ಆ್ಯಪ್ನಗರ

ದುನಿಯಾ ವಿಜಯ್ Vs ರವಿ ಬೆಳಗೆರೆ ನಡುವೆ ಮತ್ತೆ ಭುಗಿಲೆದ್ದ ಆಕ್ರೋಶ

ದುನಿಯಾ ವಿಜಯ್ ಮತ್ತು ರವಿ ಬೆಳಗೆರೆ ನಡುವೆ ಇಷ್ಟು ದಿನಗಳ ಕಾಲ ತಣ್ಣಗಿದ್ದ ಜಗಳ ಇದೀಗ ಮತ್ತೆ ಆರಂಭವಾಗಿದೆ. ಒಬ್ಬರಿಗೊಬ್ಬರು ವಿನಾ ಕಾರಣ ಒಬ್ಬರ ಮೇಲೊಬ್ಬರು ವಾಗ್ದಾಳಿ ನಡೆಸಿದ್ದಾರೆ.

Vijaya Karnataka Web 24 Aug 2019, 10:57 am

ಡಾಲಿ ಹುಟ್ಟು ಹಬ್ಬದ ದಿನ ಬಡವ ರಾಸ್ಕಲ್‌ಗೆ ಮುಹೂರ್ತ

ಹಿರಿಯ ಪತ್ರಕರ್ತ ರವಿ ಬೆಳಗೆರೆ ಮತ್ತು ನಟ ದುನಿಯಾ ವಿಜಯ್ ನಡುವಿನ ಆಕ್ರೋಶ ಮತ್ತೆ ಭುಗಿಲೆದ್ದಿದೆ. ಇತ್ತೀಚೆಗೆ ರವಿ ಬೆಳಗೆರೆ ತಮ್ಮ ಯೂಟ್ಯೂಬ್ ಚಾನಲ್‌ನಲ್ಲಿ ದುನಿಯಾ ವಿಜಯ್ ಮತ್ತು ದರ್ಶನ್ ಬಗ್ಗೆ ಮಾತನಾಡಿದ್ದರು. ದುನಿಯಾ ವಿಜಿ ಬಗ್ಗೆ ಮಾತನಾಡುತ್ತಾ ಬ್ಲ್ಯಾಕ್ ಕೋಬ್ರಾ ಕರಿ ಗೊಬ್ಬರ ಹೇ ಕೂತ್ಕೊಳ್ಳಯ್ಯ ಸಾಕು ಎಂದಿದ್ದಾರೆ.
Vijaya Karnataka Web ravi-belager-viji


"ಎಷ್ಟು ಜನರನ್ನು ಇವರು ಮದುವೆಯಾಗುವುದು, ಆ ಹೆಂಡತಿಯನ್ನು ಬಿಡ್ತಾನೆ ಇನ್ನೊಬ್ಬ ಹೆಂಡತಿಯನ್ನು ಕಟ್ಕೋತಾನೆ, ಇವನು ಜೈಲು ಗಿರಾಕಿನೇ. ಈ ಹುಡುಗನಿಗೆ ಏನಾಗಿದೆ, ಅದ್ಯಾರೋ ಪವಿತ್ರಾ ಗೌಡ ಅಂತೆ..." ಎಂದು ಕಾಮೆಂಟ್ ಮಾಡಿದ್ದರು.

ಈ ಬಗ್ಗೆ ನಟ ದುನಿಯಾ ವಿಜಯ್ ಸಹ ಪ್ರತಿಕ್ರಿಯಿಸಿದ್ದಾರೆ. ಇತ್ತೀಚೆಗೆ ಲಾಂಚ್ ಆದ 'ಬಡವ ರಾಸ್ಕಲ್' ಸಿನಿಮಾದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, "ರವಿ ಬೆಳಗೆರೆನಾ? ಇನ್ನೂ ಬದುಕಿದ್ದಾನಾ? ಅಯ್ಯೋ ಅವನಿಗೆ ಇಬ್ಬರು ಹೆಂಡ್ತೀರು. ಒಂದ್ಸಲ ಪುಲ್ವಾಮಾ ಅಂತಾನೆ, ಇನ್ನೊಂದು ಸಲ ಇನ್ಯಾರದೋ ಹೆಂಡತಿ ಬಗ್ಗೆ ಮಾತನಾಡುತ್ತಾನೆ" ಎಂದು ರವಿ ಬೆಳಗೆರೆ ಬಗ್ಗೆ ಏಕವಚನದಲ್ಲಿ ಮಾತನಾಡುತ್ತಾ ಕಿಡಿಕಾರಿದ್ದಾರೆ.

"ಪ್ರಜ್ಞೆನೇ ಇರಲ್ಲ, ಏನಾಗಿದೆ ಅವನಿಗೆ. ಪ್ರಾಬ್ಲಂ ಇದೆಯಾ ಏನಾದರೂ. ಅವನ ವಯಸ್ಸಿಗೆ ಒಂದು ಮರ್ಯಾದೆ ಇರಬೇಕು ಅಲ್ವಾ? ಕುಡಿದು ಕುಡಿದು ತಿಂಗಳಲ್ಲಿ ಒಂದು ಇಪ್ಪತ್ತು ದಿನ ಮಾನಸ ಆಸ್ಪತ್ರೆಯಲ್ಲಿ ಬಿದ್ದಿರುತ್ತಾನೆ. ಮತ್ತೆ ಪ್ರಜ್ಞೆ ಬಂದ ಮೇಲೆ ಕುಳಿತು ಬರೀತಾನೆ, ಪ್ರಜ್ಞೆ ಬಂದಾಗಲೆಲ್ಲಾ ದರ್ಶನ್ ಹೆಂಡತಿ, ದುನಿಯಾ ವಿಜಯ್ ಹೆಂಡತಿರು ಕಾಣ್ತಾರೆ. ಇವನ ಹೆಂಡತಿಯರು ಕಣ್ಣಿಗೆ ಕಾಣೋದೆ ಇಲ್ವಾ? ಮೊದಲು ಅವನು ನೆಟ್ಟಗಿರಬೇಕು ಇನ್ನೊಬ್ಬರಿಗೆ ಹೇಳುವಾಗ ಎಂದು ಅವಾಚ್ಯ ಶಬ್ದಗಳಿಂದ ರವಿ ಬೆಳಗೆರೆಯನ್ನು ನಿಂದಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌