ಆ್ಯಪ್ನಗರ

ಬ್ಯಾಡ ಹೋಗು ಅಂದ್ಬುಟ್ಲು: ಪಂಚತಂತ್ರ ಗಮ್ಮತ್ತು

"ನಾನು ಯೋಗರಾಜ್‌ ಭಟ್ಟರ ರೂಪಕಗಳಿಗೆ, ಅವರ ಫಿಲಾಸಫಿಗೆ, ಪ್ರೇಮ ಕವಿತೆಗಳಿಗೆ ದೊಡ್ಡ ಅಭಿಮಾನಿ. ಅವರು ಬರೆದಿರುವ ಹಾಡನ್ನು ಅವರ ಸಿನಿಮಾಗಾಗಿ ಮೊದಲ ಬಾರಿಗೆ ಹಾಡಿದ್ದೇನೆ. ನನಗೆ ಇದು ತುಂಬಾ ಖುಷಿ ಕೊಟ್ಟ ವಿಚಾರ" ಎಂದಿದ್ದಾರೆ ಗಾಯಕ ವಾಸುಕಿ ವೈಭವ್.

Vijaya Karnataka Web 10 Mar 2019, 6:25 pm
ಕನ್ನಡದ ಖ್ಯಾತ ನಿರ್ದೇಶಕ ಯೋಗರಾಜ್‌ ಭಟ್‌ ನಿರ್ದೇಶನದ 'ಪಂಚತಂತ್ರ' ಸಿನಿಮಾದ ಹಾಡು ನಾಳೆ, ಅಂದರೆ ಮಾರ್ಚ್ 11, 2019ರಂದು ಅದು ಸಾಕಷ್ಟು ಹಿಟ್ ಲಿಸ್ಟ್ ಸೇರಿಕೊಳ್ಳುವ ನಿರೀಕ್ಷೆ ದಟ್ಟವಾಗಿದೆ.
Vijaya Karnataka Web bhatru10


'ಶೃಂಗಾರದ ಹೊಂಗೆ ಮರ ಹೂ ಬಿಟ್ಟಿದೆ..' ಎಂಬ ಮೆಲೋಡಿ ಹಾಡಿನ ಯಶಸ್ಸಿನ ನಂತರ ಸಂಗೀತ ನಿರ್ದೇಶಕ ವಾಸುಕಿ ವೈಭವ್‌ ಅವರ ಧ್ವನಿಯಲ್ಲಿ ಮೂಡಿಬಂದಿರುವ 'ಬ್ಯಾಡ ಹೋಗು ಅಂದ್ಬುಟ್ಲು' ಎಂಬ ಮಾಸ್‌ ಹಾಡು ಮಾರ್ಚ್ 11, ಸೋಮವಾರ ಬಿಡುಗಡೆಯಾಗುತ್ತಿದೆ. ಈ ಹಾಡು ಇವತ್ತಿನ ಹುಡುಗ ಮತ್ತು ಹುಡುಗಿಯರ ಒದ್ದಾಟ ಎನ್ನುತ್ತಾರೆ ಯೋಗರಾಜ್‌ ಭಟ್‌.

"ಶೃಂಗಾರದ ಹೊಂಗೆ ಮರ ಹೂ ಬಿಟ್ಟಿದೆ..' ಹಾಡಿನಲ್ಲಿ ಹೂವನ್ನು ಕಿತ್ತುಕೊಳ್ಳಲು ಹೋಗುವ ನಾಯಕ ಆ ಮರದ ಮೇಲಿಂದ ಬಿದ್ದಂತಹ ಹಾಡು ಇದು. ಇವತ್ತಿನ ಹುಡುಗ ಮತ್ತು ಹುಡುಗಿಯರು ಮೊಬೈಲ್‌ನಲ್ಲಿ ಕಿತ್ತಾಡಿಕೊಳ್ಳುತ್ತಾರೆ. ಅಂತಹ ಸನ್ನಿವೇಶದಲ್ಲಿ ಈ ಹಾಡು ಬರುತ್ತದೆ. ನನ್ನ ಪ್ರಕಾರ ಎಲ್ಲಿ ಕಿತ್ತಾಟ ಇರುತ್ತದೆಯೋ ಅಲ್ಲಿ ಪ್ರೇಮವಿರುತ್ತದೆ. ನನ್ನ ಪ್ರಕಾರ 'ಪಂಚತಂತ್ರ' ಚಿತ್ರದ ದಿ ಬೆಸ್ಟ್‌ ಹಾಡು ಇದು. ಇದನ್ನು ಸಂಗೀತ ನಿರ್ದೇಶಕ ವಾಸುಕಿ ವೈಭವ್‌ ಹಾಡಿದ್ದಾರೆ.

ವಾಸುಕಿ ವೈಭವ್ ಒಬ್ಬ ಕಂಪೋಸರ್‌ ಮಾತ್ರವಲ್ಲ, ಬದಲಿಗೆ ಉತ್ತಮ ಗಾಯಕ ಕೂಡ. ಅವರ ಧ್ವನಿಯಲ್ಲಿ ಫ್ರೆಶ್‌ನೆಸ್‌ ಇದೆ. ಆ ವಯಸ್ಸಿನ ಕಷ್ಟವನ್ನು ಆ ವಯಸ್ಸಿನವರೇ ಹೇಳಿಕೊಂಡು ಹಾಡಿದರೆ ಚೆಂದ ಎಂದು ಅವರ ಬಳಿ ಹಾಡಿಸಿದ್ದೇವೆ. ನನ್ನ ಸಾಹಿತ್ಯಕ್ಕೆ ಅವರ ಧ್ವನಿ ಬಿದ್ದ ಮೇಲೆ ಹಾಡಿನ ಗಮ್ಮತ್ತು ಜಾಸ್ತಿಯಾಗಿದೆ" ಎಂದಿದ್ದಾರೆ ಯೋಗರಾಜ್ ಭಟ್ಟರು.

"ನಾನು ಯೋಗರಾಜ್‌ ಭಟ್ಟರ ರೂಪಕಗಳಿಗೆ, ಅವರ ಫಿಲಾಸಫಿಗೆ, ಪ್ರೇಮ ಕವಿತೆಗಳಿಗೆ ದೊಡ್ಡ ಅಭಿಮಾನಿ. ಅವರು ಬರೆದಿರುವ ಹಾಡನ್ನು ಅವರ ಸಿನಿಮಾಗಾಗಿ ಮೊದಲ ಬಾರಿಗೆ ಹಾಡಿದ್ದೇನೆ. ನನಗೆ ಇದು ತುಂಬಾ ಖುಷಿ ಕೊಟ್ಟ ವಿಚಾರ. 'ಬ್ಯಾಡ ಹೋಗು ಅಂದ್ಬುಟ್ಲು' ಹಾಡು ನನಗೂ ಒಂದು ರೀತಿಯಲ್ಲಿ ವಿಶೇಷ ಅನುಭವ ಕೊಟ್ಟಿದೆ. ಏಕೆಂದರೆ ನಾನು ಇದುವರೆಗೂ ಬರೀ ಮೆಲೋಡಿ ಹಾಡನ್ನು ಹಾಡಿದ್ದೆ. ಇದು ಮಾಸ್‌ ರೀತಿಯ ಹಾಡು. ಈ ಹಾಡು ಸಿಂಪಲ್‌ ಆಗಿ ಕಚಗುಳಿ ಇಡುತ್ತಾ ಫಿಲಾಸಫಿಯನ್ನು ಹೇಳುತ್ತದೆ.

ಈ ಹಾಡನ್ನು ಯೋಗರಾಜ್‌ ಭಟ್ಟರೇ ರೆಕಾರ್ಡಿಂಗ್‌ ಮಾಡಿದ್ದು ನನಗೆ ಅತ್ಯಂತ ಸಂತಸದ ವಿಚಾರ. ಈ ಹಾಡಿನ ಲಿರಿಕ್ಸ್‌ ನನ್ನ ಮೋಸ್ಟ್ ಫೇವರಿಟ್‌. ಹರಿಕೃಷ್ಣ ಮತ್ತು ಯೋಗರಾಜ್‌ ಭಟ್ಟರ ಜತೆ ಕೆಲಸ ಮಾಡಿದ್ದು ನನ್ನ ಕರಿಯರ್‌ನಲ್ಲೇ ದಿ ಬೆಸ್ಟ್‌ ವಿಷಯಗಳಲ್ಲಿ ಒಂದು" ಎಂದಿದ್ದಾರೆ ಸಂಗೀತ ನಿರ್ದೇಶಕ ಮತ್ತು ಗಾಯಕ ವಾಸುಕಿ ವೈಭವ್‌.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌