ವರ ನಟ ಡಾ.ರಾಜ್ಕುಮಾರ್ ಅವರ ದೊಡ್ಡ ಗಾಜಾನೂರು ಗ್ರಾಮದ ಮನೆಯಲ್ಲಿ ಇದೀಗ ಮದುವೆಯ ಸಂಭ್ರಮ ಮನೆ ಮಾಡಿದೆ. ಹೌದು ರಾಜ್ಕುಮಾರ್ ಅವರ ಮೊಮ್ಮಮ್ಮಗ ರಾಘವೇಂದ್ರರಾಜ್ಕುಮಾರ್ ಅವರ ಎರಡನೇ ಪುತ್ರ ಯುವರಾಜ್ ಮದುವೆ ಹಿನ್ನೆಲೆ ರಾಜ್ ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿದೆ.
ಮದುವೆ ಇನ್ನೊಂದು ವಾರ ಇರುವ ಕಾರಣ ಚಾಮರಾಜನಗರದ ಗಾಜನೂರಿನಲ್ಲಿ ಸೋಮವಾರ ಯುವರಾಜ್ಗೆ ಅರಿಸಿನ ನೀರು ಶಾಸ್ತ್ರ ಮಾಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಡಾ.ರಾಜ್ಕುಮಾರ್ ಹುಟ್ಟೂರಾಗಿರುವ ಕಾರಣದಿಂದ ಗಾಜನೂರಿನಲ್ಲಿ ಮೊದಲ ಶಾಸ್ತ್ರ ಮಾಡಲಾಯಿತು. ಅರಿಶಿನ ನೀರು
ಶಾಸ್ತ್ರದಲ್ಲಿ ಯುವರಾಜ್ ತಂದೆ ತಾಯಿಯರಾದ ರಾಘವೇಂದ್ರ ರಾಜ್ಕುಮಾರ್, ಮಂಗಳ ಸಹೋದರಿಯರಾದ ಪೂರ್ಣಿಮ, ಲಕ್ಮೀ ಸೇರಿದಂತೆ ರಾಜ್ ಕುಟುಂಬದ ಹಲವು ಮಂದಿ ಭಾಗಿಯಾಗಿದ್ದರು.
ಕಳೆದ ವರ್ಷ ಮೈಸೂರು ಮೂಲದ ಶ್ರೀದೇವಿ ಜತೆಗೆ ಯುವ ರಾಜ್ಕುಮಾರ್ ನಿಶ್ಚಿತಾರ್ಥ ನೆರವೇರಿತ್ತು. ಮೈಸೂರು ಮೂಲಕ ಶ್ರೀದೇವಿ ಭೈರಪ್ಪ ಮತ್ತು ಯುವರಾಜ್ ಕುಮಾರ್ ಕಳೆದ ಏಳು ವರ್ಷಗಳಿಂದ ಸ್ನೇಹಿತರು. ವಿನಯ್ ರಾಜ್ ಕುಮಾರ್ ಅಭಿನಯದ 'ರನ್ ಆಂಟನಿ' ಚಿತ್ರದ ಪ್ರಚಾರ ಕಾರ್ಯಗಳಲ್ಲಿ ಶ್ರೀದೇವಿ ಪರೋಕ್ಷವಾಗಿ ಕೆಲಸ ಮಾಡಿದ್ದಾರೆ. ಯುವರಾಜ್ಕುಮಾರ್ ಪ್ರಸ್ತುತ ರಾಜ್ಕುಮಾರ್ ಸಿವಿಲ್ ಅಕಾಡೆಮಿಯನ್ನು ನೋಡಿಕೊಳ್ಳುತ್ತಿದ್ದಾರೆ.
ಮದುವೆ ಇನ್ನೊಂದು ವಾರ ಇರುವ ಕಾರಣ ಚಾಮರಾಜನಗರದ ಗಾಜನೂರಿನಲ್ಲಿ ಸೋಮವಾರ ಯುವರಾಜ್ಗೆ ಅರಿಸಿನ ನೀರು ಶಾಸ್ತ್ರ ಮಾಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಡಾ.ರಾಜ್ಕುಮಾರ್ ಹುಟ್ಟೂರಾಗಿರುವ ಕಾರಣದಿಂದ ಗಾಜನೂರಿನಲ್ಲಿ ಮೊದಲ ಶಾಸ್ತ್ರ ಮಾಡಲಾಯಿತು. ಅರಿಶಿನ ನೀರು
ಶಾಸ್ತ್ರದಲ್ಲಿ ಯುವರಾಜ್ ತಂದೆ ತಾಯಿಯರಾದ ರಾಘವೇಂದ್ರ ರಾಜ್ಕುಮಾರ್, ಮಂಗಳ ಸಹೋದರಿಯರಾದ ಪೂರ್ಣಿಮ, ಲಕ್ಮೀ ಸೇರಿದಂತೆ ರಾಜ್ ಕುಟುಂಬದ ಹಲವು ಮಂದಿ ಭಾಗಿಯಾಗಿದ್ದರು.
ಕಳೆದ ವರ್ಷ ಮೈಸೂರು ಮೂಲದ ಶ್ರೀದೇವಿ ಜತೆಗೆ ಯುವ ರಾಜ್ಕುಮಾರ್ ನಿಶ್ಚಿತಾರ್ಥ ನೆರವೇರಿತ್ತು. ಮೈಸೂರು ಮೂಲಕ ಶ್ರೀದೇವಿ ಭೈರಪ್ಪ ಮತ್ತು ಯುವರಾಜ್ ಕುಮಾರ್ ಕಳೆದ ಏಳು ವರ್ಷಗಳಿಂದ ಸ್ನೇಹಿತರು. ವಿನಯ್ ರಾಜ್ ಕುಮಾರ್ ಅಭಿನಯದ 'ರನ್ ಆಂಟನಿ' ಚಿತ್ರದ ಪ್ರಚಾರ ಕಾರ್ಯಗಳಲ್ಲಿ ಶ್ರೀದೇವಿ ಪರೋಕ್ಷವಾಗಿ ಕೆಲಸ ಮಾಡಿದ್ದಾರೆ. ಯುವರಾಜ್ಕುಮಾರ್ ಪ್ರಸ್ತುತ ರಾಜ್ಕುಮಾರ್ ಸಿವಿಲ್ ಅಕಾಡೆಮಿಯನ್ನು ನೋಡಿಕೊಳ್ಳುತ್ತಿದ್ದಾರೆ.