಕ್ಕ ತಕ್ಷಣವೇ ನಾನೇ ಎಲ್ಲರಿಗೂ ಹೇಳುತ್ತೇನೆ. ನಾನು ಈವರೆಗೂ ಮಾಡಿದ್ದು ಕೇವಲ ಮೂರೇ ಮೂರು ಸಿನಿಮಾ. ಆದರೆ, ದೊಡ್ಡ ಮಟ್ಟದಲ್ಲಿ ಚರ್ಚೆ ಆಗಿದ್ದು ಸಂಭಾವನೆಯ ವಿಚಾರದಲ್ಲಿ. ಅದು ಯಾಕೆ ಅಂತ ನನಗೂ ಗೊತ್ತಿಲ್ಲ. ಸಂಭಾವನೆ ಕುರಿತು ಮೊನ್ನೆಯಷ್ಟೇ ಮಾತನಾಡಿದ್ದೇನೆ. ಭರ್ಜರಿ ಚಿತ್ರಕ್ಕೆ ಅಷ್ಟು ಸಂಭಾವನೆ ತೆÜಗೆದುಕೊಂಡಿದ್ದೇನೆ, ಇಷ್ಟು ತೆಗೆದುಕೊಂಡಿದ್ದೇನೆ ಎಂದು ಸುದ್ದಿ ಆಗುತ್ತಲೇ ಇದೆ. ಈ ಚಿತ್ರಕ್ಕೆ ನಾನು ಎಷ್ಟು ಸಂಭಾವನೆ ಪಡೆದಿದ್ದೇನೆ ಅನ್ನುವುದು ನನಗೆ ಮತ್ತು ನಿರ್ಮಾಪಕರಿಗೆ ಮಾತ್ರ ಗೊತ್ತಿದೆ.

* ನಿಮ್ಮ ಮೊದಲ ಸಿನಿಮಾದಿಂದಲೂ ಸಂಭಾವನೆ ವಿಚಾರದಲ್ಲಿ ಯಾಕೆ ಇಷ್ಟೊಂದು ಚರ್ಚೆ ಆಗುತ್ತಿದೆ?

ನನಗೂ ಅದೇ ಅರ್ಥ ಆಗುತ್ತಿಲ್ಲ. ಒಂದಂತೂ ನಿಜ, ನನ್ನ ಬಗ್ಗೆ ಏನೇ ಚರ್ಚೆಯಾದರೂ, ನಾನು ಅದನ್ನು ಎಂಜಾಯ್‌ ಮಾಡುತ್ತೇನೆ ಮತ್ತು ಪಾಸಿಟಿವ್‌ ಆಗಿ ನೋಡುತ್ತೇನೆ. ಅಲ್ಲದೇ, ಸಂಭಾವನೆಯನ್ನೇ ಟಾರ್ಗೆಟ್‌ ಮಾಡಿಕೊಂಡು ನಾನು ಮುಂದಿನ ಸಿನಿಮಾದಲ್ಲಿ ನಟಿಸುತ್ತೇನೆ. ಆಗ ನನ್ನ ಕೆಲಸವೂ ಚೆನ್ನಾಗಿರುತ್ತದೆ. ನನ್ನ ಸಂಭಾವನೆ ಏನಾದರೂ ಹೆಚ್ಚಾಗಿದ್ದರೆ ಅದು ಸುದ್ದಿಗಳಿಂದ ಮಾತ್ರ.

*ನಿಮ್ಮ ಬಗ್ಗೆ ಸಕರಾತ್ಮಕಕ್ಕಿಂತ ನಕಾರಾತ್ಮಕ ಚರ್ಚೆಗಳೇ ಹೆಚ್ಚು ಆಗುತ್ತಿವೆಯಲ್ಲ?

ಈ ಬಗ್ಗೆ ನನಗೆ ಗೊತ್ತಿಲ್ಲ. ಇದೆಲ್ಲ ಒಳ್ಳೆಯದಕ್ಕೆ ಅಂತ ನಾನಂತೂ ಭಾವಿಸುತ್ತೇನೆ. ನನ್ನ ಬಗ್ಗೆ ಎಂತಹ ನೆಗೆಟಿವ್‌ ಸುದ್ದಿ ಬಂದರೂ ನಾನು ಅದನ್ನು ಸಕಾರಾತ್ಮಕವಾಗಿ ಸ್ವೀಕರಿಸುತ್ತನೆ. ಕೋಪ ಮತ್ತು ಸಂತೋಷಗಳನ್ನು ಸಮರೀತಿಯಲ್ಲಿ ಬಿಂಬಿಸಿದರೆ ನಮಗೆ ಒಳ್ಳೆಯದು .

*ಭರ್ಜರಿ ಐವತ್ತು ದಿನ ಪೂರೈಸಿದೆ. ನಿಮ್ಮ ನಾಲ್ಕನೆಯ ಚಿತ್ರದ ಕತೆಯೇನು?

ನನ್ನ ನಾಲ್ಕನೆಯ ಚಿತ್ರ ಪೊಗರು. ಇದು ಅಪ್ಪಟ ಸ್ವಮೇಕ್‌ ಸಿನಿಮಾ. ಕತೆಯ ಬಗ್ಗೆ ಈಗಲೇ ನಾನು ಹೇಳುವುದು ಕಷ್ಟ. ನಮ್ಮದೇ ಮಣ್ಣಿನ ಸೊಗಡಿನ ಕತೆ ಸಿನಿಮಾದಲ್ಲಿ ಇರಲಿದೆ.

*ನಿಮ್ಮ ಶಕ್ತಿ ಯಾವುದು? ನಟನೆನಾ ಅಥವಾ ಡಾನ್ಸ್‌, ಫೈಟ್‌?

ನನ್ನ ದೊಡ್ಡ ಶಕ್ತಿ ನನ್ನ ನಿರ್ದೇಶಕರು. ಇದುವರೆಗೂ ನನ್ನ ಮೂರು ಚಿತ್ರಗಳು ಗೆಲ್ಲಲು ಮುಖ್ಯ ಕಾರಣವೇ ಅವರು. ಕತೆ, ಚಿತ್ರಕತೆ ಮತ್ತು ನಿರ್ದೇಶನದ ಶೈಲಿಯಿಂದಾಗಿ ನನಗೆ ಗೆಲುವು ಸಿಕ್ಕಿದೆ.

* ನಿಮ್ಮ ಸಹೋದರ ಚಿರಂಜೀವಿ ಸರ್ಜಾ ಅವರ ನಿರ್ಮಾಣದ ಸಿನಿಮಾದಲ್ಲಿ ನಟಿಸುತ್ತಿದ್ದೀರಾ?

ಸದ್ಯಕ್ಕಿಲ್ಲ. ಮುಂದೊಂದು ದಿನ ನಟಿಸುತ್ತೇನೆ. ನಿರ್ಮಾಪಕರಾದ ಗಂಗಾಧರ್‌ ಮತ್ತು ಉದಯ್‌ ಮೆಹ್ತಾ ಅವರಿಗೆ ಈಗ ಡೇಟ್ಸ್‌ ಕೊಟ್ಟಿದ್ದೇನೆ. ನಂತರ ಮಾವ ಅರ್ಜುನ್‌ ಸರ್ಜಾ ಅವರ ಬ್ಯಾನರ್‌ನಲ್ಲಿ ನಟಿಸಲಿದ್ದೇನೆ.

*ಯಶಸ್ವಿ ಸಿನಿಮಾಗಳನ್ನು ಕೊಟ್ಟಿದ್ದರೂ, ನಿಮ್ಮ ನಡೆ ನುಡಿ, ಬಟ್ಟೆ, ಕಾರು ಯಾವುದೂ ಬದಲಾಗಿಲ್ಲ?

ನನಗೆ ಅದಾವುದರ ಶೋಕಿ ಇಲ್ಲ. ಒಳ್ಳೊಳ್ಳೆ ಬಟ್ಟೆಗಳ ಮೂಲಕ ನನ್ನನ್ನು ಗುರುತಿಸಬಾರದು. ನನ್ನ ಕೆಲಸದಿಂದ ಜನರು ನನ್ನನ್ನು ಗುರುತಿಸಬೇಕು. ನಾನು ನನ್ನ ತರಹ ಇರಲು ಬಯಸುತ್ತೇನೆ.

--------

'ಸದಾ ನಾನು ಸಂಭಾವನೆ ವಿಚಾರದಲ್ಲಿ ಸುದ್ದಿ ಆಗುತ್ತಿದ್ದೇನೆ. ನಾನು ಆರು ಕೋಟಿ ಪಡೆಯುತ್ತೇನೆಂದು ಹೇಳುತ್ತಿದ್ದಾರೆ. ಭರ್ಜರಿ ಚಿತ್ರಕ್ಕೆ ನಾನು ಇದರ ಅರ್ಧದಷ್ಟು ಹಣ ಪಡೆದಿಲ್ಲ. ಅವರೇ ನನಗೆ ಟಾರ್ಗೆಟ್‌ ನೀಡಿ ಕೆಲಸ ಮಾಡುವ ಶಕ್ತಿ ಹೆಚ್ಚಿಸುತ್ತಿದ್ದಾರೆ.'

-ಧ್ರುವ ಸರ್ಜಾ, ನಟ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌