ಆ್ಯಪ್ನಗರ

ನಾಗ ಚೈತನ್ಯರಿಂದ ದೂರಾದ ಬಳಿಕ ಸಮಂತಾ ಬಗ್ಗೆ ಕೇಳಿಬಂದಿದೆ ಮತ್ತೊಂದು ಗುಸುಗುಸು!

ನಾಗ ಚೈತನ್ಯ ಅವರಿಂದ ದೂರಾದ ಬಳಿಕ ನಟಿ ಸಮಂತಾ ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ. ನಟಿ ಸಮಂತಾ ಕುರಿತಾಗಿ ಮತ್ತೆ ಗುಸುಗುಸು ಕೇಳಿಬಂದಿದೆ. ಪತಿಯಿಂದ ಬೇರ್ಪಟ್ಟ ಬಳಿಕ ತಮ್ಮ ಮದುವೆಯ ಸೀರೆಯನ್ನು ನಾಗ ಚೈತನ್ಯ ಅವರಿಗೆ ಸಮಂತಾ ಹಿಂದಿರುಗಿಸಿದ್ದಾರೆ ಎನ್ನಲಾಗಿದೆ.

Authored byಹರ್ಷಿತಾ ಎನ್ | Vijaya Karnataka Web 9 Mar 2022, 10:31 pm

ಹೈಲೈಟ್ಸ್‌:

  • ಬೇರೆ ಬೇರೆಯಾದ ನಾಗ ಚೈತನ್ಯ - ಸಮಂತಾ
  • ಪತಿಯಿಂದ ಬೇರ್ಪಟ್ಟ ಬಳಿಕ ತಮ್ಮ ಮದುವೆಯ ಸೀರೆಯನ್ನು ಹಿಂದಿರುಗಿಸಿದ ಸಮಂತಾ?
  • ಮದುವೆಯಲ್ಲಿ ನಾಗ ಚೈತನ್ಯ ಅವರ ಅಜ್ಜಿಯ ಸೀರೆಯನ್ನುಟ್ಟಿದ್ದ ಸಮಂತಾ

ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web did samantha ruth prabhu return her wedding saree to naga chaitanya
ನಾಗ ಚೈತನ್ಯರಿಂದ ದೂರಾದ ಬಳಿಕ ಸಮಂತಾ ಬಗ್ಗೆ ಕೇಳಿಬಂದಿದೆ ಮತ್ತೊಂದು ಗುಸುಗುಸು!
2017ರಲ್ಲಿ ಗೋವಾದಲ್ಲಿ ಟಾಲಿವುಡ್ ನಟ ನಾಗ ಚೈತನ್ಯ ಹಾಗೂ ನಟಿ ಸಮಂತಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಪ್ರೀತಿಸಿ, ಮದುವೆಯಾದ ಈ ಜೋಡಿ ಮಧ್ಯೆ ಅದೇನಾಯ್ತೋ, ಏನೋ.. ಕಳೆದ ವರ್ಷ ಇಬ್ಬರು ಬೇರೆ ಬೇರೆಯಾದರು. ಕಳೆದ ಅಕ್ಟೋಬರ್ 2ರಂದು ತಾವು ದೂರಾಗುತ್ತಿರುವ ಸಂಗತಿಯನ್ನು ನಟಿ ಸಮಂತಾ ಹಾಗೂ ನಾಗ ಚೈತನ್ಯ ಸಾಮಾಜಿಕ ಜಾಲತಾಣಗಳ ಮೂಲಕ ಬಹಿರಂಗ ಪಡಿಸಿದ್ದರು. ನಾಗ ಚೈತನ್ಯ ಮತ್ತು ಸಮಂತಾ ಬೇರೆ ಬೇರೆಯಾಗಿದ್ದು, ಅಭಿಮಾನಿಗಳಿಗೆ ಆಘಾತ ತರಿಸಿತ್ತು.
ನಾಗ ಚೈತನ್ಯ ಅವರಿಂದ ದೂರಾದ ಬಳಿಕ ನಟಿ ಸಮಂತಾ ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ. ನಟಿ ಸಮಂತಾ ಕುರಿತಾಗಿ ಮತ್ತೆ ಗುಸುಗುಸು ಕೇಳಿಬಂದಿದೆ. ಪತಿಯಿಂದ ಬೇರ್ಪಟ್ಟ ಬಳಿಕ ತಮ್ಮ ಮದುವೆಯ ಸೀರೆಯನ್ನು ನಾಗ ಚೈತನ್ಯ ಅವರಿಗೆ ಸಮಂತಾ ಹಿಂದಿರುಗಿಸಿದ್ದಾರೆ ಎನ್ನಲಾಗಿದೆ.

ಮತ್ತೆ ಒಂದಾಗಲಿದ್ದಾರಾ ಸಮಂತಾ, ನಾಗ ಚೈತನ್ಯ? ಅನುಮಾನ ಮೂಡಿಸಿದ ನಟಿಯ ನಡೆ
ನಾಗ ಚೈತನ್ಯ ಅವರ ಅಜ್ಜಿಯ ಸೀರೆ
ವರದಿಗಳ ಪ್ರಕಾರ, ತಮ್ಮ ಮದುವೆಯ ಧಾರೆ ಸಂದರ್ಭದಲ್ಲಿ ವಧು ಸಮಂತಾ, ನಾಗ ಚೈತನ್ಯ ಅವರ ಅಜ್ಜಿಯ ಸೀರೆಯುಟ್ಟಿದ್ದರು. ಇದೀಗ ಅದೇ ಸೀರೆಯನ್ನ ನಾಗ ಚೈತನ್ಯ ಅವರಿಗೆ ಸಮಂತಾ ಹಿಂದಿರುಗಿಸಿದ್ದಾರಂತೆ. ನಾಗ ಚೈತನ್ಯ ಮತ್ತವರ ಕುಟುಂಬಕ್ಕೆ ಸೇರಿದ ಯಾವುದನ್ನೂ ಇಟ್ಟುಕೊಳ್ಳಲು ಸಮಂತಾಗೆ ಇಷ್ಟವಿರಲಿಲ್ಲ. ಹೀಗಾಗಿ, ಸೀರೆಯನ್ನು ಸಮಂತಾ ವಾಪಸ್ ಮಾಡಿದ್ದಾರಂತೆ.

ನಟ ನಾಗಚೈತನ್ಯರ ಹಳೆ ವಿಡಿಯೋ ವೈರಲ್; ಸಮಂತಾರಿಗೆ ವಿಚ್ಛೇದನ ನೀಡಲು ಆ ವಿಷಯವೇ ಕಾರಣ ಆಯ್ತಾ?
ಕುಟುಂಬಕ್ಕೆ ಹೆಮ್ಮೆ
ನಾಗ ಚೈತನ್ಯ ಅವರ ಅಜ್ಜಿ ಸೀರೆಗೆ ಹೊಸ ಮೆರುಗನ್ನು ನೀಡಿ, ಅದನ್ನ ತಮ್ಮ ಮದುವೆಯಲ್ಲಿ ಸಮಂತಾ ಧರಿಸಿದ್ದರು. ಸಮಂತಾ ಅವರ ಫ್ರೆಂಡ್ ಕ್ರೇಶಾ ಬಜಾಜ್ ಸೀರೆಗೆ ಫೈನಲ್ ಟಚ್ ಕೊಟ್ಟಿದ್ದರು. ಮದುವೆಯ ಧಾರೆ ಸಂದರ್ಭದಲ್ಲಿ ಸಮಂತಾ ಆ ಸೀರೆಯುಟ್ಟಿದ್ದು, ನಾಗ ಚೈತನ್ಯ ಕುಟುಂಬಕ್ಕೆ ಹೆಮ್ಮೆ ಹಾಗೂ ಸಂತಸ ಮೂಡಿಸಿತ್ತು.

ಸಮಂತಾರಿಂದ ದೂರಾದ ನಾಗ ಚೈತನ್ಯ ಬೇರೆ ಮನೆ ಖರೀದಿಸಿದ್ದಾರಂತೆ! ಹೌದಾ?
ದೂರಾಗುತ್ತಿರುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಘೋಷಿಸಿದ ಸಮಂತಾ - ನಾಗ ಚೈತನ್ಯ
‘’ಹೆಚ್ಚು ಆಲೋಚನೆ ಮಾಡಿದ ನಂತರ ನಾವು ದೂರಾಗಲು ನಿರ್ಧರಿಸಿದ್ದೇವೆ. ಗಂಡ ಮತ್ತು ಹೆಂಡತಿಯಾಗಿದ್ದ ನಾವು ಈಗ ನಮ್ಮದೇ ಮಾರ್ಗಗಳನ್ನು ಅನುಸರಿಸಲು ನಿರ್ಧರಿಸಿದ್ದೇವೆ. ಸ್ನೇಹವೇ ನಮ್ಮ ಸಂಬಂಧದ ಹೂರಣ. ಒಂದು ದಶಕದಿಂದ ನಾವಿಬ್ಬರು ಸ್ನೇಹಿತರಾಗಿದ್ದದ್ದು ನಮ್ಮ ಅದೃಷ್ಟ. ಈ ಕಷ್ಟದ ಪರಿಸ್ಥಿತಿಯಲ್ಲಿ ನಮಗೆ ಸಪೋರ್ಟ್ ಮಾಡಿ ಹಾಗೂ ನಮ್ಮ ವೈಯಕ್ತಿಕ ಬದುಕನ್ನ ಗೌರವಿಸಲು ಅಭಿಮಾನಿಗಳು, ಹಿತೈಷಿಗಳು ಹಾಗೂ ಮಾಧ್ಯಮಗಳಿಗೆ ಈ ಮೂಲಕ ಮನವಿ ಮಾಡುತ್ತಿದ್ದೇವೆ. ನಿಮ್ಮೆಲ್ಲರ ಬೆಂಬಲಕ್ಕೆ ಧನ್ಯವಾದಗಳು’’ ಎಂದು ನಾಗ ಚೈತನ್ಯ ಹಾಗೂ ನಟಿ ಸಮಂತಾ ಸಾಮಾಜಿಕ ಜಾಲತಾಣಗಳಲ್ಲಿ ಅಕ್ಟೋಬರ್ 2 ರಂದು ಪೋಸ್ಟ್ ಮಾಡಿದ್ದರು.

ಐಷಾರಾಮಿ ಹೋಟೆಲ್‌ನಲ್ಲಿ ನಾಗ ಚೈತನ್ಯ ವಾಸ
ಸಮಂತಾ ರುತ್‌ ಪ್ರಭು ಅವರಿಂದ ದೂರವಾದ ಬಳಿಕ ನಾಗ ಚೈತನ್ಯ ಅವರು ತಮ್ಮ ತಂದೆಯ ಮನೆಗೆ ಹೋಗಿರಲಿಲ್ಲ. ಒಂದು ತಿಂಗಳಿಗೂ ಹೆಚ್ಚು ಕಾಲ ನಾಗ ಚೈತನ್ಯ ಹೈದರಾಬಾದ್‌ನ ಐಷಾರಾಮಿ ಹೋಟೆಲ್‌ವೊಂದರಲ್ಲಿ ವಾಸ್ತವ್ಯ ಹೂಡಿದ್ದರು ಎನ್ನಲಾಗಿತ್ತು.
ಲೇಖಕರ ಬಗ್ಗೆ
ಹರ್ಷಿತಾ ಎನ್
ವಿಜಯ ಕರ್ನಾಟಕ ಆನ್‌ಲೈನ್‌ನಲ್ಲಿ 2021ರ ಮಾರ್ಚ್‌ನಿಂದ ಕಾರ್ಯನಿರ್ವಹಿಸುತ್ತಿದ್ದಾರೆ. 2011ರಿಂದ ಮಾಧ್ಯಮ ರಂಗದಲ್ಲಿ ಸಕ್ರಿಯರಾಗಿದ್ದಾರೆ. ಕನ್ನಡ ಸುದ್ದಿ ವಾಹಿನಿಗಳು ಹಾಗೂ ಡಿಜಿಟಲ್ ಮೀಡಿಯಾಗಳಲ್ಲಿ ಸಿನಿಮಾ ವರದಿಗಾರ್ತಿಯಾಗಿ ಕೆಲಸ ಮಾಡಿದ ಅನುಭವ ಇವರಿಗೆ ಇದೆ. ಸಿನಿಮಾ ವರದಿಗಾರಿಕೆ ಇವರ ಪ್ರಮುಖ ಆಸಕ್ತಿ ವಿಭಾಗ.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌