ಆ್ಯಪ್ನಗರ

ಅಂಕಲ್ ಕಾಲು ನೋವಿದೆ ಬರಲು ಕಷ್ಟ ಎಂದಿದ್ದರು ರಮ್ಯಾ: ಡಿಕೆಶಿ

ರಮ್ಯಾ ತನಗಾಗಿರುವ ಕಾಲಿನ ಊತಕ್ಕೆ ಸಂಬಂಧಿಸಿದಂತೆ ತಿಂಗಳ ಹಿಂದೆಯೇ ಪೋಸ್ಟ್ ಮಾಡಿದ್ದರು. ಈಗ ಅದು ವೈರಲ್ ಆಗಿದೆ. ಇದೇ ಸಂದರ್ಭದಲ್ಲಿ ಡಿಕೆ ಶಿವಕುಮಾರ್ ಸಹ ಅವರ ಕಾಲಿನ ಸಮಸ್ಯೆ ಬಗ್ಗೆ ಹೇಳಿದ್ದು ಅಂಬಿ ಅಂತ್ಯಕ್ರಿಯೆಗೆ ರಮ್ಯಾ ಬಾರದಿರಲು ನಿಜವಾದ ಕಾರಣ ಕಾಲು ನೋವು ಎಂಬುದು ಸ್ಪಷ್ಟವಾಗಿದೆ.

Vijaya Karnataka Web 27 Nov 2018, 1:31 pm
ಅಗಲಿದ ನಾಯಕ ರೆಬೆಲ್ ಸ್ಟಾರ್ ಅಂಬರೀಶ್ ಅವರ ಅಂತ್ಯಕ್ರಿಯೆಯಲ್ಲಿ ನಟಿ ರಮ್ಯಾ ಭಾಗಿಯಾಗದಿರುವ ಬಗ್ಗೆ ಮಂಡ್ಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಇಷ್ಟಕ್ಕೂ ರಮ್ಯಾ ಅವರು ಯಾಕೆ ಬರಲಿಲ್ಲ ಎಂಬ ಬಗ್ಗೆ ಸ್ವತಃ ಸಚಿವರಾಗಿರುವ ಡಿಕೆ ಶಿವಕುಮಾರ್ ಅವರು ಸ್ಪಷ್ಟೀಕರಣ ನೀಡಿದ್ದಾರೆ.
Vijaya Karnataka Web ramya-dks


ತಾನು ರಮ್ಯಾಗೆ ದೂರವಾಣಿ ಕರೆ ಮಾಡಿದ್ದೆ. ಅಂಕಲ್ ಕಾಲು ನೋವಿದೆ. ಬರಲು ಕಷ್ಟವಾಗುತ್ತದೆ ಎಂದಿದ್ದರು. ಹಾಗಾಗಿ ಕಾಲು ನೋವಿನಿಂದ ರಮ್ಯಾ ಬರಲು ಸಾಧ್ಯವಾಗಲಿಲ್ಲ ಎಂದು ಬೆಂಗಳೂರಿನಲ್ಲಿ ಡಿಕೆಶಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ರಮ್ಯಾ ತನಗಾಗಿರುವ ಕಾಲಿನ ಊತಕ್ಕೆ ಸಂಬಂಧಿಸಿದಂತೆ ತಿಂಗಳ ಹಿಂದೆಯೇ ಪೋಸ್ಟ್ ಮಾಡಿದ್ದರು. ಈಗ ಅದು ವೈರಲ್ ಆಗಿದೆ. ಇದೇ ಸಂದರ್ಭದಲ್ಲಿ ಡಿಕೆ ಶಿವಕುಮಾರ್ ಸಹ ಅವರ ಕಾಲಿನ ಸಮಸ್ಯೆ ಬಗ್ಗೆ ಹೇಳಿದ್ದು ಅಂಬಿ ಅಂತ್ಯಕ್ರಿಯೆಗೆ ರಮ್ಯಾ ಬಾರದಿರಲು ನಿಜವಾದ ಕಾರಣ ಕಾಲು ನೋವು ಎಂಬುದು ಸ್ಪಷ್ಟವಾಗಿದೆ. ಇನ್ನೊಂದು ಕಡೆ ಮಂಡ್ಯದಲ್ಲಿ ರಮ್ಯಾ ವಿರುದ್ಧ ಇನ್ನೂ ಆಕ್ರೋಶ ತಣ್ಣಗಾಗಿಲ್ಲ. ಸಾಮಾಜಿಕ ಮಾಧ್ಯಮಗಳಲ್ಲೂ ಅವರ ವಿರುದ್ಧ ಟೀಕೆ ಮುಂದುವರೆದಿದೆ.

ಏತನ್ಮಧ್ಯೆ ಕಂಠೀರವ ಸ್ಟುಡಿಯೋದಲ್ಲಿನ ಅಂಬಿ ಸಮಾಧಿ ಬಳಿಗೆ ಅಭಿಮಾನಿಗಳು ಇಂದೂ ಹರಿದು ಬರುತ್ತಿದ್ದಾರೆ. ಅವರ ಅಂತಿಮ ದರ್ಶನ ಪಡೆಯಲು ನಿನ್ನೆ ಸಾಕಷ್ಟು ಮಂದಿಗೆ ಅವವಾಶ ಸಿಕ್ಕಿರಲಿಲ್ಲ. ಹಾಗಾಗಿ ಇಂದು ಜನಸಾಗರ ಹರಿದುಬರುತ್ತಿದೆ. ಅಂಬಿ ಸಮಾಧಿ ಬಳಿ ನಮನ ಸಲ್ಲಿಸುತ್ತಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌