ಆ್ಯಪ್ನಗರ

ಗಾಜನೂರಿನಲ್ಲಿ ರಾಜ್‌ಕುಮಾರ್ ಮೊಮ್ಮಗನ ಅರಿಸಿನ ಶಾಸ್ತ್ರ

ಇದೇ ಮೇ.26ರಂದು ಯುವ ರಾಜ್‌ಕುಮಾರ್ ಮದುವೆ ನಿಗದಿಯಾಗಿದೆ. ಬೆಂಗಳೂರಿನ ಪ್ಯಾಲೇಸ್ ಮೈದಾನದಲ್ಲಿ ಮದುವೆ ನೆರವೇರಲಿದ್ದು ಈಗಾಗಲೆ ಚಿತ್ರರಂಗದ ಹಲವಾರು ಗಣ್ಯರಿಗೆ ಆಹ್ವಾನ ಪತ್ರಿಕೆ ನೀಡಲಾಗಿದೆ.

Vijaya Karnataka Web 20 May 2019, 7:47 pm
ವರ ನಟ ಡಾ.ರಾಜ್‌ಕುಮಾರ್ ಅವರ ದೊಡ್ಡ ಗಾಜಾನೂರು ಗ್ರಾಮದ ಮನೆಯಲ್ಲಿ ಇದೀಗ ಮದುವೆಯ ಸಂಭ್ರಮ ಮನೆ ಮಾಡಿದೆ. ಹೌದು ರಾಜ್‌ಕುಮಾರ್ ಅವರ ಮೊಮ್ಮಮ್ಮಗ ರಾಘವೇಂದ್ರರಾಜ್‌ಕುಮಾರ್ ಅವರ ಎರಡನೇ ಪುತ್ರ ಯುವರಾಜ್ ಮದುವೆ ಹಿನ್ನೆಲೆ ರಾಜ್ ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿದೆ.

ಮದುವೆ ಇನ್ನೊಂದು ವಾರ ಇರುವ ಕಾರಣ ಚಾಮರಾಜನಗರದ ಗಾಜನೂರಿನಲ್ಲಿ ಸೋಮವಾರ ಯುವರಾಜ್‌ಗೆ ಅರಿಸಿನ ನೀರು ಶಾಸ್ತ್ರ ಮಾಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಡಾ.ರಾಜ್‌ಕುಮಾರ್ ಹುಟ್ಟೂರಾಗಿರುವ ಕಾರಣದಿಂದ ಗಾಜನೂರಿನಲ್ಲಿ ಮೊದಲ ಶಾಸ್ತ್ರ ಮಾಡಲಾಯಿತು. ಅರಿಶಿನ ನೀರು
ಶಾಸ್ತ್ರದಲ್ಲಿ ಯುವರಾಜ್ ತಂದೆ ತಾಯಿಯರಾದ ರಾಘವೇಂದ್ರ ರಾಜ್‌ಕುಮಾರ್, ಮಂಗಳ ಸಹೋದರಿಯರಾದ ಪೂರ್ಣಿಮ, ಲಕ್ಮೀ ಸೇರಿದಂತೆ ರಾಜ್ ಕುಟುಂಬದ ಹಲವು ಮಂದಿ ಭಾಗಿಯಾಗಿದ್ದರು.


ಕಳೆದ ವರ್ಷ ಮೈಸೂರು ಮೂಲದ ಶ್ರೀದೇವಿ ಜತೆಗೆ ಯುವ ರಾಜ್‌ಕುಮಾರ್ ನಿಶ್ಚಿತಾರ್ಥ ನೆರವೇರಿತ್ತು. ಮೈಸೂರು ಮೂಲಕ ಶ್ರೀದೇವಿ ಭೈರಪ್ಪ ಮತ್ತು ಯುವರಾಜ್ ಕುಮಾರ್ ಕಳೆದ ಏಳು ವರ್ಷಗಳಿಂದ ಸ್ನೇಹಿತರು. ವಿನಯ್‌ ರಾಜ್‌ ಕುಮಾರ್‌ ಅಭಿನಯದ 'ರನ್‌ ಆಂಟನಿ' ಚಿತ್ರದ ಪ್ರಚಾರ ಕಾರ್ಯಗಳಲ್ಲಿ ಶ್ರೀದೇವಿ ಪರೋಕ್ಷವಾಗಿ ಕೆಲಸ ಮಾಡಿದ್ದಾರೆ. ಯುವರಾಜ್‌ಕುಮಾರ್ ಪ್ರಸ್ತುತ ರಾಜ್‌ಕುಮಾರ್ ಸಿವಿಲ್‌ ಅಕಾಡೆಮಿಯನ್ನು ನೋಡಿಕೊಳ್ಳುತ್ತಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌