ಆ್ಯಪ್ನಗರ

ದರ್ಶನ್ 'ಯಜಮಾನ' ಚಿತ್ರದ ಬಗ್ಗೆ ವಿ ಹರಿಕೃಷ್ಣ ಹೇಳಿದ್ದೇನು?

ಶೈಲಜಾ ನಾಗ್ ಮತ್ತು ಬಿ ಸುರೇಶ್ ಅವರು ಮೀಡಿಯಾ ಹೌಸ' ಬ್ಯಾನರ್ ಅಡಿಯಲ್ಲಿ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ದರ್ಶನ್ ನಾಯಕತ್ವದ ಈ ಚಿತ್ರವನ್ನು ಈ ಮೊದಲು ಸಂಗೀತ ನಿರ್ದೇಶಕರಾಗಿ ಖ್ಯಾತರಾಗಿರುವ ವಿ ಹರಿಕೃಷ್ಣ ಅವರು ಮೊದಲ ಬಾರಿಗೆ ನಿರ್ದೇಶನ ಮಾಡಿದ್ದಾರೆ.

Vijaya Karnataka Web 18 Feb 2019, 2:50 pm
ಚಾಲೆಂಜಿಂಗ್ ಸ್ಟಾರ್ ದರ್ಶನ್ ನಾಯಕತ್ವದ 'ಯಜಮಾನ' ಚಿತ್ರವು ಮುಂದಿನ ತಿಂಗಳು ಮಾರ್ಚ್ 01, 2019ರಂದು ಬಿಡುಗಡೆ ಆಗಲಿದೆ. ಈಗಾಗಲೇ ಬಿಡುಗಡೆ ಕಂಡಿರುವ 'ಯಜಮಾನ' ಟ್ರೇಲರ್ ಸ್ಯಾಂಡಲ್‌ವುಡ್ ಇತಿಹಾಸದಲ್ಲಿ ಹೊಸ ದಾಖಲೆ ಬರೆದಿದೆ. ಈ ಮೊದಲು ಬಂದಿದ್ದ 'ವಿಷ್ಣುವರ್ಧನ್' ನಾಯಕತ್ವದ 'ಯಜಮಾನ' ಚಿತ್ರವು ಸೂಪರ್ ಹಿಟ್ ಎನಿಸಿತ್ತು. ಈಗ, ಅದೇ ಹೆಸರಿನಲ್ಲಿ ದರ್ಶನ್ ನಾಯಕತ್ವದಲ್ಲಿ ಬಿಡುಗಡೆಯಾಗುತ್ತಿದೆ.
Vijaya Karnataka Web darshan18


ಶೈಲಜಾ ನಾಗ್ ಮತ್ತು ಬಿ ಸುರೇಶ್ ಅವರು ಮೀಡಿಯಾ ಹೌಸ' ಬ್ಯಾನರ್ ಅಡಿಯಲ್ಲಿ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ದರ್ಶನ್ ನಾಯಕತ್ವದ ಈ ಚಿತ್ರವನ್ನು ಈ ಮೊದಲು ಸಂಗೀತ ನಿರ್ದೇಶಕರಾಗಿ ಖ್ಯಾತರಾಗಿರುವ ವಿ ಹರಿಕೃಷ್ಣ ಅವರು ಮೊದಲ ಬಾರಿಗೆ ನಿರ್ದೇಶನ ಮಾಡಿದ್ದಾರೆ. ಈ ಚಿತ್ರವು ಮಾರ್ಚ 01, 2019 ರಂದು ಸುಮಾರು 350ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಕರ್ನಾಟಕ, ಭಾರತ ಸೇರಿದಂತೆ ವಿದೇಶಗಲ್ಲೂ ಈ 'ಯಜಮಾನ' ಚಿತ್ರವು ತೆರೆಯ ಮೇಲೆ ಅಬ್ಬರಿಸಲಿದೆ. ಈ ಚಿತ್ರದ ಹಾಡುಗಳು ಈಗಾಗಲೇ ಸೂಪರ್ ಹಿಟ್ ಸಾಲಿಗೆ ಸೇರಿಕೊಂಡಿವೆ.

ಸ್ಯಾಂಡಲ್‌ವುಡ್ ಸಿನಿಪ್ರಿಯರ ಮನಸ್ಸಿನಲ್ಲಿ ಮೂಡಿ ಎಲ್ಲೋ ಒಂದು ಕಡೆ ಹೊರಬಿದ್ದದ್ದ ಸಂಶಯಕ್ಕೆ ಉತ್ತರಿಸುವ ಮೂಲಕ ನಿರ್ದೇಶಕ ಕೃಷ್ಣ ಸ್ಪಷ್ಟೀಕರಣ ಕೊಡುವ ಮೂಲಕ ತೆರೆ ಎಳೆದಿದ್ದಾರೆ. ಅವರು ಆ ಬಗ್ಗೆ ಉತ್ತರಿಸುತ್ತ "ಹೌದು, ನಾನು ಯಜಮಾನ ಕಥೆಯನ್ನು ದರ್ಶನ್ ಅವರಿಗಾಗಿಯೇ ಬರೆಸಿದ್ದೇನೆ. ಜತೆಗೆ, ಈ ಚಿತ್ರದ ಕಥೆಯ ಬರವಣಿಗೆಯಲ್ಲಿ ನನ್ನ ಪಾತ್ರವೂ ಇದೆ. ನಾನು ಈ ಚಿತ್ರಕ್ಕೆ ರೈಟರ್ ಕೂಡ ಹೌದು. ತುಂಬಾ ವರ್ಷಗಳಿಂದ ನನಗೆ ದರ್ಶನ್ ಅವರ ಜತೆ ಒಳ್ಳೆಯ ಒಡನಾಟವಿತ್ತು. ಹೀಗಾಗಿ ನನಗೆ ಸಹಜವಾಗಿಯೇ ದರ್ಶನ್ ಅವರ ವ್ಯಕ್ತಿತ್ವ ಹಾಗೂ ಅವರ ವೃತ್ತಿ ಜೀವನದ ಅನುಭವಗಳ ಬಗ್ಗೆ ಗೊತ್ತಿತ್ತು. ಯಜಮಾನ ಹೆಸರಿನ ಮೂಲಕ ಅವರಿಗೆ ಚಿತ್ರ ಮಾಡಬಹುದ, ಅದನ್ನು ನಾನೇ ನಿರ್ದೇಶನ ಮಾಡಬಹುದು ಅಂತ ಅಂದುಕೊಂಡು ಅದನ್ನೇ ಮಾಡಿದ್ದೇನೆ" ಎಂದಿದ್ದಾರೆ.

ನಿರ್ದೇಶಕ ಹರಿಕೃಷ್ಣ ಅವರು "ದರ್ಶನ್ ಅಭಿಮಾನಿಗಳಿಗೆ ಹಾಗೂ ಫ್ಯಾಮಿಲಿ ಪ್ರೇಕ್ಷಕರು ಈ ಎಲ್ಲಾ ವರ್ಗಗಳಿಗೂ ಯಜಮಾನ ಉತ್ತಮ ಚಿತ್ರವಾಗಲಿದೆ. ಏಕೆಂದರೆ, ಈ ಯಜಮಾನ ಚಿತ್ರದಲ್ಲಿ ಕೌಟುಂಬಿಕ ಮೌಲ್ಯಗಳ ಜತೆ ಸೆಂಟಿಮೇಟ್ ಸಾಕಷ್ಟಿದೆ. ಅಷ್ಟೇ ಅಲ್ಲ, ಆಕ್ಷನ್ ಪ್ರಿಯರಿಗೆ ಸಖತ್ ಸಾಹಸ ದೃಶ್ಯಗಳೂ ಇದ್ದು ಪ್ರಣಯ ಸನ್ನಿವೇಶಗಳಿಗೂ ಕೊರತೆಯಿಲ್ಲ. ಹೀಗಾಗಿ ಇದೊಂದು ಫುಲ್ ಪ್ಯಾಕೇಜ್ " ಎಂದಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌