ಆ್ಯಪ್ನಗರ

ಡಬ್ಬಿಂಗ್ ಕುರಿತು ಫೇಸ್‌ಬುಕ್ ಲೈವ್‌ನಲ್ಲಿ ಯಾರು ಏನು ಹೇಳಿದರು?

ಕನ್ನಡಕ್ಕೆ ಡಬ್ಬಿಂಗ್ ಬೇಕೋ ಬೇಡವೋ ಎಂಬ ವಿಚಾರವಾಗಿ ವಿಜಯ ಕರ್ನಾಟಕ ಫೇಸ್‌ಬುಕ್‌ ಲೈವ್‍ನಲ್ಲಿ ನಡೆದ ಚರ್ಚೆಗೆ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದೆ. ಡಬ್ಬಿಂಗ್ ಪರ ಮತ್ತು ವಿರುದ್ಧವಾಗಿ ನಡೆದ ಚರ್ಚೆಗೆ ಓದುಗರಿಂದಲೂ ಅನೇಕ ಕಾಮೆಂಟ್‌ಗಳು ಹರಿದುಬಂದಿವೆ.

Vijaya Karnataka Web 5 Sep 2018, 6:49 pm
ಕನ್ನಡಕ್ಕೆ ಡಬ್ಬಿಂಗ್ ಸಿನಿಮಾಗಳು ಬಂದರೆ ಏನಾಗುತ್ತದೆ? ಬೇಕೋ ಬೇಡವೋ ಎಂಬ ವಿಚಾರವಾಗಿ ವಿಜಯ ಕರ್ನಾಟಕ ಫೇಸ್‌ಬುಕ್‌ ಲೈವ್‍ನಲ್ಲಿ ನಡೆದ ಆರೋಗ್ಯಪೂರ್ಣ ಚರ್ಚೆಗೆ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದೆ. ಡಬ್ಬಿಂಗ್ ಪರ ಮತ್ತು ವಿರುದ್ಧವಾಗಿ ನಡೆದ ಚರ್ಚೆಗೆ ಓದುಗರಿಂದಲೂ ಅನೇಕ ಕಾಮೆಂಟ್‌ಗಳು ಹರಿದುಬಂದಿವೆ.
Vijaya Karnataka Web nagendra-prasad


ಕಾಮೆಂಟ್ ಮಾಡಿದವರಲ್ಲಿ ಬಹುತೇಕರು ಡಬ್ಬಿಂಗ್ ಬೇಕು ಎಂದಿರುವುದು ಗಮನಾರ್ಹ. ಈ ಚರ್ಚೆಯಲ್ಲಿ ಚಿತ್ರಸಾಹಿತಿ, ನಟ, ನಿರ್ದೇಶಕ ನಾಗೇಂದ್ರ ಪ್ರಸಾದ್, ಡಬ್ಬಿಂಗ್ ಪರ ಸಿನಿಮಾಗಳ ಹೋರಾಟಗಾರ ವಸಂತ್ ಶೆಟ್ಟಿ, ವಾಣಿಜ್ಯ ಮಂಡಳಿ ಕಾರ್ಯದರ್ಶಿ ಬಾ.ಮಾ. ಹರೀಶ್, ಉಪಾಧ್ಯಕ್ಷ ಕರಿ ಸುಬ್ಬು, ಕಿರುತೆರೆ ನಟಿ, ನಿರ್ಮಾಪಕಿ ಶ್ರುತಿನಾಯ್ಡು, ಡೈಲಾಗ್ ರೈಟರ್ ಮಾಸ್ತಿ ಭಾಗವಹಿಸಿದ್ದರು.

ಚರ್ಚೆಯ ಭಾಗವಾಗಿ ಶುತ್ರಿ ನಾಯ್ಡು ಮಾತನಾಡುತ್ತಾ, ಡಬ್ಬಿಂಗ್ ಕಿರುತೆರೆಗೆ ಬಂದರೆ ನಮಗೆ ಯಾವುದೇ ರೀತಿಯ ಭಯ ಇಲ್ಲ. ಕನ್ನಡ ವೀಕ್ಷಕರಿಗೆ ಏನು ಕೊಡಬೇಕು ಎಂಬ ತಾಕತ್ತು ನಮಗಿದೆ ಎಂದರು.

ಪರ ಆಗಲಿ ವಿರೋಧ ಆಗಲಿ ನಾವಿಬ್ಬರೂ ಅದರ ಬಗ್ಗೆ ಚರ್ಚೆ ಮಾಡಲು ಬರಲ್ಲ. ಈ ಬಗ್ಗೆ ಚರ್ಚೆ ಮಾಡಲು ನಮಗೆ ಇನ್ನೂ ಸಮಯವಿದೆ. ಚೇಂಬರ್‌ನಿಂದ ಹೊರಬಂದ ಬಳಿಕ ನಾನು ಅದರ ಬಗ್ಗೆ ಮಾತನಾಡುತ್ತೇವೆ. ಈಗ ಏನೂ ಮಾತನಾಡಲ್ಲ ಎಂದಿದ್ದಾರೆ ಕರಿ ಸುಬ್ಬು ಮತ್ತು ಬಾ.ಮಾ. ಹರೀಶ್.

ನಮ್ಮ ನಿಲುವುಗಳನ್ನು ಇಲ್ಲಿ ಸ್ಪಷ್ಟಪಡಿಸಲ್ಲ. ಚೇಂಬರ್ ವೈಸ್ ಪ್ರೆಸಿಡೆಂಟ್ ಆಗಿ ನಾನು ಅದರ ಪರ ವಿರುದ್ಧ ಏನೂ ಮಾತನಾಡಲ್ಲ. ನಾವು ತಟಸ್ಥವಾಗಿರುತ್ತೇವೆ. ನಾವು ಈಗ ಯಾವುದೇ ನಿಲುವು ತೆಗೆದುಕೊಳ್ಳುವ ಸ್ಥಿತಿಯಲ್ಲಿಲ್ಲ. ಈ ಹಿಂದೆ ಆ ರೀತಿಯ ನಿಲುವು ತೆಗೆದುಕೊಂಡಿದ್ದಕ್ಕೆ ಏನೆಲ್ಲಾ ಆಗಿದೆ ಎಂಬುದು ನಿಮಗೆ ಗೊತ್ತೇ ಇದೆ ಎಂದಿದ್ದಾರೆ ಬಾ.ಮಾ ಹರೀಶ್.


ಡಬ್ಬಿಂಗ್ ಬೇಡ ಎಂದು ಸಾಧಿಸುತ್ತಿರುವ ಉದ್ದೇಶ ಏನು ಗೊತ್ತಾಗುತ್ತಿಲ್ಲ. ನಾಲ್ಕು ಭಾಷೆಗಳಲ್ಲಿ ಕನ್ನಡದಲ್ಲಿ ಮಾತ್ರ ಡಬ್ಬಿಂಗ್ ಇಲ್ಲ. ಉಳಿದ ಮೂರು ಭಾಷೆಗಳು ಲಾಭದಲ್ಲಿ ಇವೆಯೇ ಇಲ್ಲವೇ ಹೇಳಿ. ಇಂದು ಮನೆಮನೆಯಲ್ಲಿ ತೆಲುಗು, ತಮಿಳು ಭಾಷೆಯ ಚಿತ್ರಗಳು ನೋಡಲು ಕಾರಣವಾಗಿರುವುದು ಡಬ್ಬಿಂಗ್ ನಿಷೇಧ ಎಂದರು ವಸಂತ್ ಶೆಟ್ಟಿ.

ಡಬ್ಬಿಂಗ್ ಕನ್ನಡಕ್ಕೆ ಬಂದರೆ ಏನಾಗುತ್ತದೆ? ಚಿತ್ರರಂಗಕ್ಕೆ ತೊಂದರೆ ಆಗುತ್ತೆ, ಇಲ್ಲಿರುವ ಎಲ್ಲರಿಗೂ ಕೆಲಸ ಸಿಗಲ್ಲ. ಡಬ್ಬಿಂಗ್ ಕಲಾವಿದರಿಗೆ, ಸ್ಟುಡಿಯೋಗಳಿಗೆ, ಬರಹಗಾರರಿಗೆ ಬಿಟ್ಟರೆ ಬೇರೆ ಯಾರಿಗೂ ಕೆಲಸ ಸಿಗಲ್ಲ ಎಂಬುದು ಸತ್ಯ. 3-4 ಸಾವಿರ ಕುಟುಂಗಳಿಗೆ ಕೆಲಸ ಇಲ್ಲದಂತಾಗುತ್ತದೆ. ಡಬ್ಬಿಂಗ್‌ನಿಂದ ಭಾಷೆ ಹಾಳಾಗುತ್ತದೆ. ಅಲ್ಲಿನ ಲಿಪ್ ಸಿಂಕ್‌ಗೆ ಸರಿಹೊಂದುವಂತೆ ಇಲ್ಲಿ ಏನೇನೋ ಕೆಟ್ಟದಾಗಿ ಭಾಷೆಯನ್ನು ಬಳಸಬೇಕಾಗುತ್ತದೆ. ನಮ್ಮ ಸಂಸ್ಕೃತಿಯ ಮೇಲೆ ಹೇರಿಕೆ ಆಗುತ್ತೆ.

ಪರಭಾಷಾ ಚಿತ್ರಗಳ ಹಾವಳಿ ನಮ್ಮಲ್ಲಿ ಆಗಲು ಇಲ್ಲಿನವರೇ ಕಾರಣ. ಮೊದಲು ಸ್ಕ್ರೀನಿಂಗ್ ಸಮಿತಿ ಇತ್ತು. ಅದರ ನಿಯಮಗಳನ್ನು ಮುರಿದದವರು ನಮ್ಮವರೇ ಎಂದಿದ್ದಾರೆ ಚಿತ್ರೋದ್ಯಮದ ಗಣ್ಯರು. ಡಬ್ಬಿಂಗ್ ಸಿನಿಮಾ ಬಂದರೆ ನಮಗೇನು ಭಯವಿಲ್ಲ. ಆದರೆ ಭಾಷೆಗೆ ಘಾಸಿಯಾಗಬಾರದು ಎಂಬುದು ನಮ್ಮ ವೈಯಕ್ತಿಕ ಅಭಿಪ್ರಾಯ ಎಂದಿದ್ದಾರೆ ನಾಗೇಂದ್ರ ಪ್ರಸಾದ್.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌