ಅರವಿಂದ್ ಕೌಶಿಕ್ ನಿರ್ದೇಶನದ ಚಿತ್ರ ಹುಲಿರಾಯ. ಚಿತ್ರದಲ್ಲಿ ಇಬ್ಬರು ನಾಯಕಿಯರು. ಚಿರಶ್ರೀ ಮತ್ತು ದಿವ್ಯಾ ಉರುಡುಗ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಕಾಡಿನ ಮನುಷ್ಯನ ಪಾತ್ರದಲ್ಲಿ ಬಾಲು ನಾಗೇಂದ್ರ ನಟಿಸಿದ್ದು, ಇವರ ಎದುರು ನಟಿಸುವಾಗ ದಿವ್ಯಾಗೆ ಡೈಲಾಗ್ಗಳೇ ಮರೆತುಹೋಗುತ್ತಿತ್ತಂತೆ.
'ಮೊದಲು ನಿರ್ದೇಶಕ ಅರವಿಂದ್ ನನಗೆ ವಿಶ್ವಾಸ ತುಂಬಿದ್ದರು. ಅದರೆ, ಕ್ಯಾಮೆರಾ ಮುಂದೆ ನಿಂತಾಗ ಬಾಲು ಕಾಡು ಮನುಷ್ಯನಂತೆ ಕಿರುಚಿದ ರೀತಿಗೆ ಬೆಚ್ಚಿಬಿದ್ದೆ. ನನ್ನ ಡೈಲಾಗ್ಗಳೆಲ್ಲಾ ಮರೆತೇ ಹೋದವು. ಅವರ ಎದುರು ನನ್ನ ನಟನೆ ಮಂಕಾಗಿಬಿಡುತ್ತೆ ಎಂಬ ಭಯ ಆಗಿತ್ತು. ಬಾಲು ಎಂಥಾ ನಟ ಅಂದ್ರೆ ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡ್ತಿದ್ರು. ಸೆಟ್ನಲ್ಲಿ ಎಲ್ಲೆಂದರಲ್ಲಿ ಮಲಗುತ್ತಿದ್ದರು. ಕಾಡು ಮನುಷ್ಯನ ರೀತಿಯಲ್ಲೇ ವರ್ತಿಸುತ್ತಿದ್ದರು. ಇಂಥವರೊಂದಿಗೆ ನಟಿಸಬೇಕು' ಎಂದಿದ್ದಾರೆ ದಿವ್ಯಾ.
'ಕಿರುತೆರೆಯಲ್ಲಿ ನಟಿಸುವುದಕ್ಕೂ ಸಿನಿಮಾದಲ್ಲಿ ನಟಿಸುವುದಕ್ಕೂ ಬಹಳ ವ್ಯತ್ಯಾಸವಿದೆ. ಅರವಿಂದ್ ತಾವಂದುಕೊಂಡಂತೆ ಬರೋವರೆಗೆ ಬಿಡುತ್ತಿರಲಿಲ್ಲ. ಎಕ್ಸ್ಪ್ರೆಷನ್ ಸರಿಯಾಗಿ ಕೊಡದಿದ್ರೆ, ಮಾರನೆ ದಿನ ಮತ್ತೆ ಆ ಸೀನ್ ಶೂಟ್ ಮಾಡುತ್ತಿದ್ದರು. ಈ ಚಿತ್ರದಲ್ಲಿ ನಟಿಸಿದ್ದು ಒಳ್ಳೆಯ ಅನುಭವ ಎಂದಿದ್ದಾರೆ' ಅವರು.
ಅರವಿಂದ್ ಕೌಶಿಕ್ ಪತ್ನಿ ಶಿಲ್ಪಾ ಮತ್ತು ದಿವ್ಯಾ ಒಟ್ಟಿಗೆ ಕಿರುತೆರೆಯಲ್ಲಿ ನಟಿಸುತ್ತಾ ಬಂದವರು. ಈ ಚಿತ್ರಕ್ಕೆ ತಮ್ಮನ್ನು ಸಜೆಸ್ಟ್ ಮಾಡಿದ್ದು ಅವರೇ ಎಂದಿದ್ದಾರೆ ದಿವ್ಯಾ. ಚಿತ್ರದಲ್ಲಿ ನಾಯಕಿಯಾಗಿ ನಟಿಸಿರುವ ಇನ್ನೊಬ್ಬ ನಟಿ ಚಿರಶ್ರೀ ಫಾರೆಸ್ಟ್ ಆಫೀಸರ್ ಮಗಳ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದಲ್ಲದೆ ಇನ್ನೂ 2 ಚಿತ್ರಗಳಲ್ಲಿ ಅವರು ನಟಿಸಿದ್ದು, ಎಲ್ಲವೂ ರಿಲೀಸ್ಗೆ ರೆಡಿ ಇದೆ. ಪವನ್ ಶೌರ್ಯಗೆ ನಾಯಕಿಯಾಗಿ ಉಡುಂಬ ಚಿತ್ರದಲ್ಲಿ ಚಿರಶ್ರೀ ನಟಿಸಿದ್ದಾರೆ. ಇದರ ಜತೆ ಕರಿ ಕಂಬಳಿಯಲ್ಲಿ ಮಿಡಿನಾಗರ ಚಿತ್ರದಲ್ಲೂ ಕಾಣಿಸಿಕೊಂಡಿದ್ದಾರೆ.