*ಶರಣು ಹುಲ್ಲೂರು
ಏಳೇ ಏಳು ಪಾತ್ರಗಳನ್ನಿಟ್ಟುಕೊಂಡು ಸುಂದರವಾದ ಸಿನಿಮಾ ಮಾಡಿದ್ದಾರೆ ನಿರ್ದೇಶಕ ಸೆನ್ನಾ ಹೆಗಡೆ. 'ಕಥೆಯೊಂದು ಶುರುವಾಗಿದೆ' ಹೆಸರಿನಲ್ಲಿ ಮೂಡಿ ಬಂದಿರುವ ಈ ಚಿತ್ರಕ್ಕೆ ದಿಗಂತ್ ನಾಯಕ. ತಮಿಳಿನ ಖ್ಯಾತ ನಟಿ ಪೂಜಾ ದೇವರಿಯಾ ನಾಯಕಿ. ಮೂವತ್ತರ ಹರೆಯದ ಯುವಕನ ಜೀವನ ಕಥನವನ್ನು ಈ ಚಿತ್ರದಲ್ಲಿ ಹೇಳಲು ಹೊರಟಿದ್ದಾರೆ ನಿರ್ದೇಶಕರು. ಈ ಹೊತ್ತಿನ ಹಲವು ಯುವಕರ ಜೀವನಕ್ಕೂ ಚಿತ್ರ ಹೋಲಿಕೆ ಆಗಲಿದೆ ಎನ್ನುವುದು ವಿಶೇಷ. 'ಅವನು ಮೂವತ್ತರ ಆಸುಪಾಸಿನ ಹುಡುಗ. ಅವನ ಬದುಕಿಗೆ ಏಕಾಂತವನ್ನು ಅರಸಿ ಬರುವ ಹುಡುಗಿಯ ಆಗಮನವಾಗುತ್ತದೆ. ಅಲ್ಲಿಂದ ಆ ಯುವಕನ ಲೈಫ್ ನಾನಾ ತಿರುವುಗಳನ್ನು ಪಡೆದುಕೊಳ್ಳುತ್ತದೆ. ಆ ತಿರುವುಗಳನ್ನು ಅವನು ಹೇಗೆ ನಿಭಾಯಿಸುತ್ತಾನೆ ಎಂಬ ರೋಚಕ ಕಥೆ ಇಲ್ಲಿದೆ' ಅಂತಾರೆ ನಿರ್ದೇಶಕರು.
ಇದೇ ಮೊದಲ ಬಾರಿಗೆ ದಿಗಂತ್ ರೆಸಾರ್ಟ್ ಮಾಲೀಕನಾಗಿ ನಟಿಸಿದ್ದಾರೆ. 'ನಾನು ಈವರೆಗೂ ಮಾಡದೇ ಇರುವಂಥ ಪಾತ್ರವನ್ನು ಮಾಡಿದ್ದೇನೆ. ಕಥೆಯೇ ಒಂದು ರೀತಿಯಲ್ಲಿ ಕಲರ್ಫುಲ್ ಆಗಿದೆ. ಹುಡುಗರ ಅನೇಕ ಭಾವನೆಗಳನ್ನು ನನ್ನ ಪಾತ್ರದ ಮೂಲಕ ಹೇಳಿದ್ದರಿಂದ ಬೇಗನೇ ಯೂತ್ಸ್ಗೆ ಪಾತ್ರ ಕನೆಕ್ಟ್ ಆಗಲಿದೆ' ಎಂದು ಹೇಳುತ್ತಾರೆ ದಿಗಂತ್.
ಸುಂದರ ಸ್ಥಳಗಳನ್ನೇ ಶೂಟಿಂಗ್ಗಾಗಿ ಆಯ್ಕೆ ಮಾಡಿಕೊಂಡಿದ್ದಾರಂತೆ ನಿರ್ದೇಶಕರು. ಪುದುಚೆರಿ ಮತ್ತು ಕಾರವಾರ ಬೀಚ್ಗಳಲ್ಲಿ ಚಿತ್ರೀಕರಣ ಮಾಡಿದ್ದಾರೆ. ಸಮುದ್ರ ತೀರದ ಪಯಣ ನೋಡುಗರಿಗೆ ಮತ್ತಷ್ಟು ಆಸಕ್ತಿಯನ್ನು ಕೆರಳಿಸಲಿದೆಯಂತೆ. ಮೊನ್ನೆಯಷ್ಟೇ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಕ್ರಿಯೇಟ್ ಮಾಡಿದೆ.
ಒಂದು ಮೊಟ್ಟೆಯ ಕಥೆ ಖ್ಯಾತಿಯ ಶ್ರೇಯಾ, ಬಾಬು ಹಿರಣ್ಣಯ್ಯ, ಅರುಣಾ ಬಾಲರಾಜ್, ಅಶ್ವಿನಿ, ಪ್ರಕಾಶ್ ಹೀಗೆ ಹೆಸರಾಂತ ಕಲಾವಿದರೇ ಪಾತ್ರ ಮಾಡಿದ್ದಾರೆ. ರಕ್ಷಿತ್ ಶೆಟ್ಟಿ ಮತ್ತು ಪುಷ್ಕರ್ ಮಲ್ಲಿಕಾರ್ಜುನ್ ಜಂಟಿಯಾಗಿ ನಿರ್ಮಾಣ ಮಾಡಿರುವ ಚಿತ್ರ ಇದಾಗಿದೆ.
ಏಳೇ ಏಳು ಪಾತ್ರಗಳನ್ನಿಟ್ಟುಕೊಂಡು ಸುಂದರವಾದ ಸಿನಿಮಾ ಮಾಡಿದ್ದಾರೆ ನಿರ್ದೇಶಕ ಸೆನ್ನಾ ಹೆಗಡೆ. 'ಕಥೆಯೊಂದು ಶುರುವಾಗಿದೆ' ಹೆಸರಿನಲ್ಲಿ ಮೂಡಿ ಬಂದಿರುವ ಈ ಚಿತ್ರಕ್ಕೆ ದಿಗಂತ್ ನಾಯಕ. ತಮಿಳಿನ ಖ್ಯಾತ ನಟಿ ಪೂಜಾ ದೇವರಿಯಾ ನಾಯಕಿ. ಮೂವತ್ತರ ಹರೆಯದ ಯುವಕನ ಜೀವನ ಕಥನವನ್ನು ಈ ಚಿತ್ರದಲ್ಲಿ ಹೇಳಲು ಹೊರಟಿದ್ದಾರೆ ನಿರ್ದೇಶಕರು. ಈ ಹೊತ್ತಿನ ಹಲವು ಯುವಕರ ಜೀವನಕ್ಕೂ ಚಿತ್ರ ಹೋಲಿಕೆ ಆಗಲಿದೆ ಎನ್ನುವುದು ವಿಶೇಷ. 'ಅವನು ಮೂವತ್ತರ ಆಸುಪಾಸಿನ ಹುಡುಗ. ಅವನ ಬದುಕಿಗೆ ಏಕಾಂತವನ್ನು ಅರಸಿ ಬರುವ ಹುಡುಗಿಯ ಆಗಮನವಾಗುತ್ತದೆ. ಅಲ್ಲಿಂದ ಆ ಯುವಕನ ಲೈಫ್ ನಾನಾ ತಿರುವುಗಳನ್ನು ಪಡೆದುಕೊಳ್ಳುತ್ತದೆ. ಆ ತಿರುವುಗಳನ್ನು ಅವನು ಹೇಗೆ ನಿಭಾಯಿಸುತ್ತಾನೆ ಎಂಬ ರೋಚಕ ಕಥೆ ಇಲ್ಲಿದೆ' ಅಂತಾರೆ ನಿರ್ದೇಶಕರು.
ಇದೇ ಮೊದಲ ಬಾರಿಗೆ ದಿಗಂತ್ ರೆಸಾರ್ಟ್ ಮಾಲೀಕನಾಗಿ ನಟಿಸಿದ್ದಾರೆ. 'ನಾನು ಈವರೆಗೂ ಮಾಡದೇ ಇರುವಂಥ ಪಾತ್ರವನ್ನು ಮಾಡಿದ್ದೇನೆ. ಕಥೆಯೇ ಒಂದು ರೀತಿಯಲ್ಲಿ ಕಲರ್ಫುಲ್ ಆಗಿದೆ. ಹುಡುಗರ ಅನೇಕ ಭಾವನೆಗಳನ್ನು ನನ್ನ ಪಾತ್ರದ ಮೂಲಕ ಹೇಳಿದ್ದರಿಂದ ಬೇಗನೇ ಯೂತ್ಸ್ಗೆ ಪಾತ್ರ ಕನೆಕ್ಟ್ ಆಗಲಿದೆ' ಎಂದು ಹೇಳುತ್ತಾರೆ ದಿಗಂತ್.
ಸುಂದರ ಸ್ಥಳಗಳನ್ನೇ ಶೂಟಿಂಗ್ಗಾಗಿ ಆಯ್ಕೆ ಮಾಡಿಕೊಂಡಿದ್ದಾರಂತೆ ನಿರ್ದೇಶಕರು. ಪುದುಚೆರಿ ಮತ್ತು ಕಾರವಾರ ಬೀಚ್ಗಳಲ್ಲಿ ಚಿತ್ರೀಕರಣ ಮಾಡಿದ್ದಾರೆ. ಸಮುದ್ರ ತೀರದ ಪಯಣ ನೋಡುಗರಿಗೆ ಮತ್ತಷ್ಟು ಆಸಕ್ತಿಯನ್ನು ಕೆರಳಿಸಲಿದೆಯಂತೆ. ಮೊನ್ನೆಯಷ್ಟೇ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಕ್ರಿಯೇಟ್ ಮಾಡಿದೆ.
ಒಂದು ಮೊಟ್ಟೆಯ ಕಥೆ ಖ್ಯಾತಿಯ ಶ್ರೇಯಾ, ಬಾಬು ಹಿರಣ್ಣಯ್ಯ, ಅರುಣಾ ಬಾಲರಾಜ್, ಅಶ್ವಿನಿ, ಪ್ರಕಾಶ್ ಹೀಗೆ ಹೆಸರಾಂತ ಕಲಾವಿದರೇ ಪಾತ್ರ ಮಾಡಿದ್ದಾರೆ. ರಕ್ಷಿತ್ ಶೆಟ್ಟಿ ಮತ್ತು ಪುಷ್ಕರ್ ಮಲ್ಲಿಕಾರ್ಜುನ್ ಜಂಟಿಯಾಗಿ ನಿರ್ಮಾಣ ಮಾಡಿರುವ ಚಿತ್ರ ಇದಾಗಿದೆ.
ಈ ಹೊತ್ತಿನ ಯೂತ್ಸ್ ಮನಸ್ಥಿತಿಯನ್ನು ಪ್ರತಿನಿಧಿಸುವಂಥ ಪಾತ್ರವನ್ನು ನಾನು ಕಥೆಯೊಂದು ಶುರುವಾಗಿದೆ ಚಿತ್ರದಲ್ಲಿ ಮಾಡಿದ್ದೇನೆ. ಇಡೀ ಸಿನಿಮಾವನ್ನು ಕಲರ್ಫುಲ್ ಆಗಿ ಶೂಟ್ ಮಾಡಿದ್ದಾರೆ ನಿರ್ದೇಶಕರು. ಇದೊಂದು ಫ್ರೆಶ್ ಆಗಿರುವಂಥ ಸಿನಿಮಾ.