ಆ್ಯಪ್ನಗರ

ಹೊಸ ವರ್ಷಕ್ಕೆ ಹೊಸ ದುನಿಯಾ

ಅಂದುಕೊಂಡಂತೆ ಆಗಿದ್ದರೆ ಅವರು ಈಗಾಗಲೇ ಕುಸ್ತಿ ಸಿನಿಮಾದಲ್ಲಿ ನಟಿಸಬೇಕಿತ್ತು. ಆದರೆ, ಅದಕ್ಕೆ ಬೇಕಾದ ತಯಾರಿ ಆಗಿಲ್ಲ ಅನ್ನುವ ಕಾರಣಕ್ಕಾಗಿ ಈ ಚಿತ್ರವನ್ನು ಮುಂದಕ್ಕೆ ಹಾಕಿದ್ದಾರಂತೆ.

Vijaya Karnataka 15 Dec 2018, 7:56 am
ದುನಿಯಾ ವಿಜಯ್‌ ಹೊಸ ವರ್ಷಕ್ಕೆ ಸರ್‌ಪ್ರೈಸ್‌ ಸುದ್ದಿ ಕೊಡುತ್ತಾರಂತೆ. ಹಾಗಂತ ಅವರು ಫೇಸ್‌ಬುಕ್‌ ಪೇಜ್‌ನಲ್ಲಿ ಬರೆದುಕೊಂಡಿದ್ದಾರೆ. ಆ ಹೊಸ ಸುದ್ದಿ ಏನಿರಬಹುದು ಎಂಬ ಕುತೂಹಲ ಬೆನ್ನತ್ತಿದಾಗ, ಹೊಸ ಬಗೆಯ ಸಿನಿಮಾ ಮಾಡುವುದಾಗಿ ಹೇಳಿದ್ದಾರೆ.
Vijaya Karnataka Web Dunia Viji


ಅಂದುಕೊಂಡಂತೆ ಆಗಿದ್ದರೆ ಅವರು ಈಗಾಗಲೇ ಕುಸ್ತಿ ಸಿನಿಮಾದಲ್ಲಿ ನಟಿಸಬೇಕಿತ್ತು. ಆದರೆ, ಅದಕ್ಕೆ ಬೇಕಾದ ತಯಾರಿ ಆಗಿಲ್ಲ ಅನ್ನುವ ಕಾರಣಕ್ಕಾಗಿ ಈ ಚಿತ್ರವನ್ನು ಮುಂದಕ್ಕೆ ಹಾಕಿದ್ದಾರಂತೆ. ಅದರ ಬದಲು ಹೊಸ ಸಿನಿಮಾವನ್ನು ಮಾಡುವುದಾಗಿ ಹೇಳಿದ್ದಾರೆ. ಕುಸ್ತಿ ಚಿತ್ರಕ್ಕೆ ಆ್ಯಕ್ಷನ್‌ ಕಟ್‌ ಹೇಳಬೇಕಿದ್ದ ರಾಘು ಶಿವಮೊಗ್ಗ ಅವರೇ ಈ ಚಿತ್ರದ ನಿರ್ದೇಶಕರು. ಕಥೆ ಮಾತ್ರ ಬದಲಾಗಿದೆ.

'ಕುಸ್ತಿ ಚಿತ್ರಕ್ಕೆ ಬಾಡಿಬಿಲ್ಡ ಮಾಡಬೇಕಿತ್ತು. ದೇಹ ಹುರಿಗೊಳಿಸಿಕೊಳ್ಳಬೇಕಿತ್ತು. ಅದು ಆಗಿಲ್ಲ. ಹಾಗಾಗಿ ಚಿತ್ರವನ್ನು ಸ್ವಲ್ಪ ದಿನ ಮುಂದೂಡಿದ್ದೇನೆ. ಹಾಗಂತ ಅಭಿಮಾನಿಗಳು ನಿರಾಸೆ ಆಗಬೇಕಿಲ್ಲ. ಹೊಸ ಸಿನಿಮಾ ಮುಗಿದ ನಂತರವೇ ಕುಸ್ತಿ ಚಿತ್ರವನ್ನೂ ಮಾಡುತ್ತೇನೆ' ಎಂದಿದ್ದಾರೆ ವಿಜಯ್‌.

ಯಾವ ಸಿನಿಮಾ, ಟೈಟಲ್‌ ಏನು? ಹೊಸ ಸಿನಿಮಾ ಯಾವಾಗಿಂದ ಶುರುವಾಗಲಿದೆ ಈ ಎಲ್ಲ ವಿವರವನ್ನೂ ಅವರು ಹೊಸ ವರ್ಷದಂದೇ ಹೇಳಲಿದ್ದಾರಂತೆ. ಸದ್ಯಕ್ಕೆ ಸ್ಕ್ರಿಪ್ಟ್‌ ಮಾಡುವಲ್ಲಿ ಬಿಝಿ ಆಗಿದೆ ಸಿನಿಮಾ ತಂಡ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌