ಆ್ಯಪ್ನಗರ

ಭುವನ್ ಪೊನ್ನಣ್ಣಗೆ ಅನಿರೀಕ್ಷಿತ ಶಾಕ್ ನೀಡಿದ 'ರಾಂಧವ' ಗಳಿಕೆ

ರಾಂಧವ ಸಿನಿಮಾ 25 ದಿನಗಳನ್ನು ಯಶಸ್ವಿಯಾಗಿ ಪೂರೈಸಿದ್ದು ಅಭಿಮಾನಿಗಳು ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾರೆ. ಕೆಲವು ಕಡೆ ಗಳಿಕೆಯ ನಿರೀಕ್ಷೆಗಳನ್ನು ಹುಸಿ ಮಾಡಿದರೆ, ಇನ್ನೂ ಕೆಲವು ಕಡೆ ಅನಿರೀಕ್ಷಿತ ಶಾಕ್ ನೀಡಿದೆ. ಈ ಬಗ್ಗೆ ಚಿತ್ರದ ನಾಯಕ ನಟ ಭುವನ್ ಪೊನ್ನಣ್ಣ ಮಾತನಾಡಿದ್ದಾರೆ.

Vijaya Karnataka Web 19 Sep 2019, 5:14 pm
ಒಂದು ಚಿತ್ರ ಯಶಸ್ವಿಯಾದರೆ ನಿರ್ಮಾಪಕ, ನಿರ್ದೇಶಕ, ಕಲಾವಿದರು ಸಂಭ್ರಮ ಆಚರಿಸಿಕೊಳ್ಳುತ್ತಾರೆ. ಒಂಚೂರು ಹೊಸದೆನ್ನುವಂತೆ ಸುನೀಲ್ ಆಚಾರ್ಯ ನಿರ್ದೇಶನದ, ಭುವನ್ ಪೊನ್ನಣ್ಣ ಅಭಿನಯದ ‘ರಾಂಧವ’ ಸಿನಿಮಾದ 25ನೇ ದಿನವನ್ನು ಭುವನ್ ಅಭಿಮಾನಿಗಳು ಹಬ್ಬದಂತೆ ಸೆಲಬರೇಟ್ ಮಾಡಿದ್ದಾರೆ.
Vijaya Karnataka Web randhawa


'ರಾಂಧವ' ಯಶಸ್ವಿ ಪ್ರದರ್ಶನ ಕಾಣುತ್ತಿರುವುದರಿಂದ ಬೆಂಗಳೂರು, ಕೊಪ್ಪಳ, ರಾಮನಗರ, ತುಮಕೂರು, ಹಾಸನ ಮತ್ತು ದೊಡ್ಡಬಳ್ಳಾಪುರದ ಅಭಿಮಾನಿಗಳು ಹೀರೋ ಭುವನ್ ಕೈಲಿ ಕೇಕ್ ಕಟ್ ಮಾಡಿಸಿ ಖುಷಿಯನ್ನು ಹಂಚಿಕೊಂಡರು. ಇದರಿಂದ ಸಂತಸಗೊಂಡ ಭುವನ್ ಮಾತನಾಡಿ ಸಿನಿಮಾ ಮಾಡೋದು ಕಷ್ಟ, ಬಿಡುಗಡೆ ಸುಲಭ ಅಂದುಕೊಂಡಿದ್ದೆ. ಆದರೆ ನಂತರ ವಾಸ್ತವದ ಅರಿವಾಯಿತು. ಪ್ರಚಾರದ ಸಲುವಾಗಿ ವಿದೇಶಕ್ಕೆ ಹೋಗಲು ಆಗಲಿಲ್ಲ. ನಿರೀಕ್ಷಿಸಿದ ಕಡೆ ಉತ್ತಮ ಗಳಿಕೆ ಬರಲಿಲ್ಲ. ಇಂಥಾ ಸೆಂಟರ್‌ನಲ್ಲಿ ಜನರು ಬರುವುದಿಲ್ಲವೆಂದು ಗ್ರಹಿಸಿದ್ದೇ ತಪ್ಪಾಯಿತು. ಶೇಕಡ 95 ಜನರು ಹೃದಯಪೂರ್ವಕವಾಗಿ ಒಳ್ಳೆ ಚಿತ್ರವೆಂದು ಒಪ್ಪಿಕೊಂಡಿದ್ದಾರೆ ಎಂದಿದ್ದಾರೆ. ವಿಚಿತ್ರ ಗೂಬೆಯ ಬೆನ್ನು ಹತ್ತುವ ನಾಯಕ: ರಾಂಧವ ಚಿತ್ರ ವಿಮರ್ಶೆ

ಚಿತ್ರಮಂದಿರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಇದು ಹೊಸಬರ ಸಿನಿಮಾ ಅಂತಾ ಎನಿಸುವುದಿಲ್ಲವೆಂದು ಹೇಳುತ್ತಿದ್ದರು. ಇನ್ನೂ ಪ್ರದರ್ಶನ ಕಾಣುತ್ತಿರುವುದು ನೆಮ್ಮದಿಯ ವಿಷಯ ಎಂದರು. ಐವತ್ತನೇ ದಿನಕ್ಕೆ ಸಮಾರಂಭವನ್ನು ಏರ್ಪಾಟು ಮಾಡಲು ಚಿಂತಿಸಲಾಗಿತ್ತು. ಆದರೆ ಅಭಿಮಾನಿಗಳು ಆಶ್ಚರ್ಯವೆನ್ನುವಂತೆ ಸಿಲ್ವರ್ ಜ್ಯೂಬಿಲಿ ಕಾರ್ಯಕ್ರಮವನ್ನು ಏರ್ಪಡಿಸಿದ್ದಾರೆ. ಅವರ ಖುಷಿಯನ್ನು ನಾವುಗಳು ಗೌರವಿಸಬೇಕು. ಡಬ್ಬಿಂಗ್ ಹಕ್ಕುಗಳನ್ನು ಇನ್ನೂ ಯಾರಿಗೂ ಕೊಟ್ಟಿಲ್ಲ. ಆದರೆ, ಸದ್ಯದಲ್ಲೇ ಮಾರಾಟವಾಗಲಿದೆ ಅನ್ನೋದು ನಿರ್ದೇಶಕ ಸುನಿಲ್‍ಆಚಾರ್ಯ ಮಾತು.

ಕತೆ ಕೇಳದೆ ನಟನೆ ಮಾಡಿದ್ದು ಒಳ್ಳೆಯದೇ ಆಯಿತು. ಚಿತ್ರರಂಗದಲ್ಲಿ ನಾಯಕನ ಕೊರತೆಯನ್ನು ಇವರು ದೂರ ಮಾಡಿದ್ದಾರೆ. ಒಬ್ಬ ಮನುಷ್ಯ ಪ್ರಯತ್ನಪಟ್ಟರೆ
ಏನು ಬೇಕಾದರೂ ಮಾಡಬಹುದು ಎಂಬುದಕ್ಕೆ ಭುವನ್ ಸಾಕ್ಷಿಯಾಗುತ್ತಾರೆ ಎಂದು ಹಿರಿಯ ನಟಿ ವಾಣಿಶ್ರೀ ತಮ್ಮ ಅಭಿಪ್ರಾಯವನ್ನು ತಿಳಿಸಿದರು.

ಮೊದಲ ಚಿತ್ರದಲ್ಲೇ ಸಂಗೀತ, ಹಿನ್ನೆಲೆ ಸಂಗೀತಕ್ಕೆ ಅತ್ಯುತ್ತಮ ಪ್ರಶಂಸೆ ಸಿಕ್ಕಿರೋದು ಹಾಡುಗಾರ ಕಂ ಮ್ಯೂಸಿಕ್ ಡೈರೆಕ್ಟರ್ ಶಶಾಂಕ್ ಶೇಷಗಿರಿ ಸಂತೋಷಕ್ಕೆ
ಕಾರಣವಾಗಿದೆ. ನಾಯಕಿಯರಾದ ಅಪೂರ್ವ ಶ್ರೀನಿವಾಸ್, ರಾಶಿ ಹಾಗೂ ನಿರ್ಮಾಪಕ ಸನತ್‍ಕುಮಾರ್ ಈ ಸಮಾರಂಭದಲ್ಲಿ ಗೈರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌