ಆ್ಯಪ್ನಗರ

ಸುದೀಪ್‌ ಸಹಾಯ ಕೋರಿದ ಅಭಿಮಾನಿ

ಸುದೀಪ್‌ ಅಭಿಮಾನಿಯೊಬ್ಬರು ತಮಗೆ ಸಹಾಯ ಮಾಡುವಂತೆ ಕೋರಿಕೆ ಸಲ್ಲಿಸಿದ್ದಾರೆ. ಚಿಕಿತ್ಸೆಗೆ ಹಣ ಬೇಕಿದೆ ಎಂದಿದ್ದಾರೆ.

Vijaya Karnataka Web 4 Jul 2019, 5:27 pm
ಅಭಿಮಾನಿಗಳು ತಾವು ಆರಾಧಿಸುವ ನಟ ಸುದೀಪ್‌ರತ್ತ ಸಹಾಯಕ್ಕಾಗಿ ಹಸ್ತ ಚಾಚಿದ್ದಾರೆ. ಗರ್ಭಿಣಿಯಾಗಿದ್ದಾಗ ಸಣ್ಣಕರುಳಿನ ಚಿಕಿತ್ಸೆಗೆ ಒಳಗಾದ ಮಹಿಳಾ ಅಭಿಮಾನಿ, ಈಗ ಮುಂದಿನ ಚಿಕಿತ್ಸೆಗಾಗಿ ಧನಸಹಾಯ ಮಾಡುವಂತೆ ಸುದೀಪ್‌ರಿಗೆ ಕೋರಿದ್ದಾರೆ.
Vijaya Karnataka Web fan asks help from sudeep for medical treatment
ಸುದೀಪ್‌ ಸಹಾಯ ಕೋರಿದ ಅಭಿಮಾನಿ


ಚೈತ್ರ ಎಂಬ ಮಹಿಳೆ ಗರ್ಭಿಣಿಯಾಗಿದ್ದಾಗ ಅನಿವಾರ್ಯ ಕಾರಣದಿಂದ ಸಣ್ಣಕರುಳನ್ನು ವೈದ್ಯರು ಕತ್ತರಿಸಿ ತೆಗೆದಿದ್ದಾರೆ. ಇದರಿಂದಾಗಿ ಸರಿಯಾಗಿ ಊಟ ಮಾಡಲಾಗದೆ ಅವರು ಪರದಾಡುತ್ತಿದ್ದಾರೆ. ಇದು ಸರಿ ಹೋಗಲು ಇನ್ನೊಂದು ಆಪರೇಷನ್‌ ಮಾಡಬೇಕಿದ್ದು, ಇದಕ್ಕೆ ಸುಮಾರು 30 ಲಕ್ಷ ತಗುಲುತ್ತದಂತೆ. ಆದರೆ, ಹಣವಿಲ್ಲದೆ ಆಪರೇಷನ್‌ ಮಾಡಿಸಿಕೊಳ್ಳಲಾಗದೆ, ಪರದಾಡುತ್ತಿದ್ದಾರೆ. ಈಗ ಸುದೀಪ್‌ರಿಗೆ ಮೊರೆ ಹೋಗಿದ್ದಾರೆ. ನಿಮ್ಮ ತಂಗಿ ಎಂದು ಭಾವಿಸಿ ಸಹಾಯ ಮಾಡಿ ಎಂದಿದ್ದಾರೆ.

ಸ್ಟಾರ್ ನಟರು ತಮ್ಮ ಅಭಿಮಾನಿಗಳಿಗೆ ಸಹಾಯ ಮಾಡುವುದು ಸಾಮಾನ್ಯ ಸಂಗತಿ. ದರ್ಶನ್‌, ಶಿವರಾಜ್‌ಕುಮಾರ್‌, ಸುದೀಪ್‌, ಪುನೀತ್‌ ಎಲ್ಲರೂ ಒಂದಲ್ಲಾ ಒಂದು ರೀತಿಯಲ್ಲಿ ಅಗತ್ಯ ಇರುವವರಿಗೆ ಸಹಾಯ ಮಾಡುತ್ತಾ ಬಂದಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌