ಆ್ಯಪ್ನಗರ

ನಿಖಿಲ್‌ ಸಿನಿಮಾ - ಚೇತನ್‌ ನಿರ್ಗಮನ

ನಿಖಿಲ್‌ ಕುಮಾರ್‌ ಅಭಿನಯದ ಎರಡನೇ ಸಿನಿಮಾವನ್ನು ಬಹದ್ದೂರ್‌ ಖ್ಯಾತಿಯ ಚೇತನ್‌ ಕುಮಾರ್‌ ನಿರ್ದೇಶನ ಮಾಡುತ್ತಿಲ್ಲ ಅದಕ್ಕೆ ಕಾರಣವೇನು ಎಂಬುದರ ಮಾಹಿತಿ ಇಲ್ಲಿದೆ...

Vijaya Karnataka Web 7 Jun 2017, 10:44 am

- ಹರೀಶ್‌ ಬಸವರಾಜ್‌

ನಿಖಿಲ್‌ ಕುಮಾರ್‌ ಅಭಿನಯದ ಎರಡನೇ ಸಿನಿಮಾವನ್ನು ಬಹದ್ದೂರ್‌ ಖ್ಯಾತಿಯ ಚೇತನ್‌ ಕುಮಾರ್‌ ನಿರ್ದೇಶನ ಮಾಡುತ್ತಿಲ್ಲ. ಅದಕ್ಕೆ ಕಾರಣವೇನು ಎಂಬುದರ ಮಾಹಿತಿ ಇಲ್ಲಿದೆ.

ಜಾಗ್ವಾರ್‌ ಸಿನಿಮಾದ ನಂತರ ಬಹು ನಿರೀಕ್ಷೆಯಿಂದ ಆರಂಭಿಸಿದ್ದ ನಿಖಿಲ್‌ ಕುಮಾರ್‌ ಅವರ ಹೊಸ ಸಿನಿಮಾಕ್ಕೆ ಒಂದಲ್ಲ ಒಂದು ಸಂಕಟಗಳು ಎದುರಾಗುತ್ತಿವೆ. ಈಗ ನಿರ್ದೇಶಕನ ಜಾಗದಿಂದ ಚೇತನ್‌ ಕುಮಾರ್‌ ಹಿಂದೆ ಸರಿದಿದ್ದು, ಚಿತ್ರತಂಡ ಹೊಸ ನಿರ್ದೇಶಕರನ್ನು ಹುಡುಕುತ್ತಿದೆ.

ಈ ಮೊದಲು ಸಿನಿಮಾಗೆ ಹೊಯ್ಸಳ ಎಂಬ ಟೈಟಲ್‌ ಇಡಲು ಯೋಚಿಸಲಾಗಿತ್ತು. ಆದರೆ ನಿರ್ಮಾಪಕ ರಾಮು ಅದನ್ನು ಕೊಡುವುದಿಲ್ಲ ಎಂದಿದ್ದರು. ಈಗ ನಿರ್ದೇಶಕರ ನಿರ್ಗಮನ.

ಈ ಸಿನಿಮಾಕ್ಕೆ ಕಳೆದ ತಿಂಗಳು ಖಾಸಗಿ ಹೋಟೆಲ್‌ನಲ್ಲಿ ಮುಹೂರ್ತ ಮಾಡಲಾಗಿತ್ತು. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಈಗಾಗಲೇ ಶೂಟಿಂಗ್‌ ಆರಂಭವಾಗಬೇಕಿತ್ತು. ನಾಯಕಿಯನ್ನು ಸಹ ಆಯ್ಕೆ ಮಾಡಲಾಗಿತ್ತು. ಆದರೆ ಚೇತನ್‌ ಕುಮಾರ್‌ ನಿರ್ದೇಶನ ಮಾಡುವುದರಿಂದ ಹಿಂದೆ ಸರಿದ ಕಾರಣ ಶೂಟಿಂಗ್‌ ನನೆಗುದಿಗೆ ಬಿದ್ದಿದೆ.

ಮುಹೂರ್ತದ ದಿನ ಖುಷಿಯಿಂದಲೇ ಓಡಾಡಿಕೊಂಡಿದ್ದ ಚೇತನ್‌, ಇದ್ದಕ್ಕಿದ್ದ ಹಾಗೆ ಚಿತ್ರದಿಂದ ಹಿಂದೆ ಸರಿಯಲು ಕಾರಣವೇನು ಎಂದು ಅವರನ್ನು ಕೇಳಿದರೆ, 'ನಿಖಿಲ್‌ ಎರಡನೇ ಸಿನಿಮಾವನ್ನು ಬಹಳ ಸಂತೋಷದಿಂದ ಆರಂಭಿಸಿದ್ದೆ. ಅದಕ್ಕಾಗಿ ಈಗಾಗಲೇ ಸಂಭಾಷಣೆ ಮತ್ತು ಚಿತ್ರಕತೆ ಬರೆದಾಗಿದೆ.

Vijaya Karnataka Web director out from nikhil cinema
ನಿಖಿಲ್‌ ಸಿನಿಮಾ - ಚೇತನ್‌ ನಿರ್ಗಮನ


ಆದರೆ ನನ್ನ ಭರ್ಜರಿ ಚಿತ್ರದ ಕೆಲಸಗಳು ಇನ್ನೂ ಬಾಕಿ ಇರುವ ಕಾರಣ, ನಿರ್ದೇಶನ ಮಾಡಲು ಸಮಯ ಸಾಲುತ್ತಿಲ್ಲ. ಭರ್ಜರಿ ಸಿನಿಮಾದ ಕೆಲಸ ಇನ್ನೂ ಒಂದು ತಿಂಗಳು ಆಗಬೇಕಿದೆ. ಈಗ ನಾನು ನಿಖಿಲ್‌ ಸಿನಿಮಾ ಕೈಗೆತ್ತಿಕೊಂಡರೆ ಆ ಚಿತ್ರದ ಕೆಲಸಕ್ಕೆ ತೊಂದರೆಯಾಗುತ್ತದೆ. ಭರ್ಜರಿ ಸಿನಿಮಾಗಾಗಿ ಎರಡು ವರ್ಷ ಕಾಲ ವ್ಯಯ ಮಾಡಿದ್ದೇನೆ. ಹಾಗಾಗಿ ಅದನ್ನು ಪೂರ್ಣಗೊಳಿಸಿ ಬಿಡುಗಡೆ ಮಾಡಲೇಬೇಕು. ಇರುವ ವಿಚಾರವನ್ನು ಚಿತ್ರತಂಡಕ್ಕೆ ತಿಳಿಸಿದ್ದೇನೆ. ಅವರು ಸಹ ಮಾತುಕತೆಯಲ್ಲಿದ್ದು, ಇನ್ನೊಂದೆರೆಡು ದಿನಗಳಲ್ಲಿ ಹೊಸ ನಿರ್ದೇಶಕ ಯಾರು ಎಂಬುದನ್ನು ಅನೌನ್ಸ್‌ ಮಾಡುತ್ತಾರೆ' ಎಂಬ ಉತ್ತರ ಕೊಡುತ್ತಾರೆ.

ಅಂದಹಾಗೆ, ನಿಖಿಲ್‌ಗಾಗಿ ಚೇತನ್‌ ಮಾಡಿರುವ ಕತೆ ಚೆನ್ನಾಗಿರುವ ಕಾರಣ ಎಲ್ಲವನ್ನೂ ಹಾಗೆಯೇ ಉಳಿಸಿಕೊಳ್ಳಲಾಗಿದೆ.

ಭರ್ಜರಿ ಸಿನಿಮಾ ಪೋಸ್ಟ್‌ ಪ್ರೊಡಕ್ಷನ್‌ ಹಂತದಲ್ಲಿದ್ದು, ಅದು ಮುಗಿಯಲು ಎರಡು ತಿಂಗಳು ಹಿಡಿಯುತ್ತದೆ. ಆದರೆ ನಿಖಿಲ್‌ ಜೂನ್‌ನಲ್ಲಿ ಶೂಟಿಂಗ್‌ ಆರಂಭಿಸಲು ಪ್ಲಾನ್‌ ಮಾಡಿಕೊಂಡಿದ್ದರು. ಹಾಗಾಗಿ ನಾನು ಕಷ್ಟವಾಗುತ್ತದೆ ಎಂದು ಹೇಳಿದ್ದೇನೆ.

- ಚೇತನ್‌ ಕುಮಾರ್‌, ನಿರ್ದೇಶಕ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌