ಆ್ಯಪ್ನಗರ

ಕಿಚ್ಚನ ಅಭಿಮಾನಿ ಬೈಕ್ ಮೇಲೆ ನಟ ಸುದೀಪ್ ಮಾಡಿದ್ದೇನು ಗೊತ್ತೇ?

ಆದರೆ ಇತ್ತೀಚಿಗೆ ಕೆಲವು ಅಭಿಮಾನಿಗಳು ಸುದೀಪ್ ಅವರ ದೊಡ್ಡತನವನ್ನು ಮಿಸ್-ಯೂಸ್ ಮಾಡಿಕೊಳ್ಳುವವರಂತೆ, ರಕ್ತದಲ್ಲಿ ಲೆಟರ್ ಬರೆಯವುದು, ಬ್ಲೇಡಿನಿಂದ ಕೈ ಕುಯ್ದುಕೊಂಡು ಅತಿರೇಕದ ಅಭಿಮಾನ ಪ್ರದರ್ಶಿಸುವುದು ಮಾಡಿ, ಸುದೀಪ್ ಅವರ ಮನಸ್ಸಿಗೆ ಬೇಸರ ಮೂಡಸಿದ್ದಾರೆ.

Vijaya Karnataka Web 24 Mar 2019, 7:35 pm
ಕನ್ನಡದ ನಟ ಕಿಚ್ಚ ಸುದೀಪ್ ಅವರು ಕರ್ನಾಟಕ,. ಇಂಡಿಯಾ ಮೀರಿ ಪ್ರಪಂಚದಾದ್ಯಂತ ಅಭಿಮಾನಿಗಳನ್ನು ಹೊಂದಿದ್ದಾರೆಂಬ ಸಂಗತಿ ಹೊಸ ವಿಷಯವೇನಲ್ಲ. ಹಲವು ಅಭಿಮಾನಿಗಳು ಬಗೆಬಗೆಯಲ್ಲಿ ಕಿಚ್ಚನಿಗೆ ಶುಭಾಶಯ ಕೋರುವುದು, ಭೇಟಿಯಾಗುವುದು ಮಾಡುತ್ತಲೇ ಇರುತ್ತಾರೆ. ಇತ್ತೀಚಿಗೆ ಸುದೀಪ್ ಅಭಿಮಾನಿಯೊಬ್ಬರು ತನ್ನ ಬೈಕ್ ಪೆಟ್ರೋಲ್ ಟ್ಯಾಂಕ್‌ ಮೇಲೆ ಸುದೀಪ್ ಅವರಿಂದ ಆಟೋಗ್ರಾಫ್ ಪಡೆಯುವ ಮೂಲಕ ಸಖತ್ ಖುಷಿ ಅನುಭವಿಸಿದ್ದಾರೆ.
Vijaya Karnataka Web sudeep2403

View this post on Instagram ಅಭಿಮಾನಿಗಳ ಅಭಿಮಾನಿ @kichchasudeepa ಅಣ್ಣ 😍😍 #AbhinayaChakravarthy #KicchaSudeep ❤ A post shared by KICCHA SUDEEP (@kicchasudeepfc) on Mar 21, 2019 at 7:03pm PDT

ಸುದೀಪ್ ಯಾವತ್ತೂ ಅಭಿಮಾನಿಗಳಿಗೆ ನಿರಾಸೆ ಮಾಡಿದವರೇ ಅಲ್ಲ. ಅಭಿಮಾನಿಗಳ ಕೋರಿಕೆಗೆ ತಕ್ಷಣವೇ ಸ್ಪಂದಿಸಸುವ ಅವರ ದೊಡ್ಡತನವೇ ಅವರಿಗೆ ಮತ್ತಷ್ಟು ಇನ್ನಷ್ಟು ಅಭಿಮಾನಿಗಳನ್ನು ಸೃಷ್ಟಿಸುತ್ತಿದೆ ಎನ್ನಬಹುದು. ಆದರೆ, ಕೆಲವೊಮ್ಮೆ ಅಭಿಮಾನ ಅತಿರೇಕಕ್ಕೆ ಹೋದಾಗ ಸ್ವತಃ ಸುದೀಪ್ ಸ್ವಲ್ಪ ಕ್ಲಾಸ್ ತೆಗೆದುಕೊಂಡು ಅಭಿಮಾನಿಗಳನ್ನು ಸ್ವಲ್ಪ ಹದ್ದುಬಸ್ತಿನಲ್ಲಿಡಲು ಪ್ರಯತ್ನಿಸಿದ ಉದಾಹರಣೆಗಳಿವೆ.

ಆದರೆ ಇತ್ತೀಚಿಗೆ ಕೆಲವು ಅಭಿಮಾನಿಗಳು ಸುದೀಪ್ ಅವರ ದೊಡ್ಡತನವನ್ನು ಮಿಸ್-ಯೂಸ್ ಮಾಡಿಕೊಳ್ಳುವವರಂತೆ, ರಕ್ತದಲ್ಲಿ ಲೆಟರ್ ಬರೆಯವುದು, ಬ್ಲೇಡಿನಿಂದ ಕೈ ಕುಯ್ದುಕೊಂಡು ಅತಿರೇಕದ ಅಭಿಮಾನ ಪ್ರದರ್ಶಿಸುವುದು ಮಾಡಿ, ಸುದೀಪ್ ಅವರ ಮನಸ್ಸಿಗೆ ಬೇಸರ ಮೂಡಸಿದ್ದಾರೆ.

ಸುದೀಪ್ ಅಭಿಮಾನಿ ಸೌಮ್ಯ ತಮ್ಮ ರಕ್ತದಲ್ಲಿ ಸುದೀಪ್ ಅವರಿಗೆ ಪತ್ರ ಬರೆದಿದ್ದರು. ಆಗ, ನಟ ಸುದೀಪ್ ಅವರು ಸೌಮ್ಯ ಅವರಿಗೆ 'ನಿಮ್ಮ ಅಭಿಮಾನಕ್ಕೆ ನಾನು ಚಿರರುಣಿ. ಆದರೆ, ಈ ರೀತು ರಕ್ತದಲ್ಲಿ ಪತ್ರ ಬರೆಯುವುದು ನನಗಿಷ್ಟವಿಲ್ಲ. ದಯವಿಟ್ಟು ಹೀಗೆಲ್ಲ ಮಾಡಬೇಡಿ" ಎಂದು ಎಚ್ಚರಿಸಿದ್ದರು.

ಇತ್ತೀಚಿಗೆ ಸುದೀಪ್ ಅಭಿಮಾನಿಯೊಬ್ಬ ತನ್ನ ಕೈ ಮೇಲೆ ಸುದೀಪ್ ಫೊಟೋವನ್ನು ಬ್ಲೇಡ್‌ನಿಂದ ಕೆತ್ತಿಕೊಂಡು, 'ಕೆಚ್ಚೆದೆಯ ಕಿಚ್ಚ' ಎಂದು 'ಟೆಕ್ಸ್ಟ್‌' ಕೂಡ ಬರೆದುಕೊಂಡಿದ್ದಾನೆ. ಅದನ್ನು ಸೋಷಿಯಲ್ ಮೀಡಿಯಾದಲ್ಲಿ ನೋಡಿದ ಸುದೀಪ್ ತುಂಬಾ ನೊಂದುಕೊಂಡು 'ತಮ್ಮ ಎಲ್ಲ ಅಭಿಮಾನಿಗಳಿಗೂ ಸೇರಿದಂತೆ' ಪ್ರೀತಿಯ ಎಚ್ಚರಿಕೆ ಕೊಟ್ಟಿದ್ದಾರೆ. ಅತಿಯಾದರೆ ಅಮೃತವೂ ವಿಷ ಎಂಬುದನ್ನು ತಿಳಿ ಹೇಳಿದ್ದಾರೆ.

ಹುಚ್ಚು ಅಭಿಮಾನಿ ಪೋಸ್ಟ್ ಮಾಡಿರುವ ಈ ಫೋಟೋ ನೋಡಿ ತೀವ್ರವಾಗಿ ನೊಂದುಕೊಂಡ ಸುದೀಪ್ "ಇದನ್ನು ನೋಡಿ ನಾನು ಬಹಳ ಡಿಸ್ಟರ್ಬ್ ಆಗಿದ್ದೇನೆ. ನಿಮ್ಮ ಸೂಕ್ತವಾದ ಅಭಿಮಾನಕ್ಕೆ ಖಂಡಿತವಾಗಿಯೂ ನಾನು ಗೌರವ ಕೊಡುತ್ತೇನೆ. ನನ್ನ ಮಾತುಗಳನ್ನು ನೀವು ಗೌರವಿಸುವುದಾದರೆ ದಯವಿಟ್ಟು ಈ ರೀತಿ ಮಾಡುವುದನ್ನು ನಿಲ್ಲಿಸಿ. ನಿಮ್ಮ ಪ್ರೀತಿಗೆ ನಾನು ಬೆಲೆ ಕೊಡುತ್ತೇನೆ. ಆದರೆ ನೀವು ನನ್ನ ಮಾತಿಗೆ, ಮನವಿಗೆ ಗೌರವ ಕೊಡಬೇಕು.

ಅತ್ಯಂತ ವಿನಯದಿಂದ ಕೇಳಿಕೊಳ್ಳುತ್ತೇನೆ. ನನ್ನ ಮಾತಿಗೆ ಬೆಲೆ ಕೊಡುವುದಾದರೆ ದಯವಿಟ್ಟು ಹೀಗೆ ಮಾಡುವುದನ್ನು ನಿಲ್ಲಿಸಿ. ನೀವು ಪ್ರೀತಿ ತೋರಿಸಬೇಕಾದ ವಿಧಾನ ಇದಲ್ಲ. ನೀವು ನನ್ನ ಮಾತನ್ನು ಮೀರಿದರೆ, ನಾನು ಇನ್ಮುಂದೆ ಟ್ವಿಟರ್‌ನಲ್ಲಿ ಇರುವುದಿಲ್ಲ. ನಾನು ಇರುವುದರಿಂದಲೇ ಸಮಸ್ಯೆಯಾಗುತ್ತಿದೆ ಎಂದು ನನಗನ್ನಿಸುತ್ತಿದೆ" ಎಂದು ನೋವಿನಿಂದ ಟ್ವಿಟ್ ಮಾಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌