ಆ್ಯಪ್ನಗರ

ನಭಾ ನಟೇಶ್ ಮೈಮೇಲೆ ಬಿಯರ್ ಚೆಲ್ಲಿದ ರಾಮ್ ಗೋಪಾಲ್ ವರ್ಮಾ!

ಖ್ಯಾತ ನಿರ್ದೇಶಕ ಪೂರಿ ಜಗನ್ನಾಥ್ ಅವರು ನಟಿ ಚಾರ್ಮಿ ಕೌರ್ ಜೊತೆ ಸೇರಿ 'ಇಸ್ಮಾರ್ಟ್ ಶಂಕರ್' ಸಿನಿಮಾಕ್ಕೆ ಬಂಡವಾಳ ಸಹ ಹಾಕಿದ್ದಾರೆ. ಈ ಚಿತ್ರಕ್ಕೆ ರಾಮ್ ನಾಯಕರಾಗಿ ನಟಿಸಿದ್ದು, ನಿಧಿ ಅಗರ್ವಾಲ್ ಮತ್ತು ನಭಾ ನಟೇಶ್ ನಾಯಕಿಯರಾಗಿ ಅಭಿನಯಿಸಿದ್ದಾರೆ. ಚಿತ್ರವು ಸದ್ಯಕ್ಕೆ ಯಶಸ್ವಿ ಪ್ರದರ್ಶನ ಕಾಣುತ್ತಿದೆ ಎನ್ನಲಾಗಿದೆ. ಇತ್ತೀಚೆಗೆ ಈ ಚಿತ್ರದ ಸಕ್ಸಸ್ ಮೀಟ್ ಆಯೋಜಿಸಲಾಗಿತ್ತು. ಅಲ್ಲಿ ರಾಮ್ ಗೋಪಾಲ್ ವರ್ಮಾ ನಡೆದುಕೊಂಡ ಹುಚ್ಚುನಡೆ ಇದೀಗ ಭಾರೀ ವೈರಲ್ ಆಗುತ್ತಿದೆ.

Vijaya Karnataka Web 21 Jul 2019, 2:15 pm
ಭಾರತೀಯ ಸಿನಿಮಾರಂಗದ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರು ಭಾರೀ ಪ್ರಚಾರಪ್ರಿಯರು ಎನ್ನಲಾಗುತ್ತದೆ. ವರ್ಮಾ ಅವರು ಪಾಸಿಟೀವ್‌ಗಳಿಗಿಂತ ನೆಗೆಟಿವ್ ಸಂಗತಿಗಳಿಗೇ ಹೆಚ್ಚು ಸುದ್ದಿಯಾಗುವುದು ಬಹಳಷ್ಟು ಜನರಿಗೆ ಗೊತ್ತು. ಇತ್ತೀಚಿಗಂತೂ ವರ್ಮಾ ಅವರು ಹೋದಲ್ಲಿ ಬಂದಲ್ಲಿ ನಿಂತಲ್ಲಿ ಕುಂತಲ್ಲಿ ಸಹ ವಿವಾದಗಲೇ ಹುಟ್ಟಿಕೊಳ್ಳುತ್ತಿವೆ. ಅವರು ಮಾತನಾಡಿದರಂತೂ ಮುಗಿದೇ ಹೋಯಿತು ಎಂದು ಸಾಕಷ್ಟು ಮಂದಿ ಮಾತನಾಡುತ್ತಾರೆ. ಇದೀಗ ಹೊಸ ವಿಷಯಕ್ಕೆ ವರ್ಮಾ ಸುದ್ದಿಯಾಗಿದ್ದಾರೆ.
Vijaya Karnataka Web varma2107


ಹೌದು, ಮತ್ತೆ ವರ್ಮಾ ಅವರು ಸುದ್ದಿಗೆ ಆಹಾರವಾಗಿದ್ದಾರೆ. ಒಂದು ಅಪರೂಪದ ವಿಡಿಯೋವನ್ನು ಸ್ವತಃ ಅವರೇ ತಮ್ಮ ಸೊಷಿಯಲ್ ಮೀಡಿಯಾ ಪೇಜ್‌ನಲ್ಲಿ ಅಪ್ಲೋಡ್ ಮಾಡಿದ್ದಾರೆ. ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರು ಬಿಯರ್ ಬಾಟಲ್ ಹಿಡಿದು ಕುಣಿದು ಕುಪ್ಪಳಿಸಿದ್ದಾರೆ. ಈ ವೇಳೆ ಅಲ್ಲಿದ್ದ ಕನ್ನಡ ನಟಿ ನಭಾ ನಟೇಶ್ ಅವರ ಮೈಮೇಲೆಯಲ್ಲೆ ಬಿಯರ್ ಚೆಲ್ಲಿ ಸಂಭ್ರಮಿಸಿದ್ದಾರೆ. ಈ ವಿಡಿಯೋವನ್ನ ಸ್ವತಃ ಆರ್.ಜಿ.ವಿ ಅವರೇ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಶೇರ್ ಮಾಡಿದ್ದಾರೆ.

ಬಿಯರ್ ಬಾಟಲ್‌ ಜತೆ ವರ್ಮಾ ಅವರು ಅಷ್ಟೊಂದು ಸಂಭ್ರಮಪಟ್ಟಿದ್ದು ಯಾಕೆ ಗೊತ್ತೇ? ಪೂರಿ ಜಗನ್ನಾಥ್ ನಿರ್ದೇಶನದ 'ಇಸ್ಮಾರ್ಟ್ ಶಂಕರ್' ಸಿನಿಮಾ ಸಕ್ಸಸ್ ಆಗಿದ್ದಕ್ಕೆ ರಾಮ್ ಗೋಪಾಲ್ ವರ್ಮಾ ಅವರು ಪಾರ್ಟಿ ಆಯೋಜನೆ ಮಾಡಿದ್ದರು. ಅಲ್ಲಿ 'ಇಸ್ಮಾರ್ಟ್ ಶಂಕರ್' ಸಿನಿಮಾದ ಸಂಪೂರ್ಣ ಚಿತ್ರತಂಡ ಹಾಜರಾಗಿತ್ತು. ಈ ಚಿತ್ರದಲ್ಲಿ ನಟಿಸಿರುವ ನಾಯಕಿಯರಲ್ಲೊಬ್ಬರಾದ ನಭಾ ನಟೇಶ್ ಸಹ ಸಹಜವಾಗಿ ಅಲ್ಲಿದ್ದರು. ವರ್ಮಾ ಆಯೋಜನೆ ಮಾಡಿದ್ದ ಸಕ್ಸಸ್ ಪಾರ್ಟಿಯಲ್ಲಿ ಪೂರಿ ಜಗನ್ನಾಥ್, ಚಾರ್ಮಿ ಕೌರ್, ನಭಾ ನಟೇಶ್ ಸೇರಿದಂತೆ ಹಲವರು ಭಾಗಿಯಾಗಿದ್ದರು.

ಈ ವೇಳೆ ವರ್ಮಾ ಅವರು 'ಇಸ್ಮಾರ್ಟ್ ಶಂಕರ್' ಚಿತ್ರದ ಸಕ್ಸಸ್ ಎಂಜಾಯ್ ಮಾಡುವ ನೆಪದಲ್ಲಿ ನಟಿ ನಭಾ ನಟೇಶ್ ಮೈಮೇಲೆ ಬಿಯರ್ ಮಳೆಯ ಸಿಂಚನ ಮಾಡಿದ್ದಾರೆ. ಅಷಟ್ಏ ಅಲ್ಲ, ಅದೇನೋ ಗ್ರೇಟ್ ಕೆಲಸ ಎಂಬಂತೆ ವೀಡಿಯೋವನ್ನು ತಾವೇ ತಮ್ಮ ಟ್ವೀಟರ್‌ನಲ್ಲಿ ಅಪ್ಲೋಡ್ ಸಹ ಮಾಡಿದ್ದಾರೆ. ಅದನ್ನು ನೋಡಿ ಹಲವರು ವರ್ಮಾ ವಿರುದ್ಧ ಭಾರೀ ಗರಂ ಆಗಿದ್ದಾರಂತೆ. ಆದರೆ, ಅದಕ್ಕೂ ತಮಗೂ ಸಂಬಂಧವಿಲ್ಲ ಎಂಬಂತೆ ರಾಮ್ ಗೋಪಾಲ್ ವರ್ಮಾ ಅವರು ಹಾಯಾಗಿದ್ದಾರೆ ಎನ್ನಲಾಗಿದೆ.

ಅಂದಹಾಗೆ, ಪೂರಿ ಜಗನ್ನಾಥ್ ನಿರ್ದೇಶನದ 'ಇಸ್ಮಾರ್ಟ್ ಶಂಕರ್' ಸಿನಿಮಾಗೆ ವರ್ಮಾ ಸಿಕ್ಕಾಪಟ್ಟೆ ಪ್ರಚಾರ ಕೊಟ್ಟಿದ್ದಾರೆ. ಸಿನಿಮಾ ನೋಡುವುದಕ್ಕೆ ತಾವು ಸ್ನೇಹಿತರ ಜೊತೆ ಹೆಲ್ಮೆಟ್ ಹಾಕದೇ ಒಂದೇ ಬೈಕಿನಲ್ಲಿ ಮೂರು ಜನರು ಹೋಗಿರುವ ಫೋಟೋವನ್ನು ಸಹ ಅವರು ಅಪ್ಲೋಡ್ ಮಾಡಿದ್ದಾರೆ. ವರ್ಮಾ ಮಾಡುತ್ತಿರುವ ಪೋಸ್ಟ್‌ಗಳನ್ನು ನೋಡಿ ಹಲವರು ಅವರಿಗೆ 'ಸಾಮಾಜಿಕ ಕಳಕಳಿ, ಸಂಸ್ಕೃತಿ ಯಾವುದರ ಅರಿವೂ ಇಲ್ಲ' ಎಂದು ಅವರ ವಿರುದ್ಧ ಆರೋಪ ಮಾಡಿದ್ದಾರೆ. ಆದರೆ, ರಾಮ್ ಗೋಪಾಲ್ ವರ್ಮಾ ಯಾವಾಗಲೂ ವಿವಾದಗಳನ್ನು ಮಾಡಿಕೊಳ್ಳುವುದು ನಂತರ ಆ ಬಗ್ಗೆ ಸ್ಪಷ್ಟನೆ ಕೊಡುವುದು ಇಂಥ ಕೆಲಸ ಬಿಟ್ಟರೆ ಮತ್ತೇನು ಮಾಡುತ್ತಾರೆ ಎಂದು ಹಲವರು ಅವರ ಕಾಲೆಳೆದಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌